ಪತ್ರಾಗಾರ ಇಲಾಖೆಯಿಂದ ಮಹತ್ವದ ದಾಖಲೆ ರಕ್ಷಣೆ
Team Udayavani, Sep 23, 2017, 1:27 PM IST
ಧಾರವಾಡ: ಪತ್ರಾಗಾರ ಇಲಾಖೆಯು ಅನೇಕ ದಶಕಗಳ ಅಪೂರ್ವ ದಾಖಲೆಗಳನ್ನು ಕಾಪಾಡಿಕೊಂಡು ಬಂದಿದ್ದು, ನಾಡಿನ, ದೇಶದ ಇತಿಹಾಸ ಸಾರುವ ತಾಳೆಗರಿ, ಹಸ್ತಪ್ರತಿ ದಾಖಲೆಗಳನ್ನು ಸಂರಕ್ಷಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಕನ್ನಡ, ಸಂಸ್ಕೃತಿ ಮತ್ತು ಪತ್ರಾಗಾರ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.
ಕವಿವಿಯ ಕನ್ನಡ ಅಧ್ಯಯನ ಪೀಠ ಆವರಣದಲ್ಲಿ 1 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರಾದೇಶಿಕ ಪತ್ರಾಗಾರ ಕಚೇರಿ ಕಟ್ಟಡಕ್ಕೆ ಅಡಿಗಲ್ಲು ಪೂಜೆ ನೆರವೇರಿಸಿ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ, ಇತಿಹಾಸಕಾರರಿಗೆ, ಸಂಶೋಧಕರಿಗೆ ಅಗತ್ಯವಿರುವ ಈ ಕಚೇರಿಗೆ ಕವಿವಿ ನಿವೇಶನ ಒದಗಿಸಿದೆ.
ಇಲಾಖೆಯು ಸುಮಾರು 60 ಲಕ್ಷ ಪುಟಗಳ ಅಮೂಲ್ಯ ಮಾಹಿತಿಯನ್ನು ತಂತ್ರಜ್ಞಾನ ಬಳಸಿಕೊಂಡು ಗಣಕೀಕರಣಗೊಳಿಸಲಾಗಿದೆ. ಆಡಳಿತದಲ್ಲಿನ ಅನೇಕ ಹಳೆಯ ದಾಖಲೆಗಳನ್ನು ಇಲಾಖೆ ರಕ್ಷಿಸಿದೆ. ಬ್ರಿಟಿಷ್ ಲೈಬ್ರರಿಯಿಂದಲೂ ದಾಖಲೆಗಳನ್ನು ತರಿಸಿಕೊಂಡು ಪುಸ್ತಕ ಪ್ರಕಟಿಸಲಾಗಿದೆ.
ಮುಂಬಯಿ ಕರ್ನಾಟಕಕ್ಕೆ ಸಂಬಂಧಿಸಿದ 60 ಸಾವಿರ ಮೋಡಿ ಹಾಗೂ ಮರಾಠಿ ದಾಖಲೆಗಳನ್ನು ಸಂರಕ್ಷಿಸಲಾಗುತ್ತಿದೆ. ಅದರಲ್ಲೂ ಕಣಜ ಕನ್ನಡ ವೆಬ್ಸೈಟ್ನಲ್ಲಿ ಅನೇಕ ಮಾಹಿತಿ ಲಭ್ಯವಿದೆ ಎಂದರು. ಜನರಿಗೆ ಅರಿವು ಮೂಡಿಸಲು, ಸಾಮಾನ್ಯ ವ್ಯಕ್ತಿಗೂ ಮಾಹಿತಿ, ಕಾನೂನು ತಿದ್ದುಪಡಿಗಳನ್ನು ಇಲಾಖೆಯ ವೆಬ್ಸೈಟ್ಗೆ ಹಾಕಲಾಗುತ್ತಿದೆ ಎಂದರು.
ಕವಿವಿ ಕುಲಸಚಿವ ಮಲ್ಲಿಕಾರ್ಜುನ ಪಾಟೀಲ, ಡಾ| ಜೆ.ಎಂ.ನಾಗಯ್ಯ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಅಶೋಕ ಕವಲೂರ, ಪತ್ರಾಗಾರ ಇಲಾಖೆಯ ಮಂಜುಳಾ ಯಲಿಗಾರ, ಡಾ| ವೀರಶೆಟ್ಟಿ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ
ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ
Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.