ದ್ಯಾಮವ್ವ ದೇವಿ ಸನ್ನಿಧಿಯಲ್ಲಿ ಸರಳ ನವರಾತ್ರಿ


Team Udayavani, Oct 17, 2020, 12:42 PM IST

ದ್ಯಾಮವ್ವ ದೇವಿ ಸನ್ನಿಧಿಯಲ್ಲಿ ಸರಳ ನವರಾತ್ರಿ

ಕುಂದಗೋಳ: ಗುಡಗೇರಿಯ ಗ್ರಾಮದೇವಿ ದ್ಯಾಮವ್ವ ದೇವಿಯ ನವರಾತ್ರಿ ಉತ್ಸವ ಈ ಬಾರಿ ಅತ್ಯಂತ ಸರಳವಾಗಿ ನಡೆಯುತ್ತಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಗಷ್ಟೇ ಉತ್ಸವ ಸೀಮಿತವಾಗಿದೆ. ಅ. 17ರಂದು ಘಟಸ್ಥಾಪನೆಯೊಂದಿಗೆ ಉತ್ಸವ ಆರಂಭವಾಗಲಿದೆ.

ಗುಡಿಗೆ ದೀಪಾಲಂಕಾರ ಮಾಡಿದ್ದು, ಸೋಂಕು ಹರಡದಂತೆಮುಂಜಾಗ್ರತಾ ಕ್ರಮಗಳೊಂದಿಗೆ ಭಕ್ತರಿಗೆ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಯಾವುದೇ ರೀತಿ ಪ್ರಸಾದಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.ಭಕ್ತರು ದೇವಿ ದರ್ಶನ ಪಡೆದು ತಕ್ಷಣವೇ ಹಿಂದಿರುಗಬೇಕಿದೆ.ಯಾವುದೇ ಮೆರವಣಿಗೆ ಕೈಗೊಳ್ಳದೆ ಈ ಬಾರಿ ಸರಳವಾಗಿ ಒಂಭತ್ತು ದಿನಗಳ ಕಾಲ ದೇವಿಗೆ ವಿಶಿಷ್ಟ ರೀತಿಯಿಂದ ಧಾರ್ಮಿಕಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕಮಿಟಿಯವರು ತಿಳಿಸಿದ್ದಾರೆ.

ಗ್ವಾನಾಳ ಮೂಲ : ದೇವಿಯು ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಗ್ವಾನಾಳ ಗ್ರಾಮದಿಂದ ಗೌಡಗೇರಿ ಗ್ರಾಮಕ್ಕೆ ಆಗಮಿಸಿ ತದನಂತರ ಗುಡಗೇರಿ ಗ್ರಾಮದಲ್ಲಿ ನೆಲೆಸಿದ್ದಾಳೆ ಎಂಬ ಪ್ರತೀತಿಯಿದೆ. ಮೊದಲು ಇಲ್ಲಿ ದೊಡ್ಡ ಪ್ರಮಾಣದ ಜಾತ್ರಾ ಮಹೋತ್ಸವ ಜರುಗುತ್ತಿತ್ತು. ಆದರೆ ಈ ಸಂಪ್ರದಾಯ ಈಗ ಕಣ್ಮರೆಯಾಗಿದೆ. ಇದಕ್ಕೆ ಕಾರಣವೂ ಇದುವರೆಗೆ ತಿಳಿದು ಬಂದಿಲ್ಲ.

ಕುಟುವುದಿಲ್ಲ, ಬೀಸುವುದಿಲ : ನವರಾತ್ರಿ ಉತ್ಸವದಲ್ಲಿ ಗ್ರಾಮದ ಜನತೆ ಮನೆ ಸ್ವತ್ಛಗೊಳಿಸಿ 9ದಿನಗಳ ಕಾಲ ಉಪವಾಸ ಮಾಡುತ್ತಾರೆ. ನಿತ್ಯ ರಾತ್ರಿ ದ್ಯಾಮವ್ವ ದೇವಿಯ ಪಲ್ಲಕ್ಕಿ ದುರ್ಗಾದೇವಿ ದೇವಸ್ಥಾನದ ವರೆಗೆ ತೆರಳಿ ಪುನಃ ಗುಡಿಗೆ ಬಂದ ನಂತರ ದೇವಿಗೆ ನಮಿಸಿ ಅಂದಿನ ಉಪವಾಸಮುಕ್ತಾಯ ಮಾಡುತ್ತಾರೆ. ಒಂಭತ್ತು ದಿನಗಳ ಕಾಲ ಗ್ರಾಮದ ಜನತೆ ಕುಟ್ಟುವುದು, ಬೀಸುವುದು, ರೊಟ್ಟಿ ಸುಡುವುದು ಮಾಡುವುದಿಲ್ಲ.

ಮೂಗುತಿ ಪವಾಡ : ಕಳಸದ ಗುರು ಗೋವಿಂದ ಭಟ್ಟರು ಒಂದು ದಿನ ಶಿಷ್ಯ ಸಂತ ಶಿಶುನಾಳ ಶರೀಫರ ಜೊತೆಗೆ ರಾತ್ರಿ ಗುಡಿಯಲ್ಲೇ ತಂಗಿದ್ದರು. ಶಂಕರಿ (ಸರಾಯಿ)ಸೇವನೆ ಮಾಡಬೇಕೆಂಬ ಬಯಕೆಯಾಗುತ್ತದೆ. ಇಬ್ಬರ ಬಳಿಯೂ ಕಾಸಿರುವುದಿಲ್ಲ. ಗುರು ಆಣತಿಯಂತೆ ಶರೀಫರು ದೇವಿಯನ್ನು ಸ್ತುತಿಸುತ್ತಾರೆ. ದೇವಿ ಪ್ರತ್ಯಕ್ಷಳಾಗಿ ತನ್ನ ಮೂಗುತಿ ನೀಡುತ್ತಾಳೆ. ಅದನ್ನು ಗ್ರಾಮದ ಕಲಾಲರ ಮನೆಯಲ್ಲಿ ಅಡವಿಟ್ಟುಬಯಕೆ ಪೂರೈಸಿಕೊಳ್ಳುತ್ತಾರೆ.

ಮರುದಿನ ಪೂಜಾರಿ ಪೂಜೆ ಸಲ್ಲಿಸಲು ಬಂದಾಗ ದೇವಿ ಮೂಗುತಿ ಕಾಣೆಯಾಗಿರುವುದು ಕಂಡು ಶಾನಭೋಗ ಹಾಗೂ ಊರಿನ ಗೌಡರಿಗೆ ವಿಷಯ ತಿಳಿಸುತ್ತಾರೆ. ಹಿಂದಿನ ರಾತ್ರಿ ಗುಡಿಯಲ್ಲಿ ತಂಗಿದ್ದ ಗುರು-ಶಿಷ್ಯರನ್ನುಕರೆಯಿಸಿ ವಿಚಾರಣೆ ಮಾಡಿದಾಗ ದೇವಿಯೇಮೂಗುತಿ ದಯಪಾಲಿಸದಳು ಎನ್ನುತ್ತಾರೆ. ಎಲ್ಲರೂಅಪಹಾಸ್ಯ ಮಾಡಲಾರಂಭಿಸುತ್ತಾರೆ. ಶರೀಫರು ದೇವಿಯನ್ನು ಸ್ತುತಿಸಲು ಆರಂಭಿಸುತ್ತಾರೆ. ಆಗ ದೇವಿಯ ಮೂರ್ತಿಯ ಮೂಗಿನಲ್ಲಿ ಮೂಗುತಿ ಪ್ರತ್ಯಕ್ಷವಾಗುತ್ತದೆ. ಇದನ್ನು ಕಂಡ ಜನರು ಗುರು-ಶಿಷ್ಯರ ಪವಾಡ ಕೊಂಡಾಡುತ್ತಾರೆ. ಬೇಡಿ ಬಂದ ಭಕ್ತರ ಇಷ್ಟಾರ್ಥ ಈಡೇರಿಸುವ ದೇವಿಯಾಗಿ ದ್ಯಾಮವ್ವ ನೆಲೆ ನಿಂತಿದ್ದಾಳೆ.

 

-ಶೀತಲ್‌ ಮುರಗಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.