ಮೇಷ್ಟ್ರು ಇಲ್ಲದ ಶಾಲೆಯಂತಾಗುತ್ತಿದೆ ಪಾಲಿಕೆ ಸಾಮಾನ್ಯ ಸಭೆ


Team Udayavani, Apr 11, 2017, 3:17 PM IST

hub1.jpg

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸಾಮಾನ್ಯ ಸಭೆ ತನ್ನ ಗಾಂಭೀರ್ಯತೆ ಕಳೆದುಕೊಳ್ಳುತ್ತಿದೆಯೇ? ಸಭೆಯ ಸಮರ್ಪಕ ನಿರ್ವಹಣೆ ಕೊರತೆ, ಸದನ ನಾಯಕರು ತಮ್ಮದೇ ಸದಸ್ಯರ ಮೇಲೆ ಹಿಡಿತ ಇಲ್ಲದಿರುವುದು, ಸದಸ್ಯರು-ಅಧಿಕಾರಿಗಳ ನಡುವೆ ಹೆಚ್ಚುತ್ತಿರುವ ಬಿರುಕು ಸಾಮಾನ್ಯ ಸಭೆಯ ದುಸ್ಥಿತಿಯನ್ನು ಬಿಂಬಿಸತೊಡಗಿದೆ. 

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಿಸ್ತು-ಬದ್ಧತೆ, ವಿಷಯದ ಮೇಲೆ ಆಳವಾದ ಚರ್ಚೆ, ಸಮಸ್ಯೆಗಳ ಚಿಂತನ-ಮಂಥನವೇ ಮಾಯವಾಗುತ್ತಿದೆ. ಅವರವರ ಹಿತಾಸಕ್ತಿ ವಿಷಯಗಳೇ ವಿಜೃಂಭಿಸತೊಡಗಿದ್ದು, ಅನೇಕ ವಿಚಾರಗಳು  ಪ್ರಸ್ತಾಪವಾದರೂ ಗಂಭೀರತೆ ಮರೆತು ಸದನ ಅಡ್ಡದಾರಿಯತ್ತ ಸಾಗುವುದೇ ಅಧಿಕವಾಗುತ್ತಿದೆ. ಸಭೆ ಮುಂದೂಡಿಕೆ, ಮುಂದೂಡಿದ ಸಭೆಯೂಮಂದೂಡಿಕೆ ಸ್ಥಿತಿ ನಿರ್ಮಾಣವಾಗುತ್ತಿದೆ. 

ಹದ ತಪ್ಪುತ್ತಿದೆ ಸಭೆ: ಪಾಲಿಕೆ ಸಾಮಾನ್ಯ ಸಭೆ ಸಮರ್ಪಕವಾಗಿ ಸಾಗಬೇಕಾದರೆ ಮಹಾಪೌರ, ಆಯುಕ್ತ, ವಿಪಕ್ಷ ನಾಯಕ ಹಾಗೂ ಸಭಾನಾಯಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದರೆ, ಕಳೆದ ಕೆಲ ಸಭೆಗಳ ನಡವಳಿಕೆ ಗಮನಿಸಿದರೆ ಈ ನಾಲ್ವರು ವಿಫ‌ಲರಾಗುತ್ತಿದ್ದಾರೆ. ಕೆಲವೊಮ್ಮೆ ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದವರೆ ವಿವಾದದ ಕಿಡಿಯೊತ್ತಿಸುತ್ತಿದ್ದಾರೆ. 

ಸಭೆ ಸಮರ್ಪಕ ನಿರ್ವಹಣೆ ಕೊರತೆ ಇತ್ತೀಚೆಗಿನ  ದಿನಗಳಲ್ಲಿ ಹೆಚ್ಚತೊಡಗಿದೆ. ಸದನದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ಸದಸ್ಯರ ವಾರ್ಡ್‌ ಸಮಸ್ಯೆ ಹೀಗೆ ಯಾವುದೇ ವಿಷಯಕ್ಕೂ ಅದರದ್ದೇಯಾದ ನಿಯಮವಿದೆ. ಪ್ರಶ್ನೋತ್ತರ ವೇಳೆಯಲ್ಲಿ ಹತ್ತಾರು ಜನ ಮಾತನಾಡುವ ಮೂಲಕ ಪ್ರಶ್ನೆ ಕೇಳಿದವರೇ ನಾನೇನು ಕೇಳಿದ್ದೇನೆ, ಕೇಳುದ್ದು  ನಾನೇನಾ ಎಂದು ಮರೆತು ಹೋಗುವಂತಹ ಸ್ಥಿತಿ ನಿರ್ಮಾಣವಾದರೂ ಅದನ್ನು ಸರಿಪಡಿಸುವ ಕೆಲಸ ಮಹಾಪೌರರಿಂದ ಆಗುತ್ತಿಲ್ಲ.  

ಶೂನ್ಯ ವೇಳೆ ಇನ್ನಿತರ ಸಮಯದಲ್ಲಿ ಏಕಕಾಲಕ್ಕೆ ನಾಲ್ಕೈದು ಜನ ಮಾತನಾಡಲು ನಿಲ್ಲುತ್ತಿದ್ದು, ಇದಕ್ಕೆ ಆಯಾ ಪಕ್ಷಗಳ ಸದನ ನಾಯಕರಿಂದಾಗಲಿ, ಮಹಾಪೌರರಿಂದಾಗಲಿ ನಿಯಂತ್ರಣ ಹಾಗೂ ಕೆಎಂಸಿ ಕಾಯ್ದೆ ಏನು ಹೇಳುತ್ತಿದೆ ಎಂಬುದರ ಸಣ್ಣ ಚಿಂತನೆಯೂ ಇಲ್ಲದಾಗಿದೆ. ವಿಪಕ್ಷ ನಾಯಕ ಎದ್ದು  ತರೆ ಯಾವ ವಿಷಯ ಪ್ರಸ್ತಾಪಿಸಿ ಸಂಕಷ್ಟಕ್ಕೆ ಸಿಲುಕಿಸುತ್ತಾರೋ, ಯಾವ ತಪ್ಪು ಹುಡುಕುತ್ತಾರೋ ಎಂಬ ಭಾವನೆ ಆಡಳಿತ ಪಕ್ಷದವರಿಗೆ ಮೂಡಬೇಕು ಆದರೆ, ಅಂತಹ ಯಾವುದೇ ಸನ್ನಿವೇಶ ಇಲ್ಲವಾಗುತ್ತಿದೆ. 

ವಿಪಕ್ಷ ನಾಯಕರೇ ಅಪರೂಪಕ್ಕೊಮ್ಮೆ ಎನ್ನುವಂತೆ ಚುಟುಕಾಗಿ ಮಾತನಾಡುವ ಸ್ಥಿತಿ ಇದೆ. ವಿಪಕ್ಷ ನಾಯಕರಾದವರು ತಮ್ಮ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವಿಷಯ ಪ್ರಸ್ತಾಪ ಕುರಿತಾಗಿ ಸಂಪರ್ಕ ಹೊಂದಬೇಕು, ತಮ್ಮ ಸದಸ್ಯರು ನಿಯಮ ಮೀರುತ್ತಿದ್ದರೆ, ಅನಗತ್ಯವಾಗಿ ಚರ್ಚೆಗೆ ಮುಂದಾದರೆ ಅವರನ್ನು ನಿಯಂತ್ರಿಸಬೇಕು ಅದು ಇಲ್ಲವಾಗುತ್ತಿದೆ. 

ಇನ್ನು ಸಭಾನಾಯಕರೆಂದರೆ ಆಡಳಿತ ಪಕ್ಷದ ಸೇನಾಧಿಪತಿ ಇದ್ದಂತೆ ಇಡೀ ತಂಡವನ್ನು ಮುನ್ನಡೆಸಬೇಕು, ವಿಪಕ್ಷಗಳು ಇಕ್ಕಟ್ಟು ಸ್ಥಿತಿ ಸೃಷ್ಟಿಸುವ ಸಂದರ್ಭದಲ್ಲಿ ಮಹಾಪೌರರ ನೆರವಿಗೆ ಧಾವಿಸಬೇಕು. ತಮ್ಮ ಪಕ್ಷದ ಸದಸ್ಯರು ನಿಯಮ ಮೀರಿ ಇಲ್ಲವೆ ಅನಗತ್ಯವಾಗಿ ಮಧ್ಯಪ್ರವೇಶ, ಮಾತನಾಡಲು ಮುಂದಾದಾಗ ಅವರನ್ನು  ನಿಯಂತ್ರಿಸಬೇಕು. ಆದರೆ, ಸಭಾನಾಯಕ ಸ್ಥಾನವೂ ಈ ವಿಚಾರದಲ್ಲಿ ವಿಫ‌ಲವಾಗತೊಡಗಿದೆ. 

ಸಭೆ ನಿಯಮಗಳಿಗನುಸಾರವಾಗಿ ಸಾಗಬೇಕಾದರೆ, ಅಭಿವೃದ್ಧಿ ಯೋಜನೆಗಳ ಬಗ್ಗೆ ಗೊಂದಲ, ಸಂಶಯಗಳೇನಾದರೂ ಬಂದರೆ ಅವುಗಳನ್ನು ನಿವಾರಿಸುವ, ಸದಸ್ಯರಿಗೆ ಮನವರಿಕೆ ಮಾಡುವ ಮೂಲಕ ಸಭೆ ಸುಗಮವಾಗಿ ಸಾಗಲು ತಮ್ಮದೇ ಕೊಡುಗೆ ನೀಡಬೇಕಾದ ಜವಾಬ್ದಾರಿ ಆಯುಕ್ತರದ್ದಾಗಿದೆ. ಆದರೆ ಆಯುಕ್ತರು ವಿಪಕ್ಷ ನಾಯಕರೇ ನಾಚುವ ರೀತಿಯಲ್ಲಿ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. 

ಸದಸ್ಯರೇನಾದರೂ ನಿಯಮಕ್ಕೆ ವಿರುದ್ಧ ನಿರ್ಣಯಕ್ಕೆ ಮುಂದಾದರೆ ಅದನ್ನು ಸರಕಾರದ ಗಮನಕ್ಕೆ ತರುವ ಇಲ್ಲವೆ ಸದಸ್ಯರಿಗೆ ಕಾಯ್ದೆಯ ಮಾಹಿತಿ ನೀಡುವ ಬದಲು ಸದಸ್ಯರ ಹಕ್ಕುಗಳನ್ನೇ ಪ್ರಶ್ನಿಸುವ ರೀತಿಯಲ್ಲಿ ಆಯುಕ್ತರು ನಡೆದುಕೊಳ್ಳುತ್ತಿರುವುದು ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಕಂದಕ ಹೆಚ್ಚತೊಡಗಿದೆ. ಇಬ್ಬರ ನಡುವೆ ಸಂಶಯ, ಅವಿಶ್ವಾಸ, ಅಸಮಾಧಾನದ ವಾತಾವರಣ ಹೆಚ್ಚತೊಡಗಿದೆ. 

ಪಾಲಿಕೆ ಆದಾಯ ವೃದ್ಧಿ, ಸ್ವತ್ಛತೆ, ಸೌಂದರ್ಯಕ್ಕೆ ಒತ್ತು ನೀಡಿ ನಿರೀಕ್ಷಿತ ಕೆಲಸ ಆಗಿಲ್ಲ ಎಂದು ಪಕ್ಷಭೇದ ಮರೆತು ಅಧಿಕಾರಿಗಳ ಮೇಲೆ ಮುಗಿಬೀಳಬೇಕಾದ ಸದಸ್ಯರಲ್ಲಿ ಕೆಲವರು ಈ ಕಾಮಗಾರಿ ಯಾಕೆ ಮಾಡಿಲ್ಲ ಎಂದು ವಿಷಯ ಮಂಡಿಸುತ್ತಾರೆ. ಅವರದ್ದೇ ಪಕ್ಷದ ಒಂದಿಬ್ಬರು ಸದಸ್ಯರು ಇದಕ್ಕೆ ವ್ಯತಿರಿಕ್ತವಾಗಿ ವರ್ತನೆ ತೋರುತ್ತಾರೆ. ಪಾಲಿಕೆ  ಜಾಗದ ಅತಿಕ್ರಮಣ ಮಾಡಿದವರಿಗೆ ಪಾಲಿಕೆಯಿಂದ ದಂಡ ಹಾಕಬೇಕಿದ್ದರೆ, ಅಂತಹವರಿಗೆ ಪರಿಹಾರ ನೀಡಿ ಎಂದು ಸ್ವತಃ ಸದಸ್ಯರೇ ಒತ್ತಾಯಿಸುತ್ತಾರೆ. 

ತಮ್ಮದೇ ಪಕ್ಷದ ಸದಸ್ಯರು ಸೇರಿದಂತೆ ಸದನ ನಿರ್ಣಯ ಕೈಗೊಂಡ ಮೇಲೂ ಅದನ್ನು ವಿರೋಧಿಸಿ ಒಂದಿಬ್ಬರು ಸದಸ್ಯರು ತಮ್ಮ ಸದನ ನಾಯಕರಿಗೂ ತಿಳಿಸದೆ ಸಭೆಯಿಂದ ಹೊರ ಹೋಗುತ್ತಾರೆ. ಒಂದು ರೀತಿಯಲ್ಲಿ ನೀತಿ-ನಿಯಮ, ಯಾರ ಜವಾಬ್ದಾರಿ ಏನು, ಯಾರು ಯಾವ ರೀತಿ ವರ್ತಿಸಬೇಕು ಎಂಬ ಸಣ್ಣ ಚಿಂತನೆಯೂ ಇಲ್ಲದೆ ಪಾಲಿಕೆ ಸಾಮಾನ್ಯ ಸಭೆ ಮೇಷ್ಟ್ರು ಇಲ್ಲದ ಶಾಲೆಯಂತಾಗುತ್ತಿದೆ. ತಾನು ನಡೆದಿದ್ದೇ ದಾರಿ ಎನ್ನುವಂತೆ ಸಾಗತೊಡಗಿದೆ. ಆಯಾ ಪಕ್ಷಗಳ ಹಿರಿಯ ನಾಯಕರು ಸಹ ಇದಕ್ಕೂ ತಮಗೂ ಸಂಬಂಧ ಇಲ್ಲವೆಂಬಂತೆ ಮೌನಕ್ಕೆ ಜಾರಿದಂತೆ ಭಾಸವಾಗುತ್ತಿದೆ.  

* ಅಮರೇಗೌಡ ಗೋನವಾರ 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

1-rss

Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ

Madhu Bangarappa

Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.