ಜೀತದಾಳು ಋಣಮುಕ್ತಿಗೆ ಶ್ರಮಿಸಿ


Team Udayavani, Jun 25, 2017, 2:25 PM IST

hub1.jpg

ಹುಬ್ಬಳ್ಳಿ: ತಾಲೂಕಿನಾದ್ಯಂತ ಅತೀ ಸೂಕ್ಷ್ಮವಾಗಿ ಸಮೀಕ್ಷೆ ಮಾಡುವ ಮೂಲಕ ಜೀತದಾಳುಗಳು ಕಂಡುಬಂದಲ್ಲಿ ಅವರನ್ನು ಋಣಮುಕ್ತ ಮಾಡುವಲ್ಲಿ ಎಲ್ಲ ಸಿಬ್ಬಂದಿ ಶ್ರಮಿಸಬೇಕು ಎಂದು ತಹಶೀಲ್ದಾರ ಶಶಿಧರ ಮಾಡ್ಯಾಳ ಹೇಳಿದರು. 

ಇಲ್ಲಿನ ಆದರ್ಶ ನಗರದ ಡಾ| ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ಶನಿವಾರ ನಡೆದ ಜೀತದಾಳು ಗುರುತಿಸುವ ಕುರಿತಾದ ಸಭೆ ಹಾಗೂ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2013ರಲ್ಲಿ ಜೀತದಾಳು ಕುರಿತು ನಡೆದ ಸಮೀಕ್ಷೆಯಲ್ಲಿ ಯಾವುದೇ ಜೀತದಾಳು ಇಲ್ಲ ಎಂದು ಮಾಹಿತಿ ನೀಡಲಾಗಿತ್ತು.

ಇದೀಗರಾಜ್ಯ ಸರಕಾರದಿಂದ ಮತ್ತೆ ಸಮೀಕ್ಷೆಗೆ ಆದೇಶ ಬಂದಿದ್ದು, ಅದರಂತೆ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಮತ್ತೆ ಸಮೀಕ್ಷೆ  ನಡೆಸಿ ತಾಲೂಕಾಡಳಿತದಿಂದ ವರದಿನೀಡಬೇಕಾಗಿದೆ. ಆದ್ದರಿಂದ ಅಧಿಕಾರಿಗಳು ನಿರ್ಭಿಡೆಯಿಂದ ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದರು. 

ತಾಲೂಕಿನ 24 ಗ್ರಾಪಂನ ಪಿಡಿಒಗಳು, ಗ್ರಾಮಲೆಕ್ಕಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆ, ಜೀವಿಕ ಸಂಘದ ಪ್ರತಿನಿಧಿ, ಪ್ರಾಥಮಿಕ ಶಾಲೆಯ ಪ್ರಧಾನಗುರುಗಳು ಹಾಗೂ ಕಂದಾಯ ಅಧಿಕಾರಿ ಒಳಗೊಂಡ ತಂಡ ಸಮೀಕ್ಷೆ ನಡೆಸಲಿದೆ ಎಂದು ಹೇಳಿದರು. ಕಾರ್ಮಿಕ ಸಹಾಯಕ ಆಯುಕ್ತ ರೇವಣ್ಣ ಮಾತನಾಡಿ, ಜೀತದಾಳು ಸಮೀಕ್ಷೆ ಮಾಡುವುದು ಹೇಗೆ, ಅವರನ್ನು ಗುರುತಿಸುವುದು ಹೇಗೆ,

-ಯಾವ ಸ್ಥಳಗಳಲ್ಲಿ ಜೀತದಾಳು ಇರುತ್ತಾರೆ, ಅವರನ್ನು ಯಾವ ರೀತಿ ಪ್ರಶ್ನಿಸಬಹುದು ಎಂಬುದರ ಕುರಿತು ಅಗತ್ಯ ಮಾಹಿತಿ ನೀಡಿ ಸಮೀಕ್ಷೆ ನಡೆಸಲು ತರಬೇತಿ ನೀಡಲಾಗುವುದು. ಜೂ. 27ರಿಂದ ಆರಂಭಗೊಳ್ಳಲಿರುವ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಜು. 1ರೊಳಗೆ ತಾಲೂಕಾಡಳಿತಕ್ಕೆ ಸಲ್ಲಿಸಲು ಸೂಚಿಸಲಾಗಿದೆ ಎಂದರು. 

ಗ್ರಾಪಂಗಳಿಗೆ ಸಮನ್ವಯ ಅಧಿಕಾರಿಗಳ ನೇಮಕ:
ಅದರಗುಂಚಿ-ಹಳಾಳ-ನೂಲ್ವಿ: ಗ್ರಾಮೀಣ ಬಿಇಒ ಎಂ.ಎಲ್‌. ಹಂಚಾಟೆ, ಅಂಚಟಗೇರಿ-ಕಟೂ°ರ-ಚನ್ನಾಪುರ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌. ಎಚ್‌. ಪಾಟೀಲ, ಬು.ಅರಳಿಕಟ್ಟಿ-ಛಬ್ಬಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಶೋಕ ಮುನಿಯಪ್ಪನವರ, 

ಕರಡಿಕೊಪ್ಪ-ವರೂರು: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಆರ್‌., ಬ್ಯಾಹಟ್ಟಿ-ಕುಸುಗಲ್ಲ-ಸುಳ್ಳ: ತಾಲೂಕು ಪಶು ವೈದ್ಯಾಧಿಕಾರಿ ಉಮೇಶ ಕೊಂಡಿ, ಹೆಬಸೂರ-ಕಿರೇಸೂರ: ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ, ಇಂಗಳಹಳ್ಳಿ-ಶಿರಗುಪ್ಪಿ: ತಾಲೂಕು ಹಿಂದುಳಿದ ವಿಸ್ತ್ರರ್ಣಾಧಿಕಾರಿ ಎ.ಎಫ್. ಕಟ್ಟಿಮನಿ,

ಕೋಳಿವಾಡ-ಉಮಚಗಿ: ಯಮಕನಮರಡಿ, ಮಂಟೂರ- ಭಂಡಿವಾಡ: ಎಂ.ಜಿ. ಹಿರೇಮಠ, ರಾಯನಾಳ- ದೇವರಗುಡಿಹಾಳ: ಎಂ.ಬಿ. ಸವದತ್ತಿ, ಅಗಡಿ-ಶೆರೆವಾಡ: ಕೃಷ್ಣಮೂರ್ತಿ ವಾಟೆ ಅವರನ್ನು ನೇಮಕ ಮಾಡಲಾಗಿದೆ. ಸಮೀಕ್ಷೆ ನಡೆಸಿದ ನಂತರ ಎಲ್ಲ ಅಧಿಕಾರಿಗಳು ತಮ್ಮ ವರದಿಯನ್ನು ಸಮನ್ವಯಾಧಿಕಾರಿಗಳ ಬಳಿ ಸಲ್ಲಿಸಬೇಕು ಎಂದು ರೇವಣ್ಣ ಸೂಚಿಸಿದರು. 

ಜೀವಿಕ ಸಂಸ್ಥೆಯ ಬಸವರಾಜ ಹಂಚಿನಮನಿ ಅವರುಜೀತದಾಳು ಗುರುತಿಸುವಿಕೆ, ಅರ್ಜಿ ಭರ್ತಿ, ಪುನರ್ವಸತಿ ಕಲ್ಪಿಸುವಿಕೆ ಕುರಿತು ಮಾಹಿತಿ ನೀಡಿದರು. ತಾಪಂ ಇಒ ಡಾ| ಆರ್‌.ವೈ. ಹೊಸಮನಿ, ಎಂ.ಎಲ್‌. ಹಂಚಾಟೆ, ಎಸ್‌.ಎಚ್‌. ಪಾಟೀಲ, ಅಶೋಕ ಮುನಿಯಪ್ಪನವರ, ಉಮೇಶ ಕೊಂಡಿ, ಶಿಲ್ಪಶ್ರೀ, ಎ.ಎಫ್. ಕಟ್ಟಿಮನಿ, ಯಮಕನಮರಡಿ, ಎಂ.ಜಿ. ಹಿರೇಮಠ, ಎಂ.ಬಿ. ಸವದತ್ತಿ, ಕೃಷ್ಣಮೂರ್ತಿ ವಾಟೆ ಇತರರಿದ್ದರು. 

ಟಾಪ್ ನ್ಯೂಸ್

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ

ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಬೈರಪ್ಪ

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ

basavaraj

Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

11

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

1-aaccc

Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು

3

Uppala: ಸುಮಾರು 3.5 ಕೋಟಿ ರೂ. ಮೌಲ್ಯದ ಅಮಲು ಪದಾರ್ಥ ವಶಕ್ಕೆ : ಬಂಧನ

sand

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.