ಆಕಾಶವಾಣಿ ಸಿಬ್ಬಂದಿ ಕಾರ್ಯ ಶ್ಲಾಘನೀಯ
Team Udayavani, Apr 7, 2017, 1:21 PM IST
ಧಾರವಾಡ: ಧಾರವಾಡ ಆಕಾಶವಾಣಿ ಸಿಬ್ಬಂದಿ ಕಳೆದ 25 ವಾರಗಳಿಂದ ನಡೆಸಿಕೊಂಡು ಬಂದಿರುವ ಸ್ವತ್ಛತಾ ಕಾರ್ಯ ಮತ್ತು ಶ್ರಮದಾನ ಇತರ ನೌಕರರಿಗೆ ಮಾದರಿಯಾಗಿದೆ ಎಂದು ಜಿಪಂ ಸಿಇಒ ಸ್ನೇಹಲ್ ಹೇಳಿದರು.
ನಗರದ ಆಕಾಶವಾಣಿ ಕೇಂದ್ರದಲ್ಲಿ ನಮ್ಮ ನಡೆ ಸ್ವತ್ಛತೆ ಕಡೆ ಎಂಬ 25 ವಾರಗಳ ಶ್ರಮದಾನದ ರಜತ ಸಪ್ತಾಹ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ 25 ವಾರಗಳಿಂದ ಪ್ರತಿ ಬುಧವಾರ ನಮ್ಮ ನಡೆ ಸ್ವತ್ಛತೆ ಕಡೆ
ಶ್ರಮದಾನ ಕಾರ್ಯಕ್ರಮ ಹಾಕಿಕೊಂಡು ಸಂಜೆ 5ರಿಂದ 6ಗಂಟೆವರೆಗೆ ಆಕಾಶವಾಣಿ ಕೇಂದ್ರದ ಅಧಿಕಾರಿಗಳ ವರ್ಗ ಹಾಗೂ ಸಿಬ್ಬಂದಿ ವರ್ಗಗಳು ಸೇರಿ ಒಟ್ಟು 72 ಜನರು ಸ್ವಯಂ ಪ್ರೇರಣೆಯಿಂದ ಆಕಾಶವಾಣಿ ಕೇಂದ್ರದ ಆವರಣ ಸ್ವತ್ಛಗೊಳಿಸುತ್ತ ಬಂದಿದ್ದಾರೆ.
ಇದು ಎಲ್ಲರಿಗೂ ಮಾದರಿಯಾಗಿದೆ. ಎಂದರು. ಮನುಷ್ಯನಿಗೆ ಉಸಿರಾಡುವ ಗಾಳಿ ಎಷ್ಟು ಮುಖ್ಯವೋ ಅಷ್ಟೇ ರೇಡಿಯೋ ಕೇಳುಗರಿಗೆ ಆಕಾಶವಾಣಿ ಬಿತ್ತರಿಸುವ ವಿಷಯಗಳು ಮುಖ್ಯ ಎಂದರು. ನಿಲಯ ಸಹಾಯಕ ನಿರ್ದೇಶಕ ಸತೀಶ ಪರ್ವತಿಕರ ಮಾತನಾಡಿ,
ಧಾರವಾಡ ಆಕಾಶವಾಣಿ ಕೇಂದ್ರವು 57 ವಸಂತಗಳನ್ನು ಕಂಡಿದ್ದು ಇದುವರೆಗೆ 3.5 ಕೋಟಿ ಜನರು ಕನ್ನಡ ಸುದ್ದಿ ಸಮಾಚಾರ ಕೇಳುತ್ತಾರೆ. ವಿವಿಧ ರಂಗದಲ್ಲಿ ಸರಣಿ ಕಾರ್ಯಕ್ರಮ ಬಿತ್ತರಿಸಲಾಗುತ್ತಿದೆ ಎಂದರು. ತಾಂತ್ರಿಕ ನಿರ್ದೇಶಕ ಜೀವನ ಶೆಟ್ಟಿ ಇದ್ದರು. ಮಾಯಾ ರಾಮನ್ ಸ್ವಾಗತಿಸಿದರು. ದಿವಾಕರ ಹೆಗಡೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ
Flight: ಹುಬ್ಬಳ್ಳಿ-ಅಹ್ಮದಾಬಾದ್ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ
Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು
Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ
Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.