ಗುರುವೇ ಪ್ರತಿಯೊಬ್ಬರ ಬದುಕಿನ ಅತ್ಯಂತ ಮುಖ್ಯ ವ್ಯಕ್ತಿ
ಡಾ| ರಾಮನಗೌಡರ ಅವರ ಆಧ್ಯಾತ್ಮಿಕ ಅಧ್ಯಯನ ಚಿಂತನ ಮತ್ತು ಸಾಧನೆಯ ಬಗ್ಗೆ ಪರಿಚಯಿಸಿದರು
Team Udayavani, Feb 5, 2022, 5:24 PM IST
ಧಾರವಾಡ: ಆತ್ಮಜ್ಞಾನಿಯಾದ ಗುರುವು ಶಿಷ್ಯಂದಿರ ಹೃದಯದೊಳಗಿನ ತಾಪಗಳನ್ನೆಲ್ಲ ಪರಿಹರಿಸುತ್ತಾ ಅವರಿಗೆ ಆತ್ಮಜ್ಞಾನ ಪಡೆಯಲು ಸಹಾಯ ಮಾಡುತ್ತಾನೆ ಎಂದು ವೈದ್ಯ ಡಾ| ಎಸ್. ಆರ್. ರಾಮನಗೌಡರ ಹೇಳಿದರು.
ಕವಿಸಂನಲ್ಲಿ ಪ್ರೊ| ಬಸಯ್ಯ ಶಿವಯ್ಯ ಶಿರೋಳ ದತ್ತಿ ಅಂಗವಾಗಿ ಆಯೋಜಿಸಿದ್ದ ಶ್ರೀ ಗುರುಗೀತಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾವಿರಾರು ವರ್ಷಗಳ ಹಿಂದೆ ವೇದವ್ಯಾಸ ರಚಿತ “ಶ್ರೀ ಗುರುಗೀತಾ’ ಎಂಬ ಗ್ರಂಥದ ಎಲ್ಲ ವಿವರಗಳನ್ನು, ಹತ್ತು ಹಲವು ಶ್ಲೋಕಗಳನ್ನು ಅರ್ಥಸಹಿತವಾಗಿ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮನೋವೈದ್ಯ ಡಾ| ಆನಂದ ಪಾಂಡುರಂಗಿ ಮಾತನಾಡಿ, ಗುರುವೇ ಪ್ರತಿಯೊಬ್ಬರ ಬದುಕಿನ ಅತ್ಯಂತ ಮುಖ್ಯ ವ್ಯಕ್ತಿ ಎಂದರು. ದತ್ತಿದಾನಿಗಳಾದ ಪ್ರೊ| ಬಿ.ಎಸ್. ಶಿರೋಳ ಅವರು ಡಾ| ರಾಮನಗೌಡರ ಅವರ ಆಧ್ಯಾತ್ಮಿಕ ಅಧ್ಯಯನ ಚಿಂತನ ಮತ್ತು ಸಾಧನೆಯ ಬಗ್ಗೆ ಪರಿಚಯಿಸಿದರು. ಡಾ| ಎಸ್.ಆರ್. ರಾಮನಗೌಡರ ಹಾಗೂ ಅವರ ಪತ್ನಿ ಅವರನ್ನು ಸನ್ಮಾನಿಸಲಾಯಿತು. ಶಂಕರ ಹಲಗತ್ತಿ, ಗುರು ಹಿರೇಮಠ, ಡಾ| ಶ್ರೀಶೈಲ ಹುದ್ದಾರ, ನಿಂಗಣ್ಣ ಕುಂಟಿ, ಪ್ರೊ| ಐ.ಜಿ. ಸನದಿ, ಡಾ| ಡಿ.ಎಂ. ಹಿರೇಮಠ, ಡಾ|ಸಂಗಮನಾಥ ಲೋಕಾಪುರ, ಜಿ.ಬಿ. ಹೊಂಬಳ, ಡಾ| ಆನಂದ ಪಾಟೀಲ, ಡಾ| ಲಿಂಗರಾಜ ಅಂಗಡಿ, ಶಶಿಧರ ತೋಡಕರ, ಐ.ಕೆ. ಬಳ್ಳೂರ, ಎಸ್.ಬಿ. ಗುತ್ತಲ, ಸಿ.ಎಸ್. ಪಾಟೀಲ, ರಾಮಚಂದ್ರ ಧೋಂಗಡೆ ಇನ್ನಿತರರಿದ್ದರು. ಬಾಲಬಳಗ ಶಾಲೆಯ ಶೃತಿ ಮತ್ತು ತನ್ಮಯಿ ಸ್ವಾಗತಗೀತೆ ಹಾಡಿದರು. ಡಾ| ಸಂಜೀವ ಕುಲಕರ್ಣಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರ ಭೂಮಿ ಕಬಳಿಸಲು ವಕ್ಫ್ ಗೆ ಕಾಂಗ್ರೆಸ್ ಕುಮ್ಮಕ್ಕು: ಅರವಿಂದ್ ಬೆಲ್ಲದ
BJP: ಹೈಕಮಾಂಡ್ ಸೂಚಿಸಿರುವ ಅಭ್ಯರ್ಥಿ ಪರ ಕೆಲಸ: ನಿರಾಣಿ
By Polls; ಭಾವನಾತ್ಮಕ ಮಾತು, ಕಣ್ಣೀರು ನೋಡಿ ಜನರು ಬೇಸತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
Hubli: ಬಿಜೆಪಿಯಿಂದ ಹೆಚ್ಚಿನ ಶಾಸಕರು ಕಾಂಗ್ರೆಸ್ ಗೆ ಬರಬಹುದು: ಈಶ್ವರ ಖಂಡ್ರೆ
PM Modi: ಕಟ್ಟಡ ಕುಸಿತ: ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ 2 ಲಕ್ಷ ರೂ. ಪರಿಹಾರ
MUST WATCH
ಹೊಸ ಸೇರ್ಪಡೆ
Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ
Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ
BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ
Kerala: ವಿಡಿಯೋ ಅಪ್ಲೋಡ್ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ
Explainer: ವಯನಾಡ್ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್ ಅಖಾಡಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.