ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ಅನಿರೀಕ್ಷಿತ
Team Udayavani, Dec 10, 2019, 10:48 AM IST
ಧಾರವಾಡ: 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನವಾಗಿ ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ ಹಾಗೂ ಕಾವ್ಯದ ಚರ್ಚೆ ಮಾಡಲಾಗುವುದು. ಜೊತೆಗೆ ಕರ್ನಾಟಕ ಎದುರಿಸುತ್ತಿರುವ ಬಿಕ್ಕಟ್ಟಿನ ಕುರಿತು ಮಾತನಾಡಲಾಗುವುದು ಎಂದು ಸಮ್ಮೇಳನಾಧ್ಯಕ್ಷ, ಹಿರಿಯ ಕವಿ ಡಾ| ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.
ಜಯನಗರದಲ್ಲಿರುವ ಸಂಗಾತ ಪತ್ರಿಕೆಯ ಕಚೇರಿಯಲ್ಲಿ ಯುವ ಸಾಹಿತಿಗಳೊಂದಿಗೆ ಸೋಮವಾರ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು. ಕನ್ನಡ ತಾಯಿ, ಸಮುದಾಯ ಪ್ರೀತಿಯಿಂದ ಸಮ್ಮೇಳನದ ಅಧ್ಯಕ್ಷತೆ ಕೊಟ್ಟಿದ್ದಾರೆ.
ಅದನ್ನು ಒಪ್ಪಿಕೊಳ್ಳದೇ ಇದ್ದರೆ ಅಹಂಕಾರ ಅನ್ನಿಸಲಿದೆ. ನಾನೊಬ್ಬ ಉತ್ಸವ ಮೂರ್ತಿ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅನಿರೀಕ್ಷಿತ. ಇದನ್ನು ಸಾಹಿತ್ಯ ಪರಿಷತ್ತು ನೀಡಿದೆ. ಸಮ್ಮೇಳನದ ರೂಪುರೇಷೆಗಳನ್ನು ಅದುವೇ ನೋಡಿಕೊಳ್ಳಲಿದೆ ಎಂದರು.
ಭಾರತಾಂಬೆ ಹಾಗೂ ಕನ್ನಡಾಂಬೆ 20ನೇ ಶತಮಾನದ ದೇವರು. ಬದಲಾವಣೆ ಜಗದ ನಿಯಮ. ಸಾಕಷ್ಟು ವ್ಯತ್ಯಾಸ ಕಾಣಬಹುದು.ದಾಸ ಸಾಹಿತ್ಯ, ನವೋದಯ, ನವ್ಯ, ಹೊಸ ಗನ್ನಡ, ಆಧುನಿಕ ಕನ್ನಡ ಹೀಗೆ ಆಯಾ ಕಾಲಘಟ್ಟಕ್ಕೆ ಕವಿತೆಗಳು ಬದಲಾಗಿವೆ. ಮೊದಲಿನಂತೆ ಕ್ಲಿಷ್ಟತೆ ಹಾಗೂ ಸಂಸ್ಕೃತದ ಪ್ರಭಾವ ಇಂದಿನ ಕವಿತೆಗಳಲ್ಲಿ ಇಲ್ಲ. ಕನ್ನಡ ತಾಯಿ, ಇಂಗ್ಲಿಷ್, ಹಿಂದಿ, ಸಂಸ್ಕೃತ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಸಮೃದ್ಧವಾಗಿ ಬೆಳೆದಿದ್ದಾಳೆ. ಹೀಗಾಗಿ ಯುವ ಕವಿಗಳು ಭಾಷೆಯ ಜ್ಞಾನ ಹಾಗೂ ಅರ್ಥದ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಯುವ ಸಾಹಿತಿಗಳು, ಬರಹಗಾರರು ತಮ್ಮ ಆತ್ಮ ಸ್ವರೂಪ ಕಳೆದುಕೊಳ್ಳಬಾರದು. ಇಂದಿನ ಭಾಷೆ ಹೇಗಿದೆ ಹಾಗೆಯೇ ವರ್ಣನೆ ಮಾಡಬೇಕು. ಭಾಷೆ ಬಗ್ಗೆ ವಿಶ್ವಾಸ ಇಡಬೇಕು. ಅವಸರದ ಸಾಹಿತ್ಯ ರಚಿಸಬಾರದು ಎಂದು ಸಲಹೆ ನೀಡಿದರು. ಸಾಹಿತಿ ಟಿ.ಎಸ್. ಗೊರವರ ಅವರು ಇದ್ದ ಕೆಲಸವನ್ನು ಬಿಟ್ಟು ಲಾಭದಾಯಕವಲ್ಲದ ಪತ್ರಿಕೆ ನಡೆಸುವ ಮೂಲಕ ಯುವ ಸಾಹಿತಿಗಳಿಗೆ ಅವಕಾಶ ನೀಡುತ್ತಿದ್ದಾರೆ. ಸಂಗಾತದಂತಹ ಪತ್ರಿಕೆ ಇಂದಿನ ತುರ್ತು ಎಂದರು. ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ, ಸಾಹಿತಿ ಟಿ.ಎಸ್. ಗೊರವರ, ಯುವ ಸಾಹಿತಿಗಳು, ಕನ್ನಡ ವಿಷಯದ ಸಂಶೋಧನಾ ವಿದ್ಯಾರ್ಥಿಗಳು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ
B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.