ಈಜು ಪ್ರತಿಭೆಗಳಿಗೆ ಸೌಲಭ್ಯ ಕೊರತೆ


Team Udayavani, Feb 10, 2017, 1:05 PM IST

hub6.jpg

ಹುಬ್ಬಳ್ಳಿ: ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಬಹುದಾದ ಈಜುಪಟುಗಳು ನಮ್ಮಲ್ಲಿದ್ದರೂ, ಸೂಕ್ತ ಸೌಲಭ್ಯ-ಪ್ರೋತ್ಸಾಹಗಳಿಲ್ಲದೆ ಪ್ರತಿಭೆಗಳು ಕಮರುವಂತಾಗಿದೆ ಎಂಬುದು ಆಸ್ಟ್ರೇಲಿಯಾ ಕ್ರೀಡಾ ಆಯೋಗದಿಂದ “ಡಿಪ್ಲೋಮಾ ಇನ್‌ ಡೈವಿಂಗ್‌’ನಲ್ಲಿ ಪ್ರಮಾಣಪತ್ರ ಪಡೆದ ದೇಶದ ಏಕೈಕ ಈಜು ಡೈವಿಂಗ್‌ ತರಬೇತುದಾರ ಮೈಸೂರಿನ ಗುರುಪ್ರಸಾದ್‌ ಅವರ ಅಸಮಾಧಾನ. 

ದೇಶದಲ್ಲಿರುವ ಡೈವಿಂಗ್‌ ಸೌಲಭ್ಯ ಇರುವ ಈಜುಕೊಳಗಳಲ್ಲಿ ಹುಬ್ಬಳ್ಳಿಯ ಈಜುಕೊಳವೂ ಒಂದಾಗಿದೆ. ಇಲ್ಲಿ ಸಮರ್ಪಕ ಸೌಲಭ್ಯಗಳಿಲ್ಲದೆ ಕ್ರೀಡಾಪಟುಗಳಿಗೆ ಸರಿಯಾದ ತರಬೇತಿ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಆಡಳಿತ ಹಾಗೂ ಸರಕಾರದ ನಿರ್ಲಕ್ಷ್ಯದಿಂದಾಗಿ ಸಮರ್ಪಕ ತರಬೇತಿ-ಸಾಧನೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. 

ಕೊಲ್ಕತ್ತಾ ಹೊರತುಪಡಿಸಿದರೆ ಈಜುಗೊಳ ಮತ್ತು ಡೈವಿಂಗ್‌ (“ಎಲ್‌’ ಆಕಾರ) ವಿಭಾಗ ಹೊಂದಿರುವ ಈಜುಕೊಳ ಹುಬ್ಬಳ್ಳಿಯಲ್ಲಿ ಮಾತ್ರವಿದೆ. ಪಾಲಿಕೆ ಆಯುಕ್ತರಿಂದ ವಿಶೇಷ ಅನುಮತಿ ಪಡೆದು ನಾಲ್ಕು ತಿಂಗಳಿಂದ ನಿತ್ಯ ಸಂಜೆ 5ರಿಂದ 7ರ ವರೆಗೆ ಎಂಟು ಈಜುಪಟುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

2010ರಲ್ಲಿ ಸ್ಥಗಿತ: 2010ರ ಬಳಿಕ ಕಾರಣಾಂತರಗಳಿಂದ ಈಜುಕೊಳ ಸ್ಥಗಿತಗೊಂಡಿದ್ದರಿಂದ ಅನಿವಾರ್ಯವಾಗಿ ಡೈವಿಂಗ್‌ ತರಬೇತಿ ನಿಲ್ಲಿಸಲಾಯಿತು. ಸತತವಾಗಿ ತರಬೇತಿ ನೀಡಿದ್ದರೆ ನಮ್ಮ ವಿದ್ಯಾರ್ಥಿಗಳು ಡೈವಿಂಗ್‌ನಲ್ಲಿ ಇಂದು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗುತ್ತಿತ್ತು. 4 ತಿಂಗಳಿಂದ ತರಬೇತಿ ಮತ್ತೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಕೆಲ ಕ್ರೀಡಾಪಟುಗಳು ಉತ್ತಮ ಪ್ರದರ್ಶನಕ್ಕೆ ಸಿದ್ಧರಾಗಲಿದ್ದಾರೆ ಎಂಬುದು ಅವರ ಆಶಯ. 

ಕ್ರೀಡಾಪಟುಗಳಿಗೆ ಉದ್ಯೋಗ: ಕ್ರೀಡೆಯಲ್ಲಿ ಸಾಧನೆ ಮಾಡಿದ ಹಲವರಿಗೆ ಸರಕಾರದಿಂದ ಉದ್ಯೋಗ ಪಡೆಯುವುದು ಸುಲಭ, ಆದರೆ ಶ್ರಮಕ್ಕೆ ತಕ್ಕ ಉದ್ಯೋಗ ಸಿಗದೇ ಇದ್ದರೆ ಅಂತಹ ಉದ್ಯೋಗ ಇದ್ದರೆಷ್ಟು ಬಿಟ್ಟರೆಷ್ಟು? ಆಸ್ಟ್ರೇಲಿಯಾ ಕ್ರೀಡಾ ಆಯೋಗದಿಂದ “ಡಿಪ್ಲೊಮಾ ಇನ್‌ ಡೈವಿಂಗ್‌’ನಲ್ಲಿ ಪ್ರಮಾಣಪತ್ರ ಪಡೆದ ದೇಶದ ಏಕೈಕ ತರಬೇತುದಾರನಾಗಿದ್ದು, ರಾಜ್ಯೋತ್ಸವ, ಏಕಲವ್ಯ ಪ್ರಶಸ್ತಿ ಪಡೆದಿರುವೆ.

ಎಂಬಿಎ ಪದವಿ ಪಡೆದಿರುವ ನನಗೆ ಪೊಲೀಸ್‌ ಇಲಾಖೆ ದಫೇದಾರ್‌ ಹುದ್ದೆ ನೀಡಿತು. ಬೇಸರವಾಗಿ ನಿರಾಕರಿಸಿದೆ. ಅದರ ಬದಲಾಗಿ ವಿದ್ಯಾರ್ಥಿಗಳಿಗೆ ಈಜು ತರಬೇತಿ ನೀಡುವ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದಿಷ್ಟು ಕ್ರೀಡಾ ಸಾಧಕರು ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಯ ಸಾಧನೆ ತೋರಿದರೆ ಶ್ರಮ ಸಾರ್ಥಕ ಎಂಬುದು ಗುರುಪ್ರಸಾದ್‌ ಅವರ ಅನಿಸಿಕೆ.

* ಬಸವರಾಜ ಹೂಗಾರ

ಟಾಪ್ ನ್ಯೂಸ್

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

ranaj

Ranaji Trophy: ಹೊರಮೈದಾನ ಒದ್ದೆ : ಕರ್ನಾಟಕ-ಕೇರಳ ಪಂದ್ಯಕ್ಕೆ ತೊಂದರೆ

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ

1-a-nitk

kulai; ಮೀನುಗಾರಿಕೆ ಜೆಟ್ಟಿ ಕೆಲಸ ಪ್ರಗತಿಯಲ್ಲಿ

CHESS-ARJUN

London: ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ ಅರ್ಜುನ್‌ ಎರಿಗೈಸ್‌ಗೆ ಪ್ರಶಸ್ತಿ

arrested

Sullia;ಮಹಿಳೆಯರ ಅವಹೇಳನ ಆರೋಪ: ಅರಣ್ಯಾಧಿಕಾರಿಯ ಬಂಧನ, ಬಿಡುಗಡೆ

Pak–Eng

Test Cricket: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಪಾಕಿಸ್ಥಾನಕ್ಕೆ 152 ರನ್‌ಗಳ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

By Election: ಸಿಪಿವೈ ಎನ್‌ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ

By Election: ಸಿಪಿವೈ ಎನ್‌ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ

ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಜೋಶಿ

Pralhad Joshi: ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

police

ಮಣಿಕಲ್ಲು ದೇಗುಲದ ಆಡಳಿತ ಮಂಡಳಿ ವಿಚಾರ: ಗಲಾಟೆ

suicide (2)

Panja:ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

police crime

Uppinangady; ಹುಟ್ಟು ಹಬ್ಬಕ್ಕಾಗಿ ಕಡವೆ ಹ*ತ್ಯೆ!: ಕೋವಿ, ಮಾಂಸ ವಶ

drowned

Subrahmanya: ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.