Sharanas ವಚನಗಳ ಮೌಲ್ಯ ಮುಂದಿನ ಪೀಳಿಗೆಗೆ ತಲುಪಬೇಕು: ದತ್ತಾತ್ರೇಯ ಹೊಸಬಾಳೆ

ಭಾರತ ಎನ್ನುವ ದೇಶ ಆಧ್ಯಾತ್ಮ ಇಲ್ಲದೇ ಜೀವ ಇಲ್ಲದಂತೆ

Team Udayavani, Jun 29, 2024, 10:27 PM IST

dattatreya-Hosabale

ಧಾರವಾಡ : ಸಾರ್ಥಕ ಬದುಕಿನ ಜೀವನಕ್ಕೆ ಬೇಕಾದ ಮೌಲ್ಯವನ್ನು ವಚನಗಳು ತಿಳಿಸುತ್ತವೆ. ಹೀಗಾಗಿ ವಚನಗಳು ಬದುಕಿನಲ್ಲಿ ಧರ್ಮವಾಗಿ ಪಾಲಿಸಬೇಕಿದ್ದು, ಇದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹರು
ದತ್ತಾತ್ರೇಯ ಹೊಸಬಾಳೆ ಹೇಳಿದರು.

ನಗರದ ಜೆಎಸ್‌ಎಸ್ ಆವರಣದ ಸನ್ನಿಧಿ ಕಲಾಕ್ಷೇತ್ರದಲ್ಲಿ ಪ್ರಜ್ಞಾ ಪ್ರವಾಹ ಕರ್ನಾಟಕ ವತಿಯಿಂದ ಆಯೋಜಿಸಿದ್ದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಸುಧಾರಣೆಗಾಗಿ ಶರಣರು ಸರಳವಾದ ಪದಗಳನ್ನು ಬಳಸಿ ವಚನಗಳನ್ನು ರಚಿಸಿ ಜನರಿಗೆ ತಿಳಿಸಿದರು. ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಗ್ರಹಿಸಿ ಪ್ರಸ್ತುತ ಸಮಾಜಕ್ಕೆ ನೀಡುವ ಮೂಲಕ ಮಹತ್ವದ ಕಾರ್ಯ ಮಾಡಿದ್ದಾರೆ. ಭಕ್ತಿ, ಕಾಯಕ, ದಾಸೋಹ ಮಾಡುವುದು ಜೀವನದ ಅಂಗವಾಗಬೇಕು. ಜತೆಗೆ ಇವು ಜೀವನದೊಂದಿಗೆ ನಡೆಯುತ್ತಿರಬೇಕು ಎಂದರು.

ಜೀವನಕ್ಕೆ ಬೇಕಾದ ಮೌಲ್ಯವನ್ನು ವಚನಗಳು ತಿಳಿಸುತ್ತವೆ. ಹೀಗಾಗಿ ವಚನಗಳ ಸಾರವನ್ನು ಬದುಕಿನಲ್ಲಿ ಧರ್ಮವಾಗಿ ಪಾಲಿಸಬೇಕು. ಆಧ್ಯಾತ್ಮ ಎನ್ನುವುದು ನಿತ್ಯ ಜೀವನದಲ್ಲಿ ದಾರಿ ತೋರುತ್ತದೆ. ವಚನ ಸಾಹಿತ್ಯ ಅದನ್ನು ಮಾಡಿದ್ದು, ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿದೆ. ವಚನ ಸಾಹಿತ್ಯದ ಒಂದೊಂದು ನುಡಿ ನೋಡಿದಾಗ ನಾವು ಜೀವನ ಹೇಗೆ ಕಟ್ಟ ಬೇಕು ಎಂದಿದೆ. ಭಾರತದ ಸಂಸ್ಕೃತಿ ಇದನ್ನು ಬಿಟ್ಟು ಇಲ್ಲ ಎಂದರು.

ಭಾರತ ಎನ್ನುವ ದೇಶ ಆಧ್ಯಾತ್ಮ ಇಲ್ಲದೇ ಜೀವ ಇಲ್ಲದಂತೆ. ಆಧ್ಯಾತ್ಮ ಎನ್ನುವದು ನಮ್ಮ ಜೀವನ ಮುಂದೆ ಹೋಗಲು ಅಗತ್ಯವಿದೆ. ಇದರ ಜತೆಗೆ ಜೀವನ ಮೌಲ್ಯ ನೀಡುವ ವಚನಗಳನ್ನು ಶಾಲಾ- ಕಾಲೇಜುಗಳಲ್ಲಿ ಓದಿಸಬೇಕು. ಕನ್ನಡದ ಮಕ್ಕಳು ಕನ್ನಡ ಕಲಿಯಬೇಕು ಎಂದರು.

ವಚನಗಳನ್ನು ಶಾಲಾ- ಕಾಲೇಜುಗಳಲ್ಲಿ ಓದಿಸಬೇಕು. ಕನ್ನಡದ ಮಕ್ಕಳು ಕನ್ನಡ ಕಲಿಯಬೇಕು. ನಾವು ಮೂರು ಭಾಷೆ ಮಾತನಾಡುತ್ತೇವೆ. ಯಾರು ಮಾತೃ ಭಾಷೆಮರೆಯುತ್ತಾರೋ ಅವರು ಉನ್ನತ ಮಟ್ಟದಲ್ಲಿ ಬೆಳೆಯುತ್ತರೆ. ಸಂಸ್ಕೃತಿಯ ಅತ್ಯುನ್ನತ ಶಿಖರವಾಗಿದ್ದು, ಒಂದು ರಾಷ್ಟ್ರದ ಅಭಿವ್ಯಕ್ತಿ ಸಂಸ್ಕೃತಿಯಾಗಿದೆ. ಭಾರತ ಎನ್ನುವ ದೇಶ ಆಧ್ಯಾತ್ಮ ಇಲ್ಲದೇ ಜೀವ ಇಲ್ಲದಂತೆ. ಆಧ್ಯಾತ್ಮ ಎನ್ನುವದು ನಮ್ಮ ಜೀವನ ಮುಂದೆ ಹೋಗಲು ಅಗತ್ಯ ಎಂದರು.

ಗದುಗಿನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಹಿರಿಯ ಸಂಶೋಧಕ ಡಾ.ಸಂಗಮೇಶ ಸವದತ್ತಿಮಠ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಸಾಹಿತಿ ಶಾಂತಾ ಇಮ್ರಾಪೂರ, ಗೋವಿಂದಪ್ಪ ಗೌಡಪ್ಪಗೋಳ, ಜೆ. ನಂದಕುಮಾರ ಸೇರಿದಂತೆ ಹಲವರು ಇದ್ದರು.

”ಲಿಂಗಪೂಜೆಯೇ ಮಾಡದವರು ವಚನಗಳ ವ್ಯಾಖ್ಯಾನ ಮಾಡಿ, ಜನರ ದಾರಿ ತಪ್ಪಿಸುತ್ತಿದ್ದಾರೆ. ಕೆಲವರು ಬಸವಣ್ಣನವರ ವಚನಗಳನ್ನು ತಪ್ಪಾಗಿ ಅರ್ಥೈಸುತ್ತಿದ್ದು, ಈ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ನೀಡುವುದು ಸರಿಯಲ್ಲ. ಇನ್ನು ವಚನ ಸಾಹಿತ್ಯವನ್ನು ಮತ್ತೊಬ್ಬರಿಂದ ಕೇಳುವ ಬದಲು ಸ್ವಯಂ ಪ್ರೇರಿತವಾಗಿ ಓದಬೇಕು. ವಚನಗಳ ಮೂಲವನ್ನು ಅರಿತು ವ್ಯಾಖ್ಯಾನ ಮಾಡಬೇಕು”
-ಸದಾಶಿವಾನಂದ ಸ್ವಾಮೀಜಿ, ಗದುಗಿನ ಶಿವಾನಂದ ಬೃಹನ್ಮಠ

ಟಾಪ್ ನ್ಯೂಸ್

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ…  ಆರನೇ ಮಹಡಿಯಿಂದ ಬಿದ್ದು ಮೃತಪಟ್ಟ

Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ… ಆರನೇ ಮಹಡಿಯಿಂದ ಬಿದ್ದು ಮೃತ್ಯು

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

Minister Pralhad Joshi ರಾಜ್ಯದ ಹೆದ್ದಾರಿಗೆ 8,021 ಕೋ.ರೂ.

Minister Pralhad Joshi ರಾಜ್ಯದ ಹೆದ್ದಾರಿಗೆ 8,021 ಕೋ.ರೂ.

Darshan Case ಒಳ್ಳೆಯ ಸಮಯ ಬರುತ್ತದೆ: ಸುಮಲತಾ ಪೋಸ್ಟ್‌ ವೈರಲ್‌

Darshan Case ಒಳ್ಳೆಯ ಸಮಯ ಬರುತ್ತದೆ: ಸುಮಲತಾ ಪೋಸ್ಟ್‌ ವೈರಲ್‌

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌; ಯುವಕನ ವಿರುದ್ಧ ಎಫ್ಐಆರ್‌

Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌; ಯುವಕನ ವಿರುದ್ಧ ಎಫ್ಐಆರ್‌

BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ

BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ

Missing Case: ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್ ಮೃತದೇಹ ಶಂಕಾಸ್ಪದವಾಗಿ ಪತ್ತೆ

Missing Case: ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್ ಮೃತದೇಹ ಶಂಕಾಸ್ಪದವಾಗಿ ಪತ್ತೆ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.