ಆ್ಯಪಲ್‌ ಬಾರಿ ರೈತ ಬೆಳೆದ “ಭಾರಿ’


Team Udayavani, Jan 2, 2020, 1:04 PM IST

gadaga-tdy-1

ನರಗುಂದ: ಸಕಾಲಕ್ಕೆ ಮಳೆಯಿಲ್ಲದೇ ರೈತರು ಕೃಷಿಯಿಂದ ವಿಮುಖವಾಗುತ್ತಿರುವ ಬೆನ್ನಲ್ಲೇ ಇಲ್ಲೊಬ್ಬ ಯುವ ರೈತ ಬಯಲು ಸೀಮೆಗೆ ಅಪರೂಪವೆನಿಸಿದ “ಆ್ಯಪಲ್‌ ಬಾರಿ’ ಬೆಳೆದು ಕೃಷಿಕರಿಗೆ ಮಾದರಿಯಾಗಿದ್ದಾನೆ.

ತಾಲೂಕಿನ ಸಂಕದಾಳ ಗ್ರಾಮದ ಬಿಎ ಪದವೀಧರ, ಯುವ ರೈತ ರುದ್ರಗೌಡ ಹನಮಂತಗೌಡ ಲಿಂಗನಗೌಡ್ರ ಅವರು, ಗ್ರಾಮದ ಮುಳ್ಳೂರ ಒಳರಸ್ತೆಗೆ ಹೊಂದಿಕೊಂಡ ಜಮೀನಿನ 1 ಎಕರೆ ಪ್ರದೇಶದಲ್ಲಿ ಆ್ಯಪಲ್‌ ಬಾರಿ ಬೆಳೆದು ಗಮನ ಸೆಳೆದಿದ್ದಾನೆ. ಕೃಷಿಹೊಂಡದಿಂದ ಹನಿ ನೀರಾವರಿ ಮಾಡುವ ಮೂಲಕ ಬೆಳೆಗೆ ನೀರುಣಿಸಿದ್ದಾನೆ. ಶೆಗಣಿ ಗೊಬ್ಬರ(ಸಾವಯವ) ಬಳಸಿದ್ದಾನೆ. ನವಲಗುಂದ ತಾಲೂಕು ಮಣಕವಾಡದ ಚಿಕ್ಕಪ್ಪ ಬಿ.ಸಿ. ಭರಮಗೌಡ್ರ ಅವರ ಪ್ರೇರಣೆ ಹಾಗೂ ಕೃಷಿ, ತೋಟಗಾರಿಕೆ ಅಧಿಕಾರಿಗಳ ಸಲಹೆ ಪಡೆದಿರುವ ರುದ್ರಗೌಡ ಅವರು 2018ರಲ್ಲಿ ಬೆಳಗಾವಿ ಜಿಲ್ಲೆ ಕಾಗವಾಡದ ಮಿರಾಕಲ್‌ ಅಗ್ರಿ ಟೆಕ್‌ ನರ್ಸರಿಯಿಂದ 40 ರೂ.ಗೆ ಒಂದರಂತೆ 300 ಸಸಿ ತಂದು ನಾಟಿ ಮಾಡಿದ್ದಾರೆ. 40ರಿಂದ 45 ಸಾವಿರ ರೂ. ಖರ್ಚು ಮಾಡಿ ಬೆಳೆಸಿದ ಆ್ಯಪಲ್‌ ಬಾರಿ(ದೊಡ್ಡ ಗಾತ್ರದ ಹಣ್ಣು) ಒಂದೂವರೆ ವರ್ಷದಲ್ಲಿ ಉತ್ತಮ ಫಲ ತಂದು ಕೊಡುತ್ತಿದೆ.

ವಿಶಿಷ್ಟ ಗಾತ್ರದ ಹಣ್ಣು : ಪ್ರತಿ ಹಣ್ಣು 120 ಗ್ರಾಂ ತೂಕ ಹೊಂದುತ್ತದೆ. ಈ ಬಾರಿ ಹ್ಣು ಸಣ್ಣ ಸೇಬು ಮಾದರಿಯಲ್ಲಿ ಇದ್ದುದರಿಂದ “ಆ್ಯಪಲ್‌ ಬಾರಿ’ ಎಂದೇ ಕರೆಯಲಾಗುತ್ತಿದೆ. ಆರಂಭದಲ್ಲಿ ರಾಸಾಯನಿಕ ಗೊಬ್ಬರ ಬಳಸಿದ್ದರಿಂದ 100 ಸಸಿ ಕಳೆದುಕೊಂಡೆ. ಬಳಿಕ ಉಳಿದ 200 ಸಸಿ ಸೆಗಣಿ ಗೊಬ್ಬರದಿಂದಲೇ ಬೆಳೆಸಲಾಗಿದ್ದು ಎನ್ನುತ್ತಾರೆ ರುದ್ರಗೌಡರು.

ಕೃಷಿಹೊಂಡದಲ್ಲೇ ಮೀನು ಸಾಕಾಣಿಕೆ: ಕೃಷಿಯಲ್ಲಿ ಹಲವಾರು ವಿಧಗಳನ್ನು ಅಳವಡಿಸಿಕೊಂಡ ರುದ್ರಗೌಡ ಅವರು ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಿದ್ದಾರೆ.ಸವದತ್ತಿ ಮೀನುಗಾರಿಕೆ ಇಲಾಖೆ ಉಚಿತ ನೀಡಿದ ಸಾಮಾನ್ಯ ಗೆಂಡೆ ತಳಿಯ 2 ಸಾವಿರ ಮೀನು ಮರಿಗಳನ್ನು ಸಾಕಿದ್ದಾರೆ.

ಕೃಷಿ, ತೋಟಗಾರಿಕೆ ಇಲಾಖೆ ನೆರವು: ಕೃಷಿ ಇಲಾಖೆ 10 ಫ್ರುಟ್ಸ್ ಟ್ಸ್ಟ್ರ್ಯಾಪ್ , 1 ಸೋಲಾರ ಟ್ಸ್ಟ್ರ್ಯಾಪ್ , ತೋಟಗಾರಿಕೆ ಇಲಾಖೆ 2 ಲಕ್ಷ ರೂ.ಸಹಾಯ ಧನದಲ್ಲಿ ನಿರ್ಮಿಸಿದ ಪ್ಯಾಕ್‌ ಹೌಸ್‌, 86 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿದ ಈರುಳ್ಳಿ ಸಂಸ್ಕರಣಾ ಘಟಕ ರೈತನಿಗೆ ನೆರವಾಗಿದೆ. ಕೈಸೇರಿದ ಆರು ಕ್ವಿಂಟಲ್‌ ಫಸಲು :  ಈಗಾಗಲೇ ಆರೂವರೆ ಕ್ವಿಂಟಲ್‌ ಆ್ಯಪಲ್‌ ಬಾರಿ ಉತ್ಪಾದಿಸಿದ ರುದ್ರಗೌಡರು ಕ್ವಿಂಟಲ್‌ಗೆ 3 ಸಾವಿರ ರೂ. ಮೊತ್ತದಲ್ಲಿ ಲಾಭ ಗಿಟ್ಟಿಸಿದ್ದಾರೆ. ಇನ್ನೂ 5, 6 ಕ್ವಿಂಟಲ್‌ ಬಾರಿ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.ಜತೆಗೆ 1.16 ಎಕರೆ ಹೊಲದಲ್ಲಿ ಬೆಳೆಸಿದ 330 ಪೇರಲ ಗಿಡಗಳು ಫಲ ನೀಡುವ ಹಂತಕ್ಕೆ ಬಂದಿವೆ. ಕಡಿಮೆ ಪ್ರದೇಶದಲ್ಲಿ ಲಾಭದಾಯಕ ಕೃಷಿ ಮಾಡಲು ತೋಟಗಾರಿಕೆ ಸಹಾಯಕ ನಿರ್ದೇಶಕ ಆನಂದ ನರಸನ್ನವರ, ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮುಂತಾದವರುಸಹಕಾರ ನೀಡಿದ್ದಾರೆಂದು ರೈತ ರುದ್ರಗೌಡ ಲಿಂಗನಗೌಡ್ರ ಸ್ಮರಿಸುತ್ತಾರೆ.

ಮಿಶ್ರ ತಳಿ ಬೆಳೆ:  ಬಾರಿ ಹಣ್ಣು ತೋಟದಲ್ಲೇ ಮಿಶ್ರತಳಿ ಬೆಳೆಸಿದ ರುದ್ರಗೌಡರು ಒಂದು ಎಕರೆ ಪ್ರದೇಶದಲ್ಲೇ 200 ನುಗ್ಗೆ, 200 ಕರಿಬೇವು, 25 ಹುಣಸಿ, 20 ಸೀತಾ ಪೇರಲ, 200 ರಕ್ತ ಚಂದನ, ಔಷಧಿಯುಕ್ತ ರಾಮಫಲ, ಲಕ್ಷ್ಮಣಫಲ, ಹನುಮಫಲ ತಲಾ 5 ಸಸಿಗಳನ್ನೂ ಬೆಳೆಸಿದ್ದಾರೆ.

ಚಿಕ್ಕಪ್ಪನ ಪ್ರೇರಣೆಯಿಂದ ಬೆಳೆದಿರುವ ಆ್ಯಪಲ್‌ ಬಾರಿಗೆ ಬೇಡಿಕೆಯಿದೆ. ಈಗಾಗಲೇ ಫಸಲು ದೊರೆಯುತ್ತಿದೆ. ಅತಿ ಕಡಿಮೆ ಪ್ರದೇಶದಲ್ಲಿ ಲಾಭದಾಯಕ ಬೆಳೆ ತೆಗೆಯುವ ಉದ್ದೇಶ ಹೊಂದಿದ್ದೇನೆ. ಕೃಷಿ, ತೋಟಗಾರಿಕೆ ಅಧಿಕಾರಿಗಳ ಸಹಕಾರ ದೊಡ್ಡದು.-ರುದ್ರಗೌಡ ಲಿಂಗನಗೌಡ್ರ, ಯುವ ರೈತ

 

-ಸಿದ್ಧಲಿಂಗಯ್ಯ ಮಣ್ಣೂರಮಠ

 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹದಾಯಿ ಯೋಜನೆ ಜಾರಿಗೆ ಪ್ರಧಾನಿ ಬಳಿ ಶೀಘ್ರ ಸರ್ವಪಕ್ಷಗಳ ನಿಯೋಗ: ಎಚ್.ಕೆ. ಪಾಟೀಲ್

Gadag; ಮಹದಾಯಿ ಯೋಜನೆ ಜಾರಿಗೆ ಪ್ರಧಾನಿ ಬಳಿ ಶೀಘ್ರ ಸರ್ವಪಕ್ಷಗಳ ನಿಯೋಗ: ಎಚ್.ಕೆ. ಪಾಟೀಲ್

ಕಾಯಕ ಸಂಸ್ಕೃತಿ ಪಾಲನೆಯಲ್ಲಿ ಮುನ್ನಡೆಯಿರಿ-ಶಾಸಕ ಜಿ.ಎಸ್‌. ಪಾಟೀಲ

ಕಾಯಕ ಸಂಸ್ಕೃತಿ ಪಾಲನೆಯಲ್ಲಿ ಮುನ್ನಡೆಯಿರಿ-ಶಾಸಕ ಜಿ.ಎಸ್‌. ಪಾಟೀಲ

Gadag; ಮಾರುಕಟ್ಟೆಗೆ ಹೋಗಿದ್ದ ಪೊಲೀಸ್‌ ಸಿಬ್ಬಂದಿ ಅಪಘಾತದಲ್ಲಿ ಸಾವು!

Gadag; ಹಬ್ಬದ ಖರೀದಿಗೆಂದು ಮಾರುಕಟ್ಟೆಗೆ ಹೋಗಿದ್ದ ಪೊಲೀಸ್‌ ಸಿಬ್ಬಂದಿ ಅಪಘಾತದಲ್ಲಿ ಸಾವು!

Mundargi: Bike rider went to Kochi without overbridge; Protest by villagers

Mundargi: ನೀರಿನಲ್ಲಿ ಕೊಚ್ಚಿ ಹೋದ ಬೈಕ್; ಓರ್ವ ಸಾವು

ಗದಗ-ಬೆಟಗೇರಿ ಅವಳಿ ನಗರದಲ್ಲಿ ಗೂಳಿಗಳ ಉಪಟಳ… ವಿದ್ಯಾರ್ಥಿನಿಗೆ ಗಾಯ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಗೂಳಿಗಳ ಉಪಟಳ… ವಿದ್ಯಾರ್ಥಿನಿಗೆ ಗಾಯ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.