ಗದಗ:ಅವಳಿ ನಗರದ ಜನತೆಗೆ ತಪ್ಪದ ನೀರಿನ ಬವಣೆ


Team Udayavani, Jun 3, 2024, 12:15 PM IST

Udayavani Kannada Newspaper

ಉದಯವಾಣಿ ಸಮಾಚಾರ
ಗದಗ: ದೇವರು ಕೃಪೆ ತೋರಿ ಮಳೆ ಸುರಿಸಿ ನದಿಗೆ ನೀರು ಹರಿಸಿದರೂ ಅವಳಿ ನಗರದ ಜನತೆಗೆ ನೀರಿನ ಬವಣೆ ತೀರದಂತಾಗಿದೆ. ಅವಳಿ ನಗರಕ್ಕೆ ಕುಡಿವ ನೀರು ಪೂರೈಸುವ ಮುಖ್ಯ ಕೊಳವೆ ಮಾರ್ಗಗಳಲ್ಲೊಂದಾದ ಅಡವಿ ಸೋಮಾಪೂರದ ಗ್ರಾಮದ ಹತ್ತಿರ ಇರುವ ಗದ್ದಿ ಹಳ್ಳದ ಬಳಿ ಮುಖ್ಯ ಕೊಳವೆ ಪೈಪ್‌ ಒಡೆದಿದ್ದರಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು, ಅವಳಿ ನಗರದ ಜನತೆಗೆ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

ಕಳೆದ ಕೆಲ ತಿಂಗಳಿಂದ ಬರಗಾಲ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ನೀರು ಖಾಲಿಯಾಗಿ ಸಿಂಗಟಾಲೂರ್‌ ಬ್ಯಾರೇಜ್‌ ಡೆಡ್‌ ಸ್ಟೋರೆಜ್‌ ತಲುಪಿದ್ದರಿಂದ ಅವಳಿ ನಗರಕ್ಕೆ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಸ್ಥಳಿಯ ಸಾರ್ವಜನಿಕರು ನೀರಿಗಾಗಿ ಪರಿತಪಿಸಿದ್ದರು. ಕಳೆದ ಕೆಲ ವಾರಗಳಿಂದ ತುಂಗಭದ್ರಾ ನದಿ ಪಾತ್ರದಲ್ಲಿ ಉತ್ತಮವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು.

ಇನ್ನೇನು ನದಿಯಲ್ಲಿ ನೀರು ಶೇಖರಣೆಗೊಂಡು ವಾರಕ್ಕೊಮೆಯಾದರೂ ಅವಳಿ ನಗರದ ವಾರ್ಡ್‌ಗಳಿಗೆ ನೀರು ಪೂರೈಕೆಯಾಗುತ್ತದೆ ಎನ್ನುವಷ್ಟರಲ್ಲಿ ಮುಖ್ಯ ಕೊಳವೆ ಪೈಪ್‌ ಒಡೆದಿದ್ದರಿಂದ ಸಮಸ್ಯೆ ಹಾಗೆ ಮುಂದುವರಿದಿದೆ.

ಕಳಪೆ ಮಟ್ಟದ ಪೈಪ್‌ಲೈನ್‌: ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರ ಬ್ಯಾರೇಜ್‌ನಿಂದ ಪೈಪ್‌ ಲೈನ್‌ ಮೂಲಕ ಅವಳಿ ನಗರಕ್ಕೆ ತುಂಗಭದ್ರಾ ನದಿ ನೀರು ಪೂರೈಸಲಾಗುತ್ತದೆ. ಆದರೆ ಕಳಪೆ ಮಟ್ಟದ ಪೈಪ್‌ಲೈನ್‌ ಅಳವಡಿಕೆ ಹಿನ್ನೆಲೆಯಲ್ಲಿ ಪ್ರತಿವಾರ ಹಾಗೂ ತಿಂಗಳಿಗೊಮ್ಮೆ ಅಲ್ಲಲ್ಲಿ ಪೈಪ್‌ಲೈನ್‌ ಸೋರಿಕೆ ಕಂಡು ಬರುತ್ತಿತ್ತು. ಕಳೆದ ಕೆಲ ತಿಂಗಳಿಂದ ಪೈಪ್‌ಲೈನ್‌ನಲ್ಲಿ ನೀರು ಪೂರೈಕೆಯಾಗಿರಲಿಲ್ಲ. ಸದ್ಯ ನದಿಯಲ್ಲಿ ಸಾಕಷ್ಟು ಪ್ರಮಾಣದ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಅವಳಿ ನಗರಕ್ಕೆ ನೀರು ಪೂರೈಸಲು ಪೈಪ್‌ಲೈನ್‌ ಮಾರ್ಗದ ಮೂಲಕ ಪೂರೈಸಲಾಗಿತ್ತು. ನೀರಿನ ಒತ್ತಡದ ಪರಿಣಾಮ ಪೈಪ್‌ಲೈನ್‌ ಸ್ಫೋಟಗೊಂಡು ಅಪಾರ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದೆ. ಸಂಜೆಯಾದರೂ ನೀರಿನ ಹರಿವು ನಿಲ್ಲದಾಗಿದೆ.

ಪೈಪ್‌ಲೈನ್‌ ದುರಸ್ತಿ ಬಹುದೊಡ್ಡ ಸವಾಲು: ಗದಗ- ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸುತ್ತಿರುವ ಪೈಪ್‌ ಲೈನ್‌ ಅಡವಿಸೋಮಾಪುರ ಬಳಿಯ ಎರಡು ಕಡೆಗಳಲ್ಲಿ ನೀರು ಸೋರಿಕೆ ಕಂಡು ಬರುತ್ತಿದೆ. ಪೈಪ್‌ಲೈನ್‌ ಒಡೆದ ಸ್ಥಳದಲ್ಲಿ ಶನಿವಾರ ಬೆಳಗ್ಗೆಯಿಂದ ಜೆಸಿಬಿ ಮೂಲಕ ನೀರನ್ನು ಲಿಫ್ಟ್‌ ಮಾಡಲಾಗುತ್ತಿದೆಯಾದರೂ ನೀರಿನ ಹರಿವು ನಿಲ್ಲುತ್ತಿಲ್ಲ. ನೀರಿನ ಹರಿವು ನಿಂತ ನಂತರವೇ ಪೈಪ್‌ಲೈನ್‌ ಯಾವ ಮಟ್ಟದಲ್ಲಿ ಒಡೆದಿದೆ ಎಂಬುದು ತಿಳಿಯಲಿದೆ. ಹೀಗಾಗಿ ಪೈಪ್‌ಲೈನ್‌ ದುರಸ್ತಿ ನಗರಸಭೆ
ಸಿಬ್ಬಂದಿಗೆ ಬಹುದೊಡ್ಡ ಸವಾಲಾಗಿದೆ.

ಪೈಪ್‌ಲೈನ್‌ ದುರಸ್ತಿಗೆ ವೆಲ್ಡ್‌ರ್‌ಗಳೇ ಸಿಗುತ್ತಿಲ್ಲ: ಕಳಪೆ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಒಂದೆಡೆಯಾದರೆ, ಕಳೆದ ಕೆಲ ವರ್ಷಗಳಿಂದ ಅಲ್ಲಲ್ಲಿ ಸೋರಿಕೆಯಾದ ಪೈಪ್‌ ಲೈನ್‌ಗಳ ದುರಸ್ತಿ ಕೈಗೊಂಡಿದ್ದ ವೆಲ್ಡರ್‌ಗಳಿಗೆ ಸರಿಯಾದ ಸಮಯದಲ್ಲಿ ವೇತನ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ವೆಲ್ಡರ್‌ಗಳು ಕೂಡ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಅಧಿಕಾರಿಗಳು ವೆಲ್ಡರ್‌ಗಳಿಗೆ ಎಷ್ಟೇ ಫೋನ್‌ ಮಾಡಿದರೂ ವೆಲ್ಡರ್‌ಗಳು ಮಾತ್ರ ಫೋನ್‌ ಸ್ವೀಕರಿಸುತ್ತಿಲ್ಲ. ಇದು ಕೂಡ ನಗರಸಭೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ನಗರಸಭೆ ಸಿಬ್ಬಂದಿ ಈಗಾಗಲೇ ಪೈಪ್‌ ಲೈನ್‌ ದುರಸ್ತಿಗಾಗಿ ಕ್ರಮ ಕೈಗೊಂಡಿದ್ದಾರೆ. ಭಾನುವಾರ ಸಂಜೆಯೊಳಗೆ ಪೈಪ್‌ಲೈನ್‌ ರಿಪೇರಿಯಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮುಂದೆ ಹೀಗಾಗದಂತೆ ಸರ್ವಪ್ರಯತ್ನ ಮಾಡಲಾಗುತ್ತಿದೆ.
ಪ್ರಶಾಂತ ವರಗಪ್ಪನವರ,
ಪ್ರಭಾರ ಪೌರಾಯುಕ್ತ, ಗದಗ-ಬೆಟಗೇರಿ ನಗರಸಭೆ

ತಿಂಗಳಿಗೆ ನಾಲ್ಕೈದು ಬಾರಿ ಸೋರಿಕೆ
ಗದಗ-ಬೆಟಗೇರಿ ನಗರಸಭೆಯಲ್ಲಿ ಸದ್ಯ ಬಿಜೆಪಿ ಆಡಳಿತ ನಡೆಸುತ್ತಿದೆ. ಸಿಂಗಟಾಲೂರ್‌ ಬ್ಯಾರೇಜಿನಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ಪೂರೈಕೆಯಾಗುವ ಪೈಪ್‌ಲೈನ್‌ ಕಳಪೆ ಗುಣಮಟ್ಟದ್ದಾಗಿದ್ದ ದ ತಿಂಗಳಿಗೆ ನಾಲ್ಕರಿಂದ ಐದು ಬಾರಿ ಪೈಪ್‌ಲೈನ್‌ನಲ್ಲಿ ಸೋರಿಕೆ ಕಂಡು ಬರುತ್ತದೆ. ಅಧಿಕಾರಿಗಳು ಹೇಗೂ ವೆಲ್ಡರ್‌ಗಳನ್ನು ಹಿಡಿದು ಸೋರಿಕೆಯಾದ ಪೈಪ್‌ಗ್ಳನ್ನು ವೆಲ್ಡಿಂಗ್‌
ಮೂಲಕ ಸರಿಪಡಿಸಿ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಾರೆ. ಆದರೆ ನಗರಸಭೆಯಲ್ಲಿ ವೆಲ್ಡರ್‌ಗಳಿಗೆ ಪಾವತಿಸಬೇಕಾದ ಬಿಲ್‌ ತಡೆಹಿಡಿಯುವುದು, ವಿನಾಕಾರಣ ಮುಂದೂಡುವುದು ಮಾಡುತ್ತಿರುವುದರಿಂದ ವೆಲ್ಡರ್‌ಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಫೋನ್‌ ಮಾಡಿದರೂ ಕೈಗೆ ಸಿಗುತ್ತಿಲ್ಲ ಎನ್ನುತ್ತಾರೆ ನಗರಸಭೆ ಸಿಬ್ಬಂದಿ.

*ಅರುಣಕುಮಾರ ಹಿರೇಮಠ

ಟಾಪ್ ನ್ಯೂಸ್

vidhana-Soudha

Chikkamagaluru: ಸೇತುವೆ ನಿರ್ಮಾಣಕ್ಕೆ 1.80 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಕೆ

FKCCI

Digitization: ರಾಜ್ಯದ ಎಲ್ಲ ಎಪಿಎಂಸಿ ಡಿಜಿಟಲೀಕರಣ: ಸಚಿವ ಶಿವಾನಂದ ಪಾಟೀಲ್‌

cOurt

Belagavi: ಮೂರು ವರ್ಷದ ಮಗುವಿನ “ಹತ್ಯಾಚಾರಿ’ಗೆ ಗಲ್ಲು ಶಿಕ್ಷೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Congress-Symbol

Congress: ಪಕ್ಷದ ನಿಲುವಿಗೆ ಭಿನ್ನ ಹೇಳಿಕೆ ನೀಡಿದರೆ ಸಹಿಸುವುದಿಲ್ಲ: ಕೆಪಿಸಿಸಿ

Isrel 2

Israel ಮೇಲೆ ಹೌಥಿ ಉಗ್ರರಿಂದ ಡ್ರೋನ್‌ ದಾಳಿ!

Kodihalli

Electrical system: ಕೃಷಿ ಪಂಪ್‌ಸೆಟ್‌-ಆಧಾರ್‌ ಜೋಡಣೆ ಕೂಡಲೇ ಕೈಬಿಡಲಿ: ಕೋಡಿಹಳ್ಳಿ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಯಿಲಗೋಳ ಆರೋಗ್ಯ ಕೇಂದ್ರಕ್ಕಿಲ್ಲ ರಸ್ತೆ: ಬೀದಿದೀಪಗಳ ವ್ಯವಸ್ಥೆಯೂ ಇಲ್ಲ

ಹುಯಿಲಗೋಳ ಆರೋಗ್ಯ ಕೇಂದ್ರಕ್ಕಿಲ್ಲ ರಸ್ತೆ: ಬೀದಿದೀಪಗಳ ವ್ಯವಸ್ಥೆಯೂ ಇಲ್ಲ

7-gadag

Gadag: ತಂಗಿಯನ್ನು ಬರ್ಬರವಾಗಿ ಕೊಲೆಗೈದು ಪೊಲೀಸರಿಗೆ ಶರಣಾದ ಅಣ್ಣ

Jamadhar

Vachana Darshan: ಆರ್‌ಎಸ್‌ಎಸ್‌ನಿಂದ ಲಿಂಗಾಯತರಲ್ಲಿ ಒಡಕು ಮೂಡಿಸುವ ಹುನ್ನಾರ: ಡಾ.ಜಾಮದಾರ

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag

ಕಳಸಾ-ಬಂಡೂರಿ: ಮಹದಾಯಿ ಜಾರಿಗೆ ಕರವೇ ಪಾದಯಾತ್ರೆ ಆರಂಭ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

vidhana-Soudha

Chikkamagaluru: ಸೇತುವೆ ನಿರ್ಮಾಣಕ್ಕೆ 1.80 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಕೆ

FKCCI

Digitization: ರಾಜ್ಯದ ಎಲ್ಲ ಎಪಿಎಂಸಿ ಡಿಜಿಟಲೀಕರಣ: ಸಚಿವ ಶಿವಾನಂದ ಪಾಟೀಲ್‌

1-kamindu

Test; ಬ್ರಾಡ್‌ಮನ್‌ ದಾಖಲೆ ಸರಿದೂಗಿಸಿದ ಮೆಂಡಿಸ್‌

cOurt

Belagavi: ಮೂರು ವರ್ಷದ ಮಗುವಿನ “ಹತ್ಯಾಚಾರಿ’ಗೆ ಗಲ್ಲು ಶಿಕ್ಷೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.