ಜನಮನ ರಂಜಿಸಿದ ಹಂತಿ ಪದ ಸ್ಪರ್ಧೆ

ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಎತ್ತುಗಳಿಂದ ರಾಶಿ ಮಾಡಿದ ಭಕ್ತರು

Team Udayavani, Apr 8, 2022, 2:38 PM IST

13

ರೋಣ: “ಹೊಟ್ಟ ಹೋತು ಪಟ್ಟಣಕ ಕಂಕಿ ಹೋತು ಕಂಕಣಕ, ಮುತ್ತಿನ ಸೆಳ್ಳು ಮುಗಿಲುದ್ದ ರಾಶಿ, ಆಹಾ ಪುಲ್ಲಿಗೋ ಮನಕಾಲ ಮುರಿಗೋ, ಹುಲ್ಲಲಗ್ಯೋ ಚಲಾಂಬರಗ್ಯೋ ಹೊರ ಮಲ್ಲಯ್ಯ ಹುಲಸ್‌ ಕೊಡಯ್ಯ’ ಈ ಪದಗಳು ಏನು ಅಂತಿರಾ, ಇವು ಹಿಂದಿನ ಕಾಲದಲ್ಲಿ ರೈತರು ಎತ್ತುಗಳ ಸಹಾಯದಿಂದ ರಾಶಿ ಮಾಡುವಾಗ ಹಾಡುತ್ತಿದ್ದ ಹಂತಿ ಪದಗಳು.

ಇಂದಿನ ಆಧುನಿಕ ಭರಾಟೆಯಲ್ಲಿ ಇಂತಹ ಕಾರ್ಯಕ್ರಮ ನಡೆದದ್ದು, ತಾಲೂಕಿನ ಮಾಡಲಗೇರಿ ಗ್ರಾಮದ ಕಲಬುರಗಿ ಶರಣಬಸಣ್ಣನವರ 49ನೇ ಪುರಾಣ ಪ್ರವಚನ ಪ್ರಯುಕ್ತ ಏರ್ಪಡಿಸಿದ್ದ ರಾಶಿ ಕಾರ್ಯಕ್ರಮದಲ್ಲಿ.

ಈ ಕಾರ್ಯಕ್ರಮಕ್ಕೆ ಎತ್ತನ್ನು ಕಟ್ಟಲು ಸವಾಲ್‌ ಮೂಲಕ ದೇವಾಸ್ಥಾನಕ್ಕೆ ಹಣವನ್ನು ಕೊಟ್ಟು ಎತ್ತನ್ನು ಹಂತಿಗೆ ಹೂಡುವ ಇವರ ಭಕ್ತಿ ನಿಜಕ್ಕೂ ಮೆಚ್ಚುವಂತಹದ್ದು. ಹಿಂದಿನ ಶತಮಾನಗಳಲ್ಲಿ ಯಂತ್ರಗಳ ಬಳಕೆ ಇದ್ದಿಲ್ಲ. ಅಂದು ಬರೀ ಎತ್ತುಗಳ(ಬಸವ ಅಥವಾ ಗೋವು) ಇದ್ದವು. ಇವುಗಳಿಂದ ರೈತರು ತಾವು ಬೆಳದ ಫಸಲುಗಳನ್ನು ರಾಶಿ ಮಾಡಿಕೊಳ್ಳುತ್ತಿದ್ದರು.

ಅಂತಹ ಪದ್ಧತಿ ಇಂದಿನ ಆಧುನಿಕ ಯಂತ್ರಗಳ ಕೈಯಲ್ಲಿ ಸಿಕ್ಕು ಕಣ್ಮರೆಯಾಗಿದ್ದು, ಹಿರಿಯ ಜೀವಿಗಳಿಗೆ ನುಂಗಲಾರದ ತುತ್ತಾಗಿದೆ. ಹಿಂದಿನ ಕಾಲದಲ್ಲಿ ರಾಶಿ ಮಾಡುವ ಸಮಯ ಬಂತು ಅಂದರೆ ಸಾಕು ರೈತರಿಗೆ ಎಲ್ಲಿಲದ ಸಂತಸ ಸಡಗರ ಮನೆ ಮಾತಾಗುತ್ತಿತ್ತು.

ರಾಶಿ ಮಾಡುವ ಹಿಂದಿನ ದಿನದಂದು ಮನೆಯ ಹೆಣ್ಣುಮಕ್ಕಳು ಶೇಂಗಾ ಉಂಡಿ, ನುಚ್ಚು, ತರ ತರದ ಹಿಂಡಿಗಳು, ಕಡಕ್‌ ರೋಟ್ಟಿ, ಮೊಸರು, ಮಜ್ಜಿಗೆ, ಹಾಲು ಸೇರಿದಂತೆ ಅನೇಕ ರೀತಿಯ ಅಡುಗೆ ಮಾಡಿಕೊಂಡು ಮರು ದಿನ 8 ರಿಂದ 16 ಎತ್ತುಗಳು ಹಂತಿಯಲ್ಲಿ ಭಾಗವಹಿಸುತ್ತಿದ್ದವು.

ಆದರೆ ಈಗ ಅಂತಹ ಕಾರ್ಯಕ್ರಮಗಳು ಬರೀ ಕೇಳಲು ಸಾಧ್ಯ. ಅಂತಹ ವಿಶೇಷ ಕಾರ್ಯಕ್ರಮವನ್ನು ಮಾಡಲಗೇರಿಯ ಜನ ಮುಂದಿನ ಪೀಳಿಗೆಗೆ ತೋರಿಸಲು ಪ್ರಾಯೋಗಿಕವಾಗಿ ಮಾಡಿದ್ದಾರೆ. ಮಾಡಲಗೇರಿ ಗ್ರಾಮದಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯುತ್ತವೆ.

ಗೋ ಮಾತೆಗೊ ಈ ಗ್ರಾಮಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಸಿಮಂತಕರಣ ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಸಹಜವಾಗಿ ಎಲ್ಲರೂ ಮಾಡುತ್ತಾರೆ. ಆದರೆ ಮಾಡಲಗೇರಿ ಚನ್ನಪ್ಪಗೌಡ ಅಮಾತೀಗೌಡ್ರ ಕುಂಟುಂಬದವರು ತಮ್ಮ ಹಸು ಗರ್ಭಸ್ಥವಾದ ಸಮಯದಲ್ಲಿ, ಹಸುವಿಗೆ ಜನ್ಮ ನೀಡುವ ಸಮಯದಲ್ಲಿ ಸೀಮಂತ ಕಾರಣ ಮಾಡುತ್ತೇವೆಂದು ಬೇಡಿಕೊಂಡಿದ್ದರು.

ಆ ಪ್ರಕಾರ ಅವರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಸೀಮಂತ ಮಾಡಿದಂತೆ ಗೋವಿಗೆ ಸೀರೆ, ಹೂ, ಹಣ್ಣು ಜೂಲ್‌ ಸೇರಿದಂತೆ ಅನೇಕ ವಸ್ತುಗಳಿಂದ ಸಿಂಗಾರ ಮಾಡಿ ಸೀಮಂತ ಕಾರ್ಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದು ಒಂದೆಡೆಯಾದರೆ ಗ್ರಾಮದಲ್ಲಿ ಶರಣಬವೇಶ್ವರರ ಪುರಾಣ ಪ್ರವಚನ ಸತತವಾಗಿ 49ನೇ ವರ್ಷದಿಂದ ನಡೆದುಕೊಂಡು ಬಂದಿದೆ. ಪುರಾಣ ಆರಂಭವಾದ ದಿನದಿಂದ ಮೊದಲ ದಿನ ಶರಣರ ಜನನದ ಕಾರ್ಯಕ್ರಮದ ಪ್ರಯುಕ್ತ ಅಂದು ಅರಳಗುಂಡಿಯಲ್ಲಿ ಶರಣರ ನಾಮಕರಣ ವಿಜೃಂಭಣೆಯಿಂದ ಜರುಗಿತು. ಈ ಸಮಯದಲ್ಲಿ ಹಿರಿಯ ರೈತರು ಹಂತಿಯ ಪದಗಳನ್ನು ಹೇಳತ್ತಾ ಹಾಡುತ್ತಾ ಮತ್ತು ಗ್ರಾಮದ ಯುವಕರು ಕುಣಿದು ಕುಪ್ಪಳಿಸುತ್ತಾರೆ.

 

ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಇಂದಿನ ಮಕ್ಕಳಿಗೆ ನಾವು ಅಂದು ರಾಶಿ ಮಾಡಲು ಎಷ್ಟು ಕಷ್ಟ ಪಡುತ್ತಿದ್ದೆವು ಎಂಬುದನ್ನು ತಿಳಿಸಿದಂತಾಗುತ್ತದೆ. ನಮ್ಮ ಹಿಂದಿನ ಹಳೆಯ ಸಂಪ್ರಾದಾಯಗಳನ್ನು ಮುಂದಿನ ಪೀಳಿಗೆ ಬಳುವಳಿಯಾಗಿ ನೀಡಿದಂತ್ತಾಗುತ್ತದೆ. ಅಲ್ಲದೆ ನಮ್ಮ ಕಾಲದಾಗ ಸುಗ್ಗಿ ಬಂತು ಅಂದರ ಬಾಳ ಕುಷಿಯಿಂದ ಹಂತ್ತಿ ಕಟ್ಟಿ ರಾಶಿ ಮಾಡುತ್ತಿದ್ದರು. ಆದರೆ ಈಗ ದುರ್ದೈವ. ಅವು ಒಂದೂ ಈಗ ಇಲ್ಲ. ಭಾಳ ನೋವು ಅನಸುತ್ರೀ. –ಹನುಮಂತಗೌಡ ಪಾಟೀಲ, ಮಾಡಲಗೇರಿ ಹಿರಿಯ ರೈತ       

-ಯಚ್ಚರಗೌಡ ಗೋವಿಂದಗೌಡ್ರ

 

 

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು

ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು

gadag-police

Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!

Gove-Patil

Approve:ಮೈಕ್ರೋ ಫೈನಾನ್ಸ್‌ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ

Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ

Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ

18-gadaga

ತುಂಗಭದ್ರಾ ನದಿ‌ಯಲ್ಲಿ ಅಕ್ರಮ‌ ಮರಳುಗಾರಿಕೆ! ನಸುಕಿನ ವೇಳೆ ಡಿಸಿ ಹಾಗೂ‌ ಎಸಿ ದಿಢೀರ್ ದಾಳಿ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.