ನಗುವಿನ ಕಚಗುಳಿಯಿಟ್ಟು ಜೀವನೋತ್ಸಾಹ ತುಂಬುವುದೇ ಹಾಸ್ಯ
ಕನ್ನಡ ಭಾಷೆ ಅತ್ಯಂತ ಸಶಕ್ತವಾಗಿ ತಮ್ಮ ಬರವಣಿಗೆಯನ್ನು ತೋರಿದ್ದಾರೆ.
Team Udayavani, Dec 25, 2021, 6:03 PM IST
ಗದಗ: ಜಂಜಡದ ಬದುಕಿನಲ್ಲಿ ಮನುಷ್ಯನ ಮನಸ್ಸು ಖನ್ನತೆಗೆ ಒಳಗಾಗಿ ಬದುಕಿನಲ್ಲಿ ಉಲ್ಲಾಸ, ಉತ್ಸಾಹ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಾಸ್ಯ ನಗುವಿನ ಕಚಗುಳಿಯನ್ನಿಟ್ಟು ಜೀವನೋತ್ಸಾಹ ತುಂಬುತ್ತದೆ ಎಂದು ಡಾ|ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ತೋಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭವದಲ್ಲಿ ಮಾತನಾಡಿದ ಅವರು, ಬೀಚಿ ತಮ್ಮ ಹಾಸ್ಯ ಬರಹಗಳ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೊಂದು ಸೊಗಸನ್ನು ತಂದು ಕೊಟ್ಟಿದ್ದಾರೆ. ಹಾಸ್ಯ ಪ್ರಸಂಗಗಳ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕಾರ್ಯವನ್ನು ಬೀಚಿ ಮಾಡಿದ್ದಾರೆ. ಅವರ ಕೃತಿಗಳನ್ನು ಓದುವ ಮೂಲಕ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಬೀಚಿ ಮತ್ತು ಹಾಸ್ಯ ವಿಷಯವಾಗಿ ಟಿ.ವಿ. ಹಾಸ್ಯ ಕಲಾವಿದ ಅರುಣ ಕುಲಕರ್ಣಿ ಉಪನ್ಯಾಸ ನೀಡಿ, ಜೀವನದ ಸಣ್ಣ ಸಣ್ಣ ಸಂಗತಿಗಳನ್ನು ಹೇಗೆ ಆಸ್ವಾದಿಸಬೇಕೆಂಬುದನ್ನು ಸರಳವಾಗಿ ತಮ್ಮ ಬರವಣಿಗೆ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಹೊಳಪನ್ನು ನೀಡಿದ್ದಾರೆ. ಹುಡುಕುವ ಕಣ್ಣು, ಛಾಡಿಸುವ ಮನೋಭಾವ, ಚುಚ್ಚು ಮಾತುಗಳ ಮೂಲಕ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನವನ್ನು ಸಾಹಿತ್ಯದ ಮೂಲಕ ಮಾಡಿದ್ದಾರೆ.
ಕಲಿತಿರುವದು ಕಡಿಮೆಯಾದರೂ ಕನ್ನಡ ಭಾಷೆ ಅತ್ಯಂತ ಸಶಕ್ತವಾಗಿ ತಮ್ಮ ಬರವಣಿಗೆಯನ್ನು ತೋರಿದ್ದಾರೆ. ಅವರ ಬರವಣಿಗೆಗೆ ಮೂಲ ಪ್ರೇರಣೆ ಅ.ನ.ಕೃಷ್ಣರಾಯರ ಸಂಧ್ಯಾರಾಗ ಕಾದಂಬರಿಯಾಗಿದೆ. ಏಕಾಂಕ, ರೇಡಿಯೋ ನಾಟಕ, ವಿನೋದ ಬರಹಗಳು, ಸಣ್ಣ ಕತೆಗಳ ಪ್ರಕಾರಗಳಲ್ಲಿ 66 ಪುಸ್ತಕಗಳನ್ನು ಬರೆದಿದ್ದಾರೆ. ವಿಡಂಬನೆಯ ಮೂಲಕ ಪ್ರಸ್ತುತ ಸಮಾಜದ ಸ್ಥಿತಿಗತಿಗಳನ್ನು ಸಮಾಜದ ಮುಂದಿರಿಸಿ ಹಾಸ್ಯದ ಜೊತೆಗೆ ಜಾಗೃತಿಯುಂಟು ಮಾಡುವ
ಕಾರ್ಯವನ್ನು ಬೀಚಿಯವರು ಮಾಡಿದ್ದಾರೆ ಎಂದು ಅನೇಕ ಹಾಸ್ಯ ಪ್ರಸಂಗಗಳನ್ನು ಪ್ರಸ್ತುತಪಡಿಸಿದರು.
ಇದೇ ಸಂದರ್ಭದಲ್ಲಿ ಸೃಷ್ಟಿ ಮೀಡಿಯಾ ಪ್ರತಿಷ್ಠಾನದಿಂದ ಕವಿತಾ ಕಾಶಪ್ಪನವರು ಹಾಗೂ ಬಳಗದವರು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅವರನ್ನು ಸನ್ಮಾನಿಸಿದರು. ಸೌಮ್ಯ ಜಾನ ಪಟ್ಟದಕಲ್ಲು ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಧರ್ಮಗ್ರಂಥ ಪಠಣವನ್ನು ಮಹಾಂತಮ್ಮ ಬಸಮ್ಮ ಚಿತಾಪೂರ, ವಚನ ಚಿಂತನವನ್ನು ನೀಲಮ್ಮ ಬಸಪ್ಪ ಚಿತಾಪೂರ ನೆರವೇರಿಸಿದರು.
ನರೇಗಲ್ ಬೀಚಿ ಬಳಗದ ಅಧ್ಯಕ್ಷ ಡಾ.ಆರ್.ಕೆ. ಗಚ್ಚಿನಮಠ, ಶಿವಾನುಭವ ಸಮಿತಿ ಚೇರ್ಮನ್ ವಿವೇಕಾನಂದಗೌಡ ಪಾಟೀಲ, ಮುರುಘರಾಜೇಂದ್ರ ಬಡ್ನಿ, ರತ್ನಕ್ಕ ಪಾಟೀಲ, ವೀರೇಶ ಬುಳ್ಳಾ, ಶಿವಬಸಪ್ಪ ಯಂಡಿಗೇರಿ, ಸೋಮಶೇಖರ ಪುರಾಣಿಕ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ ಸ್ವಾಗತಿಸಿ, ರತ್ನಕ್ಕ ಪಾಟೀಲ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ಮಾನವ ಸರಪಳಿ ವೇಳೆ ಶಿಕ್ಷಕಿಯರ ಮೇಲೆ ಹೆಜ್ಜೇನು ದಾಳಿ
ಜನರಿಗೆ ಪ್ರಜಾಪ್ರಭುತ್ವ ಅರಿವು ಮೂಡಿಸಿ, ಬಲ ತುಂಬುವ ಕಾರ್ಯಕ್ರಮ ಪ್ರಜಾಪ್ರಭುತ್ವ ದಿನಾಚರಣೆ
Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್
ಗದಗ: ಅತಿವೃಷ್ಟಿಯಿಂದ ಬತ್ತಿದ ಕೆರೆಗಳಿಗೆ ಆಸರೆಯಾದ ತುಂಗಭದ್ರೆ!
Gadaga: ಸಿಎಂ ಸ್ಥಾನ ಖಾಲಿ ಇಲ್ಲ, ಖಾಲಿಯಾಗುವ ಪ್ರಶ್ನೆಯೂ ಇಲ್ಲ: ಸಚಿವ ಎಚ್.ಕೆ.ಪಾಟೀಲ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!
ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು
Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
Bajpe ಬಸ್ ನಿಲ್ದಾಣ ಕಟ್ಟಡ ಪೂರ್ಣ; 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.