![Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು](https://www.udayavani.com/wp-content/uploads/2024/12/kudur-415x306.jpg)
Laxmeshwar: ಭಾವೈಕ್ಯದ ಕೊರಿಕೊಪ್ಪ ಆಂಜನೇಯ ದೇವಸ್ಥಾನ…ಇಲ್ಲಿ ಮುಸ್ಲಿಮರೇ ಅರ್ಚಕರು
ಆಂಜನೇಯ ದೇವಸ್ಥಾನ ನೂರಾರು ವರ್ಷಗಳ ಹಿನ್ನೆಲೆ ಹೊಂದಿದೆ
Team Udayavani, Aug 28, 2023, 6:29 PM IST
![Laxmeshwar: ಭಾವೈಕ್ಯದ ಕೊರಿಕೊಪ್ಪ ಆಂಜನೇಯ ದೇವಸ್ಥಾನ…ಇಲ್ಲಿ ಮುಸ್ಲಿಮರೇ ಅರ್ಚಕರು](https://www.udayavani.com/wp-content/uploads/2023/08/Gadag-2-620x290.jpg)
ಲಕ್ಷ್ಮೇಶ್ವರ: ದೇಶದಲ್ಲಿ ಇವತ್ತಿಗೂ ಅನೇಕ ಕಡೆ ಹಿಂದೂ-ಮುಸ್ಲಿಮರು ಜಾತಿ, ಧರ್ಮ ಭೇದ ಮರೆತು ಸಹೋದರತೆಯಿಂದ ಬಾಳುತ್ತಾ ಬಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ಹಬ್ಬ ಹರಿದಿನ, ಜಾತ್ರೆ, ಸಂಪ್ರದಾಯ ಆಚರಣೆ ಸಂದರ್ಭದಲ್ಲಿ ಇದನ್ನು ಕಾಣಬಹುದಾಗಿದೆ.
ಇದಕ್ಕೆ ಲಕ್ಷ್ಮೇಶ್ವರದ ಸಮೀಪದ ಅಡರಕಟ್ಟಿ- ಕೊಂಡಿಕೊಪ್ಪ ಗ್ರಾಮದ ಬಳಿ ಕೊರಿಕೊಪ್ಪ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಉತ್ತಮ ಉದಾಹರಣೆಯಾಗಿದೆ. ವಿಶೇಷವಾಗಿ ಈ ದೇವಸ್ಥಾನವನ್ನು ತಲೆ ತಲಾಂತರಗಳಿಂದ ಮುಸ್ಲಿಂ, ಹಿಂದೂ ಬಾಂಧವರು ನಡೆದುಕೊಳ್ಳುತ್ತಿದ್ದು, ಇಲ್ಲಿಗೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಪೂಜೆಯನ್ನು ಪು. ಬಡ್ನಿ ಗ್ರಾಮದ ಮುಸ್ಲಿಂ ಕುಟುಂಬದವರೇ ಮಾಡುತ್ತಾ ಬಂದಿದ್ದಾರೆ. ಅದಕ್ಕಾಗಿ ಅವರಿಗೆ ದೇಗುಲಕ್ಕೆ ಹೊಂದಿಕೊಂಡಂತೆ ಜಮೀನಿದೆ.
ದೇವಸ್ಥಾನದ ಹಿನ್ನೆಲೆ: ಕೊರಿಕೊಪ್ಪ ಆಂಜನೇಯ ದೇವಸ್ಥಾನ ನೂರಾರು ವರ್ಷಗಳ ಹಿನ್ನೆಲೆ ಹೊಂದಿದೆ. ದೇವಸ್ಥಾವಿರುವ ಪ್ರದೇಶದಲ್ಲಿ ಹಿಂದೆ ಕೊನೇರಿಕೊಪ್ಪ, ಕೊರಿಕೊಪ್ಪ ಹಾಗೂ ಕೊಂಡಿಕೊಪ್ಪ ಎಂಬ ಗ್ರಾಮಗಳು ಇದ್ದವು. ಈ ಗ್ರಾಮಗಳಲ್ಲಿನ ಜನರು ಪ್ಲೇಗ್, ಸಿಡುಬು, ಕಾಲರಾಗಳಂತ ಸಾಂಕ್ರಾಮಿಕ ಕಾಯಿಲೆಗಳಿಂದ ಗ್ರಾಮಗಳನ್ನು ತೊರೆದು ಬೇರೆಡೆ ನೆಲೆ ನಿಂತರು. ಇದಕ್ಕೆ ಸಾಕ್ಷಿ ಎಂಬಂತೆ ಈ ಸ್ಥಳದಲ್ಲಿರುವ ಆಂಜನೇಯ, ದೇವಿ ದೇವಸ್ಥಾನ, ಇಲ್ಲಿನ ಜಮೀನುಗಳಲ್ಲಿ ಈಗಲೂ ಆಗಾಗ್ಗೆ ಕಾಣಸಿಗುವ ಒಡೆದ ಮಣ್ಣಿನ ಮಡಕೆ, ಬಿಸುವ ಕಲ್ಲು, ಒಳ್ಳಕಲ್ಲು, ಧಾನ್ಯ ಸಂಗ್ರಹದ ಹಗೆವು ಪತ್ತೆಯಾಗುತ್ತವೆ.
ಅಲ್ಲದೇ ವಿಶೇಷತೆ ಹೊಂದಿರುವ ದೇವಸ್ಥಾನದ ಸುತ್ತ ನಿಧಿ ಸಿಗುತ್ತದೆಂಬ ಕಾರಣದಿಂದ ದೇವಸ್ಥಾನದ ಸುತ್ತಲು ನಿಧಿ ಕಳ್ಳರು ಗುಂಡಿ ತೊಡಿರುವುದು, ಮೂರ್ತಿ ಧ್ವಂಸ, ವಾಮಾಚಾರ ಮಾಡುವ ಮೂಲಕ ನಿಧಿ ಆಸೆಗೆ ಈ ಸ್ಥಳದಲ್ಲಿ ಅನೇಕ ದುಷ್ಕೃತ್ಯಗಳು ನಡೆಯುತ್ತಲೇ ಇವೆ. ಆದರೆ ಸುತ್ತಲಿನ ನೂರಾರು ರೈತರಿಗೆ ಇಷ್ಟಾರ್ಥಸಿದ್ಧಿಸುವ ದೇವಸ್ಥಾನ ಇದಾಗಿದೆ. ಕೇವಲ ಕಲ್ಲಿನ ಗೂಡಿನಂತಿರುವ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕೆಂದು ಕೊಂಡಿಕೊಪ್ಪ, ಅಡರಕಟ್ಟಿ, ಪು. ಬಡ್ನಿ, ಲಕ್ಷ್ಮೇಶ್ವರ ಭಾಗದ ರೈತರೆಲ್ಲರ ಸಂಕಲ್ಪ-ಸಹಕಾರದಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ.
ಮೂರ್ತಿ ಮರು ಪ್ರತಿಷ್ಠಾಪನೆ
ಶ್ರಾವಣ ಮಾಸದ 2ನೇ ಶನಿವಾರದ ದೇವಸ್ಥಾನದಲ್ಲಿ ಮೂಲ ಆಂಜನೇಯ ಮೂರ್ತಿ ಮರು ಪ್ರತಿಷ್ಠಾಪನೆ, ಹೋಮ, ಹವನ, ಅಭಿಷೇಕ, ಕುಂಕುಮಾರ್ಚನೆ, ಭಜನೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಶ್ರದ್ಧಾ, ಭಕ್ತಿ ನಂಬಿಕೆಯುಳ್ಳ ಅಪಾರ ಭಕ್ತರು ದರ್ಶನ ಪಡೆದರು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರೈತರಾದ ಶಿವಪುತ್ರಯ್ಯ ಶಿಗ್ಲಿಮಠ, ರಾಮಣ್ಣ ಚಿಕ್ಕಣ್ಣವರ, ಶಿವಪ್ಪ ಜೈನ್, ರವಿ ನಾಯಕ, ಮೊಹಮ್ಮದ್ ಲಕ್ಷ್ಮೇಶ್ವರ, ಲಕ್ಷ್ಮಣ ಲಮಾಣಿ, ಬಸವರಾಜ ದೊಡಮನಿ, ಅಶೋಕ ಬನ್ನಿಮಟ್ಟಿ, ಜೀನೆಶ್ ಜೈನ್, ಮಂಜು ಲಮಾಣಿ ಸೇರಿ ಹಲವರಿದ್ದರು.
ಟಾಪ್ ನ್ಯೂಸ್
![Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು](https://www.udayavani.com/wp-content/uploads/2024/12/kudur-415x306.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![crime (2)](https://www.udayavani.com/wp-content/uploads/2024/12/crime-2-2-150x102.jpg)
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
![Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು](https://www.udayavani.com/wp-content/uploads/2024/12/10-23-150x90.jpg)
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
![Gadag-CM-Dcm](https://www.udayavani.com/wp-content/uploads/2024/12/Gadag-CM-Dcm-150x90.jpg)
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
![8](https://www.udayavani.com/wp-content/uploads/2024/12/8-20-150x80.jpg)
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
![7](https://www.udayavani.com/wp-content/uploads/2024/12/7-25-150x80.jpg)
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು](https://www.udayavani.com/wp-content/uploads/2024/12/kudur-150x111.jpg)
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
![Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ](https://www.udayavani.com/wp-content/uploads/2024/12/16-4-150x90.jpg)
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
![7](https://www.udayavani.com/wp-content/uploads/2024/12/7-33-150x80.jpg)
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
![Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು](https://www.udayavani.com/wp-content/uploads/2024/12/15-7-150x90.jpg)
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
![87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!](https://www.udayavani.com/wp-content/uploads/2024/12/14-9-150x90.jpg)
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.