ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

ಹೆಸರು ಕಾಳು ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ.

Team Udayavani, Oct 15, 2024, 3:25 PM IST

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

■ ಉದಯವಾಣಿ ಸಮಾಚಾರ
ನರಗುಂದ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆಯಡಿ ರೈತರಿಂದ ಖರೀದಿ ಮಾಡಲು ಪ್ರಾರಂಭಿಸಲಾದ ಹೆಸರು ಕಾಳು ಖರೀದಿ ಕೇಂದ್ರದಲ್ಲಿ ಖಾಲಿ ಚೀಲಗಳ ಕೊರತೆಯಿಂದ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದೆ!

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವತಿಯಿಂದ ಪಟ್ಟಣದ ಟಿಎಪಿಸಿಎಂಎಸ್‌ ಆಶ್ರಯದಲ್ಲಿ ಪ್ರತಿ ಕ್ವಿಂಟಲ್‌ಗೆ 8682 ರೂ. ದರದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ.

ಈಗಾಗಲೇ ಆ. 24ರಿಂದ ಸರ್ಕಾರದ ಆದೇಶವಾಗಿದ್ದು, ಅಂದಿನಿಂದ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ರೈತರಿಂದ ಹೆಸರು ನೋಂದಣಿ ಬಳಿಕ ಸೆ. 24ರಿಂದ ಹೆಸರು ಕಾಳು ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಆದರೆ ಕೇಂದ್ರಕ್ಕೆ ಅಗತ್ಯ ಖಾಲಿ ಚೀಲ (ಗೋಣಿ ಚೀಲ) ಪೂರೈಕೆಯಲ್ಲಿ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಅ. 5ರಿಂದ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿರುವ ರೈತರು ಉತ್ಮನ್ನ ಮಾರಾಟ ಮಾಡಲು ನಿತ್ಯ ಖರೀದಿ ಕೇಂದ್ರಕ್ಕೆ ಅಲೆದಾಡುವಂತಾಗಿದೆ. ಇಂದು ಖರೀದಿ ಕೇಂದ್ರದ ಎದುರು ಪ್ರತಿಭಟನೆ ನಡೆಸಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ದಿವಟರ, ಮುತ್ತು ಮಣಕವಾಡ, ಪರಶುರಾಮ ಕೀಲಿಕೈ, ಯಲ್ಲಪ್ಪ ಸೊಪ್ಪಿನ, ರಫೀಕಸಾಬ್‌  ತಹಶೀಲ್ದಾರ್‌, ಯೋಗೇಶ ಗುಡಾರದ, ನಾರಾಯಣ ದಿವಟರ, ರವಿ ಕುರಹಟ್ಟಿ, ಕುಬೇರಗೌಡ ಪಾಟೀಲ, ಶರಣಪ್ಪ ಪಾರ್ವತಿಯವರ, ಪಾಲಾಕ್ಷ ನವಲಗುಂದ, ಮುನ್ನಾ ಮನಿಗಾರ ಇದ್ದರು. ಖರೀದಿ  ಕೇಂದ್ರದಲ್ಲಿ 1394 ರೈತರು ಉತ್ಮನ್ನ ಮಾರಾಟಕ್ಕೆ ಹೆಸರು ನೋಂದಣಿ ಮಾಡಿದ್ದಾರೆ. ಇದುವರೆಗೆ 550 ರೈತರಿಂದ 5125 ಕ್ವಿಂಟಲ್‌  ಹೆಸರು ಕಾಳು ಖರೀದಿ ಮಾಡಲಾಗಿದೆ.

ಈವರೆಗೆ 10,500 ಖಾಲಿ ಚೀಲ ಪೂರೈಕೆ ಆಗಿದ್ದು, ಇನ್ನೂ 20 ಸಾವಿರ ಖಾಲಿ ಚೀಲ ಬೇಡಿಕೆಯಿದೆ ಎಂದು ತಿಳಿದು ಬಂದಿದೆ. ಇಂದು ಪ್ರತಿಭಟನೆ ನಡೆಸಿದ ರೈತರು, ಬಳಿಕ ಪಟ್ಟಣದ ಹಳೆ ಎಪಿಎಂಸಿ ಯಾಡ್‌ ìನಲ್ಲಿರುವ ಮಹಾಮಂಡಳ ಕಚೇರಿಗೆ ತೆರಳಿ
ಕಚೇರಿ ವ್ಯವಸ್ಥಾಪಕರನ್ನು ಭೇಟಿಯಾದಾಗ, ಖಾಲಿ ಚೀಲ ಕೊರತೆಯಿಂದ ಖರೀದಿ ಪ್ರಕ್ರಿಯೆ ಸ್ಥಗಿತ ಮಾಡಲಾಗಿತ್ತು. ಅ. 15ರಿಂದ
ಮತ್ತೇ ಖರೀದಿ ಕೇಂದ್ರ ಪ್ರಾರಂಭಿಸಲಾಗುತ್ತದೆ. ಪ್ರಸ್ತುತ 32 ಸಾವಿರ ಖಾಲಿ ಚೀಲ ಪೂರೈಕೆ ಆಗಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ

Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ

Mangaluru: ಟ್ರೇಡಿಂಗ್‌ನಲ್ಲಿ ಲಾಭ ಗಳಿಸುವ ಆಸೆಯಿಂದ 1.12 ಕೋಟಿ ರೂ. ಕಳೆದುಕೊಂಡ ವ್ಯಕ್ತಿ!

Mangaluru: ಟ್ರೇಡಿಂಗ್‌ನಲ್ಲಿ ಲಾಭ ಗಳಿಸುವ ಆಸೆಯಿಂದ 1.12 ಕೋಟಿ ರೂ. ಕಳೆದುಕೊಂಡ ವ್ಯಕ್ತಿ!

Thief

Chamarajnagar: ಪೊಲೀಸ್ ಪೇದೆಯ ಮನೆಯಲ್ಲೇ ಕೈ ಚಳಕ ತೋರಿದ ಚಾಲಾಕಿ ಕಳ್ಳರು!

ಕಚ್ಚಿದ ಕನ್ನಡಿ ಹಾವನ್ನೇ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ… ಕಂಗಾಲಾದ ವೈದ್ಯರು

ಕಚ್ಚಿದ ಕನ್ನಡಿ ಹಾವನ್ನೇ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ… ಕಂಗಾಲಾದ ವೈದ್ಯರು

DVG

Davanagere: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ​: 48 ಮಂದಿ ಆರೋಪಿಗಳಿಗೆ ಜಾಮೀನು

ವಾಲ್ಮೀಕಿ ನಿಗಮದಲ್ಲಿ ಆಗಿರುವ ಅವ್ಯವಹಾರ ಸರಿಪಡಿಸಬೇಕು: ಪ್ರಸನ್ನಾನಂದಪುರಿ ಸ್ವಾಮೀಜಿ

ವಾಲ್ಮೀಕಿ ನಿಗಮದಲ್ಲಿ ಆಗಿರುವ ಅವ್ಯವಹಾರ ಸರಿಪಡಿಸಬೇಕು: ಪ್ರಸನ್ನಾನಂದಪುರಿ ಸ್ವಾಮೀಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

1-eq-weq

Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು- ಸಿದ್ಧಲಿಂಗಯ್ಯ

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು- ಸಿದ್ಧಲಿಂಗಯ್ಯ

ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

Gadag; ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

Gadag: ಗದಗ ನಗರಕ್ಕೆ ಆಗಮಿಸಿದ ವಿಜಯ ಜ್ಯೋತಿ ಸ್ವಾಗತಿಸಿದ ಸಚಿವ ಎಚ್. ಕೆ. ಪಾಟೀಲ

Gadag: ಗದಗ ನಗರಕ್ಕೆ ಆಗಮಿಸಿದ ವಿಜಯ ಜ್ಯೋತಿ ಸ್ವಾಗತಿಸಿದ ಸಚಿವ ಎಚ್. ಕೆ. ಪಾಟೀಲ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

sand 1

Padubidri: ಟಿಪ್ಪರ್‌ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳು ವಶ

3

Uppala: ಲಾರಿ ತಡೆದು ನಿಲ್ಲಿಸಿ, ಚಾಲಕನಿಗೆ ಬೆದರಿಸಿ 1.64 ಲಕ್ಷ ರೂ. ದರೋಡೆ

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

2

Sullia: ಅತ್ತಿಗೆಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ; ಆರೋಪಿ ವಶಕ್ಕೆ

18

Kinnigoli: ಮರ ಬಿದ್ದು ಬೈಕ್‌ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.