ಜೋಳದ ಮೇವಿಗೆ ಭಾರಿ ಬೇಡಿಕೆ

ಪರ ಊರಿನ ಮಾರುಕಟ್ಟೆಗೆ ಸಾಗಾಟ ಸ್ಥಳೀಯ ಜಾನುವಾರುಗಳಿಗೆ ತೊಂದರೆ

Team Udayavani, Mar 19, 2020, 3:13 PM IST

19-March-16

ನರೇಗಲ್ಲ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಈ ಭಾಗದಲ್ಲಿ ರೈತರು ಹೆಚ್ಚಾಗಿ ಜೋಳ ಬೆಳೆದಿಲ್ಲ. ಆದರೆ, ಹಿಂಗಾರು ಹಂಗಾಮಿನಲ್ಲಿ ಸುರಿದ ಅಲ್ಪಸ್ವಲ್ಪ ಮಳೆಗೆ ಉತ್ತಮವಾದ ಫಸಲು ಬಂದಿದೆ.

ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ಜೋಳದ ಮೇವು, ಕಡಲೆ, ಶೇಂಗಾ, ಗೋಧಿ ಹೊಟ್ಟಿಗೆ ಭಾರೀ ಬೇಡಿಕೆ ಪ್ರಾರಂಭವಾಗಿದೆ. ರೈತರು ಹೆಚ್ಚಾಗಿ ಮಾರುಕಟ್ಟೆಗೆ ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜಾನುವಾರುಗಳಿಗೆ ಹೊಟ್ಟುಮೇವು ಸಿಗದಂತಾಗಿದೆ.

ರೈತರು ಪಾರಂಪರಿಕ ಬೆಳೆಗಳಾದ ಶೇಂಗಾ, ಗೋಧಿ , ಕುಸುಬಿ, ಜೋಳದ ಬದಲು ಸೂರ್ಯಕಾಂತಿ, ಈರುಳ್ಳಿ, ಮೆಣಸಿಕಾಯಿ, ಹತ್ತಿ, ಮೆಕ್ಕೆಜೋಳದಂತಹ ವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಹೀಗಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರಿದೆ. ಶೇಂಗಾ ಹೊಟ್ಟು, ಜೋಳ ಮೇವು, ಗೋಧಿ ಹೊಟ್ಟಿನ ಬೆಲೆ ಹೆಚ್ಚಾಗಿದೆ. ಈಗಾಗಲೇ ಹೋಬಳಿಯಾದ್ಯಂತ ಬಿಸಿಲಿನ ಪ್ರಮಾಣ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ಮೇವಿನ, ಹೊಟ್ಟಿನ ಕೊರತೆ ಜತೆಗೆ ನೀರಿನ ತಾಪತ್ರಯವೂ ಎದುರಾಗಿದೆ.

ಮಾರುಕಟ್ಟೆಯಲ್ಲಿ ಹೆಚ್ಚಾದ ಮೇವಿನ ಬೆಲೆ ಕಳೆದ ವರ್ಷ ಒಂದು ಟ್ರ್ಯಾಕ್ಟರ್‌ ಶೇಂಗಾ ಹೊಟ್ಟಿಗೆ 4 ಸಾವಿರ ರೂ. ಸಿಗುತ್ತಿತ್ತು. ಪ್ರಸಕ್ತ ವರ್ಷ 7ರಿಂದ 8 ಸಾವಿರ ರೂ. ತಲುಪಿದೆ. 3ರಿಂದ 4 ಸಾವಿರ ರೂ. ಇದ್ದ ಒಂದು ಟ್ರ್ಯಾಕ್ಟರ್‌ ಜೋಳದ ಮೇವು 5ರಿಂದ 6 ಸಾವಿರ ರೂ. ಆಗಿದೆ. ಕಡಲೆ ಹೊಟ್ಟು ಕಳೆದ ವರ್ಷ 3ರಿಂದ 4 ಸಾವಿರ ಇತ್ತು. ಆದರೆ, ಇತ್ತೀಚೆಗೆ ಪ್ರಮುಖ ನಗರಗಳಿಂದ ಜನ ಇತರೆ ಉಪಯೋಗಕ್ಕೆ ಈ ಹೊಟ್ಟನ್ನು ಬಳಸುವುದರಿಂದ ಈ ವರ್ಷ 10ರಿಂದ 12 ಸಾವಿರಕ್ಕೆ ಮಾರಾಟವಾಗಿದೆ. ಗೋಧಿ  ವರ್ಷದ ಹಿಂದೆ 3 ಸಾವಿರ ರೂ. ಇತ್ತು, ಆದರೆ, ಈ ವರ್ಷ 6ರಿಂದ 7 ಸಾವಿರ ರೂ.ಗಳಲ್ಲಿ ದೊರೆಯುತ್ತಿದೆ. ಆದ್ದರಿಂದ ಜಾನುವಾರು ಇರುವ ರೈತರು ಹೊಟ್ಟು, ಮೇವು ಖರೀದಿಸುವುದಕ್ಕೆ ಹಿಂದೆಟ್ಟು ಹಾಕುತ್ತಿದ್ದಾರೆ.

ಬೆಳೆ ಬೆಳೆದ ಕ್ಷೇತ್ರ ವ್ಯಾಪ್ತಿಯ ವಿವರ ಕಳೆದ ವರ್ಷ ಮುಂಗಾರು ಹಿಂಗಾಮಿನಲ್ಲಿ ಬೆಳೆಯುವ ಹೈಬ್ರೀಡ್‌ ಜೋಳವನ್ನು 13 ಹೆಕ್ಟೇರ್‌, ಶೇಂಗಾ 261 ಹೆಕ್ಟೇರ್‌ ಬೆಳೆಯಲಾಗಿತ್ತು. ಹಿಂಗಾರು ಹಂಗಾಮಿನ ಬಿಳಿ ಜೋಳವನ್ನು 6200 ಹೆಕ್ಟೇರ್‌, ಗೋಧಿ 900 ಹೆಕ್ಟೇರ್‌, ಕಡಲೆ 2 ಸಾವಿರ ಹೆಕ್ಟೇರ್‌, ಶೇಂಗಾ 400 ಹೆಕ್ಟೇರ್‌ ಬೆಳೆಯಲಾಗುತ್ತು. ಆದರೆ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಹೈಬ್ರೀಡ್‌ ಜೋಳವನ್ನು 54 ಹೆಕ್ಟೇರ್‌, ಶೇಂಗಾ 12 ಹೆಕ್ಟೇರ್‌ಗಳನ್ನು ಮಾತ್ರ ಬೆಳೆಯಲಾಗಿತ್ತು. ಆದರೆ, ಹಿಂಗಾರು ಹಂಗಾಮಿನ ಬಿಳಿ ಜೋಳವನ್ನು 6240 ಹೆಕ್ಟೇರ್‌, ಗೋಧಿ  998 ಹೆಕ್ಟೇರ್‌, ಕಡಲೆ 22206 ಹೆಕ್ಟೇರ್‌, ಶೇಂಗಾ 800 ಹೆಕ್ಟೇರ್‌ ಬೆಳೆಯಲಾಗಿದೆ.

ಅಕ್ಕಪಕ್ಕದ ಜಿಲ್ಲೆಗಳಾದ ಬಾಗಲಕೋಟೆ, ಕೊಪ್ಪಳ, ರಾಯಚೂರ, ಯಾದಗಿರಿ, ಹಾವೇರಿ, ವಿಜಯಪುರ, ಬಳ್ಳಾರಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹಕ್ಕೆ ಸಿಲಿಕ್ಕಿದ ರೈತರು ತಮ್ಮ ಜಾನುವಾರುಗಳನ್ನು ಉಳಿಸಿಕೊಳ್ಳಲು ಕಂದಾಯ ಇಲಾಖೆ ಪರವಾನಗಿ ಇಲ್ಲದೆ ಅಕ್ರಮವಾಗಿ ಮೇವು ಸಾಗಣೆ ನಿರಾತಂಕವಾಗಿ ನಡೆಸಿದ್ದಾರೆ. ಪ್ರವಾಹಕ್ಕೆ ಸಿಲುಕ್ಕಿದ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಹಣದ ಆಸೆಗೆ ಮೇವು, ಹೊಟ್ಟು ಮಾರಾಟ ಮಾಡುತ್ತಿರುವುದನ್ನು ತಡೆಯಬೇಕು. ಹೊರ ಜಿಲ್ಲೆ ಮತ್ತು ರಾಜ್ಯಕ್ಕೆ ಅಕ್ರಮ ಸಾಗಣೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರಗಳು ಮುಂದಾಗಬೇಕು.
ಅಶೋಕ ಬಸವಡ್ಡೇರ
ಅಬ್ಬಿಗೇರಿ ಪ್ರಗತಿಪರ ರೈತ

ರೋಣ ತಾಲೂಕಿನ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಈಗಾಗಲೇ ಇಲಾಖೆ ಅನುಮತಿ ಪಡೆಯದೇ ಕೆಲವೊಂದು ಜನರು ಬಂದು ರೈತರಿಗೆ ಹಣದ ಆಸೆ ತೋರಿಸಿ ಮೇವು, ಹೊಟ್ಟು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅದಕ್ಕೆ ಇಲಾಖೆ ವತಿಯಿಂದ ಕಡಿವಾಣ ಹಾಕುವ ಮೂಲಕ ಇಲ್ಲಿನ ರೈತರಿಗೆ ಹೊಟ್ಟು, ಮೇವು ದೊರೆಯುವಂತೆ ಮಾಡಲಾಗುವುದು.
ಜಿ.ಬಿ. ಜಕ್ಕನಗೌಡ್ರ, ರೋಣ
ತಹಶೀಲ್ದಾರ್‌

„ಸಿಕಂದರ ಎಂ. ಆರಿ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

24-

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.