ಎಪಿಎಂಸಿಯಲ್ಲಿ ರೈತರಿಂದ ಪ್ರತಿಭಟನೆ
Team Udayavani, Jan 13, 2020, 12:24 PM IST
ಗದಗ: ಒಣ ಮೆಣಸಿನಕಾಯಿ ಇ-ಟೆಂಡರ್ ಮೂಲಕ ಖರೀದಿಸಿದ ಖರೀದಿದಾರರು ಬಳಿಕ ಕಡಿಮೆ ಹಣ ನೀಡಲು ಮುಂದಾಗಿದ್ದರಿಂದ ಆಕ್ರೋಶಗೊಂಡ ರೈತರು ಕೆಲಕಾಲ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಗದಗ ಎಪಿಎಂಸಿಯಲ್ಲಿ ವಾರದಲ್ಲಿ ಎರಡು ದಿನಗಳು ಮಾತ್ರ ಇ-ಟೆಂಡರ್ ಮೂಲಕ ಖರೀದಿಯಾಗುತ್ತಿದೆ. ಅದರಂತೆ ಶನಿವಾರ ನಡೆದ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಖರೀದಿದಾರರು, ಟೆಂಡರ್ನಲ್ಲಿ ನೀಡಿದ ಬೆಲೆಗಿಂತ ಕಡಿಮೆ ಹಣ ನೀಡಲು ಮುಂದಾಗಿದ್ದರಿಂದ ರೈತರು, ಅವರೊಂದಿಗೆ ವಾಗ್ವಾದ ನಡೆಸಿದರು. ಈ ರೀತಿ ರೈತರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ರೈತರಿಗೆ ವಂಚಿಸಲೆಂದೇ ರಾತ್ರಿ 7 ಗಂಟೆವರೆಗೂ ಕಾಯಿಸಿದ್ದಾರೆ. ಈ ಬಗ್ಗೆ ಎಪಿಎಂಸಿಗೆ ದೂರು ನೀಡುತ್ತೇವೆ ಎಂದರೂ, ಖರೀದಿದಾರರು ಜಗ್ಗದ ಕಾರಣ ಬೀದಿಗಿಳಿದು ಕೆಲಕಾಲ ಪ್ರತಿಭಟನೆ ನಡೆಸಿ, ಧಿಕ್ಕಾರ ಕೂಗಿದರು ಎಂದು ತಿಳಿದು ಬಂದಿದೆ.
ಆ ಪೈಕಿ ನಗರದ ಎಪಿಎಂಸಿ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಶನಿವಾರ ರೈತರು ಒಣ ಮೆಣಸಿನಕಾಯಿ ಮಾರಾಟ ಮಾಡಲು ಜಿಲ್ಲೆಯ ರೋಣ ತಾಲೂಕಿನ ಚಿಕ್ಕಮಣ್ಣೂರು ಗ್ರಾಮದ ರೈತ ಬಸವಲಿಂಗಪ್ಪ ಮೇಟಿ ಆಗಮಿಸಿದ ಸಂದರ್ಭದಲ್ಲಿ ಅವರ ಒಣ ಮೆಣಸಿನಕಾಯಿ ಬೆಳೆಗೆ ಇ-ಟೆಂಡರ್ ನಲ್ಲಿ ಪ್ರತಿ ಕ್ವಿಂಟಲ್ಗೆ 13,175 ರೂ. ಖರೀದಿಯಾಗಿತ್ತು. ಆದರೆ, ವರ್ತಕರು ಪ್ರತಿ ಕ್ವಿಂಟಲ್ಗೆ 12,170 ರೂ. ನೀಡಲು ಮುಂದೆ ಬಂದಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಒಟ್ಟಾರೆ, ರಾಜ್ಯದಲ್ಲಿ ಬ್ಯಾಡಗಿ ಹೊರತುಪಡಿಸಿದರೆ, ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಇ-ಟೆಂಡರ್ ಮೂಲಕ ಒಣ ಮೆಣಸಿನಕಾಯಿ ಖರೀದಿಸಲಾಗುತ್ತಿದೆ. ಕಳೆದ ಎರಡು ವಾರಗಳಿಂದ ಗದಗಿನಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದ್ದು, ಪಾರದರ್ಶಕ ವಹಿವಾಟು ಆಗಲಿದೆ ಎಂಬ ನಿರೀಕ್ಷೆಯಿಂದ ಗದಗ, ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಒಣ ಮೆಣಸಿನಕಾಯಿ ಬೆಳೆಗಾರರು ಇದೀಗ ಗದಗ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ.
ಜೊತೆಗೆ ಬ್ಯಾಡಗಿ ಮಾರುಕಟ್ಟೆ ಖರೀದಿದಾರರು ಇ -ಟೆಂಡರ್ನಲ್ಲಿಪಾಲ್ಗೊಳ್ಳುವುದರಿಂದ ರೈತರಿಗೆಉತ್ತಮ ಬೆಲೆ ದೊರೆಯುತ್ತಿತ್ತು. ಆದರೆ, ಸ್ಥಳೀಯ ಖರೀದಿದಾರರು ದುರುದ್ದೇಶದಿಂದ ಬ್ಯಾಡಗಿ ಖರೀದಿದಾರರಿಗೆ ಜೀವ ಬೆದರಿಕೆ ಹಾಕಿ, ಟೆಂಡರ್ನಲ್ಲಿ ಪಾಲ್ಗೊಳ್ಳದಂತೆ ಮಾಡುತ್ತಿದ್ದಾರೆ. ಖರೀದಿದಾರರು ಹಾಗೂ ವರ್ತಕರು ದುರಾಸೆಯಿಂದ ರೈತರ ವಂಚನೆಗಿಳಿದಿರುವುದು ವಿಪರ್ಯಾಸದ ಸಂಗತಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.