ರೋಣ: ಕಸದ ತೊಟ್ಟಿಯಾದ ಪಟ್ಟಣದ ಉದ್ಯಾನ
ಸಾಧು ಅಜ್ಜನ ಬಡಾವಣೆ ಬಳಿ ಇರುವ ಉದ್ಯಾನವಂತೂ ಅಧೋಗತಿಗೆ ತಲುಪಿದೆ
Team Udayavani, Jul 30, 2024, 5:31 PM IST
ಉದಯವಾಣಿ ಸಮಾಚಾರ
ರೋಣ: ಬೀದಿದೀಪ ಅಳವಡಿಕೆ, ಚರಂಡಿ ಸ್ವಚ್ಛ ತೆ ಹಾಗೂ ಸಮರ್ಪಕ ಕಸ ವಿಲೇವಾರಿ ಮಾಡಲು ಸಾಧ್ಯವಾಗದಷ್ಟು ಅಶಕ್ತಗೊಂಡಿರುವ ಪುರಸಭೆ, ಉದ್ಯಾನಗಳನ್ನು ಹಾಳುಗೆಡುವುತ್ತಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನ ಕಸದ
ತೊಟ್ಟೆಯಾಗುತ್ತಿವೆ. ಉಪಕರಣಗಳು ತುಕ್ಕು ಹಿಡಿಯುವುದೊಂದೇ ಬಾಕಿ.
ಪಟ್ಟಣದ ಜನತೆ ದಿನದ ಜಂಜಾಟದಿಂದ ಕೊಂಚ ವಿರಾಮ, ವಿಹಾರ, ಮಕ್ಕಳಿಗೆ ಆಟ, ಮನರಂಜನೆಗೆಂದು ಉದ್ಯಾನ ಅರಸಿ ಬರುತ್ತಾರೆ. ಆದರೆ, ಇಲ್ಲಿನ ಉದ್ಯಾನ ಅವ್ಯವಸ್ಥೆ ನೋಡಿದರೆ ಮಾರು ದೂರ ಹೋಗುವಂತಿದೆ. ಸಾಧು ಅಜ್ಜನ ಬಡಾವಣೆ ಬಳಿ ಇರುವ ಉದ್ಯಾನವಂತೂ ಅಧೋಗತಿಗೆ ತಲುಪಿದೆ. ನಾಗರಿಕರು ವಾಯುವಿಹಾರ ಹಾಗೂ ಮಕ್ಕಳ ಆಟಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಾಣವಾಗಿರುವ ಈ ಉದ್ಯಾನ ಪಾಳು ಬಿದ್ದಿದೆ.
ಎಲ್ಲಿ ನೋಡಿದರಲ್ಲಿ ಕಸ, ಹುಲ್ಲು ಬೆಳೆದು ಕಾಲಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಜಂತುಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಪುರಸಭೆ ಉದ್ಯಾನ ನಿರ್ವಹಣೆಗೆಂದು ಪ್ರತಿ ವರ್ಷ ಬಜೆಟ್ನಲ್ಲಿ ಹಣ ಎತ್ತಿಡುತ್ತದೆ. ಆದರೆ, ಅದೆಲ್ಲಿ ಹೋಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಈ ಬಗ್ಗೆ ಇಲ್ಲಿನ ಸಾರ್ವಜನಿಕರು ಪುರಸಭೆಗೆ ಸಾಕಷ್ಟು ಬಾರಿ ದೂರು ನೀಡಿದರು ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯದೇ ವರ್ಷದಿಂದ ಖಾಲಿ ಬಿದ್ದಿದ್ದು, ಈಗ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿ. ಅವರು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕಿದೆ.
ಉದ್ಯಾನ ನಿರ್ಮಾಣಕ್ಕೆ ಪುರಸಭೆ ಖರ್ಚು ಮಾಡಿದ ಲಕ್ಷಾಂತರ ರೂ. ವ್ಯರ್ಥವಾಗಿದೆ. ಉದ್ಯಾನ ಒಳಗೆ ಜನರು ಕಾಲಿಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಆಟೋಪಕರಣಗಳನ್ನು ಬಳಸಲಾಗುತ್ತಿಲ್ಲ. ವಯಸ್ಸಾದವರು ಇಲ್ಲಿ ವಾಯುವಿಹಾರ ಮಾಡಲು ಸಾಧ್ಯವಿಲ್ಲ. ಗಿಡಗಂಟೆಗಳು ಬೆಳೆದಿದ್ದು, ಕಸ ಹರಡಿಕೊಂಡಿದೆ. ಪುರಸಭೆ ಏನು ಮಾಡುತ್ತಿದೆ ತಿಳಿಯದಾಗಿದೆ.
●ಮಂಜು ನಾಯಕ, ಪರಿಸರ ಪ್ರೇಮಿ
ಪಟ್ಟಣದ ಸಾಧು ಅಜ್ಜನ ಬಡಾವಣೆಯಲ್ಲಿರುವ ಉದ್ಯಾನ ಎರಡು ವರ್ಷಗಳ ಕಾಲ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದೇ. ನನಗೆ ಬರಬೇಕಿದ್ದ ಒಂದು ವರ್ಷದ ಸಂಬಳ ನೀಡದ ಕಾರಣ ಎರಡು ವರ್ಷಗಳ ಹಿಂದೆಯೇ ಉದ್ಯಾನ ನಿರ್ವಹಣೆ ಕೆಲಸ ಬಿಟ್ಟಿದ್ದು, ಅಲ್ಲಿಂದ ಇಲ್ಲಿಯವರೆಗೂ ಯಾರು ನಿರ್ವಹಣೆ ಮಾಡದ ಕಾರಣ ಉದ್ಯಾನ ಸಂಪೂರ್ಣ ಹಾಳಾಗಿದೆ.
●ಬಸಪ್ಪ ಮಣ್ಣೇರಿ, ಉದ್ಯಾನ ನಿರ್ವಾಹಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cybercrime; ಚಾಲ್ತಿ ಖಾತೆ ತೆರೆದು ಕೋಟ್ಯಂತರ ರೂ.ವರ್ಗಾವಣೆ: ಇಬ್ಬರ ಬಂಧನ
Gadag; ಮಾನವ ಸರಪಳಿ ವೇಳೆ ಶಿಕ್ಷಕಿಯರ ಮೇಲೆ ಹೆಜ್ಜೇನು ದಾಳಿ
ಜನರಿಗೆ ಪ್ರಜಾಪ್ರಭುತ್ವ ಅರಿವು ಮೂಡಿಸಿ, ಬಲ ತುಂಬುವ ಕಾರ್ಯಕ್ರಮ ಪ್ರಜಾಪ್ರಭುತ್ವ ದಿನಾಚರಣೆ
Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್
ಗದಗ: ಅತಿವೃಷ್ಟಿಯಿಂದ ಬತ್ತಿದ ಕೆರೆಗಳಿಗೆ ಆಸರೆಯಾದ ತುಂಗಭದ್ರೆ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.