ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು- ಸಿದ್ಧಲಿಂಗಯ್ಯ

ಹೆಮ್ಮೆಯ ಸೈನಿಕರು. ಅವರಿಗೆ ಪ್ರತಿಯೊಬ್ಬರು ಗೌರವ ನೀಡಬೇಕು

Team Udayavani, Oct 14, 2024, 2:32 PM IST

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು- ಸಿದ್ಧಲಿಂಗಯ್ಯ

■ ಉದಯವಾಣಿ ಸಮಾಚಾರ
ನರಗುಂದ: ಹೆತ್ತ ತಾಯಿ ,ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಈ ಎರಡನ್ನು ಎದೆಯಿಲ್ಲಿಟ್ಟು ಕಾಪಾಡಬೇಕು. ಪರಕೀಯರಿಂದ ಕಾರ್ಗಿಲ್‌ ಪ್ರದೇಶವನ್ನು ಕಾಪಾಡಿ ವಿಜಯ ಸಾಧಿಸಿ 25 ವರ್ಷಗಳು ಪೂರ್ಣಗೊಂಡಿವೆ. ಕಾರ್ಗಿಲ್‌ ವಿಜಯ ನಮ್ಮ ದೇಶದ ಹೆಮ್ಮೆ ಎಂದು ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಸ್ವಾತಂತ್ರ್ಯ ವೀರ ಬಾಬಾಸಾಹೇಬರ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಪೂಜ್ಯ ಶ್ರೀ ಲಿಂ. ದೊರೆಸ್ವಾಮಿಗಳ ಪುಣ್ಯ ಸ್ಮರಣೋತ್ಸವ (ನಮ್ಮೂರ ಜಾತ್ರೆ-2024) ನಿಮಿತ್ತ ಕಾರ್ಗಿಲ್‌ ವಿಜಯೋತ್ಸವ 25ನೇ ವರ್ಷಾಚರಣೆ ಪ್ರಯುಕ್ತ ಚೊಳಚಗುಡ್ಡದಿಂದ ಸಾಗಿಬಂದ ಕಾರ್ಗಿಲ್‌ ಜ್ಯೋತಿ ರಥಯಾತ್ರೆ ಸ್ವಾಗತ ಹಾಗೂ 25 ಕಾರ್ಗಿಲ್‌ ಕಲಿಗಳಿಗೆ ಸನ್ಮಾನ ಮತ್ತು ಕಾರ್ಗಿಲ್‌ ಕಲಿಗಳ ಯಶೋಗಾಥೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೊರೆಸ್ವಾಮಿಮಠ ಸೈನಿಕರಿಗೆ ಗೌರವ ಸೂಚಿಸುವ ಸದುದ್ದೇಶದಿಂದ ವಿಶಿಷ್ಟ ಮತ್ತು ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಜನಜಾಗೃತಿ ಮೂಡಿಸುತ್ತಿದೆ. ಇದು ಇತಿಹಾಸದ ಪುಟಗಳಲ್ಲಿ ಅಜರಾಮರ ಎಂದು ಹೇಳಿದರು.

ಕಾರ್ಗಿಲ್‌ ಯುದ್ಧ ನಮ್ಮ ದೇಶದ ಹೆಮ್ಮೆಯ ಸಂಕೇತ. ಅದು ಸೈನಿಕರ ತ್ಯಾಗ ಬಲಿದಾನದ ಪ್ರತೀಕವಾಗಿದೆ. ಇಂದಿನ ಮಕ್ಕಳು, ಯುವಕರಲ್ಲಿ ನಾನು ನನ್ನದು ಎನ್ನುವ ಮನೋಭಾವ ಬಿಟ್ಟು ನಾವು ನಮ್ಮೊàರು ಎಂಬ ದೇಶಾಭಿಮಾನ ಬೆಳೆಯಬೇಕಿದೆ ಎಂದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ದೇಶ ನನಗೇನು ಕೊಟ್ಟಿದೆ ಎನ್ನುವ ಬದಲಾಗಿ ದೇಶಕ್ಕೆ ನಾನೇನು ಮಾಡಿದೆ ಎಂದು ಅರಿತುಕೊಳ್ಳ ಬೇಕಾಗಿದೆ. ಯುವಕರಲ್ಲಿ ದೇಶಾಭಿಮಾನ ಬೆಳೆಸಬೇಕಾಗಿದೆ. ಅಂತಹ ಕಾರ್ಯವನ್ನು ಶ್ರೀಮಠ ಮಾಡುತ್ತಿರುವುದು ಅಭಿನಂದನೀಯ. ಎಲ್ಲರೂ ದೇಶದಲ್ಲಿ ಇಷ್ಟೊಂದು ಸುಭದ್ರವಾಗಿರುವುದಕ್ಕೆ ಮುಖ್ಯ ಕಾರಣ ನಮ್ಮ ಹೆಮ್ಮೆಯ ಸೈನಿಕರು. ಅವರಿಗೆ ಪ್ರತಿಯೊಬ್ಬರು ಗೌರವ ನೀಡಬೇಕು ಎಂದು ಹೇಳಿದರು.

ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ಯುವ ದುರೀಣ ವಿವೇಕ ಯಾವಗಲ್ಲ, ಧಾರವಾಡ ಕಾರ್ಗಿಲ್‌ ಸ್ತೂಪದ ಅಧ್ಯಕ್ಷ ಚಂದ್ರಶೇಖರ ಅಮಿನಗಡ, ಬಸವರಾಜ ಮುಕ್ಕುಪ್ಪಿ, ಸಾವಿತ್ರಿ ಯಶವಂತ ಕೋಲಕಾರ,
ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ವೆಂಕಪ್ಪ ಭಾವಿ, ವೀರನಗೌಡ ಪಾಟೀಲ, ಷಣ್ಮುಖಪ್ಪ ಹಳೆಹೊಳಿ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ಪತ್ರಯ್ಯ ಹಿರೇಮಠ, ಗಂಗಯ್ಯ ವಸ್ತ್ರದ ಹಾಗೂ ಚೊಳಚಗುಡ್ಡ ಮತ್ತು ತಾಲೂಕಿನ ಎಲ್ಲ ಮಾಜಿ ಸೈನಿಕರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

JONATHAN

National Games: ಪುರುಷರ ಶೂಟಿಂಗ್‌ ಸ್ಪರ್ಧೆ; ರಾಜ್ಯದ ಶೂಟರ್‌ ಜೋನಾಥನ್‌ಗೆ ಚಿನ್ನ

Sanju-Samson

Injury: ವಿಕೆಟ್‌ ಕೀಪರ್‌-ಬ್ಯಾಟರ್‌ ಸಂಜು ಸ್ಯಾಮ್ಸನ್‌ ಗಾಯಾಳು

ICC-Team-india

Tournament Team: ಯು-19 “ಕೂಟದ ತಂಡ’ದಲ್ಲಿ ಭಾರತದ 4 ಆಟಗಾರ್ತಿಯರು

Udupi: ಗೀತಾರ್ಥ ಚಿಂತನೆ 176: ಭೂತಜ್ಞಾನ, ಸ್ವರೂಪಜ್ಞಾನದ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ 176: ಭೂತಜ್ಞಾನ, ಸ್ವರೂಪಜ್ಞಾನದ ವ್ಯತ್ಯಾಸ

mng-Asian-Sisters

Harbin: ಏಷ್ಯನ್‌ ಗೇಮ್ಸ್‌ ಐಸ್‌ ಸ್ಕೇಟಿಂಗ್‌: ಮಂಗಳೂರಿನ ಅಣ್ಣ-ತಂಗಿ ಆಯ್ಕೆ

Champions-Trophy

Kick Start: ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳ ಟಿಕೆಟ್‌ ಮಾರಾಟ ಆರಂಭ

ಫೆ.11ರಿಂದ ಹೂಡಿಕೆದಾರರ ಸಮಾವೇಶ: ಸ್ಟಾರ್ಟಪ್‌ ಪ್ರೋತ್ಸಾಹಕ್ಕೆ 3 ಲ. ಡಾಲರ್‌

ಫೆ.11ರಿಂದ ಹೂಡಿಕೆದಾರರ ಸಮಾವೇಶ: ಸ್ಟಾರ್ಟಪ್‌ ಪ್ರೋತ್ಸಾಹಕ್ಕೆ 3 ಲ. ಡಾಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sriramulu expresses dissatisfaction with high command

BJP: ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶ್ರೀರಾಮುಲು

Agriculture Department: ಗದಗ ಕೃಷಿ ಇಲಾಖೆ ಅನ್ನದಾತರ ಅಕ್ಷಯ ಪಾತ್ರೆ

Agriculture Department: ಗದಗ ಕೃಷಿ ಇಲಾಖೆ ಅನ್ನದಾತರ ಅಕ್ಷಯ ಪಾತ್ರೆ

Gadag: ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಮರಣದಂಡನೆ

Gadag: 2019ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣ… ನಾಲ್ವರು ಆರೋಪಿಗಳಿಗೆ ಮರಣದಂಡನೆ

Lokayukta

Mundargi;ವಾರಸುದಾರರಿಲ್ಲದ ಜಮೀನಿನ ಕೊಟ್ಟಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ

ಮೈಕ್ರೋ ಫೈನಾನ್ಸ್ ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ

ಮೈಕ್ರೋ ಫೈನಾನ್ಸ್ ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

RCB-women

ಆರ್‌ಸಿಬಿ ಮಹಿಳಾ ತಂಡಕ್ಕೆ ಹೀದರ್‌ ಗ್ರಹಾಂ, ಗಾರ್ಥ್

JONATHAN

National Games: ಪುರುಷರ ಶೂಟಿಂಗ್‌ ಸ್ಪರ್ಧೆ; ರಾಜ್ಯದ ಶೂಟರ್‌ ಜೋನಾಥನ್‌ಗೆ ಚಿನ್ನ

court

Road dispute:ತಹಶೀಲ್ದಾರ್‌ ಆದೇಶ ಪುರಸ್ಕರಿಸಿದ ಜಿಲ್ಲಾ ನ್ಯಾಯಾಲಯ

Sanju-Samson

Injury: ವಿಕೆಟ್‌ ಕೀಪರ್‌-ಬ್ಯಾಟರ್‌ ಸಂಜು ಸ್ಯಾಮ್ಸನ್‌ ಗಾಯಾಳು

rape

Bantwal: ಬಾಲಕಿಯ ಅಪಹರಿಸಿ ಕಿರುಕುಳ:ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.