
ಮಹದಾಯಿ ಹೋರಾಟಗಾರರಿಗೆ ಇನ್ನು ಸಮವಸ್ತ್ರ
Team Udayavani, Jul 15, 2019, 2:36 PM IST

ನರಗುಂದ: ಮಹದಾಯಿ ಹೋರಾಟದಲ್ಲಿ ಪಾಲ್ಗೊಳ್ಳುವ ಮಹಿಳಾ ಹೋರಾಟಗಾರರಿಗೆ ಹೋರಾಟದ ಚಿಹ್ನೆಯುಳ್ಳ ಸೀರೆಗಳನ್ನು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ವಿತರಿಸಿದರು.
ನರಗುಂದ: ಜೀವ ಜಲಕ್ಕಾಗಿ ಸುದೀರ್ಘ 4 ವರ್ಷಗಳ ಹೋರಾಟ ಕಂಡಿರುವ ಮಹದಾಯಿ ಹೋರಾಟಗಾರರು ಇನ್ನು ಎಲ್ಲಿಯೇ ಹೋರಾಟ ಮಾಡಿದರೂ ಹೊಸದೊಂದು ಸಂಚಲನ ಮೂಡಿಸಲಿದ್ದಾರೆ. ಕಾರಣ ಎಲ್ಲ ಮಹದಾಯಿ ಹೋರಾಟಗಾರರಿಗೆ ಸಮವಸ್ತ್ರ ವ್ಯವಸ್ಥೆ ಮಾಡಲಾಗಿದೆ.
ಮಹದಾಯಿ ಹೋರಾಟದಲ್ಲಿ ಪಾಲ್ಗೊಳ್ಳುವ ಎಲ್ಲ ಹೋರಾಟಗಾರರಲ್ಲಿ ಮಹಿಳೆಯರು ಹೋರಾಟದ ಚಿಹ್ನೆಯಿರುವ ಸೀರೆಯುಟ್ಟು, ಪುರುಷರು ಹೋರಾಟ ಚಿಹ್ನೆಯಿರುವ ಹಸಿರು ಟವೆಲ್ ಧರಿಸಲಿದ್ದಾರೆ. ಶನಿವಾರ ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟದ 1459ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ನೂತನ ಸಮವಸ್ತ್ರಗಳನ್ನು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೋರಾಟಗಾರರಿಗೆ ವಿತರಿಸಿದ್ದು ಗಮನ ಸೆಳೆಯಿತು. ಮಹದಾಯಿ ಹೋರಾಟದ ರೂವಾರಿ ರೈತ ಸೇನಾ ಕರ್ನಾಟಕ ಸಂಘಟನೆ ಚಿಹ್ನೆಯಿರುವ ಸೀರೆಗಳನ್ನು ಸೂರತ್ನಲ್ಲಿ ತಯಾರಿಸಲಾಗಿದೆ. ಪ್ರತಿ ಸೀರೆಗೆ 200 ರೂ. ವ್ಯಯಿಸಿದ್ದು, ಮಹಿಳಾ ಹೋರಾಟಗಾರರು 100 ರೂ. ಭರಿಸಿ ಸೀರೆ ಪಡೆದುಕೊಳ್ಳಬಹುದಾಗಿದೆ. ಉಳಿದ 100 ರೂ. ದಾನಿಗಳಿಂದ ಭರಿಸಲಾಗಿದೆ ಎಂದು ಸೊಬರದಮಠ ಸ್ವಾಮೀಜಿ ಹೇಳಿದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.