ಉಪ ಗುತ್ತಿಗೆ ಸಮರ್ಥಿಸಿಕೊಂಡ ನಾಡಗೌಡ

ಗೊರೇಬಾಳ ಪಿಕಪ್‌ ಡ್ಯಾಂ ಕಾಮಗಾರಿ ವೀಕ್ಷಣೆ • ಬಾದರ್ಲಿ-ವಿರೂಪಾಕ್ಷಪ್ಪ ತಮ್ಮ ಹಿಂಬಾಲಕರಿಗೆ ಉಪ ಗುತ್ತಿಗೆ ಕೊಡಿಸಲ್ಲವೇ?

Team Udayavani, Jun 9, 2019, 10:50 AM IST

09-June-9

ಗೊರೇಬಾಳ: ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಗೊರೇಬಾಳ ಪಿಕಪ್‌ ಡ್ಯಾಂ ಕಾಮಗಾರಿ ವೀಕ್ಷಿಸಿದರು.

ಗೊರೇಬಾಳ: ಈ ಹಿಂದೆ ಶಾಸಕರಾಗಿದ್ದಾಗ ಕೆ.ವಿರೂಪಾಕ್ಷಪ್ಪ ಹಾಗೂ ಹಂಪನಗೌಡ ಬಾದರ್ಲಿ ತಮ್ಮ ಹಿಂಬಾಲಕರಿಗೆ ಉಪ ಗುತ್ತಿಗೆ ಕೊಡಿಸಿಲ್ಲವೇ ಎಂದು ಪ್ರಶ್ನಿಸಿದ ಸಚಿವ ವೆಂಕಟರಾವ್‌ ನಾಡಗೌಡ, ಅವರು ನಡೆದು ಬಂದ ದಾರಿಯಲ್ಲಿ ತಾವು ನಡೆಯುತ್ತಿರುವುದಾಗಿ ಹೇಳಿ, ಗೊರೇಬಾಳ ಪಿಕಪ್‌ ಡ್ಯಾಂ ಆಧುನೀಕರಣ ಕಾಮಗಾರಿಯನ್ನು ಜೆಡಿಎಸ್‌ ಕಾರ್ಯಕರ್ತರಿಗೆ ನೀಡಿದ್ದನ್ನು ಸಮರ್ಥಿಸಿಕೊಂಡರು.

ಗೊರೇಬಾಳ ಗ್ರಾಮದ ಹತ್ತಿರ 14.30 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಗೊರೇಬಾಳ ಪಿಕಪ್‌ ಡ್ಯಾಂ ಆಧುನೀಕರಣ ಕಾಮಗಾರಿ ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗೊರೇಬಾಳ ಪಿಕಪ್‌ ಡ್ಯಾಂ ಸುಮಾರು 20 ವರ್ಷಗಳ ಹಿಂದಿನ ಯೋಜನೆ ಆಗಿದೆ. ಹಂಪನಗೌಡ ಬಾದರ್ಲಿ ಶಾಸಕರಿದ್ದಾಗ ಯೋಜನೆ ಉದ್ಘಾಟಿಸಲಾಗಿತ್ತು. ಆದರೆ ರೈತರ ಹೊಲಗಳಿಗೆ ಹನಿ ನೀರು ತಲುಪಲಿಲ್ಲ. ಲೆವೆಲ್ ಇಲ್ಲದ್ದರಿಂದ ಕಾಲುವೆಗೆ ನೀರು ಬಿಟ್ಟರೆ ವಾಪಸ್ಸು ಬರುತ್ತಿತ್ತು. ತಾವು ಶಾಸಕರಾಗಿದ್ದಾಗ ಕಾಲುವೆಯನ್ನು ಸಂಪೂರ್ಣವಾಗಿ ಲೆವೆಲ್ ಮಾಡಿ ಬೂದಿವಾಳ ಹಾಗೂ ಬೂದಿವಾಳ ಕ್ಯಾಂಪ್‌ ರೈತರಿಗೆ ನೀರು ಒದಗಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಉಂಟಾದ ನೆರೆಹಾವಳಿಗೆ ಕಾಲುವೆಗಳೆಲ್ಲಾ ಕೊಚ್ಚಿ ಹೋದವು. ಪಿಕಪ್‌ ಡ್ಯಾಂ ಮತ್ತೆ ಹಂಪನಗೌಡರ ಕಾಲದಲ್ಲಿ ನನೆಗುದಿಗೆ ಬಿತ್ತು. ಈಗ ಅದಕ್ಕೆ ಅನುದಾನ ಕೊಟ್ಟು ಪುನಃ ಚಾಲನೆ ನೀಡಲಾಗಿದೆ ಎಂದರು.

ಗುಣಮಟ್ಟ: ಎಲ್ಲ ಕಾಮಗಾರಿಗಳನ್ನು ಗುತ್ತಿಗೆದಾರರು ಮಾಡಲು ಆಗುವುದಿಲ್ಲ. ಅವರು ಉಪಗುತ್ತಿಗೆ ನೀಡಿದ್ದಾರೆ. ಕೆಲಸ ಯಾರು ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ. ಸದ್ಯ ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿದೆ. ವಿರೂಪಾಕ್ಷಪ್ಪ ಅವರು ಬೇಕಾದರೆ ಗುಣಮಟ್ಟ ವೀಕ್ಷಣೆ ಮಾಡಲಿ. ಟೀಕೆ ಮಾಡಬೇಕು ಎಂದು ಮಾಡಿದರೆ ತಾವು ಉತ್ತರ ಕೊಡುವುದಿಲ್ಲ. ಇಲಾಖೆಯಿಂದಲೂ ನಿವೃತ್ತ ಅಭಿಯಂತರರನ್ನು ನೇಮಕ ಮಾಡಲಾಗಿದೆ. ಅವರು ಸ್ಥಳದಲ್ಲಿದ್ದು, ಲೆವೆಲ್ ಹಾಗೂ ಗುಣಮಟ್ಟ ಪರಿಶೀಲನೆ ಮಾಡುತ್ತಾರೆ ಎಂದು ತಿರುಗೇಟು ನೀಡಿದರು. ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಈರಣ್ಣ, ಎಇಇ ಹನುಮಂಗಪ್ಪ, ಜೆಇ ನಾಗಪ್ಪ, ತಾಪಂ ಸದಸ್ಯ ಗುರುರಾಜ, ಜೆಡಿಎಸ್‌ ಅಧ್ಯಕ್ಷ ಲಿಂಗಪ್ಪ ದಡೇಸ್ಗೂರು, ವಕ್ತಾರ ಬಸವರಾಜ ನಾಡಗೌಡ, ಮುಖಂಡರಾದ ಚಂದ್ರಭೂಪಾಲ ನಾಡಗೌಡ, ಜಿ.ಸತ್ಯನಾರಾಯಣ, ನಾಗೇಶ ಹಂಚಿನಾಳ ಕ್ಯಾಂಪ್‌, ಸಣ್ಣ ಶಿವನಗೌಡ, ವೆಂಕೋಬ ಕಲ್ಲೂರು, ಮಲ್ಲನಗೌಡ, ಎನ್‌ ಸಿದ್ದಲಿಂಗೇಶ ಗೌಡ, ಅಮರಯ್ಯಸ್ವಾಮಿ ಮಲ್ಕಾಪುರ, ಶರಣಬಸವ ಗೊರೇಬಾಳ, ಕೋಟೇಶ್ವರರಾವ್‌ ಸೇರಿದಂತೆ ಅನೇಕರು ಇದ್ದರು.

28ರಂದು ಕರಡಿಗುಡ್ಡದಲ್ಲಿ ಸಿಎಂ ಎಚ್‌ಡಿಕೆ ವಾಸ್ತವ್ಯ
ಮಾನ್ವಿ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಜೂ.28 ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಸೋಮವಾರ ಜಿಲ್ಲಾಡಳಿತದೊಂದಿಗೆ ಭೇಟಿ ನೀಡಿ ತಾವು ಪರಿಶೀಲಿಸುವುದಾಗಿ ಸಚಿವ ವೆಂಕಟರಾವ್‌ ನಾಡಗೌಡ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.