ರೈತರ ಪಾಲಿಗೆ ಹುಳಿಯಾದ ಟೊಮೆಟೋ


Team Udayavani, Jan 1, 2020, 3:00 AM IST

raitara-palige

ಚನ್ನರಾಯಪಟ್ಟಣ: ಕೇವಲ ಎರಡು ತಿಂಗಳ ಹಿಂದೆ ಟೊಮೆಟೋ ಬೆಳೆದ ರೈತನಿಗೆ ಚಿನ್ನದ ಬೆಲೆ ಸಿಕ್ಕಿತು. ಆದರೀಗ ಟೊಮೆಟೋ ಬೆಳೆದವರಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಕೊಳವೆ ಬಾವಿ ಹೊಂದಿರುವ ನೂರಾರು ರೈತರು ಟೊಮೆಟೋ ಬೆಳೆಗೆ ಹೆಚ್ಚು ಒತ್ತು ನೀಡುತ್ತಾರೆ.

ಮಾರುಕಟ್ಟೆಯಲ್ಲಿ ಕೇಜಿ ಟೊಮೆಟೋಗೆ 60ರಿಂದ 80ರೂ. ಬೆಲೆ ಬಂದಾಗ ಸಾವಿರಾರು ರೈತರು ಟೊಮೆಟೋ ಬೆಳೆದು ಹಣ ಸಂಪಾದನೆ ಮುಂದಾಗುತ್ತಾರೆ. ಈ ರೀತಿ ಒಟ್ಟಿಗೆ ಸಾವಿರಾರು ಮಂದಿ ರೈತರು ಟೊಮೆಟೋ ಬೆಳೆಗೆ ಮಾರು ಹೋಗುವುದರಿಂದ ಟೊಮೆಟೋ ಬೆಲೆ ದಿಢೀರ್‌ ಕುಸಿತವಾಗಿ 10 ರೂ.ಗೆ ಎರಡರಿಂದ ಮೂರು ಕೇಜಿ ಟೊಮೆಟೋ ಗ್ರಾಹಕರಿಗೆ ದೊರೆಯುತ್ತದೆ.

ದಿಢೀರ್‌ ಟೊಮೆಟೋ ಬೆಲೆ ಕುಸಿತ ವಾಗುವುದರಿಂದ ಒಂದು ಚೀಲ ಟೊಮೆಟೋಗೆ 30ರಿಂದ 50 ರೂ.ಗೆ ಮಾರುವುದು ಅನಿವಾರ್ಯವಾಗುತ್ತದೆ. ಇದರಿಂದ ರೈತರು ತಮ್ಮ ಕೃಷಿ ಭೂಮಿಯಿಂದ ಆಟೋದಲ್ಲಿ ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆಗೆ ತರುವ ಬಾಡಿಗೆ ಬೆಲೆ ದೊರೆಯದೆ ಕಂಗಾಲಾಗುತ್ತಾರೆ.

ಬರಿಗೈನಲ್ಲಿ ಮನೆ ಸೇರುವ ರೈತರು: ಒಂದೆರಡು ತಿಂಗಳ ಹಿಂದೆ ಟೊಮೆಟೋ ಬೆಲೆ ಕೇಜಿಗೆ 40ರಿಂದ 70 ರೂ. ವರೆಗೆ ತಲುಪಿತ್ತು. ಈ ವೇಳೆ ಗ್ರಾಹಕರು ಟೊಮೆಟೋ ಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೀಗ ಗ್ರಾಹಕರು 10 ರೂ.ಗೆ ಮೂರು ಕೇಜಿ ಟೊಮೆಟೋ ಖರೀದಿಸುತ್ತಿದ್ದಾರೆ. ಅನ್ನದಾತ ತನ್ನ ಕೃಷಿ ಭೂಮಿಯಿಂದ ಟೊಮೆಟೋ ತಂದು ರಸ್ತೆ ಬದಿ, ಎಲ್ಲೆಂದರಲ್ಲಿ ಸುರಿದು ಬರಿಗೈನಲ್ಲಿ ಮನೆಗೆ ಹೋಗುತ್ತಿದ್ದಾನೆ.

ರಸ್ತೆ ಬದಿಗೆ ಸುರಿಯುತ್ತಿದ್ದಾರೆ: ತಿಂಗಳ ಹಿಂದೆ ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಟೊಮೆಟೋ ತಂದರೆ ಕೇಜಿಗೆ 30 ರಿಂದ 50 ರೂ. ನೀಡಿ, ತರಕಾರಿ ಮಾರಾಟ ಮಾಡುವವರು ಮುಗಿಬಿದ್ದು ಕೊಳ್ಳುತ್ತಿದ್ದರು. ಆದರೆ ಈಗ ತರಕಾರಿ ಮಾರಾಟ ಮಾಡುವವರು ರೈತರಿಂದ ಕೊಳ್ಳುವ ಟೊಮೆಟೋ ಒಂದು ಕೇಜಿಗೆ ಒಂದು ರೂ. ನೀಡಲು ಹಿಂದೇಟು ಹಾಕುತ್ತಿದ್ದಾರೆ. 30 ಕೇಜಿ ತೂಕದ ಚೀಲಕ್ಕೆ 10 ರೂ. ನೀಡಲು ಮುಂದಾಗುತ್ತಾರೆ. ಇದರಿಂದ ಬೇಸತ್ತು ರೈತ ಟೊಮೆಟೋ ಹಣ್ಣನ್ನು ರಸ್ತೆ ಬದಿ ಸುರಿಯುತ್ತಿದ್ದಾನೆ.

ಎಕರೆಗೆ ಹದಿನೆಂಟು ಸಾವಿರ ರೂ. ನಷ್ಟ: ಕೃಷಿ ಭೂಮಿಯಿಂದ ಪಟ್ಟಣಕ್ಕೆ ಟೊಮೆಟೋ ತರಲು ತಗುಲುವ ವೆಚ್ಚ, ಟೊಮೆಟೋ ಗಿಡದಿಂದ ಬಿಡಿಸಿ ಚೀಲಕ್ಕೆ ತುಂಬಲು ಕೂಲಿ, ಬಿತ್ತನೆ ವೆಚ್ಚ, ಗೊಬ್ಬರ, ನೀರು, ಔಷಧಿ ಹೀಗೆ ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆಯಲು ಕನಿಷ್ಠ 20 ಸಾವಿರ ರೂ. ವೆಚ್ಚವಾಗಲಿದೆ ಆದರೆ ಈಗಿನ ಮಾರುಕಟ್ಟೆ ದರ ನೋಡಿದರೆ ಎಕರೆಗೆ 2 ಸಾವಿರ ರೂ. ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಹೊಲದಲ್ಲಿ ಟೊಮೆಟೋ ಕೊಯ್ಯದೇ ಇರುವುದರಿಂದ ಗಿಡದಲ್ಲೇ ಕೊಳೆಯುತ್ತಿವೆ.

ಸ್ಥಳೀಯ ಮಾರುಕಟ್ಟೆ ಅವಲಂಬನೆ: ಸ್ಥಳೀಯ ಮಾರುಕಟ್ಟೆ ಅವಲಂಬನೆ ಮಾಡಿಕೊಂಡು ರೈತರು ಟೊಮೆಟೋ ಬೆಳೆಯುತ್ತಿದ್ದಾರೆ. ಇದನ್ನು ಹೊರತು ಪಡಿಸಿದರೆ ಮೈಸೂರು ಇಲ್ಲವೇ ಬೆಂಗಳೂರಿಗೆ ಕಳಹಿಸಬೇಕು. ಇಲ್ಲೇ ಈ ರೀತಿ ಬೆಲೆ ಕುಸಿತವಾಗಿರುವಾಗ ಹೊರ ಜಿಲ್ಲೆಗೆ ಕೊಂಡೊಯ್ಯಲು ವಾಹನಕ್ಕೆ ನೀಡುವ ಬಾಡಿಗೆ ದೊರೆಯದಿದ್ದರೆ ಎಂಬ ಆತಂಕದೊಂದಿಗೆ ತಾಲೂಕಿನ ರೈತರು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ರೈತರಿಗೆ ಮಾರಕವಾದ ಎನ್‌ಆರ್‌ಸಿ, ಸಿಎಎ ಪ್ರತಿಭಟನೆ: ಪೌರತ್ವ ಕಾನೂನು ತಿದ್ದುಪಡಿ (ಸಿಎಎ)ಹಾಗೂ ಎನ್‌ಆರ್‌ಸಿ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಟೊಮೆಟೋ ಸರಬರಾಜಾಗದೇ ಇರುವುದೂ ಟೊಮೆಟೋ ಬೆಲೆ ದಿಢೀರ್‌ ಕುಸಿಯಲು ಕಾರಣವಾಗಿದೆ.

ಮಾರುಕಟ್ಟೆಯಲ್ಲಿ ಟೊಮೆಟೋಗೆ ಬೇಡಿಕೆ ಇದ್ದುದರಿಂದ ರೈತರು ಬ್ಯಾಂಕ್‌ಗಳಲ್ಲಿ ಕೃಷಿ ಸಾಲದೊಂದಿಗೆ ಕೈಸಾಲ ಮಾಡಿ ಟೊಮೆಟೋ ಬೆಳೆದಿದ್ದರು. ಆದರೀಗ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ಸಂಕಷ್ಟ ಅನುಭವಿಸುವಂತಾಗಿದೆ.
-ಗವಿರಾಜಗೌಡ, ಟೊಮೆಟೋ ಬೆಳೆಗಾರ ರೈತ

ರೈತರೊಂದಿಗೆ ನಾವು ವಿಶ್ವಸದ ಮೇಲೆ ವ್ಯವಹಾರ ಮಾಡುತ್ತೇವೆ. ನಮ್ಮಲ್ಲಿ ಯಾವುದೂ ಕಾನೂನಿನ ಅಡಿಯಲ್ಲಿ ನಡೆಯುವುದಿಲ್ಲ. ಈಗ ಟೊಮೆಟೋ ಉತ್ಪಾದನೆ ಹೆಚ್ಚಿದ್ದು ಬೇಡಿಕೆ ಪ್ರಮಾಣ ಕಡಿಮೆ ಇದೆ. ದೇಶದಲ್ಲಿ ಎನ್‌ಆರ್‌ಸಿ, ಸಿಎಎ ಗಲಾಟೆಯಿಂದ ಹೊರ ರಾಜ್ಯಕ್ಕೆ ತರಕಾರಿ ಸರಬರಾಜಾಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
-ಶಿವರಾಜು, ತರಕಾರಿ ವರ್ತಕ

* ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sakleshpura: ವಿದ್ಯುತ್‌ ತಂತಿ ತಗಲಿ ಕಾಡಾನೆ ಸಾವು

Sakleshpura: ವಿದ್ಯುತ್‌ ತಂತಿ ತಗಲಿ ಕಾಡಾನೆ ಸಾವು

ಬೆದರಿಕೆಗೆ ಗೌಡರ ಕುಟುಂಬ ಜಗ್ಗದು: ಎಚ್‌.ಡಿ. ರೇವಣ್ಣ

H.D. Revanna: ಬೆದರಿಕೆಗೆ ಗೌಡರ ಕುಟುಂಬ ಜಗ್ಗದು

Hasana-HDK

By Poll: ಚನ್ನಪಟ್ಟಣ ಕ್ಷೇತ್ರಕ್ಕೆ ವಾರದೊಳಗೆ ಅಭ್ಯರ್ಥಿ ಘೋಷಣೆ: ಎಚ್‌.ಡಿ.ಕುಮಾರಸ್ವಾಮಿ

Shivalinge-Gowda

CM ಸಿದ್ದರಾಮಯ್ಯ ರಾಜೀನಾಮೆ ಸಲ್ಲದು; ಶಾಸಕ ಶಿವಲಿಂಗೇಗೌಡ

5-hasan

Hasana:ಅನಾರೋಗ್ಯ: 3 ದಿನಗಳಿಂದ ನಿಂತಲ್ಲೇ ನಿಂತಿದ್ದ ಕಾಡಾನೆ ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.