ನಾಲೆಗಳೇ ಜೀವಜಲದ ರಕ್ಷಾ ಕವಚ


Team Udayavani, Apr 11, 2021, 5:01 PM IST

ನಾಲೆಗಳೇ ಜೀವಜಲದ ರಕ್ಷಾ ಕವಚ

ಅರಕಲಗೂಡು: ತಾಲೂಕು ಅರಮಲೆನಾಡು ಪ್ರದೇಶವಾಗಿದ್ದು, ತಾಪಮಾನವೂ ಕಡಿಮೆ ಇದೆ.ತಾಲೂಕಿನ ಎಡಬಾಗದಲ್ಲಿ ಹೇಮಾವತಿ ಬಲಬಾಗದಲ್ಲಿ ಕಾವೇರಿ ನದಿಯು ಹರಿಯುತ್ತಿರುವುದರಿಂದ ಈ ನದಿಗಳಿಂದ ತಾಲೂಕಿನ ಶೇ. 53 ಭೂವಿಸ್ತೀರ್ಣ ನೀರಾವರಿ ಪ್ರದೇಶವಾಗಿದೆ. ಹೀಗಾಗಿ ಕುಡಿವ ನೀರಿನ ಹಾಗೂ ಅಂತರ್ಜಲ ಸಮಸ್ಯೆ ಕಡಿಮೆ ಎನ್ನಬಹುದು.

ತಾಲೂಕಿನ 5 ಹೋಬಳಿಗಳಲ್ಲಿಯೂ ನಾಲೆಗಳ ಮೂಲಕ ಬಹುತೇಕ ಕೆರೆಕಟ್ಟೆಗಳಿಗೆ ನೀರುತುಂಬಿಸಲಾಗುತ್ತಿದೆ. ಆದರೆ ತಾಲೂಕಿನ ಕೆಲ ಗ್ರಾಪಂವ್ಯಾಪ್ತಿಯಲ್ಲಿ ಎತ್ತರ ಪ್ರದೇಶದಲ್ಲಿರುವ 8 ರಿಂದ 10ಗ್ರಾಮಗಳಲ್ಲಿ ಸಮಸ್ಯೆ ಗೋಚರಿಸುತ್ತಿದೆ. ಆದರೆಮುಂಗಾರು ಮಳೆ ಪ್ರಾರಂಭ ನಿದಾನಗತಿಯಾದರೆ ಆಗ 30 ರಿಂದ 40 ಗ್ರಾಮಗಳು ಅಂತರ್ಜಲದ ಕೊರತೆಯನ್ನ ಎದುರಿಸಬೇಕಾಗುತ್ತದೆ.

ಪಪಂ ವ್ಯಾಪ್ತಿಯಲ್ಲಿ 17 ವಾರ್ಡಗಳಿದ್ದು, ಈ ಎಲ್ಲಾವಾರ್ಡಗಳಲ್ಲಿಯೂ ನೀರಿನ ಕೊರತೆ ಎಂದೂ ಮರುಕಳಿಸದಂತೆ ಕಳೆದ ದಶಕಗಳಿಂದ ಮುಂಜಾಗ್ರತೆ ವಹಿಸಿ ಹೇಮಾವತಿ ನೀರನ್ನು ಸಂಗ್ರಹಿಸುವ ಮೂಲಕಪಟ್ಟಣದ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಮಾಜಿ ಪ್ರದಾನಿ ಎಚ್‌.ಡಿ. ದೇವೇಗೌಡರವರು 10 ವರ್ಷಗಳ ಹಿಂದೆಯೇ 10 ಕೋಟಿ ವೆಚ್ಚದಲ್ಲಿ 2030 ರವರೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಅಗತ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.

ಜತೆಗೆ ಇಂದು ತಾಲೂಕಿನ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ರಕ್ಷಿತರಾಗಿದ್ದಾರೆ ಎಂದರೆ ರಾಜ್ಯದಲ್ಲಿ ನೀರಾವರಿ ತಜ್ಞರೆಂದೇ ಹೆಸರು ಗಳಿಸಿದ ಮಾಜಿ ಸಚಿವ ಎಚ್‌. ಎನ್‌. ನಂಜೇಗೌಡ, ಕೆ.ಬಿ. ಮಲ್ಲಪ್ಪ, ಎ. ಮಂಜು ಹಾಗೂ ಶಾಸಕ ಎ.ಟಿ. ರಾಮಸ್ವಾಮಿಯವರ ಶ್ರಮವನ್ನ ತಾಲೂಕಿನ ಜನ ಮರೆಯುವಂತಿಲ್ಲ.

ಕುಡಿಯುವ ನೀರಿನ ಸಮಸ್ಯೆಯ ಗ್ರಾಮಗಳು:ತಾಲೂಕಿನ ಈ ಎರಡು ನದಿಗಳ ಮಧ್ಯದ ಎತ್ತರಪ್ರದೇಶದಲ್ಲಿರುವ ವಿಜಾಪುರ ಅರಣ್ಯ, ಕತ್ತಿಮಲ್ಲೇನಹಳ್ಳಿ,ಸಂತೆಮರೂರು, ಯಲಗತವಳ್ಳಿ, ಕೊರಟೀಕೆರೆ ಗ್ರಾಪಂವ್ಯಾಪ್ತಿಯ ಕೆಲ ಗ್ರಾಮಗಳು ಸಮಸ್ಯೆಗೆ ಈಡಾಗುತ್ತವೆ.

ಮುಂಗಾರು ವಿಳಂಬವಾದರೆ 50 ಗ್ರಾಮಗಳ ಅಂತರ್ಜಲ ಕುಸಿತ: ಬೇಸಿಗೆ ತಾಪಮಾನ ಅಧಿಕವಾದಂತೆ ಕೆರಕಟ್ಟೆಗಳಲ್ಲಿ ನೀರ ಬತ್ತಿ ಹೋದರೆ, ತಾಲೂಕಿನಲ್ಲಿ ಆಗ ಕುಡಿಯುವ ನೀರಿನ ಸಮಸ್ಯೆಉಲ್ಬಣವಾಗುತ್ತದೆ. ಈ ಸಮಸ್ಯೆ ಎದುರಾಗಬೇಕಾದರೆ ಜುಲೈವರೆಗೂ ಮಳೆ ಬೀಳದಿದ್ದಾಗ ಇಂತಹಸಮಸ್ಯೆಕಾಣಿಸಿಕೊಳ್ಳುತ್ತದೆ. 2018-19 ರಲ್ಲಿ 14ಗ್ರಾಮಗಳು ಈ ಸಮಸ್ಯೆಯನ್ನ ಎದುರಿಸಿದ್ದವು.2019-20 ನೇ ಸಾಲಿನಲ್ಲಿ ಒಂದೇ ಒಂದು ಗ್ರಾಮವು ಸಮಸ್ಯೆಗೆ ತುತ್ತಾಗಿರಲಿಲ್ಲ. ಆ ದರೆ ಈಗಿನ ಬಿಸಿಲಿನತಾಪಮಾನ ಅದಿಕವಾಗಿರುವುದರಿಂದ ತಾಲೂಕಿನ ಮೂರು ಗ್ರಾಮಗಳಲ್ಲಿ ಕೊಳವೆ ಬಾವಿಗಳುಸ್ಥಗಿತಗೊಂಡಿದೆ ಎನ್ನುವುದು ಬಿಟ್ಟರೆ ಬೇರೆ ಸಮಸ್ಯೆ ಕಂಡುಬಂದಿಲ್ಲ.

ಸಮಸ್ಯೆ ಎದುರಿಸಲು ಸನ್ನದ್ಧ: 10 ರಿಂದ 15 ಗ್ರಾಮಗಳಲ್ಲಿ ಕೇವಲ ಅಂತರ್ಜಲ ಸಮಸ್ಯೆಯಿಂದ ತೊಂದರೆ ಯಾಗುವ ಸಾಧ್ಯತೆಗಳಿವೆ. ಅಂತಹಗ್ರಾಮಗಳಿಗೆ ಈಗಾಗಲೇ ಗ್ರಾಪಂ ಅಧಿಕಾರಿಗಳಿಗೆ ಜಾಗೃತಿ ವಹಿಸಲು ಆದೇಶಿಸಲಾಗಿದೆ ಎಂದುತಾಲೂಕು ವಿಪತ್ತು ನಿರ್ವಹಣಾ ಸಮಿತಿ ತಿಳಿಸಿದೆ.

ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರು: ತಾಲೂಕಿನಎರಡು ದಡದಲ್ಲಿಯೂ ಹೇಮಾವತಿ ಕಾವೇರಿ ಸಾಗುತ್ತಿರುವುದರಿಂದ ಈ ಎರಡು ನದಿಗಳಮಧ್ಯಭಾಗದ ಎತ್ತರ ಪ್ರದೇಶಗಳಲ್ಲಿ ಇರುವಗ್ರಾಮಗಳಿಗೆ ಕುಡಿವ ನೀರು ಹಾಗೂ ಅಂತರ್ಜಲಬತ್ತದಂತೆ ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರುತುಂಬಿಸಲಾಗುತ್ತದೆ. ಹೇಮಾವತಿ ನದಿಯ ಆಶ್ರಯದಲ್ಲಿ ಬಲದಂಡಾ ನಾಲಾ, ಬೋರಣ್ಣ ಗೌಡನಾಲೆಗಳನ್ನ ಒಳಗೊಂಡಂತೆ, ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ, ಮುದಿಗೆರೆ ಏತನೀರಾವರಿ, ಗಂಗನಾಳು ಏತ ನೀರಾವರಿ ಹಾಗೂ ಮಲ್ಲಿಪಟ್ಟಣ ಏತ ನೀರಾವರಿ ಮೂಲಕ ಮಳೆ ಆಶ್ರಯ ಕೆರೆಗಳಿಗೆ ನದಿಯ ನೀರು ಹರಿಸಲಾಗುತ್ತದೆ. ಇನ್ನೂ ಮಲ್ಲಿಪಟ್ಟಣ ಏತ ನೀರಾವರಿ ಹಾಗೂ ಗಂಗನಾಳು ಏತನೀರಾವರಿಯ ಕಾಮಗಾರಿ ಪ್ರಗತಿಯಲ್ಲಿವೆ.ರಾಮನಾಥಪುರ ಮತ್ತು ಕೊಣನೂರು ಹೋಬಳಿಗಳಿಗೆ ಹಾರಂಗಿ ಎಡದಂಡೆ ನಾಲೆಯಿಂದ ನೀರು ಆಎರಡು ಹೋಬಳಿಗಳಿಗೆ ಹರಿಯುತ್ತಿರುವುದರಿಂದ ಆ ವ್ಯಾಪ್ತಿಗೂ ನೀರಿಗೆ ತೊಂದರೆಯಾಗುತ್ತಿಲ್ಲ.

ಅರಕಗೂಡು ತಾಲೂಕಿನಲ್ಲಿ ಮಲ್ಲಿಪಟ್ಟಣಹಾಗೂ ಗಂಗನಾಳು ಏತನೀರಾವರಿಯ ಕಾಮಗಾರಿ ಪ್ರಗತಿಯಲ್ಲಿದ್ದು, ಇವುಗಳುಪೂರ್ಣಗೊಂಡರೆ ಶೇ. 85 ತಾಲೂಕು ನೀರಾವರಿಪ್ರದೇಶವಾಗುತ್ತದೆ. ಇಷ್ಟೆಲ್ಲಾನೀರಾವರಿ ಸೌಲಭ್ಯವಿರುವಕಾರಣ ಸಮಸ್ಯೆ ಎದರಾಗಿಲ್ಲ. ಅದರೂ, ಪ್ರತಿಗ್ರಾಪಂಗೆ 15ನೇಹಣಕಾಸಿನಲ್ಲಿ ಕುಡಿಯುವನೀರಿಗೆ ಅನುದಾನಬಳಸಿಕೊಳ್ಳುವಂತೆ ಆದೇಶಿಸಿರುವುದರಿಂದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು. ● ಎ.ಟಿ. ರಾಮಸ್ವಾಮಿ, ಶಾಸಕರು

ಎರಡು ನದಿಗಳು ತಾಲೂಕಿನಲ್ಲಿಹರಿಯುತ್ತಿರುವುದರಿಂದ ಉಪನಾಲೆಗಳುಏತ ನೀರಾವರಿ ಮೂಲಕ ಕೆರೆಕಟ್ಟೆಗಳಿಗೆ ನೀರುತುಂಬಿಸಲಾಗಿದೆ. ಆದರೆ, ಕೆಲ ಗ್ರಾಮಗಳು ಎತ್ತರಪ್ರದೇಶದಲ್ಲಿರುವ ಕಾರಣಕುಡಿವ ನೀರಿನ ಸಮಸ್ಯೆಕಾಣಸಿಗುತ್ತದೆ. ಆದಕ್ಕೆ ಪರಿಹಾರಕಲ್ಪಿಸಲಾಗುವುದು.ತಾಲೂಕಿನಲ್ಲಿ 1,066ಕೆರೆಗಳಿದ್ದು, ಇವುಗಳಲ್ಲಿ160 ಕೆರೆಗಳ ಹೂಳೆತ್ತಿಸುವ ಮೂಲಕ ನೀರು ಸಂಗ್ರಹಿಸಲಾಗಿದೆ. ● ರೇಣುಕುಮಾರ್‌, ತಹಶೀಲ್ದಾರ್‌

 

– ಅರಕಲಗೂಡು ಶಂಕರ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

de

Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು

HD-Revanna

ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್‌ ಶಾಸಕರ ಸೆಳೆಯೋ ದುಸ್ಥಿತಿ: ಎಚ್‌.ಡಿ.ರೇವಣ್ಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.