Channarayapatna: ತಹಶೀಲ್ದಾರ್‌ ಕುರ್ಚಿ ಕಾಳಗ: ದಿನವೂ ಕಡತಕ್ಕೆ ಬದಲಾಗುತ್ತೆ ಸಹಿ


Team Udayavani, Sep 16, 2023, 3:33 PM IST

tdy-17

ಚನ್ನರಾಯಪಟ್ಟಣ: ಮಿನಿ ವಿಧಾನಸೌಧದಲ್ಲಿನ ತಹಶೀಲ್ದಾರ್‌ ಕುರ್ಚಿಗಾಗಿ ಇಬ್ಬರು ಕೆಎಎಸ್‌ ಅಧಿಕಾರಿಗಳ ನಡುವೆ ನಡೆಯು ತ್ತಿರುವ ಕಾಳಗ ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ4 ದಿನಗಳಿಂದ ಮಿನಿ ವಿಧಾನಸೌಧದಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳನ್ನು ಸಾರ್ವಜನಿಕರು ಕಂಡು ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ರತಿ ದಿನವೂ ಕಡತಕ್ಕೆ ಸಹಿ ಬದಲಾಗುತ್ತಿದೆ.

ಆಗುತ್ತಿರುವುದೇನು?: ಕಳೆದ ಎರಡು ತಿಂಗಳ ಹಿಂದೆ ತಾಲೂಕಿಗೆ ಹೊಸದಾಗಿ ಆಗಮಿಸಿದ್ದ ಸಿ.ಜೆ. ಗೀತಾ ಸೆ.12 ರ ಸಂಜೆ 6 ಗಂಟೆ ವರೆಗೆ ಕರ್ತವ್ಯ ನಿರ್ವಹಿಸಿದ್ದರು. ಅದೇ ದಿನ ರಾತ್ರಿ 8 ಗಂಟೆಗೆ ಮಿನಿ ವಿಧಾನ ಸೌಧಕ್ಕೆ ಆಗಮಿಸಿದ ಈ ಹಿಂದೆ ಇದ್ದ ತಹಶೀಲ್ದಾರ್‌ ಗೋವಿಂದರಾಜು ಕಂದಾ ಯ ಇಲಾಖೆ ಅಧಿಕಾರಿಗಳ ಸಭೆ ಮಾಡುವ ಮೂಲಕ ನಾನೇ ತಹಶೀಲ್ದಾರ್‌ ಕುರ್ಚಿಯಲ್ಲಿ ಮುಂದುವರೆಯುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪರಸ್ಪರ ನಾಮಫ‌ಲಕ ತೆರವು: ತಹಶೀಲ್ದಾರ್‌ ಕೊಠಡಿಗೆ ಗೀತಾ ಅವರ ಹೆಸರಿನಲ್ಲಿ ಹಾಕಿದ್ದ ನಾಮಫ‌ಲಕವನ್ನು ಸೆ.13ರ ಬೆಳಗ್ಗೆ ತೆರವು ಮಾಡಿ ಮಧ್ಯಾಹ್ನದ ವರೆಗೆ ಗೋವಿದಂರಾಜು ಕಡತಗಳಿಗೆ ಸಹಿ ಹಾಕಿ ವಿಲೇವಾರಿ ಮಾಡಿ ನಂತರ ಬೆಂಗಳೂರಿಗೆ ತೆರಳಿದರು. ಮಧ್ಯಾಹ್ನ ಮೇಲೆ ಕಚೇರಿಗೆ ಆಗಮಿಸಿ ಕುರ್ಚಿಯಲ್ಲಿ ಕುಳಿತ ಗೀತಾ ಅವರು ಗೋವಿಂದರಾಜು ನಾಮಫ‌ಲಕ ತೆರವು ಮಾಡಿ ಸಂಜೆ ಆರು ಗಂಟೆ ವರೆಗೆ ಸೇವೆ ಸಲ್ಲಿಸಿ ಕಚೇರಿಯಿಂದ ತೆರಳಿದರು.

ನಾನೇ ತಹಶೀಲ್ದಾರ್‌: ಅದೇ ದಿನ ಬೆಂಗಳೂರಿನಿಂದ ರಾತ್ರಿ 7.30ಕ್ಕೆ ವಿಧಾನಸೌದಕ್ಕೆ ಆಗಮಿಸಿ ಗಿತಾ ಅವರ ನಾಮಫ‌ಲಕ ತೆರವು ಮಾಡಿ ಕರ್ತವ್ಯಕ್ಕೆ ಹಾಜರಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದ ಆದೇಶದ ಪ್ರಕಾರ ನಾನೇ ತಹಶೀಲ್ದಾರ್‌ ಕುರ್ಚಿಯಲ್ಲಿ ಮುಂದುವರೆಯುತ್ತೇನೆ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಘಟನೆಗಳ ಮುಖಂಡರಿಗೆ ಗೋವಿಂದರಾಜು ತಿಳಿಸಿದ್ದರು.

ಕಡತ ವಿಲೇವಾರಿ, ಸನ್ಮಾನ ಸ್ವೀಕಾರ: ಸೆ.14 ರಂದು ಬೆಳಗ್ಗೆ ಸರ್ಕಾರಿ ವಾಹನದಲ್ಲಿ ಕಚೇರಿಗೆ ಆಗಮಿಸಿ ಮಧ್ಯಾಹ್ನದ ವರೆಗೆ ಗೋವಿಂದರಾಜು ಕರ್ತವ್ಯ ನಿರ್ವಹಿಸಿ ಕಡತ ವಿಲೇವಾರಿ ಮಾಡಿದರು. ಮಧ್ಯಾಹ್ನ ದೂರವಾಣಿ ಕರೆ ಬಂದ ತಕ್ಷಣ ಕಚೇರಿಯಿಂದ ಹೊರ ನಡೆದರು. ಈ ವೇಳೆ ಸರ್ಕಾರಿ ವಾಹನದಲ್ಲಿ ತೆರಳದೆ ಖಾಸಗಿ ವಾಹನದಲ್ಲಿ ತೆರಳಿದರು. ಕಡತ ವಿಲೇವಾರಿ ಮಾಡಿದ ಗೀತಾ: ಸೆ.15 ರಂದು ಬೆಳಗ್ಗೆ ಸರ್ಕಾರಿ ವಾಹನದಲ್ಲಿ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಗೀತಾ ಕರ್ತವ್ಯಕ್ಕೆ ಹಾಜರಾಗಿ, ಗ್ರೇಡ್‌ 2 ತಹಶೀಲ್ದಾರ್‌, ಉಪ ತಹಶೀಲ್ದಾರ್‌, ಶಿರಸ್ತೇದಾರ, ಕಂದಾಯ ನಿರೀಕ್ಷಕರು, ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪಾಲ್ಗೊಂಡು ಸಂವಿಧಾನ ಪೀಠಿಕೆ ವಾಚನ ಮಾಡಿದರು. ಸಂಜೆವರೆಗೆ ಕಡತಗಳಿಗೆ ಸಹಿ ಮಾಡಿ ವಿಲೇವಾರಿ ಮಾಡಿದ್ದಲ್ಲದೇ ಸಂಜೆ 4 ಗಂಟೆಗೆ ಆರು ಹೋಬಳಿಯ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಸಭೆ ಮಾಡಿದ್ದಾರೆ.

ನಿತ್ಯವೂ ಒಬ್ಬೊಬ್ಬರು ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಿದರೆ ರೈತರು, ಸಾರ್ವಜನಿಕರಿಗೆ ಆಗುವ ತೊಂದರೆಗೆ ಯಾರು ಜವಾಬ್ದಾರರು? ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಅಧಿಕೃತವಾಗಿ ಒಬ್ಬರಿಗೆ ತಹಶೀಲ್ದಾರ್‌ ಜವಾಬ್ದಾರಿ ನೀಡಲಿ. –ಸಿ.ಜೆ.ರವಿ, ರೈತ ಸಂಘ ತಾಲೂಕು ಅಧ್ಯಕ

– ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

1-kamakhya

Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ

AANE 2

Elephant; ರಾಜ್ಯದಲ್ಲಿ 9 ತಿಂಗಳಲ್ಲಿ 59 ಆನೆ ಸಾ*ವು

Zakir Naik

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

HDK (4)

Fear..!; ಲಕ್ಷ ಸಿದ್ದು ಬಂದರೂ ಹೆದರೆನು: ಕುಮಾರಸ್ವಾಮಿ ತಿರುಗೇಟು

1-ahmad

Maharashtra; ಅಹ್ಮದ್‌ನಗರ ಇನ್ನು ಮುಂದೆ ‘ಅಹಿಲ್ಯಾನಗರ’

Donald-Trumph

Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್‌ಗೆ ಟ್ರಂಪ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivalinge-Gowda

CM ಸಿದ್ದರಾಮಯ್ಯ ರಾಜೀನಾಮೆ ಸಲ್ಲದು; ಶಾಸಕ ಶಿವಲಿಂಗೇಗೌಡ

5-hasan

Hasana:ಅನಾರೋಗ್ಯ: 3 ದಿನಗಳಿಂದ ನಿಂತಲ್ಲೇ ನಿಂತಿದ್ದ ಕಾಡಾನೆ ಸಾವು

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

11

Hasan: 100 ರೂ.ಗೆ ಸ್ನೇಹಿನನ್ನೇ ಹತ್ಯೆಗೈದ ಕಿರಾತಕರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

1-kamakhya

Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ

AANE 2

Elephant; ರಾಜ್ಯದಲ್ಲಿ 9 ತಿಂಗಳಲ್ಲಿ 59 ಆನೆ ಸಾ*ವು

Zakir Naik

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

HDK (4)

Fear..!; ಲಕ್ಷ ಸಿದ್ದು ಬಂದರೂ ಹೆದರೆನು: ಕುಮಾರಸ್ವಾಮಿ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.