![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 1, 2021, 4:43 PM IST
ಡಿ.ಎಂ.ಕುರ್ಕೆ: ಹೆಸರಿಗಷ್ಟೇ ಆಸ್ಪತ್ರೆ. ಆದರೆ, ವೈದ್ಯರು ನಾಪತ್ತೆ ಎಂಬ ಪರಿಸ್ಥಿತಿ ಅರಸೀಕೆರೆ ತಾಲೂಕು ದೊಡ್ಡಮೇಟಿ ಕುರ್ಕೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ್ದು. ವೈದ್ಯಾಧಿಕಾರಿ ಡಾ.ರಾಮಚಂದ್ರ ಅವರು ವಾರದಲ್ಲಿ ಒಂದೆರಡು ದಿನ ಆರೋಗ್ಯ ಕೇಂದ್ರಕ್ಕೆ ಬಂದು ಹಾಜರಾತಿ ಪುಸ್ತಕಕ್ಕೆ ಮುಂಗಡವಾಗಿ ಸಹಿ ಹಾಕಿ ನಾಪತ್ತೆಯಾಗುತ್ತಾರೆ!
ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ ಎಂಬುದನ್ನು ಬಿಟ್ಟರೆ ಸಾರ್ವಜನಿಕರಿಗೆ ಪ್ರಯೋಜನವೇನೂ ಆಗುತ್ತಿಲ್ಲ. ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಹೋಗುವ ಸಾರ್ವಜನಿಕರು ವೈದ್ಯರಿಲ್ಲದೆ ಶುಶ್ರೂಷಕರು ಅಥವಾ ಅಲ್ಲಿನ ನೌಕರರನ್ನು ನೋಡಿ ವಾಪಸ್ಸಾಗಬೇಕಾಗಿದೆ. ದೊಡ್ಡಮೇಟಿ ಕುರ್ಕೆ ಬಹುದೊಡ್ಡ ಗ್ರಾಮ. ಸುತ್ತ ಮುತ್ತಲ ಹತ್ತಾರು ಹಳ್ಳಿಗಳಿಗೆ ಇದೊಂದೇ ಪ್ರಾಥಮಿಕ ಆರೋಗ್ಯ ಕೇಂದ್ರ. ವ್ಯಾಪಾರ ವಹಿವಾಟಿಗಾಗಿ
ಸಾವಿರಾರು ಜನ ಈ ಗ್ರಾಮಕ್ಕೆ ಬಂದು ಹೋಗುತ್ತಾರೆ. ಇಲ್ಲಿ ವೈದ್ಯರು ಸಿಗದಿದ್ದರಿಂದ ಅನಿವಾರ್ಯವಾಗಿ ಅರಸೀಕೆರೆಗೆ ಹೋಗಬೇಕಾಗಿದೆ.
ಇದನ್ನೂ ಓದಿ:ಹೆಲಿಕಾಪ್ಟರ್ನಲ್ಲಿ ನೇತಾಡಿದ್ದು ಹೆಣವಲ್ಲ; ತಾಲಿಬಾನ್ ಉಗ್ರನೇ ಜೋತುಬಿದ್ದಿದ್ದ
ಆಸ್ಪತ್ರೆಯಲ್ಲಿ ವೈದ್ಯರಿರಲಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಈ ಬಗ್ಗೆ ಗಮನ ಹರಿಸಿ ವೈದ್ಯಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಪ್ರತಿದಿನವೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿರುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆಸ್ಪತ್ರೆಯಿಂದ ಪ್ರಯೋಜನವಿಲ್ಲ
ವೈದ್ಯರ ಗೈರು ಹಾಜರಿ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೂ ದೂರು ಹೋಗಿದೆ. ಆದರೆ, ಕ್ರಮ ತೆಗೆದು ಕೊಂಡಿಲ್ಲ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ವೈದ್ಯರೇ ಬರುವುದಿಲ್ಲ. ಬರುವ ವೈದ್ಯರೂ ಈ ರೀತಿ ಬೇಕಾಬಿಟ್ಟಿ ನಡೆದು ಕೊಳ್ಳುವುದಾದರೆ ಆಸ್ಪತ್ರೆಗಳಿದ್ದರೇನು ಪ್ರಯೋಜನ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
-ಮಾಡಾಳು ಸೋಮಣ್ಣ
R. Ashok: ನವೆಂಬರ್ ಬಳಿಕ ಕಾಂಗ್ರೆಸ್ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
You seem to have an Ad Blocker on.
To continue reading, please turn it off or whitelist Udayavani.