![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 17, 2019, 12:11 PM IST
ಹಳೇಬೀಡು ಪಟ್ಟಣದ ಸಮೀಪದ ಬಂಡಾರಿಕಟ್ಟೆ ಬಳಿ ಇರುವ ಬಯಲು ರಂಗಮಂದಿರ ಬಳಿ ಮೇವು ಕೇಂದ್ರದಲ್ಲಿ ಮೇವುತುಂಬುತ್ತಿರುವ ರೈತರು.
ಹಳೇಬೀಡು: ಮುಂಗಾರು ಕೈಕೊಟ್ಟಿ ರುವ ಹಿನ್ನೆಲೆಯಲ್ಲಿ ಹೋಬಳಿಯಲ್ಲಿ ಮೇವಿನ ಕೊರತೆಯಾಗಿದ್ದು, ರೈತರು ಮೇವು ಪಡೆಯಲು ದಿನನಿತ್ಯ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕು ಆಡಳಿತ ಹೋಬಳಿಯ ನಾಡ ಕಚೇರಿಗಳ ಅಧಿಕಾರಿಗಳ ಮುಖಾಂತರ ಪ್ರತಿ ಹಳ್ಳಿಗಳ ರೈತರ ರಾಸುಗಳಿಗೆ ಪ್ರತಿನಿತ್ಯ ಪ್ರತಿನಿತ್ಯ ಐದು ಲಾರಿ ಮೇವನ್ನು ಐದು ಗ್ರಾಮ ಪಂಚಾ ಯಿತಿಗೆ ಒದಗಿಸುತ್ತಿದ್ದರೂ ಸಾಲುತ್ತಿಲ್ಲ.
2 ರೂ.ಗೆ ಕೇಜಿ ಮೇವು ವಿತರಣೆ: ತಾಲೂಕು ಆಡಳಿತ ದಿಂದ ತಲಾ ಐದು ಹೋಬಳಿಗೆ ಒಂದು ಮೇವು ಕೇಂದ್ರ ತರೆದಿದೆ. ರೈತರು ಹೊಂದಿರುವ ಪ್ರತಿ ರಾಸಿಗೆ ತಲಾ 5 ಕೇಜಿ ಮೇವನ್ನು ಹಳೇ ಬೀಡು, ಗೋಣಿಸೋಮನಹಳ್ಳಿ, ರಾಜನಶಿರಿಯೂರು, ಚಟಚಟ್ಟಿಹಳ್ಳಿ ಯಲಹಂಕ ಗ್ರಾಮ ಪಂಚಾಯಿತಿ ಗಳಿಗೆ ವಿತರಿಸಲಾಗುತ್ತಿದೆ.
ಒಂದೊಂದು ಗ್ರಾಪಂನಲ್ಲಿ ಬಹುತೇಕ ರೈತರೇ ಇದ್ದಾರೆ. ಒಂದೊಂದು ಕುಟುಂಬವು ಮೂರರಿಂದ ನಾಲ್ಕು ದನಕರುಗಳನ್ನು ಹೊಂದಿದ್ದು, ತಾಲೂಕು ಆಡಳಿತ ನೀಡುತ್ತಿರುವ ಮೇವು ಒಂದು ದಿನಕ್ಕೆ ಒಂದು ಗ್ರಾಮ ಪಂಚಾಯಿತಿಗೆ ಮಾತ್ರ ಸಾಕಾಗುತ್ತದೆ. ಹೀಗಾಗಿ ಮೇವು ಕೊರತೆ ಉಂಟಾಗಿ ದಿನವಿಡಿ ಮೇವಿಗಾಗಿ ರೈತರು ಕೆಲಸ ಕಾರ್ಯ ಬಿಟ್ಟು ಕಾಯ ಬೇಕಾಗಿದೆ.
ಐದು ಟನ್ ಮೇವು ಕೊರತೆ: ತಾಲೂಕಿ ನಾದ್ಯಂತ ಮುಂಗಾರು ಕೈಕೊಟ್ಟಿದ್ದು, ಸರಿಯಾಗಿ ಮಳೆಯಾಗದೇ ಬಿತ್ತನೆ ಕಾರ್ಯ ವಿಳಂಬವಾಗಿದೆ. ಮುಂದೆಯೂ ದನಕರುಗಳಿಗೆ ಮೆವು ಕೊರತೆ ಎದು ರಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ದಿನಿತ್ಯ ರೈತರು ಮೇವು ಪಡೆಯಲು ಬೆಳಗ್ಗೆ 8 ಗಂಟೆಗೆ ಮೇವು ವಿತರಣೆ ಕೇಂದ್ರಕ್ಕೆ ಬಂದು ಕಾದು ಕುಳಿತಿರುತ್ತಾರೆ. ಮೇವು ಕಡಿಮೆ ಬಂದಿರುವುದು ಗೊತ್ತಾದ ತಕ್ಷಣ ಮೇವು ಪಡೆಯಲು ದುಂಬಾಲು ಬಿದ್ದು ಮೇವಿಗಾಗಿ ಕಿತ್ತಾಡುವ ವಾತಾ ವರಣ ನಿರ್ಮಾಣವಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ 5 ಲಾರಿ ಮೇವು ಅಗತ್ಯವಾಗಿದೆ.
ಜಾನುವಾರುಗಳ ಅನುಕೂಲಕ್ಕಾಗಿ ತಾಲೂಕು ಆಡಳಿತ ಇನ್ನೂ ಎರಡು ತಿಂಗಳು ಮೇವು ವಿತರಣೆ ಮಾಡಬೇಕು ಎಂದು ಮಾಯಗೊಂಡನಹಳ್ಳಿ ರೈತರು ಒತ್ತಾಯಿಸಿದ್ದಾರೆ.
R. Ashok: ನವೆಂಬರ್ ಬಳಿಕ ಕಾಂಗ್ರೆಸ್ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.