ಪುರಸಭೆ ವ್ಯಾಪ್ತಿ ಮನೆಗಳಿಗೆ ಹರಿಯದ ಹೇಮೆ!


Team Udayavani, Jul 18, 2022, 3:08 PM IST

tdy-16

ಚನ್ನರಾಯಪಟ್ಟಣ: ಪುರಸಭೆ ವ್ಯಾಪ್ತಿಯ ಮೂರನೇ ಹಂತದ ಕುಡಿಯುವ ನೀರಿನ ಯೋಜನೆ 42.72ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದ್ದರು ಪಟ್ಟಣದ 23 ವಾರ್ಡ್‌ಗಳಿಗೂ ನೀರು ಪೂರೈಕೆ ಆಗುತ್ತಿಲ್ಲ.

ಪಟ್ಟಣದಿಂದ 16 ಕಿ.ಮೀ. ದೂರಘನ್ನಿ ಸಮೀಪ ಹೇಮಾವತಿ ಹೊಳೆಯಿಂದ ನೀರು ತಂದು ಹೌಸಿಂಗ್‌ಬೋರ್ಡ್‌ ಸಮೀಪ ಶುದ್ಧೀಕರಣ ಮಾಡಿ ಬೆಲಸಿಂದ ಶ್ರೀ ವನದಲ್ಲಿ ಸುಮಾರು 50 ಲಕ್ಷ ಲೀಟರ್‌ ಸಾಮರ್ಥ್ಯದ ಜಲಸಂಗ್ರಾಹಾರದಲ್ಲಿ ಶೇಖರಣೆ ಮಾಡಿ ಕೆಲ ಮನೆಗಳಿಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ, ಹೊರತು ಪುರಸಭೆಯ 23 ವಾರ್ಡಿನ ಮನೆಗಳಿಗೆ ನೀರು ಸರಬ ರಾಜು ಮಾಡಲಾಗುತ್ತಿಲ್ಲ.

ಮನೆಗಳಿಗೆ ಬಾರದ ನೀರು: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಈಯೋಜನೆ ಪೂರ್ಣ ಗೊಂಡು ಪುರಸಭೆಗೆ ಹಸ್ತಾತರಮಾಡಲಾಗಿದೆ. ರಾಜ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಮಂತ್ರಿ ಎಚ್‌.ಡಿ.ರೇವಣ್ಣ ಹಾಗೂ ಶಾಸಕ ಸಿ.ಎನ್‌.ಬಾಲಕೃಷ್ಣಮೂರನೇ ಹಂತದ ಕುಡಿಯುವ ನೀರಿ ಯೋಜನೆಲೋಕಾರ್ಪಣೆ ಮಾಡಿದರು. ಆದರೂ ಪುರಸಭೆಯ ವ್ಯಾಪ್ತಿಯ ಎಲ್ಲ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿಲ್ಲ.

ವಾರ್ಡ್‌ಗಳಿಗೆ ಪೈಪ್‌ಲೈನ್‌ ಅಳವಡಿಸಿಲ್ಲ: ಮೂರನೇ ಹಂತದ ಕುಡಿಯುವ ನೀರಿನಯೋಜನೆಗೆ ಸಂಬಂಧಿಸಿದಂತೆ ಪುರಸಭೆಯ 23 ವಾರ್ಡ್‌ನಲ್ಲಿ ಪೈಪ್‌ಲೈನ್‌ ಅಳವಡಿಕೆ ಕಾರ್ಯಮಾಡದೆ ಇರುವುದರಿಂದ ಕೆಲ ವಾರ್ಡ್‌ಗಳಿಗೆಮಾತ್ರ ನೀರು ಪೂರೈಕೆ ಆಗುತ್ತಿದೆ. ಉಳಿದಂತೆಉದಯಗಿರಿ ಬಡಾವಣೆ, ಗೂರನಹಳ್ಳಿ,ಶಾರದಾನಗರ, ಗೂರುಮಾರನಹಳ್ಳಿ, ಶಾಂತಿನಗರ,ಕೆಇಬಿ ಕಾಲೋನಿ, ಕಲ್ಯಾಣಿ ನಗರ, ಸಂಗೊಳ್ಳಿ ರಾಯಣ್ಣ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗೆ ಹೇಮಾವತಿ ನೀರು ತಲುಪುತ್ತಿಲ್ಲ.

ಹಳೇ ಪೈಪ್‌ ಲೈನ್‌ನಲ್ಲಿ ನೀರು ಹರಿಯುತ್ತಿದೆ: ಹೊಸದಾಗಿ ಪೈಪ್‌ಲೈನ್‌ ಮಾಡದೆ ಇರುವುದರಿಂದಪುರಸಭೆ ವ್ಯಾಪ್ತಿ ಹಳೆಯ ಪೈಪ್‌ಲೈನ್‌ ಮೂಲಕ ಕೆಲವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ನೀರು ಪೂರೈಕೆ ಆಗದೆ ಕೆಲ ವಾರ್ಡ್ ನಲ್ಲಿ ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ.

5 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌: ಮೂರನೇ ಹಂತದ ಕುಡಿಯುವ ನೀರನ್ನು ಪುರಸಭೆಯ 23 ವಾರ್ಡ್‌ಗಳಿಗೆ ಸರಬರಾಜು ಮಾಡಲು 2019ರಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿಮಂಡಳಿ ಟೆಂಡರ್‌ ಮಾಡಿ ದ್ದು ಮೂರು ವರ್ಷವಾದರೂ ಕಾಮಗಾರಿ ಸಂಪೂರ್ಣ ಮಾಡುವಲ್ಲಿ ಇಲಾಖೆ ವಿಫ‌ಲವಾಗಿದೆ.

ಪುರಸಭೆಯಿಂದ ನಿರ್ವಹಣೆ: ಹೇಮಾವತಿ ನದಿ ತೀರದಲ್ಲಿನ ನೂತನ ಯಂತ್ರಗಾರ, 4 ವಸತಿಗೃಹ,ಹೌಸಿಂಗ್‌ ಬೋರ್ಡ್‌ನಲ್ಲಿ ನಿರ್ಮಿಸಿರುವ 170 ಲಕ್ಷಲೀಟರ್‌ ನೀರು ಶುದ್ಧೀಕರಣ ಘಟಕ, 5 ಲಕ್ಷ ಲೀಟರ್‌ಮೇಲಂತಸ್ಥಿನ ಜಲಸಂಗ್ರಹಾರ, 8 ವಸತಿಗೃಹ, 15 ಲಕ್ಷಲೀಟರ್‌ ನೆಲಹಂತದ ಜಲಸಂಗ್ರಹಗಾರ, ಬೆಲಸಿಂದಶ್ರೀವನದಲ್ಲಿರುವ ನೆಲಸಮದ 50 ಲಕ್ಷ ಲೀಟರ್‌ಜಲಸಂಗ್ರಹಾರ, 2.50 ಲಕ್ಷ ಲೀಟರ್‌ ನೀರುಶೇಖರಣಾ ಟ್ಯಾಂಕ್‌ ಹಾಗೂ ಸಿಬ್ಬಂದಿಗೆ 4 ವಸತಿಗೃಹನಿರ್ಮಾಣ ಮಾಡಿರುವುದನ್ನು ಪುರಸಭೆ ನಿರ್ವಹಣೆ ಮಾಡುತ್ತಿದೆ.

30 ವರ್ಷದವರೆಗೆ ಅನುಕೂಲ: 16 ಕಿಮೀ ದೂರದಿಂದ ಪೈಪ್‌ಲೈನ್‌ ಮೂಲಕ ಹೇಮಾವತಿ ನದಿಯಿಂದ ಬೆಲಸಿಂದ ಶ್ರೀವನದ ವರೆಗೆ ನೀರು ತರಲಾಗುತ್ತಿದೆ. ಈ ಯೋಜನೆ ಮುಂದಿನ 30 ವರ್ಷದವರೆಗೆ ನಗರದಲ್ಲಿ ಸುಮಾರು 1.25 ಲಕ್ಷ ಜನರಿಗೆ ದೊರೆಯಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡ ಳಿ ಸಹಾಯಕ ಅಭಿಯಂತರ ಸುನಿಲ್‌ ಉದಯವಾಣಿಗೆ ಮಾಹಿತಿ ನೀಡಿದರು.

3ನೇ ಹಂತದ ಯೋಜನೆ ಸಿದ್ಧ: ಪ್ರತಿ ನಿತ್ಯ 8 ತಾಸು ಯಂತ್ರ ಚಾಲನೆ ಮಾಡಿದರೆ ನಗರದಲ್ಲಿನ ಎಲ್ಲ ಮನೆಗಳಿಗೆ ಪೈಪ್‌ ಮೂಲಕ ಯಾವುದೇ ಯಂತ್ರ ಬಳಸದೆದಿನದ 24 ತಾಸು ನೀರು ಹರಿಸಬಹುದು. ಆ ಮಾದರಿಯಲ್ಲಿ ಮೂರನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆ ತಯಾರಾಗಿದೆ ಎಂದು ಮಾಹಿತಿ ನೀಡಿದರು.

ಮೂರನೇ ಹಂತದ ಕುಡಿಯುವ ನೀರು ಪುರಸಭೆ ವ್ಯಾಪ್ತಿಯಲ್ಲಿ ಹಲವುವಾರ್ಡ್‌ಗೆ ಕಳೆದ ಒಂದು ವರ್ಷದಿಂದಸರಬರಾಜು ಮಾಡಲಾಗುತ್ತಿದೆ. ನಾವುಮಾತ್ರ ಕೊಳವೆ ಬಾವಿ ನೀರುಕುಡಿಯುವುದು ತಪ್ಪಿಲ್ಲ. ಈ ಬಗ್ಗೆ ಪುರಸಭೆಅಧಿಕಾರಿಗಳನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಮುಂದಿನ 30ವರ್ಷದವರೆಗೆ ಪುರಸಭೆ ವ್ಯಾಪ್ತಿಯಲ್ಲಿನೀರಿನ ಸಮಸ್ಯೆ ಉಂಟಾಗದ ರೀತಿ ಯೋಜನೆ ಮಾಡಿದ್ದೇವೆ ಎನ್ನುವ ಸರ್ಕಾರನಗರ ವ್ಯಾಪ್ತಿಗೆ ಯಾಕೆ ಸಂಪೂರ್ಣಹೇಮಾವತಿ ನೀರು ಹರಿಸ ಲಾಗುತ್ತಿಲ್ಲ.-ರೇಣುಕುಮಾರ್‌,ಗೂರನಹಳ್ಳಿ ಬಡಾವಣೆ ನಿವಾಸಿ

ಪುರಸಭೆ 23 ವಾರ್ಡ್‌ನ ಮನೆಗೆ ಹೇಮಾವತಿ ಹೊಳೆಯ ನೀರುಹರಿಸಲು ಅಗತ್ಯ ಪೈಪ್‌ಲೈನ್‌ ಅಳವಡಿಕೆಗೆ ನಗರ ನೀರು ಸರಬರಾಜು ಮತ್ತುಒಳಚರಂಡಿ ಮಂಡಳಿ ಟೆಂಡರ್‌ ಪ್ರಕ್ರಿಯೆ ಮಾಡು ವುದಾಗಿ ತಿಳಿಸಿದೆ. 6 ತಿಂಗಳ ಒಳಗೆಎಲ್ಲ ವಾರ್ಡ್‌ಗೆ ಹೇಮೆ ನೀರು ಸರಬರಾಜು ಮಾಡಲಾಗುವುದು, ಈಗ ಪೈಪ್‌ಲೈನ್‌ ಇರುವ ಕಡೆಗೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.-ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ

-ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

11

Hasan: 100 ರೂ.ಗೆ ಸ್ನೇಹಿನನ್ನೇ ಹತ್ಯೆಗೈದ ಕಿರಾತಕರು

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

ಸರಕಾರದ ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

State Govt ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

A vehicle caught fire at Shiradi Ghat

Shiradi ಘಾಟ್‌ನಲ್ಲಿ ವಾಹನ ಬೆಂಕಿಗೆ ಆಹುತಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.