ಹಾಮೂಲ್‌ನಿಂದ ಹಾಲು ಖರೀದಿ ದರ 29 ರೂ.ಗೆ ಏರಿಕೆ


Team Udayavani, Jan 2, 2020, 3:00 AM IST

hamulninda

ಹಾಸನ: ಎರಡು ವಾರಗಳ ಹಿಂದಷ್ಟೇ ಹಾಲು ಖರೀದಿ ದರವನ್ನು ಲೀಟರ್‌ಗೆ ಒಂದು ರೂ. ಹೆಚ್ಚಳ ಮಾಡಿದ್ದ ಹಾಸನ ಹಾಲು ಒಕ್ಕೂಟವು (ಹಾಮೂಲ್‌) ಮತ್ತೆ ತಕ್ಷಣದಿಂದಲೇ ಹಾಲು ಖರೀದಿ ದರವನ್ನು ಲೀಟರ್‌ಗೆ 1.50 ರೂ. ಹೆಚ್ಚಳ ಮಾಡಿ ಹಾಲು ಉತ್ಪಾದಕರಿಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಹಾಲು ಖರೀದಿ ದರ ಹೆಚ್ಚಳದ ವಿವರ ನೀಡಿದ ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು, ಈಗ ಹಾಸನ ಹಾಲು ಒಕ್ಕೂಟವು ಪ್ರತಿ ಲೀಟರ್‌ಗೆ ಹಾಲಿಗೆ 29 ರೂ. ದರವನ್ನು ಹಾಲು ಉತ್ಪಾದಕರಿಗೆ ನೀಡುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲಿನ ದರ ನೀಡುತ್ತಿದೆ ಎಂದು ತಿಳಿಸಿದರು.

40 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆ: ಮುಂದಿನ ಮಾರ್ಚ್‌ ಅಂತ್ಯಕ್ಕೆ ಹಾಸನ ಹಾಲು ಒಕ್ಕೂಟವು 40 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆಯಿದೆ. ಈ ಹಿನ್ನಲೆಯಲ್ಲಿ ಲಾಭಾಂಶವನ್ನು ಹಾಲು ಉತ್ಪಾದಕರಿಗೇ ಹಂಚಲು ನಿರ್ಧರಿಸಿದೆ. ಮಾರ್ಚ್‌ ಅಂತ್ಯದವರೆಗೂ ಪ್ರತಿ ಲೀಟರ್‌ಗೆ 29 ರೂ. ನೀಡುವುದರಿಂದ 25 ಕೋಟಿ ರೂ. ಹೆಚ್ಚುವರಿಯಾಗಿ ಹಾಲು ಉತ್ಪಾದಕರಿಗೆ ಪಾವತಿ ಮಾಡಿದಂತಾಗುತ್ತದೆ. ಆದರೂ ಈ ಆರ್ಥಿಕ ವರ್ಷಾಂತ್ಯಕ್ಕೆ ಅಂದರೆ ಮಾರ್ಚ್‌ ಅಂತ್ಯದ ವೇಳೆಗೆ ಒಕ್ಕೂಟವು 15 ಕೋಟಿ ರೂ. ನಿವ್ವಳ ಲಾಭ ಪಡೆಯಲಿದೆ ಎಂದರು.

ವಾರ್ಷಿಕ 1,500 ಕೋಟಿ ರೂ. ವಹಿವಾಟು: ಹಾಸನ ಹಾಲು ಒಕ್ಕೂಟವು ಈಗ ಪ್ರತಿದಿನ ಸುಮಾರು 9 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿದ್ದು, ಅದರಲ್ಲಿ 1.50 ಲಕ್ಷ ಲೀಟರ್‌ನ್ನು ಮಾತ್ರ ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಇನ್ನುಳಿದ 7.50 ಲಕ್ಷ ಲೀಟರ್‌ನ್ನು ಹಾಲಿನ ವಿವಿಧ ಉತ್ಪನ್ನಗಳಿಗೆ ಪರಿವರ್ತನೆ ಮಾಡಲಾಗುತ್ತಿದೆ. ಯುಎಚ್‌ಟಿ ಹಾಲು, ಹಾಲಿನಪುಡಿ, ಬೆಣ್ಣೆ, ತುಪ್ಪ, ಐಸ್‌ಕ್ರೀಂ ಮತ್ತಿತರ ಉತ್ಪನ್ನಗಳಿಗೆ ಪರಿವರ್ತನೆ ಮಾಡುವುದರಿಂದ ವೆಚ್ಚ ಅಧಿಕ. ಆದರೂ ಹಾಸನ ಹಾಲು ಒಕ್ಕೂಟವು ಲಾಭದಲ್ಲಿ ನಡೆಯುತ್ತಿದ್ದು, ವಾರ್ಷಿಕ 1,500 ಕೋಟಿ ರೂ. ವಹಿವಾಟು ನಡೆಸುತ್ತಿದೆ ಎಂದರು ತಿಳಿಸಿದರು.

ಕಲ್ಯಾಣ ಕಾರ್ಯಕ್ರಮಗಳು: ಹಾಲು ಉತ್ಪಾದಕರಿಗೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನೂ ಹಾಸನ ಹಾಲು ಒಕ್ಕೂಟವು ಹಮ್ಮಿಕೊಂಂಡಿದೆ. 30 ಸಾವಿರ ಹಾಲು ಉತ್ಪಾದಕರಿಗೆ ವಿಮೆ, 50 ಸಾವಿರ ಹೈನು ರಾಸುಗಳನ್ನು ವಿಮೆಗೆ ಒಳಪಡಿಸುತ್ತಿದ್ದು, ವಿಮಾ ಕಂತಿನ ಶೇ.60 ರಷ್ಟನ್ನು ಹಾಲು ಒಕ್ಕೂಟವೇ ಭರಿಸಲಿದ್ದು, ಫ‌ಲಾನುಭವಿ ಶೇ.40 ರಷ್ಟು ಕಂತು ಪಾವತಿ ಮಾಡುವ ಕಾರ್ಯಕ್ರಮ ರೂಪಿಸಿದೆ. ಹಾಲು ಉತ್ಪಾದಕರು ಅಕಾಲಿಕ ಮರಣಕ್ಕೆ ತುತ್ತಾದರೆ 2 ಲಕ್ಷ ರೂ. ಹೈನು ರಾಸು ಸಾವನ್ನಪ್ಪಿದರೆ 50 ಸಾವಿರ ರೂ. ವಿಮೆ ಮೊತ್ತ ಸಿಗಲಿದೆ. ಈ ಕಾರ್ಯಕ್ರಮಕ್ಕೆ ಹಾಸನ ಹಾಲು ಒಕ್ಕೂಟವು ವಾರ್ಷಿಕ 4 ಕೋಟಿ ರೂ. ಅನುದಾನ ನೀಡುತ್ತದೆ ಎಂದು ರೇವಣ್ಣ ವಿವರಿಸಿದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಅವರೂ ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಹಾಲು ಒಕ್ಕೂಟಗಳು ನಿಗದಿಪಡಿಸಿರುವ ಹಾಲು ಖರೀದಿ ದರದ ವಿವರ
ಕ್ರ.ಸಂ. ಒಕ್ಕೂಟಗಳು ಒಕ್ಕೂಟದಿಂದ ಸಂಘಕ್ಕೆ ಹಾಲು ಉತ್ಪಾದಕರಿಗೆ
1. ಹಾಸನ 31.79 ರೂ. 29.00 ರೂ.
2. ಬೆಂಗಳೂರು 29.30 ರೂ. 28.00 ರೂ.
3. ಕೋಲಾರ 27.00 ರೂ. 25.00 ರೂ.
4. ಮೈಸೂರು 27.65 ರೂ. 25.50 ರೂ.
5. ಮಂಡ್ಯ 29.40 ರೂ. 28.50 ರೂ.
6. ತುಮಕೂರು 26.73 ರೂ. 26.00 ರೂ.
7. ಶಿವಮೊಗ್ಗ 30.50 ರೂ. 28.50 ರೂ.
8. ದಕ್ಷಿಣ ಕನ್ನಡ 29.57 ರೂ. 28.67 ರೂ.
9 ಧಾರವಾಡ 24.35 ರೂ 23.25 ರೂ.
10 ಬೆಳಗಾವಿ 25.50 ರೂ. 24.00 ರೂ.
11. ವಿಜಯಪುರ 26.15 ರೂ. 24.00 ರೂ.
12 ಬಳ್ಳಾರಿ 25.70 ರೂ. 23.50 ರೂ.
13. ಕಲಬುರ್ಗಿ 25.30 ರೂ 24.60 ರೂ.
14 ಚಾಮರಾಜನಗರ 27.65 ರೂ. 25.50 ರೂ.

ದಕ್ಷಿಣ ಭಾರತದ ಮೊದಲ ಪೆಟ್‌ ಬಾಟಲ್‌ ಘಟಕ ನಿರ್ಮಾಣ
ಹಾಸನ: ಯುಎಚ್‌ಟಿ ಹಾಲಿನ ಉತ್ಪಾದನಾ ಘಟಕವನ್ನು ಹಾಸನ ಡೇರಿ ವಿಸ್ತರಿಸಿದ್ದು, ಪ್ರತಿ ದಿನ 2 ಲಕ್ಷ ಲೀಟರ್‌ನಿಂದ 4 ಲಕ್ಷ ಲೀಟರ್‌ ಯುಎಚ್‌ಟಿ ಹಾಲು ಸಂಸ್ಕರಣಾ ಘಟಕವು ಗುರುವಾರದಿಂದ ಕಾರ್ಯಾರಂಭ ಮಾಡಲಿದೆ. 6 ತಿಂಗಳವರೆಗೂ ಹಾಳಾಗದಂತೆ ಸಂಸ್ಕರಿಸಿ ಟೆಟ್ರಾಪ್ಯಾಕ್‌ಗಳಲ್ಲಿ ಹಾಲನ್ನು ಮಾರಾಟ ಮಾಡುವ ಯುಎಚ್‌ಟಿ ವಿಸ್ತರಣಾ ಘಟಕಕ್ಕೆ 100 ಕೋಟಿ ರೂ ವೆಚ್ಚವಾಗಿದ್ದು, ಉತ್ತರದ ಜಮ್ಮು – ಕಾಶ್ಮೀರ, ಈಶಾನ್ಯರಾಜ್ಯಗಳು ಹಾಗೂ ಭಾರತೀಯ ಸೈನ್ಯಕ್ಕೂ ಹಾಸನ ಹಾಲು ಒಕ್ಕೂಟವು ಯುಎಚ್‌ಟಿ ಹಾಲನ್ನು ಪೂರೈಸಲಿದೆ.

ಹಾಸನ ಹಾಲು ಒಕ್ಕೂಟ ಪ್ರಾರಂಭಿಸಿರುವ ಐಸ್‌ಕ್ರೀಂ ಗೆ ಭಾರೀ ಬೇಡಿಕೆ ಇದೆ. ಇದರಿಂದ ಉತ್ತೇಜಿತವಾಗಿರುವ ಒಕ್ಕೂಟವು ಹೊಸ, ಹೊಸ ಉತ್ಪನ್ನಗಳ ಘಟಕಗಳ ಪ್ರಾರಂಭಿಸುತ್ತಿದ್ದು, 150 ಕೋಟ ರೂ. ವೆಚ್ಚದ ಸುವಾಸಿತ ಹಾಲು ತಯಾರಿಕೆಯ ಪೆಟ್‌ ಬಾಟಲ್‌ ಘಟಕವನ್ನೂ ನಿರ್ಮಿಸಿದ್ದು, ಹೊಸ ಘಟಕವು ಏಪ್ರಿಲ್‌ ಮೊದಲ ವಾರದಿಂದ ಕಾರ್ಯಾರಂಭ ಮಾಡಲಿದೆ. ಜರ್ಮನ್‌ ತಂತ್ರಜ್ಞಾನದ ಪೆಟ್‌ಬಾಟಲ್‌ ಘಟಕವು ಗಂಟೆಗೆ 30 ಸಾವಿರ ಬಾಟಲ್‌ಗ‌ಳನ್ನು ಉತ್ಪಾದಿಸಲಿದೆ ಎಂದರು.

ರಾಷ್ಟ್ರದ 3 ನೇ ಹಾಗೂ ದಕ್ಷಿಣ ಭಾರತದ ಮೊದಲ ಪೆಟ್‌ಬಾಟಲ್‌ ಘಟಕ ಸ್ಥಾಪನೆಯ ಹೆಗ್ಗಳಿಕೆಯ ಹಾಸನ ಹಾಲು ಒಕ್ಕೂಟವು ಗುಜರಾತ್‌ನ ಆನಂದ್‌ನಲ್ಲಿರುವ 2 ಪೆಟ್‌ಬಾಟಲ್‌ ಘಟಕಗಳಿಗಿಂತ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿದ ಪೆಟ್‌ ಬಾಟಲ್‌ ಘಟಕ ನಿರ್ಮಿಸಿದ್ದು, ಪ್ರಾರಂಭದಲ್ಲಿ 200 ಮಿ.ಲೀ. ಮತ್ತು ಒಂದು ಲೀಟರ್‌ನ ಬಾಟಲ್‌ಗ‌ಳ ವಿವಿಧ ಸ್ವಾದದ ಸುವಾಸಿತ ಹಾಲು ಉತ್ಪಾದಿಸಿ ಮಾರುಕಟ್ಟೆಗೆ ಬಿಡಲು ಸಿದ್ಧತೆ ಆರಂಭಿಸಿದೆ ಎಂದು ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಅವರೂ ಹಾಜರಿದ್ದರು.

ಜಿಲ್ಲಾ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಕೌಶಿಕದ ಬಳಿ 53 ಎಕರೆಯಲ್ಲಿ ಮೆಗಾಡೇರಿ ನಿರ್ಮಾಣವೂ ಏಪ್ರಿಲ್‌ ನಂತರ ಆರಂಭವಾಗಲಿದೆ. 504 ಕೋಟಿ ರೂ. ವೆಚ್ಚದಲ್ಲಿ ಮೆಗಾಡೇರಿ ನಿರ್ಮಾಣದ ಯೋಜನೆ ತಯಾರಾಗಿದೆ ಎಂದು ವಿವರ ನೀಡಿದರು.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK-Shivakumar

Yettinahole: ನಮ್ಮ ಸರಕಾರದ ಸಾಕ್ಷಿಗುಡ್ಡೆ ಎತ್ತಿನಹೊಳೆ: ಡಿಸಿಎಂ ಡಿ.ಕೆ. ಶಿವಕುಮಾರ್‌

Yettinahole Project: ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Yettinahole Project: ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Sakleshpura ಇಂದಿನಿಂದ ನೀರೆತ್ತಿನ ಹೊಳೆ; ಸಿದ್ದು 2.0 ಸರಕಾರದ ಅತೀ ದೊಡ್ಡ ಭರವಸೆ ಜಾರಿ

Sakleshpura ಇಂದಿನಿಂದ ನೀರೆತ್ತಿನ ಹೊಳೆ; ಸಿದ್ದು 2.0 ಸರಕಾರದ ಅತೀ ದೊಡ್ಡ ಭರವಸೆ ಜಾರಿ

HDD-LARGE

HD Deve Gowda: ರಾಜ್ಯ ವಿದ್ಯಮಾನದ ಕುರಿತು ಈಗೇನೂ ಹೇಳಲಾರೆ

Devegowda

Hasana: ನಾಲ್ಕು ತಿಂಗಳ ಬಳಿಕ ತವರು ಜಿಲ್ಲೆಗೆ ಆ.31ರಂದು ದೇವೇಗೌಡ ಭೇಟಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.