Online game ಸಾಲ: ಪತ್ನಿ, ಪುತ್ರಿಯೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ
Team Udayavani, Aug 16, 2024, 12:46 AM IST
ಹಾಸನ: ಸಾಲಬಾಧೆಯಿಂದಾಗಿ ಕಾಣೆಯಾಗಿದ್ದ ಕುಟುಂಬದ ಮೂವರ ಮೃತದೇಹಗಳು ಚನ್ನರಾಯಪಟ್ಟಣದ ಬಾಗೂರು ಹೋಬಳಿ ಮದ್ಲಾಪುರ ಸಮೀಪದ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿವೆ. ಪಟ್ಟಣದ ಕೆರೆಬೀದಿ ನಿವಾಸಿ ಶ್ರೀನಿವಾಸ್ (43), ಪತ್ನಿ ಶ್ವೇತಾ (36) ಮತ್ತು ಪುತ್ರಿ ನಾಗಶ್ರೀ (13) ಮೃತಪಟ್ಟವರು. ಶ್ರೀನಿವಾಸ್ ಅವರಿಗೆ ಆನ್ಲೈನ್ಗೆàಮ್ನ ಚಟ ತಗಲಿದ್ದು, ಪತ್ನಿ ಮತ್ತು ತಾನು ದುಡಿದ ಹಣವನ್ನು ಅದರಲ್ಲಿ ಕಳೆದು ಕೊಂಡಿದ್ದರು.
ಜತೆಗೆ ಸ್ನೇಹಿತರು, ಸಂಬಂಧಿಕರಿಂದಲೂ ಸಾಲ ಪಡೆದುಕೊಂಡು ಅದನ್ನೂ ಕಳೆದುಕೊಂಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ಪತ್ನಿ, ಪುತ್ರಿಯನ್ನು ಕರೆದುಕೊಂಡು ಹೋಗಿ ಒಟ್ಟಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶ್ರೀನಿವಾಸ್ ಕುಟುಂಬ ಸಮೇತ ಕಾಣೆಯಾಗಿರುವ ಬಗ್ಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿತ್ತು. ಗುರುವಾರ ನಾಲೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ನುಗ್ಗೇಹಳ್ಳಿ ಪೊಲೀಸರು ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.