ಹಾಸನ ಹಾಲು ಒಕ್ಕೂಟಕ್ಕೆ 12 ಕೋಟಿ ರೂ. ಲಾಭ


Team Udayavani, Jun 2, 2019, 3:00 AM IST

hasasana

ಹಾಸನ: ಮೂರು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ಹಾಸನ ಹಾಲು ಒಕ್ಕೂಟವು 2018 -19 ನೇ ಸಾಲಿನಲ್ಲಿ 12 ಕೋಟಿ ರೂ. ಲಾಭ ಗಳಿಸಿದ್ದು, ಲಾಭಾಂಶದ ಬಹುತೇಕ ಭಾಗವನ್ನು ಹಾಲು ಉತ್ಪಾದಕರಿಗೇ ಹಂಚುವ ನಿಟ್ಟಿನಲ್ಲಿ ಜೂ. 1 ರಿಂದ ಪ್ರತಿ ಲೀ.ಗೆ ಒಂದು ರೂ. ಹೆಚ್ಚಳ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರೂ ಆದ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಹೇಳಿದರು.

ಹಾಸನ ಡೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ವಾಪ್ತಿಯನ್ನು ಒಳಗೊಂಡ ಹಾಸನ ಹಾಲು ಒಕ್ಕೂಟವು ತಾವು ಅಧ್ಯಕ್ಷರಾದ 1995 ರಲ್ಲಿ ಪ್ರತಿದಿನ 17 ಸಾವಿರ ಲೀ. ಹಾಲು ಸಂಗ್ರಹಿಸಿ 25 ಕೋಟಿ ರೂ. ವಹಿವಾಟು ನಡೆಸುತ್ತಿತ್ತು. ಈಗ ಒಕ್ಕೂಟವು 10 ಲಕ್ಷ ಲೀ. ಹಾಲು ಸಂಗ್ರಹಿಸುತ್ತಿದ್ದು, ವಾರ್ಷಿಕ 1300 ಕೋಟಿ ರೂ ವಹಿವಾಟು ನಡೆಸುತ್ತಿದೆ. ತಾವು ಅಧ್ಯಕ್ಷರಾದಂದಿನಿಂದಳೂ ಒಕ್ಕೂಟವು ಲಾಭ ಗಳಿಸುತ್ತಲೇ ಬಂದಿದೆ ಎಂದರು.

ವಿಮಾ ಸೌಲಭ್ಯ: ಹಾಸನ ಹಾಲು ಒಕ್ಕೂಟವು ತನ್ನ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಎರಡು ವಿಮಾ ಯೋಜನೆಗಳನ್ನು ಆರಂಭಿಸಲು ನಿರ್ಧರಿಸಿದೆ. ವಿಮಾ ವ್ಯಾಪ್ತಿಗೊಳಗಾಗುವ ಹಾಲು ಉತ್ಪಾದಕರು ವಾರ್ಷಿಕ 500 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದರಲ್ಲಿ ಹಾಸ ಹಾಲು ಒಕ್ಕೂಟವು 250 ರೂ. ಪಾವತಿಸಿದರೆ ಫ‌ಲಾನುಭವಿ 250 ರೂ. ಪಾವತಿಸಿದರೆ ಸಾಕು. ವಿಮೆದಾರರು ಅಸಕ್ಮಿಕವಾಗಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಒಂದು ಲಕ್ಷರೂ ವಿಮಾ ಪರಿಹಾರ ಸಿಗಲಿದೆ.

ಇದರಿಂದ ಹಾಲು ಒಕ್ಕೂಟಕ್ಕೆ ಒಂದು ಕೋಟಿ ರೂ. ಹೊರ ಬೀಳಲಿದೆ ಎಂದು ಅಂದಾಜು ಮಾಡಲಾಗಿದೆ. ಹಾಗೆಯೇ ಒಕ್ಕೂಟ ವ್ಯಾಪ್ತಿಯ 50 ಸಾವಿರ ಹಸುಗಳಿಗೂ ಪ್ರತಿ ಹಸುವಿಗೂ 50 ಸಾವಿರ ರೂ. ಮೊತ್ತಕ್ಕೆ ವಿಮೆ ಮಾಡಿಸಲು ತೀರ್ಮಾನಿಸಿದ್ದು, ಅದರ ಪ್ರೀಮಿಯಂ ಮೊತ್ತ ವಾರ್ಷಿಕ 900 ರೂ. ಬರುತ್ತದೆ. ಅದರಲ್ಲಿ ಹಾಸನ ಹಾಲು ಒಕ್ಕೂಟವು 450 ರೂ. ಪಾವತಿಸಲಿದ್ದು, ಹಸುವಿನ ಮಾಲೀಕ 450 ರೂ.ಪಾವತಿಸಬೇಕು. ಈ ಯೋಜನೆಗೆ ಹಾಸನ ಒಕ್ಕೂಟವು 1.50 ಕೋಟಿ ರೂ. ಪಾವತಿಸಬೇಕಾಗುತ್ತದೆ ಎಂದು ವಿವರ ನೀಡಿದರು.

ಪೆಟ್‌ ಬಾಲ ಘಟಕ ಆರಂಭ: ಹಾಸನ ಡೇರಿ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ 150 ಕೋಟಿ ರೂ. ಅಂದಾಜಿನ ಹಾಲಿನ ಪೆಟ್‌ ಬಾಟಲ್‌ ಘಟಕವು ಡಿಸೆಂಬರ್‌ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ. ಪ್ರತಿದಿನ 30 ಸಾವಿರ ಹಾಲಿನ ಪೆಟ್‌ ಬಾಟಲ್‌ಗ‌ಳಿಗೆ ಹಾಲು ತುಂಬಿ ಮಾರಾಟ ಮಾಡಲಾಗುವುದು. ಇಂತಹ ಮೂರು ಘಟಕಗಳು ದೇಶದ ಹೈನು ಉದ್ಯಮದಲ್ಲಿದ್ದು, ಹಾಸನ ಡೇರಿಯ ಪೆಟ್‌ ಬಾಟಲ್‌ ಘಕವು ದಕ್ಷಿಣ ಭಾರತದಲ್ಲಿ ಮೊದಲ ಘಟಕವಾಗಿದೆ ಎಂದರು.

ಐಸ್‌ಕ್ರೀಂ ಉತ್ಪಾದನಾ ಸಾಮರ್ಥ್ಯ ಹೆಚ್ಚಳ: ಹಾಸನ ಡೇರಿ ಆವರಣದಲ್ಲಿ ಆರಂಭವಾಗಿರುವ ನಂದಿನಿ ಐಸ್‌ ಕ್ರೀಂ ಘಟಕ ಈಗ ದಿನಕ್ಕೆ 10 ಸಾವಿರ ಲೀ. ಐಸ್‌ ಕ್ರೀಂ ಮಾರಾಟ ಮಾಡುತ್ತಿದೆ. ನಂದಿನಿ ಐಸ್‌ ಕ್ರೀಂಗೆ ಭಾರೀ ಬೇಡಿಕೆಯಿದ್ದು, ಹಾಸನದ ಡೇರಿ ಘಟಕದಿಂದ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇನ್ನೊಂದು ವರ್ಷದೊಳಗೆ ಐಸ್‌ ಕ್ರೀಂ ಉತ್ಪಾದನಾ ಸಾಮರ್ಥಯವನ್ನು 20 ಸಾವಿರ ಲೀ.ಗೆ ವಿಸ್ತರಣೆ ಮಾಡಲಾಗುವುದು. ಯುಎಚ್‌ಟಿ ಹಾಲಿನ ಘಟಕದ ಸಾಮರ್ಥಯವನ್ನು ಈಗಿರುವ 1 ಲಕ್ಷ ಲೀಟ್‌ನಿಂದ 4 ಲಕ್ಷ ಲೀ.ಗೆ ವಿಸ್ತರಣೆ ಮಾಡಲಾಗುತ್ತಿದ್ದು, ವಿಸ್ತರಣಾ ಘಟಕದ ಕೆಲಸ ಸೆಪ್ಟಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

50 ಎಕರೆಯಲ್ಲಿ ಮೇಗಾ ಡೇರಿ ನಿರ್ಮಾಣ: ಹಾಸನದಲ್ಲಿ 500 ಕೋಟಿ ರೂ. ಅಂದಾಜಿನ ಮೆಗಾಡೇರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕೌಶಿಕ ಗ್ರಾಮದ ಸಮೀಪ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಮೆಗಾ ಡೇರಿಗೆ 50 ಎಕರೆ ಮಂಜೂರಾಗಿದೆ. ಭೂಮಿಯ ದರದಲ್ಲಿ ರಿಯಾಯ್ತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಅಲ್ಲಿ ಮೆಗಾಡೇರಿ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಹಾಲಿನ ಪುಡಿ ಘಟಕ, ಯುಎಚ್‌ಟಿ ಹಾಲಿನ ಘಟಕ, ಐಸ್‌ಕ್ರೀಂ ಘಟಕ ಸೇರಿದಂತೆ ವಿವಿಧ ಘಟಕಗಳು ನಿರ್ಮಾಣವಾಗಲಿವೆ ಎಂದು ಹೇಳಿದರು.

ನಗರದ ಚನ್ನಪಟ್ಟಣ ಬೈಪಾಸ್‌ ರಸ್ತೆ ಸರ್ಕಲ್‌ನಲ್ಲಿ ಪಶು ಆಹಾರ ಘಟಕದ ಆವರಣದಲ್ಲಿ ಕೆಎಂಎಫ್ನಿಂದ ನಿರ್ಮಾಣ ಮಾಡಿರುವ ಕಲ್ಯಾಣ ಮಂಟಪವನ್ನು ಹಾಸನ ಹಾಲು ಒಕ್ಕೂಟವೇ ವಹಿಸಿಕೊಂಡಿದೆ. ಅದನ್ನು ಶೀಘ್ರದಲ್ಲಿಯೇ ಉದ್ಘಾಟನೆ ಮಾಡಿ ಹಾಲು ಉತ್ಪಾದಕರ ಕುಟುಂಬದ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ರಿಯಾಯ್ತಿ ಬಾಡಿಗೆ ದರ ನಿಗದಿಪಡಿಸಲಾಗುವುದು ಎಂದು ಎಚ್‌.ಡಿ.ರೇವಣ್ಣ ಅವರು ತಿಳಿಸಿದರು.

ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ಜಯಪ್ರಕಾಶ್‌ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ನಿರ್ದೇಶಕರುಗಳಾದ ಹೊನ್ನವಳ್ಳಿ ಸತೀಶ್‌, ದೊಡ್ಡಬೀಕನಹಳ್ಳಿ ನಾಗರಾಜು, ರಾಮಚಂದ್ರೇಗೌಡ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಶೇಷಾದ್ರಿ, ಉಪಾದ್ಯಕ್ಷ ಕದಾಳು ರಾಜಪ್ಪಗೌಡ ಮತ್ತಿತರು ಸಕಾರಂಭದಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

de

Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು

HD-Revanna

ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್‌ ಶಾಸಕರ ಸೆಳೆಯೋ ದುಸ್ಥಿತಿ: ಎಚ್‌.ಡಿ.ರೇವಣ್ಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.