![Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು](https://www.udayavani.com/wp-content/uploads/2025/01/maharastra-415x276.jpg)
ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ
Team Udayavani, Jan 29, 2022, 1:32 PM IST
![ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ](https://www.udayavani.com/wp-content/uploads/2022/01/Untitled-1-676-620x372.jpg)
ಹಾಸನ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಅರಕಲಗೂಡು ತಾಲೂಕು ಕೊಣನೂರಿನ ಲಾಡ್ಜ್ ಯೊಂದರಲ್ಲಿ ಯುವಕನೊಬ್ಬನ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದ್ದು, ಹಣಕಾಸಿನ ವಿಚಾರದಲ್ಲಿ ಪತಿ- ಪತ್ನಿ ಯುವಕನ ಹತ್ಯೆ ಸಂಚು ರೂಪಿಸಿರುವುದು ಬಯಲಾಗಿದೆ.
ಮೂಲತಃ ಕೊಡಗು ಜಿಲ್ಲೆ , ಸೋಮವಾರ ಪೇಟೆ ತಾಲೂಕು 6ನೇ ಹೊಸಕೋಟೆ ಗ್ರಾಮದ ದಿಲೀಪ್ ಮತ್ತು ಆತನ ಪತ್ನಿ ಸುಶ್ಮಿತಾ ಬೆಂಗಳೂರಿನಲ್ಲಿ ನೆಲಸಿ ದ್ದರು. ಅದೇ ಹೊಸಕೋಟೆ ಗ್ರಾಮದವನು ಹಾಗೂ ದಿಲೀಪ್ನ ಸ್ನೇಹಿತನೂ ಆಗಿದ್ದ ಹರೀಶ್ನಿಂದ ದಿಲೀಪ್ ಮತ್ತು ಸುಶ್ಮಿತಾ ತನ್ನ ಮಗಳ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಹಣದ ತುರ್ತು ಇದ್ದುದ್ದರಿಂದ 1 ಲಕ್ಷ ಸಾಲ ಪಡೆದಿದ್ದು, ವಾಪಸ್ ಕೊಡುವಂತೆ ಹರೀಶ್ ಒತ್ತಾಯ ಮಾಡುತ್ತಿದ್ದರಿಂದ ಸಾಲ ಕೊಡಲಾಗದೆ ಆತನನ್ನು ಕೊಲೆ ಮಾಡಲು ದಂಪತಿ ಯೋಜನೆ ರೂಪಿಸಿದ್ದರು.
ಹರೀಶ್ಗೆ ಹಣ ನೀಡುವುದಾಗಿ ಸುಶ್ಮಿತಾ ಜ.18 ರಂದು 4 ಗಂಟೆಗೆ ಕೊಣನೂರಿನ ಬಿಎಸ್ಪಿ ಲಾಡ್ಜ್ಗೆ ಬಂದು ನಾನು ಬೆಂಗಳೂರಿನಿಂದ ಕೊಣನೂರಿನ ಸಮೀಪದ ದೇಗುಲದಲ್ಲಿ ಪೂಜೆಗೆ ಬಂದಿದ್ದೇನೆ. ಇನ್ನು ಕೆಲ ಹೊತ್ತಿನಲ್ಲೇ ನನ್ನ ಗಂಡ ಬರುತ್ತಾರೆ. ಇಂದು ತಂಗಿದ್ದು ನಾಳೆ ಹೋಗುತ್ತೇವೆ ಎಂದು ಹೇಳಿ ಲಾಡ್ಜ್ನಲ್ಲಿ ಕೊಠಡಿ ಪಡೆದುಕೊಂಡಿದ್ದಳು. ಕೊಠಡಿ ಪಡೆದ ಕೆಲ ಸಮಯ ನಂತರ ಸುಶ್ಮಿತಾ ಕೊಠಡಿಯಿಂದ ಹೊರಹೋಗಿದ್ದಳು. ಆ ಸಂದರ್ಭದಲ್ಲಿ ಸುಶ್ಮಿತಾಳ ಗಂಡದಿಲೀಪ್ ಆತನ ಸಹೋದರ ಲಕ್ಷ್ಮಣ್ ಅದೇ ಲಾಡ್ಜ್ ನಲ್ಲಿ ಮತ್ತೂಂದು ಕೊಠಡಿ ಪಡೆದುಕೊಂಡು ತಂಗಿದ್ದರು. ಕೊಠಡಿಯಿಂದ ಹೊರ ಹೋಗಿದ್ದ ಸುಶ್ಮಿತಾ ಕೆಲ ಹೊತ್ತಿನಲ್ಲಿ ಹರೀಶ್ಗೆ ಹಣ ಕೊಡುವುದಾಗಿ ನಂಬಿಸಿ ಆತನನ್ನು ಲಾಡ್ಜ್ ಗೆ ಕರೆದುಕೊಂಡು ಬಂದು ಇವರೇ ನನ್ನ ಗಂಡ ಎಂದು ಲಾಡ್ಜ್ನವರಿಗೆ ನಂಬಿಸಿ ಕೊಠಡಿಗೆ ಕರೆದುಕೊಂಡು ಹೋಗಿದ್ದಳು.
ಬೇರೆ ಕೊಠಡಿ ಪಡೆದುಕೊಂಡಿದ್ದ ದಿಲೀಪ್ ಮತ್ತು ಲಕ್ಷ್ಮಣ್ ತಮ್ಮ ಕೊಠಡಿಯಿಂದ ಸುಶ್ಮಿತಾ ಕೊಠಡಿಯ ಶೌಚಾಲಯಕ್ಕೆ ಸುಶ್ಮಿತಾ ಮತ್ತು ಹರೀಶ್ ಬರುವ ಮೊದಲೇ ಸೇರಿಕೊಂಡಿದ್ದರು. ಕೊಠಡಿಗೆ ಬಂದ ಹರೀಶ್ ನನ್ನು ಕೂರಿಸಿಕೊಂಡು ಸಾಂದರ್ಭಿಕವಾಗಿ ಮಾತ ನಾಡಿಸುತ್ತಿದ್ದ ಸುಶ್ಮಿತಾ ಮೊದಲೇ ತಂದಿಟ್ಟು ಕೊಂಡಿದ್ದ ಕಾರದ ಪುಡಿಯನ್ನು ದಿಢೀರನೇ ಹರೀಶನಿಗೆ ಎರಚಿ ದ್ದಾಳೆ. ಹರೀಶ್ ಕೂಗಿಕೊಳ್ಳುತ್ತಿದ್ದಂತೆ ಶೌಚಾಲಯದಿಂದ ಮಚ್ಚು, ಚಾಕುಗಳೊಂದಿಗೆ ಹೊರ ಬಂದ ದಿಲೀಪ್ ಮತ್ತು ಲಕ್ಷ್ಮಣ್ ಹರೀಶ್ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ತಕ್ಷಣವೇ ದಿಲೀಪ್ ತನ್ನ ಪತ್ನಿಸುಶ್ಮಿತಾಳೊಂದಿಗೆ ಕೊಠಡಿಯಿಂದ ಓಡಿ ಹೋಗಿದ್ದಾನೆ. ಹರೀಶ್ನ ಕೂಗಾಟ ಕೇಳಿ ಲಾಡ್ಜ್ ಮಾಲೀಕ ಬಂದು ಕೊಠಡಿಯ ಚಿಲಕ ಹಾಕಿಕೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ . ಪೊಲೀಸರು ಲಕ್ಷ್ಮಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹರೀಶ್ ಮತ್ತು ಸುಶ್ಮಿತಾ ನಡುವೆ ಅಕ್ರಮ ಸಂಬಂಧವಿತ್ತು. ಊರಿನವರಿಗೂತಿಳಿದು ಬುದ್ಧಿ ಹೇಳಿದ್ದರು ಎಂದಿದ್ದ. ಆದರೆ, ಅರಕಲ ಗೂಡು ಇನ್ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಪೊಲೀಸರ ತಂಡವು ತನಿಖೆ ನಡೆಸಿದಾಗ ಹರೀಶ್ಗೆ ಕೊಡಬೇಕಾ ಗಿದ್ದ ಒಂದು ಲಕ್ಷ ರೂ. ಸಾಲ ಕೊಡಲಾಗದೆ ಸಂಚು ರೂಪಿಸಿದ್ದ ಮಾಹಿತಿ ಬಯಲಾಗಿದೆ. ಈಗ ಪೊಲೀಸರು ದಿಲೀಪ್ ಮತ್ತು ಸುಶ್ಮಿತಾಳನ್ನು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.
ಒಂದು ಲಕ್ಷ ಸಾಲ, ಒಂದು ಕೊಲೆ : ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅರಕಲಗೂಡು ತಾಲೂಕು ಕೊಣನೂರು ಬಸ್ ನಿಲ್ದಾಣದ ಎದುರು ಬಿಎಸ್ಪಿ ಲಾಡ್ಜ್ ನ ಕೊಠಡಿಯೊಂದರಲ್ಲಿ ಜ.18 ರಂದು ಸಂಜೆ ಹರೀಶ್ ಎಂಬಾತನ ಹತ್ಯೆ ನಡೆದಿತ್ತು. ಹತ್ಯೆ ನಡೆದ ವಿಷಯ ತಿಳಿದ ತಕ್ಷಣ ಕೊಠಡಿಯಲ್ಲಿಯೇ ಲಕ್ಷ್ಮಣ್ ಎಂಬ ಆರೋಪಿ ಸಿಕ್ಕಿ ಬಿದ್ದಿದ್ದ. ಆತ ನೀಡಿದ್ದ ಹೇಳಿಕೆಯಂತೆ ಲಕ್ಷ್ಮಣನ ಅತ್ತಿಗೆ ಸುಶ್ಮಿತಾಳೊಂದಿಗೆ ಹರೀಶ್ ಅನೈತಿಕ ಸಂಬಂಧ ಹೊಂದಿದ್ದ. ಆ ಹಿನ್ನೆಲೆಯಲ್ಲಿ ಹರೀಶ್ನನ್ನು ಕೊಲೆ ಮಾಡಲಾಗಿತ್ತು ಎಂದು ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರು ತನಿಖೆ ವೇಳೆ ಒಂದು ಲಕ್ಷ ರೂ. ಸಾಲ ವಾಪಸ್ ಕೊಡಲಾಗದೆ ದಂಪತಿ ಯುವಕನನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ.
ಟಾಪ್ ನ್ಯೂಸ್
![Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು](https://www.udayavani.com/wp-content/uploads/2025/01/maharastra-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ](https://www.udayavani.com/wp-content/uploads/2025/01/Suraj-Revanna-1-150x97.jpg)
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
![9-](https://www.udayavani.com/wp-content/uploads/2025/01/9--150x90.jpg)
ಚಲಿಸುತ್ತಿದ್ದ ಖಾಸಗಿ ಬಸ್ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
![Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ](https://www.udayavani.com/wp-content/uploads/2025/01/6-3-150x90.jpg)
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
![Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ](https://www.udayavani.com/wp-content/uploads/2025/01/byndoor-1-150x88.jpg)
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
![HD-Kumaraswmy](https://www.udayavani.com/wp-content/uploads/2024/12/HD-Kumaraswmy-1-150x90.jpg)
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ](https://www.udayavani.com/wp-content/uploads/2025/01/sari-150x87.jpg)
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
![7-dhaka](https://www.udayavani.com/wp-content/uploads/2025/01/7-dhaka-150x90.jpg)
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
![Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು](https://www.udayavani.com/wp-content/uploads/2025/01/maharastra-150x100.jpg)
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
![Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?](https://www.udayavani.com/wp-content/uploads/2025/01/roh-150x85.jpg)
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
![Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು](https://www.udayavani.com/wp-content/uploads/2025/01/ramag-150x87.jpg)
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.