ಕಾಂಗ್ರೆಸ್‌ನಿಂದ ಬಿ.ಶಿವರಾಂಗೆ ಟಿಕೆಟ್‌ ನೀಡಲು ಆಗ್ರಹ


Team Udayavani, Apr 15, 2018, 2:05 PM IST

1508mum06.jpg

ಬೇಲೂರು: ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ದಿ.ವೈ.ಎನ್‌.ರುದ್ರೇಶಗೌಡ ಪತ್ನಿ ಕೀರ್ತನರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಘೋಷಣೆ ಮಾಡಿರುವ ಹೈಕಮಾಂಡ್‌ ಕ್ರಮ ವಿರೋಧಿಸಿ ಮಾಜಿ ಸಚಿವ ಬಿ.ಶಿವರಾಂ ಬೆಂಬಲಿಗರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.

ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶಿವರಾಂ ಬೆಂಬಲಿಗರ ಮುಖಂಡ ಹೆಬ್ಟಾಳು ಕ್ಷೇತ್ರದ ಜಿಪಂ ಸದಸ್ಯ ಮಂಜಪ್ಪ ಮಾತನಾಡಿ, ಕಳೆದ 10 ವರ್ಷಗಳಿಂದ ಶಾಸಕ ವೈ.ಎನ್‌.ರುದ್ರೇಶಗೌಡ ಕಾರ್ಯಕರ್ತರನ್ನು ಕಡೆಗಣಿಸಿದ್ದು ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ವಿಫ‌ಲಾಗಿದ್ದರು ಎಂದರು.

ಕಳೆದ 2 ವರ್ಷಗಳಿಂದ ಮಾಜಿ ಸಚಿವ ಬಿ.ಶಿವರಾಂ ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಸರ್ಕಾರದ ಹಲವಾರು ಯೋಜನೆಗಳನ್ನು ತಂದು ಮತದಾರರ ವಿಶ್ವಾಸ ಗಳಿಸುವಲ್ಲಿ ಯಶ್ವಸಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಲು ಬಯಸಿದ್ದರಲ್ಲದೆ ಹೈಕಮಾಂಡ್‌ ಸಹ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿತ್ತು.

ಆದರೆ ತಾಲೂಕಿನ ಯಾವುದೇ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದ ಕಾರ್ಯಕರ್ತರೊಂದಿಗೆ ಒಡನಾಟವಿರದ ಕೀರ್ತನ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡುತ್ತಿರುವುದು ಸರಿಯಲ್ಲ. ಚುನಾವಣೆಯಲ್ಲಿ ಜನ ಬೆಂಬಲ ವಿಲ್ಲದೇ ಗೆಲ್ಲುವುದು ಹೇಗೆ ಎಂದು ಪ್ರಶ್ನಿಸಿದರು.

ಹೈಕಮಾಂಡ್‌ ಕಾರ್ಯಕರ್ತರ ಮನ್ನಣೆ ಬೆಲೆ ನೀಡಿ ಶಿವರಾಂಗೆ ಟಿಕೆಟ್‌ ನೀಡದಿರುವ ಪಕ್ಷದಲ್ಲಿ ತಾಪಂ, ಜಿಪಂ, ಪುರಸಭೆ ಕಾಂಗ್ರೆಸ್‌ ಸದಸ್ಯರು ರಾಜೀನಾಮೆ ನೀಡಿ ಶಿವರಾಂರನ್ನು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯನ್ನಾಗಿ ಕಣಕಿಳಿಸಲಾಗುವುದು ಎಂದು ಎಚ್ಚರಿಸಿದರು.

ಚನ್ನಕೇಶವ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೈ.ಟಿ.ದಾಮೋಧರ್‌ ಮಾತನಾಡಿ, ಮಾಜಿ ಶಾಸಕ ವೈ.ಎನ್‌.ರುದ್ರೇಶಗೌಡರ ಪತ್ನಿ ಕಾಂಗ್ರೆಸ್‌ ಸದಸ್ಯತ್ವವನ್ನೇ  ಪಡೆದಿಲ್ಲ ಹಾಗೂ ಪಕ್ಷದ ಟಿಕೆಟ್‌ ಬೇಡಿಕೆಯನ್ನು ಸಲ್ಲಿಸಿದೇ ಇರುವಾಗ ಹೈಕಮಾಂಡ್‌ ಇವರಿಗೆ ಮಣೆ ಹಾಕುತ್ತಿರುವುದು ದುರದುಷ್ಟಕರವಾಗಿದ್ದು ಕಳೆದ 10 ವರ್ಷಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುವುದಲ್ಲದೆ ಮನೆ ಬಾಗಿಲಿಗೆ ಬಂದವರನ್ನು ನಿರ್ಲಕ್ಷಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಮುಖಂಡ ಕೆ.ಪಿ.ಶೈಲೇಶ್‌ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿ ಮೀಸಲು ಕ್ಷೇತ್ರವಾಗಿದ್ದಾಗಲೇ ಅಭಿವೃದ್ಧಿಯಾಗಿದ್ದು ಕಳೆದ 10 ವರ್ಷಗಳ ಆಡಳಿತ ನಡೆಸಿದ ಶಾಸಕ ವೈ.ಎನ್‌.ರುದ್ರೇಶಗೌಡರಿಂದ ತಾಲೂಕಿನ ಅಭಿವೃದ್ಧಿಯಾಗಿಲ್ಲ ಈಗಾಗಲೇ ತಾಲೂಕಾದ್ಯಂತ ಮತದಾರರು ಇವರ ವಿರುದ್ಧ ತಿರುಗಿಬಿದಿದ್ದು, ಇಂಥ ವಾತಾವರಣದಲ್ಲಿ ಇವರಿಗೆ ಟಿಕೆಟ್‌ ನೀಡುವುದು ಸೂಕ್ತವಾಗಲ್ಲ ಎಂದರು.

ಮಾಜಿ ಶಾಸಕ ಶಿವರಾಂಗೆ ಟಿಕೆಟ್‌ ನೀಡಲೇ ಬೇಕೆಂದು ಒತ್ತಾಯಿಸಿ ಬೃಹತ್‌ ಪತ್ರಿಭಟನೆ ನಡೆಸಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ಬಿ.ಶಿವರಾಂಗೆ ಪಕ್ಷದ ಟಿಕೆಟ್‌ ಸಿಗದಿರುವುದಕ್ಕೆ ಜಿಲ್ಲಾ ಮಂತ್ರಿ ಎ.ಮಂಜು ಕಾರಣವಾಗಿದ್ದಾರೆ ಎಂದು ಹಲವು ಕಾರ್ಯಕರ್ತರು ಆರೋಪಿಸಿ ಎ.ಮಂಜು ವಿರುದ್ಧ ಧಿಕ್ಕಾರ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾ ಉಪಾಧ್ಯಕ್ಷ ಅರುಣ್‌ಕುಮಾರ್‌, ಸದಸ್ಯ ಜುಬೇರ ಅಹಮದ್‌, ಶಿವಾನಂದ್‌, ಶಾಂತಕುಮಾರ್‌ ಬೇಲೂರು -ಹಳೇಬೀಡು ಪ್ರಾಧಿಕಾರದ ಅಧ್ಯಕ್ಷ ಬಿ.ಎ.ಜಮಾಲ್‌, ಚನ್ನಕೇಶವ ದೇವಾಲದಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಿಶಾಂತ, ರಂಗನಾಥ್‌, ಕಾಂಗ್ರೆಸ್‌ ಮುಖಂಡರಾದ ಸತ್ಯನಾರಾಯಣ, ತುಳಸಿ, ಗಂಗಮ್ಮ, ಮಹದೇವ, ಸೋಮಣ್ಣ, ರಾಮೇನಹಳ್ಳಿ ವೆಂಕಟೇಶ್‌, ಅರೇಹಳ್ಳಿ ನಿಂಗರಾಜ, ಲಕ್ಷ್ಮೀ, ಲೋಲಾಕ್ಷಮ್ಮ, ಜಾವಗಲ್‌ ನಾಗರಾಜು, ನವೀದ್‌, ಇತರರು ಇದ್ದರು.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK-Shivakumar

Yettinahole: ನಮ್ಮ ಸರಕಾರದ ಸಾಕ್ಷಿಗುಡ್ಡೆ ಎತ್ತಿನಹೊಳೆ: ಡಿಸಿಎಂ ಡಿ.ಕೆ. ಶಿವಕುಮಾರ್‌

Yettinahole Project: ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Yettinahole Project: ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Sakleshpura ಇಂದಿನಿಂದ ನೀರೆತ್ತಿನ ಹೊಳೆ; ಸಿದ್ದು 2.0 ಸರಕಾರದ ಅತೀ ದೊಡ್ಡ ಭರವಸೆ ಜಾರಿ

Sakleshpura ಇಂದಿನಿಂದ ನೀರೆತ್ತಿನ ಹೊಳೆ; ಸಿದ್ದು 2.0 ಸರಕಾರದ ಅತೀ ದೊಡ್ಡ ಭರವಸೆ ಜಾರಿ

HDD-LARGE

HD Deve Gowda: ರಾಜ್ಯ ವಿದ್ಯಮಾನದ ಕುರಿತು ಈಗೇನೂ ಹೇಳಲಾರೆ

Devegowda

Hasana: ನಾಲ್ಕು ತಿಂಗಳ ಬಳಿಕ ತವರು ಜಿಲ್ಲೆಗೆ ಆ.31ರಂದು ದೇವೇಗೌಡ ಭೇಟಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.