Suraj Revanna Case ಸಂತ್ರಸ್ತನ ವಿರುದ್ಧ ದೂರು ದಾಖಲಿಸಿದ್ದ ವ್ಯಕ್ತಿ ನಾಪತ್ತೆ!
Team Udayavani, Jun 23, 2024, 10:25 PM IST
ಹಾಸನ: ಡಾ| ಸೂರಜ್ ರೇವಣ್ಣ ಪರವಾಗಿ ಹಾಗೂ ಸಂತ್ರಸ್ತ ಯುವಕನ ವಿರುದ್ಧ ದೂರು ದಾಖಲಿಸಿದ್ದ ಡಾ| ಸೂರಜ್ ರೇವಣ್ಣ ಅವರ ಆಪ್ತ ಎನ್ನಲಾದ ಹೊಳೆನರಸೀಪುರ ತಾಲೂಕು ಹನುಮನಹಳ್ಳಿಯ ಶಿವಕುಮಾರ್ ನಾಪತ್ತೆಯಾಗಿದ್ದಾರೆ.
ಜತೆಗೆ ಅವರ ಮೊಬೈಲ್ ಸ್ವಿಚ್ಆಫ್ ಆಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಸಂತ್ರಸ್ತ ಎನ್ನಲಾದ ಯುವಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬೆಂಗಳೂರಿನಲ್ಲಿ ದೂರು ದಾಖಲಿಸಿದ ಬೆನ್ನಲ್ಲೇ ಡಾ| ಸೂರಜ್ ರೇವಣ್ಣ ಬ್ರಿಗೇಡ್ನ ಪದಾಧಿಕಾರಿ ಹಾಗೂ ಸೂರಜ್ ಅವರ ಆಪ್ತ ಎನ್ನಲಾದ ಶಿವಕುಮಾರ್, ಸೂರಜ್ ಅವರಿಂದ ತನಗೆ 5 ಕೋಟಿ ರೂ. ಹಣ ಕೊಡಿಸುವಂತೆ ತನ್ನ ಮುಂದೆ ಯುವಕ ಬೇಡಿಕೆ ಇಟ್ಟಿದ್ದ. ಆತ ಸೂರಜ್ ಮೇಲೆ ಸುಳ್ಳು ಆರೋಪ ಹೊರಿಸಿದ್ದಾನೆ ಎಂದು ಆ ಯುವಕ ಮತ್ತು ಆತನ ಭಾವನ ವಿರುದ್ಧ ಹೊಳೆನರಸೀಪುರ ಠಾಣೆಗೆ ಶುಕ್ರವಾರ ಸಂಜೆ ದೂರು ನೀಡಿದ್ದ.
ಇದೀಗ ಪ್ರಕರಣ ಸಂಬಂಧ ಸೂರಜ್ರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆಯೇ ಶಿವಕುಮಾರ್ ನಾಪತ್ತೆಯಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kushtagi: ಕಳೆದೆರೆಡು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿ ಸೆರೆ
700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ
Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ
Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ
Bantwala: ಮರ ಬಿದ್ದು ಕೋಳಿ ಫಾರಂ ಜಖಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.