ಬ್ಯಾಡಗಿ:ವಿಕಲಚೇತನ ಮಕ್ಕಳಿಗೆ ಗಾಲಿ ಕುರ್ಚಿ ವಿತರಣೆ

16ವರ್ಷದಲ್ಲಿ ವಿಶ್ವದ ಮುಕ್ಕಾಲು ಪಾಲು ದೇಶಗಳಲ್ಲಿ ತನ್ನದೇ ಆದ ಕ್ಲಬ್‌ ಗಳನ್ನು ಹೊಂದಿತ್ತು

Team Udayavani, Jun 30, 2023, 2:45 PM IST

ಬ್ಯಾಡಗಿ:ವಿಕಲಚೇತನ ಮಕ್ಕಳಿಗೆ ಗಾಲಿ ಕುರ್ಚಿ ವಿತರಣೆ

ಬ್ಯಾಡಗಿ: ವೃತ್ತಿಪರರಿಂದ ಸಮಾಜದ ಅಭಿವೃದ್ಧಿಯ ಆಲೋಚನೆಗಳನ್ನು ಮಾನವೀಯ ಸೇವೆಗೆ ವಿಸ್ತರಿಸುವ ಮೂಲಕ ಅಶಕ್ತರನ್ನು ಸಶಕ್ತರನ್ನಾಗಿಸಲು ಮುಂದಾಗಿರುವ ರೋಟರಿ ಸಂಸ್ಥೆ (ಕ್ಲಬ್‌) ಸಾರ್ವಜನಿಕ ಸೇವೆಗೆ ವಿಶ್ವದಲ್ಲೇ ಖ್ಯಾತಿ ಗಳಿಸುವ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಬಣ್ಣಿಸಿದರು.

ಗುರುವಾರ ತಾಪಂ ಸಭಾಭವನದಲ್ಲಿ ವಿಕಲಚೇತನ ಮಕ್ಕಳಿಗೆ ರೋಟರಿ ಕ್ಲಬ್‌ ವತಿಯಿಂದ ನೀಡಲಾದ 1.80 ಲಕ್ಷ ರೂ. ಮೌಲ್ಯದ ಗಾಲಿ ಕುರ್ಚಿಗಳನ್ನು ವಿತರಿಸಿ ಮಾತನಾಡಿದರು. ರೋಟರಿ ಕ್ಲಬ್‌ ದೂರದೃಷ್ಟಿ ವಿಚಾರಗಳನ್ನು ಹೊಂದಿದ್ದ ಪಾಲ್‌ ಹ್ಯಾರಿಸ್‌ ಎಂಬ ವ್ಯಕ್ತಿಯ ಕನಸಿನ ಸಂಸ್ಥೆಯಾಗಿದೆ. 1905 ರಲ್ಲಿ ಪ್ರಾರಂಭ ವಾದ ರೋಟರಿ ಕ್ಲಬ್‌ ಆಫ್‌ ಚಿಕಾಗೋ ಮುಂದೆ ರೋಟರಿ ಕ್ಲಬ್‌ ಆಗಿ ಪರಿವರ್ತನೆಗೊಂಡು ಇಂದು ವಿಶ್ವದೆಲ್ಲೆಡೆ ತನ್ನ ಶಾಖೆ ಮತ್ತು ಇನ್ನರವೀಲ್‌ (ಮಹಿಳೆ ಯರ ಕ್ಲಬ್‌) ಅಂಗ ಸಂಸ್ಥೆಗಳನ್ನು ಹೊಂದಿದೆ ಎಂದರು.

ಪೊಲಿಯೋ ವಿರುದ್ಧ ಹೋರಾಟ ಅಜರಾಮರ: ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಮಾತನಾಡಿ, ರೋಟರಿ ಸಂಸ್ಥೆ ಸಾಧಿಸಿದ ಗುರಿ ಮತ್ತು ಫಲಿತಾಂಶಗಳಿಂದ ವಿಶ್ವಕ್ಕೆ ಪರಿಚಿತವಾಗಿದೆ. ಕಳೆದ 1979 ರಲ್ಲಿ ಫಿಲಿಪೈನ್ಸ್‌ನಲ್ಲಿ 6 ಮಿಲಿಯನ್‌ ಮಕ್ಕಳಿಗೆ ಪೊಲಿಯೋ ಲಸಿಕೆ ನೀಡುವ ಯೋಜನೆಯೊಂದಿಗೆ ಸಾಮಾಜಿಕ ಹೋರಾಟ ಆರಂಭಿಸಿದ ರೋಟರಿ ಕ್ಲಬ್‌, ತನ್ನ ಪರಿಶ್ರಮದಿಂದ ಇಂದು ವಿಶ್ವದಲ್ಲಿಯೇ ಕೇವಲ 2 ದೇಶಗಳಲ್ಲಿ ಮಾತ್ರ ಪೊಲಿಯೋ ರೋಗ ಉಳಿಯುವಂತೆ ಮಾಡಿದೆ ಎಂದರು.

ಸಂಸ್ಥೆ ಬದ್ಧತೆ: ಸ್ಥಳೀಯ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ, ರೋಟರಿ ಸಂಸ್ಥೆಗೊಂದು ಬದ್ಧತೆಯಿದೆ. ಸ್ಥಾಪನೆಯಾದ ಕೇವಲ 16ವರ್ಷದಲ್ಲಿ ವಿಶ್ವದ ಮುಕ್ಕಾಲು ಪಾಲು ದೇಶಗಳಲ್ಲಿ ತನ್ನದೇ ಆದ ಕ್ಲಬ್‌ ಗಳನ್ನು ಹೊಂದಿತ್ತು. ಅದೇ ಬದ್ಧತೆ ನಿಜವಾಗಿಯೂ ಇಂದು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಲು ಪ್ರೇರಣೆಯಾಗಿದೆ. ರೋಟರಿ ಕುಟುಂಬ ಇದೀಗ ಜಗತ್ತಿನಲ್ಲಿ ಯೇ ವ್ಯಾಪಿಸಿದ್ದು, ವಿಶ್ವದ ಸವಾಲು ಮತ್ತು ಸಮಸ್ಯೆ ಗಳನ್ನು ಪರಿಹರಿಸಲು ಕಂಕಣಬದ್ಧರಾಗಿದೆ ಎಂದರು.

ಇದೇ ವೇಳೆ ಅಗಸನಹಳ್ಳಿಯ ಪ್ರದೀಪ್‌ ಓಲೇಕಾರ, ಬನ್ನಿಹಟ್ಟಿ ಗ್ರಾಮದ ವಿನಾಯಕ ಗಡಿಯಪ್ಪನವರ, ಮಾಸಣಗಿಯ ಸಿದ್ಧಲಿಂಗೇಶ ಬನ್ನಿಹಟ್ಟಿ, ತಡಸದ ಉಜುಮಾ ಹರಿಹರ, ಕೆರವಡಿಯ ತನುಜಾ ಬುರಡೀ ಕಟ್ಟಿ, ಗುಂಡೆನಹಳ್ಳಿಯ ಸ್ಫೂರ್ತಿ ಮೂಲಿಮನಿ, ಸೇವಾ ನಗರದ ಮಂಜು ಲಮಾಣಿ, ಘಾಳಪೂಜಿಯ ಮೇಘಾ ಜಾಡರ ಮತ್ತು ರಾಕೇಶ್‌ ಪಾಟೀಲ, ಕಾಗಿನೆಲೆಯ ಸಿಮ್ರಾನ್‌ತಾಜ್‌ ನಾಯಕ್‌, ಮುಸ್ಕಾನ್‌ಬಾನು ಅಮ್ಮಿನ ಭಾವಿ ಬ್ಯಾಡಗಿ ಪಟ್ಟಣದ ಈರಮ್ಮ ಬಾಣಾಪೂರ ಅವರಿಗೆ ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು.

ಈ ವೇಳೆ ತಾಲೂಕು ಕಾಂಗ್ರೆಸ್‌ ಘಟಕದ ಅಧ್ಯಕ್ಷ ದಾನಪ್ಪ ಚೂರಿ, ಕಾರ್ಯದರ್ಶಿ ಮಾರುತಿ ಅಚ್ಚಿಗೇರಿ ಶಿಕ್ಷಣ ಇಲಾಖೆ ಬಿಆರ್‌ಸಿ ಸುಭಾಸ್‌, ರೋಟರಿ ಸದಸ್ಯರಾದ ಲಿಂಗಯ್ಯ ಹಿರೇಮಠ, ಮಾಲತೇಶ ಅರಳೀಮಟ್ಟಿ, ಡಾ|ಎ.ಎಂ.ಸೌದಾಗರ, ಶಿವರಾಜ ಚೂರಿ, ಸಿದ್ದಲಿಂಗಯ್ಯ ಬೂದಿಹಾಳಮಠ, ಬಸವರಾಜ ಸುಂಕಾಪುರ, ಜೆ.ಎಚ್‌.ಪಾಟೀಲ, ವೀರೇಶ ಬಾಗೊಜಿ, ಚೇತನ್‌ ಕುಡತರಕರ, ಪರಶುರಾಮ ಮೇಲಗಿರಿ, ಸತೀಶ ಅಗಡಿ, ಜಗದೀಶ ದೇವಿಹೊಸೂರ, ನಿರಂಜನ ಶೆಟ್ಟಿಹಳ್ಳಿ, ಮಾಲತೇಶ ಉಪ್ಪಾರ ಇತರರಿದ್ದರು.

ಟಾಪ್ ನ್ಯೂಸ್

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

ISREL

UN posts ಮೇಲೆಯೇ ಇಸ್ರೇಲ್ ದಾಳಿ! ; 600 ಭಾರತೀಯ ಸೈನಿಕರು ಅಪಾಯದಲ್ಲಿ!!

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ

1-yyyy

Mysuru Dasara; ಅರಮನೆಯಲ್ಲಿ ಡಬಲ್ ಸಂಭ್ರಮ: ಯದುವೀರ್ ಅವರಿಗೆ 2ನೇ ಮಗು ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ

haveri

ಬ್ಯಾಡಗಿ: ಆರೋಗ್ಯವಂತ ತಾಯಿ-ಮಕ್ಕಳು ದೇಶದ ಆಸ್ತಿ: ಶಿವಣ್ಣನವರ

ಆರು ತಿಂಗಳಲ್ಲಿ ಏಳು ಹರಕೆ ಕೋಣಗಳ ಸಾವು: ಭಕ್ತರ ನಂಬಿಕೆ ಚ್ಯುತಿ ತರಬೇಡಿ…

ಆರು ತಿಂಗಳಲ್ಲಿ ಏಳು ಹರಕೆ ಕೋಣಗಳ ಸಾವು: ಭಕ್ತರ ನಂಬಿಕೆ ಚ್ಯುತಿ ತರಬೇಡಿ…

1-weewqe

Road roller ಅಡಿಯಲ್ಲಿ ಸಿಲುಕಿ ಇಬ್ಬರು ದಾರುಣ ಸಾ*ವು

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

ISREL

UN posts ಮೇಲೆಯೇ ಇಸ್ರೇಲ್ ದಾಳಿ! ; 600 ಭಾರತೀಯ ಸೈನಿಕರು ಅಪಾಯದಲ್ಲಿ!!

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.