ಹಬ್ಬ-ಹರಿದಿನ-ಜಾತ್ರೆ ಸಾಮರಸ್ಯದ ಸಂಕೇತ


Team Udayavani, Dec 11, 2021, 3:04 PM IST

ಹಬ್ಬ-ಹರಿದಿನ-ಜಾತ್ರೆ ಸಾಮರಸ್ಯದ ಸಂಕೇತ

ಬಂಕಾಪುರ: ಹಬ್ಬ, ಹರಿದಿನ, ಜಾತ್ರೆ, ಉತ್ಸವಗಳು ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನುಬಿತ್ತಿ ಬೆಳೆಯುವದರ ಜೊತೆಗೆ, ಸರ್ವಜನಾಂಗದವರಲ್ಲಿ ಸಾಮರಸ್ಯ ಮೂಡಿಸುವ ಸಂಕೇತಗಳಾಗಿವೆ ಎಂದು ಹುಬ್ಬಳ್ಳಿಯ ನಿವೃತ್ತ ಪ್ರಾಚಾರ್ಯ ಕೆ.ಎಸ್‌.ಕೌಜಲಗಿ ಹೇಳಿದರು.

ಪಟ್ಟಣದ ಶ್ರೀ ದೇಸಾಯಿ ಮಠದ ಆವರಣದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ನಡೆದ ಎಣ್ಣೆದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಋತುಮಾನಗಳಲ್ಲಿ ನಡೆಯುವಹಬ್ಬ ಹರಿದಿನಗಳಲ್ಲಿ ನಾವು ಮಾಡುವ ಅಡುಗೆ, ಆಹಾರ ಸೇವನೆಯ ಸಂಪ್ರದಾಯಗಳುಮನುಷ್ಯನ ಆರೋಗ್ಯಕ್ಕೆ ಪೂರಕವಾಗಿವೆ. ಸರ್ವಜನಾಂಗದವರು ಒಂದೆಡೆ ಸೇರಿ ಸಾಮರಸ್ಯದಿಂದಬದುಕಲು ಪೂರಕ ವಾತಾವರಣ ಸೃಷ್ಟಿಸುತ್ತಲಿವೆ ಎಂದು ಹೇಳಿದರು.

ಡಾ|ಆರ್‌.ಎಸ್‌.ಅರಳೆಲೆಮಠ ಮಾತನಾಡಿ, ಎಂ.ಎ. ಪದವೀಧರರಾದ ಶ್ರೀ ಮಹಾಂತಸ್ವಾಮಿಗಳು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣನೀಡಲು ಶಿಕ್ಷಣ ಸಂಸ್ಥೆ ತೆರೆದು ವಿದ್ಯಾದಾನಮಾಡುವುದರ ಮೂಲಕ ಇತರರಿಗೆಪ್ರೇರಣಾದಾಯಕರಾಗಿದ್ದಾರೆ. ಸೃಷ್ಟಿ, ಪ್ರಕೃತಿಬಗ್ಗೆ ಅಪಾರ ಕಾಳಜಿ ಹೊಂದಿದ ಶ್ರೀಗಳುದೇಸಾಯಿ ಮಠದ ಆವರಣವನ್ನು ಸುಂದರಉದ್ಯಾನವನವನ್ನಾಗಿ ಮಾಡಿರುವುದು ಎಲ್ಲರ ಕಣ್ಮನಸೆಳೆಯುತ್ತವೆ ಎಂದರು.

ಇಳಿಯ ವಯಸ್ಸಿನಲ್ಲಿಯೂಎಳೆಯರಾಗಿ ಭಕ್ತರೇ ತಮ್ಮ ಸರ್ವಸ್ವವೆಂದು ಬಡ ಕುಟುಂಬಗಳು ಮಂಗಲ ಕಾರ್ಯಕ್ರಮಗಳನ್ನು ಮಾಡಿಕೊಳ್ಳಲು ಉಚಿತವಾಗಿ ಶ್ರೀಮಠದಕಲ್ಯಾಣ ಮಂಟಪ ಧಾರೆ ಎರೆಯುತ್ತಿರುವುದುಶ್ರೀ ಮಠದ ಸ್ವಾಮೀಜಿಯವರ ನಿಸ್ವಾರ್ಥ ಸೇವಾಮನೋಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಸದಾಶಿವಪೇಟೆ ವಿರಕ್ತಮಠದ ಶ್ರೀ ಗದಿಗೇಶ್ವರಸ್ವಾಮಿಗಳು, ಶ್ರೀ ಮಠದ ಮಹಾಂತಸ್ವಾಮಿಗಳು ಅಣ್ಣ ಬಸವಣ್ಣನವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದವರಾಗಿದ್ದಾರೆ. ಅವರ ತತ್ವ, ಸಿದ್ಧಾಂತಗಳಡಿ ಯಾವುದೇ ವಸ್ತುವನ್ನು ದುಂದು ವೆಚ್ಚ ಮಾಡಬಾರದೆಂಬ ಉದ್ದೇಶದಿಂದ ಕಾರ್ತಿಕೋತ್ಸವವನ್ನುಸಾಂಕೇತಿಕವಾಗಿ ದೀಪಾರಾಧನೆ ಮೂಲಕಆಚರಿಸಿ, ಇದರ ಅಂಗವಾಗಿ ಬಡವರಿಗೆ ಎಣ್ಣೆದಾನ ಮಾಡುತ್ತಿರುವುದು ಶ್ರೀಗಳವರ ಹೃದಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಎ.ಕೆ.ಆದವಾನಿಮಠ ಮಾತನಾಡಿದರು. ಪರಶುರಾಮನರೇಗಲ್‌ ಅವರಿಂದ ಸಂಗೀತ ಸೇವೆ ನಡೆಯಿತು. ಮಕ್ಕಳ ಭರತನಾಟ್ಯ ಪ್ರದರ್ಶನಕಣ್ಮನ ಸೆಳೆಯಿತು. ಸವಣೂರ ಅಕ್ಕನ ಬಳಗದಅಧ್ಯಕ್ಷೆ ಲಲಿತಾ ಮೆಣಸಿನಕಾಯಿ, ಅನ್ನಪೂರ್ಣಅಡವಿಸ್ವಾಮಿಮಠ, ಬಸವಂತರಾವ್‌ಮಾಮ್ಲೆದೇಸಾಯಿ, ಶೇಖಪ್ಪ ಅಂಕಲಕೋಟಿ,ಅನೀಲ್‌ ಕುಮಾರ ಮಾಮ್ಲೆ ದೇಸಾಯಿ, ಸಿದ್ದಪ್ಪಹರವಿ, ಬಿ.ಎಸ್‌.ಗಿಡ್ಡಣ್ಣವರ, ಸುರೇಶ ದೇಸಾಯಿ,ಹುಚ್ಚಯ್ಯಸ್ವಾಮಿ ಹುಚ್ಚಯ್ಯನಮಠ, ಸಿ.ಆರ್‌.ದೇಸಾಯಿ ಇತರರಿದ್ದರು. ಗಂಗುಬಾಯಿ ದೇಸಾಯಿ ನಿರೂಪಿಸಿದರು.

ಅಣ್ಣ ಬಸವಣ್ಣನವರು ಸರ್ವ ಜನಾಂಗದವರನ್ನು ಅನುಭವ ಮಂಟಪಕ್ಕೆ ಕರೆತಂದು ಸರ್ವ ಜನಾಂಗದರಲ್ಲಿ ಸಮಾನತೆ ತರಲು ಶ್ರಮಿಸಿದ್ದರು. ಆದರೆ, ಈಗ ಜಾತಿಗೊಂದು ಪೀಠ ಉದಯಿಸಿ ಅವರವರ ಸಮುದಾಯಕ್ಕೆ ಮಾತ್ರ ಸೀಮಿತವಾಗುತ್ತಿರುವುದು ವಿಷಾದದ ಸಂಗತಿ. ಶ್ರೀ ಮಹಾಂತಸ್ವಾಮಿಗಳು, ಪೀಠಾಧಿಪತಿ, ದೇಸಾಯಿಮಠ

ಟಾಪ್ ನ್ಯೂಸ್

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Australian Open:  ಹಿಂದೆ ಸರಿದ ಸಿಮೋನಾ ಹಾಲೆಪ್‌

Australian Open: ಹಿಂದೆ ಸರಿದ ಸಿಮೋನಾ ಹಾಲೆಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.