ಹಾನಗಲ್ಲ: ಬಸವಣ್ಣನ ವೇಷದಲ್ಲಿ ನೀರು-ಮತದಾನ ಜಾಗೃತಿ

ಚಿಕ್ಕಂದಿನಿಂದಲೂ ವೇಷಭೂಷಣ ಹಾಕುವ ಖಯಾಲಿ ನನ್ನದು.

Team Udayavani, Mar 30, 2024, 5:20 PM IST

Udayavani Kannada Newspaper

ಉದಯವಾಣಿ ಸಮಾಚಾರ
ಹಾನಗಲ್ಲ: ಕಾಮನ ಹಬ್ಬ ಬಂತೆಂದರೆ ಒಂದು ಹೊಸ ವೇಷದ ಮೂಲಕ ಇಡೀ ಹಾನಗಲ್ಲಿನಲ್ಲಿ ಸುತ್ತಿ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಜನಪದ ಕಲಾವಿದ ರವಿ ಲಕ್ಷ್ಮೇಶ್ವರ ಈ ಬಾರಿ ಕಾಲಜ್ಞಾನಿ ಬಾಲಬಸವಣ್ಣನ ವೇಷದಲ್ಲಿ ನೀರು ಮತದಾನದ ಕುರಿತು ಜಾಗೃತಿ ಸಂದೇಶ ನೀಡಿ ಹಬ್ಬಕ್ಕೆ ಮೆರಗು ತಂದಿದ್ದಾರೆ.

ನಾಲ್ಕನೇ ತರಗತಿಯಿಂದಲೇ ಹಾಡು, ನಾಟಕ, ವೇಷಭೂಷಣ ಸ್ಪರ್ಧೆಗಳಲ್ಲಿ ವಿಶೇಷ ಆಸಕ್ತಿ ಉಳ್ಳವರಾದ ಇವರು, ನಾಟಕ
ಕಲಾವಿದರೂ ಹೌದು. ಕಂಪನಿ ನಾಟಕದಲ್ಲೂ ಪಾತ್ರ ಮಾಡಿದ್ದಾರೆ. ಅಣ್ಣ ತಂಗಿ, ಮೂವರು ಮೂರ್ಖರು, ಸಿಂಧೂರ ಲಕ್ಷ ¾ಣ, ಗಡಿ ದುರ್ಗವ್ವ, ಹೆಂಡತಿಯೇ ನಿನಗೆ ನಮೋ ಸೇರಿದಂತೆ 20ಕ್ಕೂ ಅಧಿಕ ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ.

ವೇಷಭೂಷಣದಲ್ಲಿ ಬಾಲ್ಯದಿಂದಲೂ ಆಸಕ್ತಿ ಹೊಂದಿದ ರವಿ ಲಕ್ಷ್ಮೇಶ್ವರ ಹತ್ತಾರು ವರ್ಷಗಳಿಂದ ಕಾಮನ ಹಬ್ಬದಲ್ಲಿ ರಾಮ
ಲಕ್ಷ ¾ಣ ಸೀತಾ ಹನುಮಂತ, ರಾವಣ, ಯಮಧರ್ಮ, ಕಾಲಭೆ„ರವ, ಮಂತ್ರವಾದಿ, ಶಿವ, ದುರಗಮುರುಗಿ, ಶರೀಫ ಶಿವಯೋಗಿ,
ಕನಕದಾಸ, ಹುಲಿ, ಪವಾಡ ಪುರುಷ ಸಿದ್ದಪ್ಪಾಜಿ ವೇಷದ ಮೂಲಕ ಆಯಾ ಕಾಲಕ್ಕೆ ಬೇಕಾಗುವ ಜಾಗೃತಿ ಸಂದೇಶಗಳನ್ನು ಸಾರುತ್ತ ಬಂದಿದ್ದಾರೆ. ಹತ್ತು ವರ್ಷಗಳಿಂದ ಇಂಥ ವೇಷಭೂಷಣಕ್ಕೆ  ಮುಂದಾಗಿದ್ದಾರೆ.

ಚಿಕ್ಕಂದಿನಲ್ಲಿ ಹಿರಿಯರು ಹಾಕುತ್ತಿದ್ದ ವೇಷಭೂಷಣಗಳನ್ನು ನೋಡುತ್ತ ನನಗೂ ಮಾಡುವ ಹಂಬಲ. ಕಿತ್ತೂರ ಯಲ್ಲಪ್ಪನವರು, ಶಂಕರಪ್ಪ ಕೊಲ್ಲಾಪೂರ, ರೇವಡಿಗಾರ ಬಾಬು, ವಾಮನರಾವ ಏಸಕ್ಕನವರ, ಕಬ್ಬೂರ ಕರಿಯಪ್ಪ
ಮೊದಲಾದವರ ಹಾಕುತ್ತಿದ್ದ ವೇಷಭೂಷಣ ನನಗೆ ಸ್ಫೂರ್ತಿ ಎನ್ನುತ್ತಾರೆ ರವಿ.

ಪ್ರಸ್ತುತ ವರ್ಷದ ಕಾಲಜ್ಞಾನಿ ಬಾಲಬಸವಣ್ಣ ವೇಷಭೂಷಣದಲ್ಲಿ ಗುರುವಾರದಿಂದಲೇ ಇಡೀ ಹಾನಗಲ್ಲಿನ ಮನೆ ಮನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿ “ಬರಗಾಲ ಬಂದಿದೆ ನೀರು ಹಿತ ಮಿತ ಬಳಸಿ, ಚುನಾವಣೆ ಬಂದಿದೆ ತಪ್ಪದೇ ಮತನಾದ ಮಾಡಿ’ ಸಂದೇಶ ಸಾರುತ್ತಿರುವುದು ವಿಶೇಷವಾಗಿದೆ. ರವಿವಾರ ಮಧ್ಯಾಹ್ನದವರೆಗೆ ಈ ವೇಷಭೂಷಣ ಇರಲಿದ್ದು, ಕಾಮನನ್ನು ಸುಡುವ ಮೂಲಕ ಓಕಳಿ ಹಾಗೂ ವೇಷಭೂಷಣಕ್ಕೆ ತೆರೆ ಬೀಳಲಿದೆ.

ಚಿಕ್ಕಂದಿನಿಂದಲೂ ವೇಷಭೂಷಣ ಹಾಕುವ ಖಯಾಲಿ ನನ್ನದು. ಓಕಳಿ ಸಂದರ್ಭದಲ್ಲಿ ಒಂದೊಂದು ವಿಶೇಷ ವೇಷ ಧರಿಸಿ ಆಯಾ ಸಮಯಕ್ಕೆ ಬೇಕಾದ ಸಂದೇಶ ಹೇಳುತ್ತ ತಿರುಗಾಡುವುದು ಒಂದು ಜಾಗೃತಿಯಾದರೆ, ಇನ್ನೊಂದು ವೇಷ ಹಾಕು ಹಂಬಲ
ಪೂರೈಸಿಕೊಳ್ಳುವುದು. ಪ್ರತಿ ಬಾರಿ ಮುಂದಿನ ವರ್ಷ ಯಾವ ವೇಷ ಎಂದು ಕೇಳುತ್ತಾರೆ. ಕಾಮನಹಬ್ಬ ಸಮೀಪಿಸಿದಾಗ ಈ ವರ್ಷ ಯಾವ ವೇಷ ಎಂದು ಹುಡುಗರು, ಹಿರಿಯರು ಕೇಳುತ್ತಾರೆ. ಇದರಲ್ಲಿ ಖುಷಿ ಇದೆ.
ರವಿ ಲಕ್ಷ್ಮೇಶ್ವರ, ಜಾನಪದ ಕಲಾವಿದ, ಕಾಲಜ್ಞಾನಿ ಬಾಲಬಸವಣ್ಣನ ವೇಷಧಾರಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ ನಗರಸಭೆ; ಕಮಲ ಹಿಡಿದು ಗದ್ದುಗೆ ಏರಿದ ಪಕ್ಷೇತರರು-ಕಾಂಗ್ರೆಸ್‌ ಗೆ ಮುಖಭಂಗ

ಹಾವೇರಿ ನಗರಸಭೆ; ಕಮಲ ಹಿಡಿದು ಗದ್ದುಗೆ ಏರಿದ ಪಕ್ಷೇತರರು-ಕಾಂಗ್ರೆಸ್‌ ಗೆ ಮುಖಭಂಗ

CM-Siddu

Revenge of BJP-JDS: ನನ್ನ ವಿರುದ್ಧದ ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ: ಸಿಎಂ

Malatesha Temple: ಸಿದ್ದರಾಮಯ್ಯ ಭೇಟಿ ಹಿನ್ನೆಲೆ ದೇವಸ್ಥಾನಕ್ಕೆ ನಿರ್ಬಂಧ; ಭಕ್ತರ ಆಕ್ರೋಶ

Malatesha Temple: ಸಿಎಂ ಭೇಟಿ ಹಿನ್ನೆಲೆ ದೇವಸ್ಥಾನಕ್ಕೆ ಭಕ್ತರ ನಿರ್ಬಂಧ; ಆಕ್ರೋಶ

Shiggaon: ಗೃಹಲಕ್ಷ್ಮೀ ಹಣದಲ್ಲಿ ಸೊಸೆಗೆ ಫ್ಯಾನ್ಸಿ ಸ್ಟೋರ್ ಮಾಡಿಕೊಟ್ಟ ಅತ್ತೆ

Shiggaon: ಗೃಹಲಕ್ಷ್ಮೀ ಹಣದಲ್ಲಿ ಸೊಸೆಗೆ ಫ್ಯಾನ್ಸಿ ಸ್ಟೋರ್ ಮಾಡಿಕೊಟ್ಟ ಅತ್ತೆ

ಹಾವೇರಿ: ಗ್ಯಾರಂಟಿ ಯೋಜನೆ ಮೇಲ್ವಿಚಾರಣೆಗೆ ಅನುಷ್ಠಾನ ಸಮಿತಿ

ಹಾವೇರಿ: ಗ್ಯಾರಂಟಿ ಯೋಜನೆ ಮೇಲ್ವಿಚಾರಣೆಗೆ ಅನುಷ್ಠಾನ ಸಮಿತಿ-ಶಾಸಕ ರುದ್ರಪ್ಪ ಲಮಾಣಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.