ಜನರಿಗೆ ಪರಿಶುದ್ಧ ಜೇನುತುಪ್ಪ ದೊರೆಯಲಿ: ಪ್ರಭುದೇವ

ದೇವಿಹೊಸೂರ ತೋಟಗಾರಿಕೆ ಸಂಶೋಧನಾ ವಿವಿ ಕೇಂದ್ರದ ಮುಖ್ಯಸ್ಥ ಡಾ|ಪ್ರಭುದೇವ ಅಜ್ಜಪ್ಪಳವರ ಅಭಿಮತ

Team Udayavani, Jun 2, 2022, 2:52 PM IST

17

ಹಾವೇರಿ: ಮನುಷ್ಯರು ಸೇವಿಸಬಹುದಾದ ಕೀಟಗಳು ತಯಾರಿಸಿದ ಒಂದೇ ಒಂದು ಪದಾರ್ಥವೆಂದರೆ ಅದು ಜೇನುತುಪ್ಪ ಮಾತ್ರ. ಆದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುವಂತಹ ಜೇನುತುಪ್ಪ ಕಲಬೆರಕೆ ಯಿಂದ ಕೂಡಿರುತ್ತದೆ. ಜನರಿಗೆ ಪರಿಶುದ್ಧವಾದ ಜೇನುತುಪ್ಪ ದೊರೆಯುತ್ತಿಲ್ಲ ಎಂದು ದೇವಿಹೊಸೂರ ತೋಟಗಾರಿಕೆ ಸಂಶೋಧನಾ ವಿಶ್ವವಿದ್ಯಾಲಯ ಕೇಂದ್ರದ ಮುಖ್ಯಸ್ಥ ಡಾ|ಪ್ರಭುದೇವ ಅಜ್ಜಪ್ಪಳವರ ಹೇಳಿದರು.

ತಾಲೂಕಿನ ದೇವಿಹೊಸೂರು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ವಿಶ್ವ ಜೇನು ದಿನಾಚರಣೆ ಮತ್ತು ಒಂದು ದಿನದ ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೇನುತುಪ್ಪ ತಯಾರಾಗುವುದು ಸಸ್ಯಗಳಿಂದ. ಮಕರಂದ, ಸಿಹಿ ಜಿನಗು ಹಾಗೂ ಕೆಲವು ಕೀಟಗಳು ತಮ್ಮ ದೇಹದಿಂದ ಸ್ರವಿಸುವಂತಹ ಹೆಚ್ಚಾದ ಸಕ್ಕರೆಯ ಅಂಶವನ್ನು ಸೇವಿಸಿ ಅದಕ್ಕೆ ತಮ್ಮ ಉದರದ ಕಿಣ್ವಗಳನ್ನು ಸೇರಿಸಿ ಮತ್ತೆ ಬಾಯಿಂದ ಜೇನು ಗೂಡಿನ ತುಪ್ಪದ ಕೋಣೆಗೆ ಸುರಿದು ಹೆಚ್ಚಿನ ನೀರಿನ ಅಂಶವನ್ನು ತೆಗೆದು ಶುದ್ಧವಾದ ತುಪ್ಪವನ್ನು ತಯಾರಿಸಿ ಸಂಗ್ರಹಿಸಿಕೊಂಡಿರುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುವಂತಹ ಜೇನುತುಪ್ಪ ಕಲಬೆರಕೆಯಿಂದ ಕೂಡಿರುತ್ತದೆ. ಹಾಗಾಗಿ, ಜನರಿಗೆ ಪರಿಶುದ್ಧ ಜೇನುತುಪ್ಪ ದೊರೆಯುತ್ತಿಲ್ಲ ಎಂದು ಹೇಳಿದರು.

ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ|ವಿನಯಕುಮಾರ್‌ ಎಂ.ಎಂ. ಮಾತನಾಡಿ, ಆಧುನಿಕ ಜೇನು ಕೃಷಿ ಪಿತಾಮಹ, ಜೇನು ಕೃಷಿ ಮಹತ್ವ ಸಾರಿದ ಆಂಟೋನ್‌ ಜಾನ್ಸರ್‌ ಅವರು 1734ರ ಮೇ 20ರಂದು ಜನಿಸಿದರು. ಅವರ ನೆನಪಿಗೆ ಮೇ 20 ರಂದು ವಿಶ್ವ ಜೇನು ದಿನಾಚರಣೆ ಆಚರಿಸಲಾಗುತ್ತದೆ ಎಂದರು.

ರೈತ ಸಮುದಾಯಕ್ಕೆ ಮತ್ತು ಜೇನು ಕೃಷಿ ಆಸಕ್ತರಿಗೆ ಅರಿವು ಮೂಡಿಸುವುದು ಮೊದಲ ಆದ್ಯತೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲೆ ಜೇನು ಸಂಪತ್ತು ನಿಧಾನವಾಗಿ ನಶಿಸುತ್ತಿವೆ. ಮನುಷ್ಯ ತನ್ನ ದುರಾಸೆಯಿಂದ ಜೇನುತುಪ್ಪಕ್ಕಾಗಿ ಅವುಗಳನ್ನು ಅಮಾನುಷವಾಗಿ ಸುಟ್ಟು ಹಾಕುವುದು, ಮನೆ, ಕಚೇರಿ, ವಠಾರಗಳಲ್ಲಿ ಕಟ್ಟುವಂತಹ ಜೇನುಗೂಡುಗಳಿಂದ ತೊಂದರೆಯಾಗಬಹುದೆಂಬ ಕಾರಣದಿಂದ ಅವುಗಳಿಗೆ ತೊಂದರೆ ನೀಡುವುದು ಮತ್ತು ವಾತಾವರಣದ ವೈಪರೀತ್ಯ, ಕಾಡುಗಳ ನಾಶ, ಅವೈಜ್ಞಾನಿಕವಾಗಿ ಪೀಡೆನಾಶಕಗಳ ಬಳಕೆಯಿಂದ ಆಗುತ್ತಿರುವ ಹಾನಿ ತಪ್ಪಿಸಲು ಜೇನು ಕೃಷಿಕರಿಗೆ, ಸಾರ್ವಜನಿಕರಿಗೆ ಮತ್ತು ರೈತರಿಗೆ ಇವುಗಳ ಬಗ್ಗೆ ಸರಿಯಾಗಿ ಅರಿವು ಮೂಡಿಸಲು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಅತೀ ಅವಶ್ಯಕವಾಗಿದೆ ಎಂದರು.

ತರಬೇತಿ ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚು ಹಿರೇಕೆರೂರು ತಾಲೂಕಿನ ಸ್ವಸಹಾಯ ಗುಂಪಿನ ಮಹಿಳೆಯರು ಮತ್ತು ಹಾವೇರಿ ಸುತ್ತಮುತ್ತಲಿನ ಜೇನು ಕೃಷಿ ಆಸಕ್ತರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ|ವಿನಯಕುಮಾರ್‌ ಎಂ.ಎಂ. ಮತ್ತು ವಿದ್ಯಾಶ್ರೀ ದುಳೆಹೊಳಿ ಅವರು ಜೇನು ಕೃಷಿ ಹಾಗೂ ಪರಾಗ ಸ್ಪರ್ಶದ ಮಹತ್ವ, ಜೇನು ಸಂಸ್ಕರಣೆ ಮತ್ತು ಜೇನು ಉತ್ಪನ್ನಗಳು ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

ಡಾ|ವಿನಯಕುಮಾರ್‌ ಎಂ.ಎಂ. ಮತ್ತು ಕ್ಷೇತ್ರ ಸಹಾಯಕರಾದ ಜಯಪ್ಪ ಕೆರೂಡಿ ಜೇನು ಕೃಷಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಾವೇರಿ ಎನ್‌ಆರ್‌ ಎಲ್‌ಎಂ ಸಹಾಯಕ ಯೋಜನಾಧಿಕಾರಿ ಪರಶುರಾಮ್‌ ಪೂಜಾರ, ದೇವಿಹೊಸೂರ ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ|ರವಿಕುಮಾರ್‌ ಬಿ., ಡಾ|ಕಿರಣ್‌ಕುಮಾರ್‌ ನಾಗಜ್ಜನವರ, ಡಾ|ಚಂದ್ರಾವತಿ ಬಿ. ಹಾಗೂ ರಮೇಶ್‌ ದಾಸರ್‌ ಇತರರಿದ್ದರು.

ಜೇನು ಕೃಷಿ ಮಹಿಳೆಯರಿಗೆ ಒಂದು ಅತ್ಯುತ್ತಮ ಉಪ ಕಸುಬಾಗಿದೆ. ಮಹಿಳೆಯರು ಕೃಷಿಯೊಂದಿಗೆ ಇತರೆ ಉಪಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ಜೇನು ಕೃಷಿಯಂತಹ ಚಟುವಟಿಕೆಗಳನ್ನು ಮಾಡಿಕೊಂಡು ಹೆಚ್ಚಿನ ಆದಾಯ ಗಳಿಸಬಹುದಾಗಿದೆ. –ಡಾ|ಗುರುಮೂರ್ತಿ ಎಸ್‌.ಬಿ., ಸಹ ಪ್ರಾಧ್ಯಾಪಕರು, ತೋಟಗಾರಿಕೆ ಸಂಶೋಧನಾ ವಿವಿ, ದೇವಿಹೊಸೂರ

ಟಾಪ್ ನ್ಯೂಸ್

1-PTI

Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್

1-asddasdsa

Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು

Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು

1-lo

Police; ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್.

1-anurag

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

1-qe

Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Haveri

Haveri: ಭೀಕರ ರಸ್ತೆ ಅಪಘಾತ; 13 ಜನರು ಸಾವು

1-saa

Haveri; ಕರ್ಜಗಿ ಕಾರಹುಣ್ಣಿಮೆಯಲ್ಲಿ ಬಂಡಿ ಹರಿದು ವ್ಯಕ್ತಿ ದುರ್ಮರಣ

ರಾಣಿಬೆನ್ನೂರ: ಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಪರಂಪರೆ ಯೋಗ-ಪ್ರಕಾಶಾನಂದ ಮಹಾರಾಜ

ರಾಣಿಬೆನ್ನೂರ: ಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಪರಂಪರೆ ಯೋಗ-ಪ್ರಕಾಶಾನಂದ ಮಹಾರಾಜ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

crime (2)

Haveri ; ಮಚ್ಚಿನಿಂದ ಹಲ್ಲೆ ನಡೆಸಿ ಯುವಕನ ಕೊಲೆ ಯತ್ನ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

1-PTI

Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್

1-asddasdsa

Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್‌ ಲಾಂಚ್‌

Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್‌ ಲಾಂಚ್‌

Queen’s Premier League: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಜೆರ್ಸಿ ಬಿಡುಗಡೆ

Queen’s Premier League: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಜೆರ್ಸಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.