ಗಾಯತ್ರಿ ಮಂತ್ರ ಜಪದಿಂದ ದೇಹದ ನಾಡಿ ಶುದ್ಧಿ: ನಾಗರಾಜಾನಂದ ಮಹಾಸ್ವಾಮಿ

ಎಡಭಾಗದಲ್ಲಿ 36 ಸಾವಿರ ನಾಡಿಗಳಾಗಿ ವಿಭಾಗಿಸಲ್ಪಟ್ಟಿದೆ

Team Udayavani, Oct 15, 2024, 5:00 PM IST

ಗಾಯತ್ರಿ ಮಂತ್ರ ಜಪದಿಂದ ದೇಹದ ನಾಡಿ ಶುದ್ಧಿ: ನಾಗರಾಜಾನಂದ ಮಹಾಸ್ವಾಮಿ

ಉದಯವಾಣಿ ಸಮಾಚಾರ
ರಾಣಿಬೆನ್ನೂರ: ಗಾಯತ್ರಿ ಮಂತ್ರ ನಿತ್ಯ ಜಪಿಸುವುದರಿಂದ ದೇಹದ ನಾಡಿ ಶುದ್ಧಿಯಾಗುತ್ತದೆ. ಸ್ವಯಂ ದೇವರ ಸ್ವರೂಪವೇ ಆಗಿದ್ದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರು ಈ ಮಂತ್ರವನ್ನು ತ್ರಿಕಾಲ ಜಪಿಸುತ್ತಿದ್ದರು ಎಂದು ಗುರು ನಾಗರಾಜಾನಂದ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಏರ್ಪಡಿಸಲಾಗಿದ್ದ ದೇವಿ ಪುರಾಣ ಪ್ರವಚನ, ಮಂಗಲ ಮತ್ತು ಗಾಯತ್ರಿ ಹೋಮ-ಹವನ, ಪೂಜಾ ಕೈಂಕರ್ಯ ನೆರವೇರಿಸಿ, ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿ ಆಶೀರ್ವಚನ ನೀಡಿದರು. ಆಯುರ್ವೇದ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ 72 ಸಾವಿರ ಪ್ರಧಾನ ನಾಡಿಗಳಿವೆ. ಬಲಭಾಗದಲ್ಲಿ 36 ಸಾವಿರ, ಎಡಭಾಗದಲ್ಲಿ 36 ಸಾವಿರ ನಾಡಿಗಳಾಗಿ ವಿಭಾಗಿಸಲ್ಪಟ್ಟಿದೆ ಎಂದರು.

ಹಿಂದೆ ಪೂರ್ವಜರು ಗಾಯತ್ರಿ ಮಂತ್ರಕ್ಕೆ ಇಷ್ಟು ಮಹತ್ವ ಕೊಟ್ಟದ್ದು ಓಂಕಾರದ ಮೂರು ಅಕ್ಷರಗಳೇ (ಅ, ಉ, ಮ) ಮೂರು
ವ್ಯಾಹೃತಿಗಳಾದವು (ಭೂಃ ಭುವಃ ಸುವಃ) ಮೂರು ವ್ಯಾಹೃತಿಗಳು ಬೆಳೆದು ಮೂರು ಪಾದದ ಗಾಯತ್ರಿಯಾಯಿತು. ವೇದಮಾತೆ
ಗಾಯತ್ರಿ ಮಂತ್ರವನ್ನು ಜಪಿಸುತ್ತ ಸಾಯಂ-ಪ್ರಾತಃ ಸಂಧ್ಯಾವಂದನೆಯನು ಪಾಲಿಸುತ್ತಾರೋ ಅವರು ಗಾಯತ್ರಿ
ಮಾತೆಯ ಭಕ್ತಿಗೆ ಪಾತ್ರರಾಗುತ್ತಾರೆ.

ತೇತ್ರಾಯುಗದಲ್ಲಿ ಶ್ರೀರಾಮಚಂದ್ರನು ನಾರದ ಮುನಿಗಳ ಮಾರ್ಗದರ್ಶನದಂತೆ ನವರಾತ್ರಿ ವ್ರತವನ್ನು ಆಚರಿಸಿ ರಾವಣನನ್ನು
ಸಂಹರಿಸಿದ ಹಾಗೂ ದ್ವಾಪರ ಯುಗದಲ್ಲಿ ಶ್ರೀದೇವತೆಯನ್ನು ಪೂಜಿಸಿ ಆರ್ಶೀವಾದ ಪಡೆದ ಪಾಂಡವರು ದುಷ್ಟರಿಂದ ಬಿಡುಗಡೆ
ಹೊಂದಿದರೆಂದು ಮಹಾಭಾರತದಲ್ಲಿ ನೋಡುತ್ತೇವೆ. ಅದರ ಸಂಕೇತವಾಗಿ ಇಂದು ನಾವು ದಸರಾ ಉತ್ಸವ ಆಚರಿಸುತ್ತಿದ್ದೇವೆ
ಎಂದು ಶ್ರೀಗಳು ತಿಳಿಸಿದರು.

ಚಳಗೇರಿಯ ವೇ. ಚನ್ನಯ್ಯ ಶಾಸ್ತ್ರಿಗಳು ಹಾಗೂ ಸಂಗಡಿಗರು ಸಿದ್ಧಾರೂಢ ಮೂರ್ತಿ ಹಾಗೂ ಗಾಯತ್ರಿ ದೇವಿ ಮೂರ್ತಿಗೆ
ಬ್ರಹ್ಮಿಮೂರ್ತದಲ್ಲಿ ಅಭಿಷೇಕ, ಬಿಲ್ವಾರ್ಚನೆ, ವಿವಿಧ ಹೂವುಗಳ ಅಲಾಂಕಾರದೊಂದಿಗೆ ಗಾಯತ್ರಿ ಹೋಮ, ಹವನ ಹಾಗೂ ನವಗ್ರಹ ಪೂಜಾ ವಿಧಿ-ವಿಧಾನಗಳನ್ನು ನಡೆಸಿಕೊಟ್ಟರು.

ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪ ಗೌಡ್ರ, ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ ಕಡೂರು,
ಅರುಣಸ್ವಾಮಿ ಹಿರೇಮಠ, ಗೋಪಾಲ ಕೊಡ್ಲೆರ, ಡಾಕೇಶ ಲಮಾಣಿ, ಶಿವಪ್ಪ ಬಣಕಾರ, ಶಿವು ಗುತ್ತೂರ, ವಿಶ್ವನಾಥ ಕುಂಬಳೂರ, ಮೈಲಾರಪ್ಪ ಸೋಮಲಾಪುರ, ಪ್ರಕಾಶ ಚನ್ನಗೌಡ್ರ, ಗುರುಶಾಂತ ಬಾಗಿಲದವರ, ಜಯಪ್ಪ ನೆಲವನ್ನಿ, ಮುರಗೇಶ ಬಣಕಾರ, ಡಾ| ಸುನಿತಾ, ಸಂದೀಪ ಮಾಕನೂರ, ಭರಮಪ್ಪ ಕೊಡ್ಲೆರ, ಗುಡ್ಡೇಶಿ ಹೆಡಿಯಾಲ, ಮಹಾಂತೇಶಗೌಡ್ರ ಸೇರಿದಂತೆ ಸಾವಿರರೂ ಭಕ್ತರು ಮತ್ತು ಮಹಿಳೆಯರು ಹೋಮದಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Tollywood: ʼಬಾಹುಬಲಿʼ ಮೂರನೇ ಪಾರ್ಟ್‌ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?

Tollywood: ʼಬಾಹುಬಲಿʼ ಮೂರನೇ ಪಾರ್ಟ್‌ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?

B Nagendra reacts to Janardhana Reddy’s statement

Bellary: ರೆಡ್ಡಿ ಸಂಡೂರಲ್ಲಿ ಅರಮನೆ ಕಟ್ಟಿದರೂ ಗೆಲುವು ಕಾಂಗ್ರೆಸ್ ಪಕ್ಷದ್ದೇ: ನಾಗೇಂದ್ರ

6-katapady

Katapady: ಟ್ಯಾಂಕರ್‌, ಕಾರು, ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

Bellary; B Nagendra dance at Valmiki Jayanti event

Bellary; ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನಾಗೇಂದ್ರ ಭರ್ಜರಿ ಡ್ಯಾನ್ಸ್

ಮೊದಲು ಮಳೆ ಕಾಟ ಬಳಿಕ ಬ್ಯಾಟರ್‌ ಗಳ ಶೂನ್ಯದಾಟ

INDvsNZ; ಮೊದಲು ಮಳೆ ಕಾಟ ಬಳಿಕ ಬ್ಯಾಟರ್‌ ಗಳ ಶೂನ್ಯದಾಟ: ಭಾರತ ಕೇವಲ 46ಕ್ಕೆ ಆಲೌಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Havery ಧಾರಾಕಾರ ಮಳೆ; ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಬಾಲಕ

Haveri: ಧಾರಾಕಾರ ಮಳೆ; ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಬಾಲಕ

4

Savanur: ಮನೆಯವರು ಟ್ರಿಪ್‌ ಹೋದ ಸಂದರ್ಭದಲ್ಲಿ ಮನೆಯಿಂದ ಕಳ್ಳತನ

ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯ ಕಾರ್ಯ ಸ್ಮರಣೀಯ-ಡಾ|ವಿಜಯಮಹಾಂತೇಶ

ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯ ಕಾರ್ಯ ಸ್ಮರಣೀಯ-ಡಾ|ವಿಜಯಮಹಾಂತೇಶ

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ

haveri

ಬ್ಯಾಡಗಿ: ಆರೋಗ್ಯವಂತ ತಾಯಿ-ಮಕ್ಕಳು ದೇಶದ ಆಸ್ತಿ: ಶಿವಣ್ಣನವರ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Belagavi: ಕಿತ್ತರೂ ಉತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲೂ ರಸಮಂಜರಿ ಕಾರ್ಯಕ್ರಮ

Belagavi: ಕಿತ್ತರೂ ಉತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲೂ ರಸಮಂಜರಿ ಕಾರ್ಯಕ್ರಮ

6(1)

Kinnigoli: ಮೂರು ಕಾವೇರಿ ಜಂಕ್ಷನ್‌ನಲ್ಲೇ ಬೃಹತ್‌ ಟ್ಯಾಂಕ್‌!

Tollywood: ʼಬಾಹುಬಲಿʼ ಮೂರನೇ ಪಾರ್ಟ್‌ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?

Tollywood: ʼಬಾಹುಬಲಿʼ ಮೂರನೇ ಪಾರ್ಟ್‌ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?

B Nagendra reacts to Janardhana Reddy’s statement

Bellary: ರೆಡ್ಡಿ ಸಂಡೂರಲ್ಲಿ ಅರಮನೆ ಕಟ್ಟಿದರೂ ಗೆಲುವು ಕಾಂಗ್ರೆಸ್ ಪಕ್ಷದ್ದೇ: ನಾಗೇಂದ್ರ

6-katapady

Katapady: ಟ್ಯಾಂಕರ್‌, ಕಾರು, ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.