![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 26, 2019, 5:13 PM IST
ಹೊಳೆಆಲೂರ: ಎಳ್ಳ ಅಮಾವಾಸ್ಯೆ ಅಂಗವಾಗಿ ಹೊಳೆಆಲೂರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ರೈತ ಬಾಂಧವರು ತಮ್ಮ ಚಕ್ಕಡಿ, ಆಟೋ, ಟ್ರ್ಯಾಕ್ಟರ್ಗಳಲ್ಲಿ ತಮ್ಮ ತಮ್ಮ ಹೊಲಗಳಿಗೆ ತೆರಳಿ ಭೂಮಿ ತಾಯಿಗೆ ಉಡಿ ತುಂಬಿ, ಹೊಲದ ತುಂಬಾ ಚರಗಾ ಚೆಲ್ಲಿ ಸಂತಸಪಟ್ಟರು.
ಕಳೆದ ಎರಡು ತಿಂಗಳ ಹಿಂದೆ ಮಲಪ್ರಭಾ ನೆರೆ ಹಾವಳಿಗೆ ರೈತರು ಸಾಕಷ್ಟು ಹಾನಿ ಅನುಭವಿಸಿದ್ದರೂ ತಂಪು ವಾತಾವರಣದ ಪರಿಣಾಮ ಈ ಬಾರಿ ಹೊಲದಲ್ಲಿ ಹಿಂಗಾರು ಬೆಳೆ ಉತ್ತಮವಾಗಿ ಬೆಳೆದು ನಿಂತಿರುವ ಕಡಲೆ, ಬಿಳಿಜೋಳ, ಗೋಧಿ, ಮೆಣಸಿನಕಾಯಿ ರೈತರ ಮೊಗದಲ್ಲಿ ಸಂತಸಕ್ಕೆ ಕಾರಣವಾಗಿದೆ.
ಕಡಬು, ಎಳ್ಳ ಹೋಳಿಗೆ, ಶೆಂಗಾ ಹೋಳಿಗೆ, ಪುಂಡಿ ಪಲ್ಲೆ, ಬದನೆಕಾತಿ, ಹೆಸರು ಕಾಳು, ವಿವಿಧ ಚಟ್ನಿಯ ದೊಡ್ಡ ದೊಡ್ಡ ಬುತ್ತಿಗಂಟು ಗಾಡಿಯಲ್ಲಿ ಹೇರಿಕೊಂಡು ಹೊಲ ಇಲ್ಲದ ನೆರೆ ಹೊರೆಯವರನ್ನು ಕರೆದುಕೊಂಡು ಅರಿಸಿನ, ಕುಂಕಮ, ಬಳೆ, ಸೀರೆಯಿಂದ ಹೊಲದ ಮಧ್ಯದಲ್ಲಿರುವ ಬನ್ನಿ ಗಿಡಕ್ಕೆ ಭೂಮಿ ತಾಯಿ ಎಂದು ಭಾವಿಸಿಕೊಂಡು ಉಡಿ ತುಂಬಿದರು. ನಂತರ ಸಾಮೂಹಿಕ ಭೋಜನ ಮಾಡಿ ಸಂತಸ ವ್ಯಕ್ತಪಡಿಸಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.