ಮಾಯವಾಗುತ್ತಿವೆ ಉ.ಕ. ಜಿಲ್ಲೆಯ ಮಾವಿನ ತಳಿಗಳು

ಕರಾವಳಿ ಬಿಟ್ಟರೆ ಇನ್ನೆಲ್ಲೂ ಸಿಗದ ವಿಶಿಷ್ಟ ರುಚಿಯ ಹಣ್ಣುಗಳು

Team Udayavani, Jun 5, 2019, 1:34 PM IST

5-June-31

ಜೀಯು, ಹೊನ್ನಾವರ
ಹೊನ್ನಾವರ:
ಮಾವು ಅಂದಕೂಡಲೇ ಆಪೂಸ್‌, ಪಾಯರಿ, ಮಲ್ಲಿಕಾ, ಜಿಲ್ಲೆಯ ಕರಿ ಇಷಾಡ ಮಾತ್ರ ಗೊತ್ತು. ಇವುಗಳ ಹೆಸರು ಹೇಳಿದರೆ ರುಚಿಯೂ ನೆನಪಿಗೆ ಬರುತ್ತದೆ. ಪೇಟೆಯಲ್ಲಿ ಇವುಗಳದೇ ದರ್ಬಾರು.

ಆದರೆ ಹೊನ್ನಾವರದ ಕರ್ಕಿ ಮತ್ತು ಕರಾವಳಿಯ ಕೆಲವು ಊರುಗಳಲ್ಲಿ ಇನ್ನೆಲ್ಲೂ ಸಿಗದ ವಿಶಿಷ್ಟ ರುಚಿ, ಗಾತ್ರ, ಬಣ್ಣದ ಹತ್ತಾರು ತಳಿಗಳಿವೆ. ಅನಿರ್ವಚನೀಯ ರುಚಿಯ ಈ ಹಣ್ಣುಗಳ ತಳಿಯನ್ನು ಅತ್ಯಂತ ಕಷ್ಟಕಾಲದಲ್ಲಿ ಹಿರಿಯರು ತಂದು ಬೆಳೆಸಿ, ಉಳಿಸಿದ್ದರು. ಕಳೆದೆರಡು ದಶಕದಿಂದ ಈ ತಳಿಗಳು ಮಾಯವಾಗುತ್ತಾ ಬಂದಿದೆ. ಜಿಲ್ಲೆಯ ತೋಟಗಾರಿಕಾ ವಿದ್ಯಾಲಯ, ಇಲಾಖೆ ಈ ತಳಿಯನ್ನು ಉಳಿಸಿದರೆ ಮುಂದಿನ ಪೀಳಿಗೆಗೆ ಉಪಕಾರವಾಗುತ್ತದೆ.

ಮುಸ್ರಾ, ರಾಮಕಪಿ, ಮಾಣಿಬಟ್ಟ, ಗಿಡುಗ, ಮಲಗೋವಾ, ಬುಳ್ಳಹೆಗ್ಡೆ ಮತ್ತು ಭಟ್ಕಳದ ಸರಾಸರಿ 2ಕೆಜಿ ತೂಕದ ಖುದಾ ದಾದಾ ತಳಿ ಎಷ್ಟು ಜನಕ್ಕೆ ಗೊತ್ತು ? ಶ್ರೀಪಾದ ಎಂಬ ಗುತ್ತಿಗೆದಾರರು ಈ ಎಲ್ಲ ತಳಿಗಳನ್ನು ಹುಡುಕಿ, ಕಾಯಿ ಸಂಗ್ರಹಿಸಿ, ಜಿಲ್ಲೆಯ ಹೊರಗೆ ಕಳಿಸುತ್ತಾರೆ.

ಬೆಂಗಳೂರು, ಮುಂಬೈಯವರಿಗೆ ಗೊತ್ತಿರುವ ಈ ಜಾತಿಯ ಮಾವಿನ ಸವಿ ಜಿಲ್ಲೆಯವರಿಗೆ ಗೊತ್ತಿಲ್ಲ. ದೇಶೀ ಮತ್ತು ವಿದೇಶಿ ಆಕಳ ಹಾಲು, ನಾಟಿ ಮತ್ತು ಫಾರ್ಮ್ ಕೋಳಿ ಮೊಟ್ಟೆಯ ರುಚಿಯಲ್ಲಿರುವ ಭಿನ್ನತೆ ಮತು ಆರೋಗ್ಯಕರ ರುಚಿಯಂತೆ ಸ್ಥಳೀಯ ಮಾವಿಗೆ ವಿಶಿಷ್ಟ ರುಚಿಯಿದೆ. ಕರ್ಕಿ, ಹಳದೀಪುರ ಭಾಗದ ಸಮುದ್ರ ತೀರದ ಹೊಯ್ಗೆ ಚಿಟ್ಟೆಯಲ್ಲಿ ಹುಲುಸಾಗಿ ಬೆಳೆಯುವ ಈ ಜಾತಿಯ ಮಾವಿನ ಗಿಡಗಳು ಕಡಿಮೆ ಹಣ್ಣು ಕೊಟ್ಟರು ಪ್ರತಿಯೊಂದು ತನ್ನದಾದ ಸುವಾಸನೆ, ರುಚಿ, ಬಣ್ಣ ಹೊಂದಿದೆ.

ವೇದವೇದಾಂತ ಪಾರಂಗತರಾಗಿ ವೈದಿಕ ಕಾರ್ಯಗಳಿಗೆ ದೇಶ ಸುತ್ತಿತ್ತಿದ್ದ ಕರ್ಕಿ ಪಂಡಿತರು ಮರಳಿ ಊರಿಗೆ ಬರುವಾಗ ಈ ಜಾತಿಯ ಮಾವಿನ ಗೊರಟೆ ತಂದು ನೆಟ್ಟು ಬೆಳೆಸಿದ್ದರು. ಕಷ್ಟಕಾಲಕ್ಕೆ ಮಾವಿನ ಆದಾಯ ನೆರವಾಗುತ್ತಿತ್ತು. ಈಗ ಆ ತಲೆಮಾರು ಇಲ್ಲ. ಹೊಸ ತಲೆಮಾರು ಜೀವನೋಪಾಯಕ್ಕೆ ಶಹರ ಸೇರಿಕೊಂಡಿದೆ. ಪೂರ್ವಜರ ಮನೆ, ಒಂದೆರಡು ಮರಗಳು ಮಾತ್ರ ಉಳಿದುಕೊಂಡಿದೆ. ಈ ತಳಿ ಉಳಿಸುವ ಆಸಕ್ತಿ, ಬಿಡುವು ಅವರಿಗೆ ಇಲ್ಲವಾದರೂ ದೇಶದಲ್ಲಿರುವ ನೂರಾರು ಮಾವಿನ ತಳಿಗಳನ್ನು ಉಳಿಸಿಕೊಂಡಂತೆ ಜಿಲ್ಲೆಯ ಈ ತಳಿಯನ್ನು ಉಳಿಸಬೇಕಾದ ಅಗತ್ಯವಿದೆ. ಬುಳ್ಳಹೆಗ್ಡೆ ಇಷಾಡಿನಲ್ಲಿ ಗಟ್ಟಿ, ಮೃದು ಜಾತಿ ಇದೆ. ಜೀರಿಗೆಯ ಸುವಾಸನೆ ಇದೆ. ಗಿಡಗದ ಹಣ್ಣಿನ ರಸವನ್ನು ತಾಟಿನಲ್ಲಿ ಹಾಕಿ ನಾಲ್ಕು ದಿನ ಬಿಸಿಲಲ್ಲಿ ಇಟ್ಟರೆ ಸುಮಧುರ ವಾಸನೆಯ ಹಪ್ಪಳ ತಯಾರಾಗುತ್ತದೆ. ಹೀಗೆ ಪ್ರತಿ ಜಾತಿ ಹಣ್ಣಿಗೂ ಒಂದು ಜಾತಕ ಇದೆ.

ಲೋಡ್‌ಗಟ್ಟಲೆ ಸ್ಥಳೀಯ ತಳಿಯ ಸಾವಯವ ಹಣ್ಣುಗಳು ದೂರದೂರಿನ ನಾಲಿಗೆಗೆ ಸವಿ ಕೊಡುತ್ತವೆ. ಅಲ್ಲಿಯ ಹಣ್ಣುಗಳು ರಾಸಾಯನಿಕ ಸಿಂಪಡಿಸಿಕೊಂಡು ಇಲ್ಲಿ ಹಣ್ಣಾಗಿ ಇಲ್ಲಿನವರ ಆರೋಗ್ಯ ಕೆಡಿಸುತ್ತದೆ. ಜಿಪಂ, ತೋಟಗಾರಿಕಾ ಇಲಾಖೆ, ತೋಟಗಾರಿಕಾ ಕಾಲೇಜು ಮನಸ್ಸು ಮಾಡಿದರೆ ಜಿಲ್ಲೆಯ ತಳಿ ಉಳಿಸುವುದು ಕಷ್ಟವೇನಲ್ಲ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.