ನಾಡಿದ್ದು ಯಕ್ಷ ಪರ್ವ ರಂಗ ಮಹೋತ್ಸವ

ಕೋಟ ಸುರೇಶ ಬಂಗೇರರಿಗೆ ಕಣ್ಣಿ-ಮೂರೂರು ಕೃಷ್ಣ ಭಟ್ಟರಿಗೆ ಅಭಿನೇತ್ರಿ ಪ್ರಶಸ್ತಿ

Team Udayavani, Oct 11, 2019, 6:31 PM IST

Udayavani Kannada Newspaper

ಹೊನ್ನಾವರ: ಯಕ್ಷಗಾನ ಕಲಾಲೋಕದಲ್ಲಿ ಸ್ತ್ರೀ ಮತ್ತು ಪುರುಷ ಪಾತ್ರಗಳೆರಡರಲ್ಲೂ ಸಮಾನ ಯಶಸ್ಸು ಕಂಡಿರುವ ಅಪರೂಪದ ಕಲಾವಿದ ನೀಲ್ಕೋಡ ಶಂಕರ ಹೆಗಡೆ. ನೂರು ಕಿಮೀ. ವ್ಯಾಪ್ತಿಯಲ್ಲಿ ರಾತ್ರಿ ಮೂರು ಪಾತ್ರಗಳನ್ನು ನಿಭಾಯಿಸುವ ಚುರುಕಿನ ಕಲಾವಿದ. ಇಷ್ಟೇ ಆದರೆ ಬರೆಯುವ ಅಗತ್ಯವಿರಲಿಲ್ಲ.

ಒಬ್ಬ ತಾಯಿ ಕರುಳಿನ ಸಹೃದಯನಾಗಿ, ಅಶಕ್ತ ಕಲಾವಿದರಿಗೆ ನೆರವಾಗುವ, ಹಿರಿಯ ಕಲಾವಿದರನ್ನು ಗೌರವಿಸುವ, ವರ್ಷಕ್ಕೊಮ್ಮೆ ದಿನವಿಡೀ ಉಚಿತ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಿ ಹಬ್ಬ ಮಾಡುವ ಶಂಕರ ಹೆಗಡೆಯಂತಹ ಕಲಾವಿದರು ಯಕ್ಷಗಾನದಲ್ಲಿ ವಿರಳ.

ಅಭಿನೇತ್ರಿ ಆರ್ಟ್‌ ಟ್ರಸ್ಟ್‌ ರಚಿಸಿಕೊಂಡ ಶಂಕರ ಹೆಗಡೆ ಕಳೆದ ವರ್ಷ 4ಲಕ್ಷ ರೂ. ಗೂ ಹೆಚ್ಚಿನ ಮೊತ್ತ ದಾನಿಗಳಿಂದ ಸಂಗ್ರಹಿಸಿ, ಆರ್ಥಿಕ ಸಮಸ್ಯೆಯುಳ್ಳ ಕಲಾವಿದರಿಗೆ ಧನಸಹಾಯ ಮಾಡಿದ್ದಲ್ಲದೇ ಕಲಾವಿದರನ್ನು ಗೌರವಿಸಿದರು. ಹಿಂದಿನಬಾರಿಯ ಉಳಿತಾಯದ ಹಣವನ್ನು ಠೇವಣಿ ಇಟ್ಟಿದ್ದಾರೆ.

ತಮ್ಮ ನಿತ್ಯದ ವೇಷ ಮುಗಿದ ಮೇಲೆ ಪ್ರತಿ ಆಟಕ್ಕೆ ಒಂದಿಷ್ಟು ಹಣ ತೆಗೆದಿಡುವ ಶಂಕರ ಹೆಗಡೆ ಆ ಮೊತ್ತವನ್ನೂ ಸೇರಿಸಿ ವಾರ್ಷಿಕ ಸಂಭ್ರಮ ನೆರವೇರಿಸುತ್ತಾರೆ. ದಾನಕೊಟ್ಟವರಿಗೆ ಮರೆತು ಹೋಗುವಷ್ಟು ಒಳ್ಳೆಯ ಆಟ ತೋರಿಸುತ್ತಾರೆ.

ಅ.13 ರಂದು ಹೊನ್ನಾವರ ಪ್ರಭಾತನಗರ ಮೂಡಗಣಪತಿ ಸಭಾಭವನದಲ್ಲಿ ಯಕ್ಷಪರ್ವ ರಂಗಮಹೋತ್ಸವ ಏರ್ಪಡಿಸಿದ್ದಾರೆ. ಕೋಟ ಸುರೇಶ ಬಂಗೇರರಿಗೆ ಕಣ್ಣಿ ಪ್ರಶಸ್ತಿ, ಮೂರೂರು ಕೃಷ್ಣ ಭಟ್ಟರಿಗೆ ಅಭಿನೇತ್ರಿ ಪ್ರಶಸ್ತಿ ನೀಡಲಿದ್ದಾರೆ. ಅಪಘಾತದಿಂದ ಗಾಯಗೊಂಡು ವಿಶ್ರಾಂತಿ ಪಡೆಯುತ್ತಿರುವ ಶ್ರೀಪಾದ ಹೆಗಡೆ ಕಣ್ಣಿ, ತ್ರಯಂಬಕ ಹೆಗಡೆ ಇಡುವಾಣಿ ಮತ್ತು ಶಾಂತಾರಾಮ ಭಂಡಾರಿ ಕುಟುಂಬಕ್ಕೆ ಧನಸಹಾಯ ಮಾಡಲಿದ್ದಾರೆ. ಬೆಳಗ್ಗೆ 10ಕ್ಕೆ ಕೆರೆಕೋಣ ಯಕ್ಷಕಿರೀಟಿ ಮಕ್ಕಳ ಕುಶ-ಲವ ನಂತರ ಕಲಾವೃಂದ ಹೊಸಪಟ್ಟಣ ಅವರ ಕಂಸವಧೆ ಯಕ್ಷಗಾನವಿದೆ. ಮಧ್ಯಾಹ್ನ 2ರಿಂದ ತಾಳಮದ್ದಲೆ ನಡೆಯಲಿದ್ದು ವಿದ್ವಾಂಸರಾದ ಉಮಾಕಾಂತ ಭಟ್‌ ಕೆರೆಕೈ, ಗಣಪತಿ ಭಟ್‌ ಸಂಕದಗುಂಡಿ ಪಾಲ್ಗೊಳ್ಳಲಿದ್ದಾರೆ.

ಸಂಜೆ 4ಕ್ಕೆ ಸುಬ್ರಹ್ಮಣ್ಯ ಧಾರೇಶ್ವರ, ಗಣಪತಿ ಭಟ್‌, ಸರ್ವೇಶ್ವರ ಮೂರೂರು, ಶಂಕರ ಭಾಗ್ವತ, ಗಣೇಶ ಗಾಂವ್ಕರ ಇವರಿಂದ ಹಿಮ್ಮೇಳ ವೈಭವವಿದೆ. ಸಂಜೆ 7ಕ್ಕೆ ಅಭಿಮನ್ಯು ಮತ್ತು ಗದಾಯುದ್ಧ ಆಟವಿದೆ. ಗಣೇಶ ನಾಯ್ಕ, ಅಶೋಕ ಭಟ್‌, ಕಡಬಾಳ ಉದಯ ಹೆಗಡೆ, ಕಾರ್ತಿಕ ಕಣ್ಣಿ ಮೊದಲಾದವರು ಪಾಲ್ಗೊಳ್ಳುವರು.

ಮುಂಜಾನೆ 10ಕ್ಕೆ ಡಾ| ಶ್ರೀಪಾದ ಶೆಟ್ಟಿ ಅಧ್ಯಕ್ಷತೆಯಲ್ಲಿ ಕೃಷ್ಣ ಯಾಜಿ ಬಳಕೂರು ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 6ಕ್ಕೆ ನಡೆಯುವ ಮುಕ್ತಾಯ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ, ಜಿ.ಜಿ. ಶಂಕರ, ಸಾಲಿಗ್ರಾಮ ಮೇಳದ ಕಿಶನ್‌ ಕುಮಾರ ಹೆಗಡೆ ಮೊದಲಾದ ಗಣ್ಯರು ಪಾಲ್ಗೊಳ್ಳುವರು.

ಶಂಕರ ಹೆಗಡೆಯ ಕಲಾಪ್ರೇಮವನ್ನು ಮೆಚ್ಚಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ದಾನಿಗಳು ಸಹಾಯ ಮಾಡುತ್ತಾರೆ. ಹೀಗೆ ಹಣ ಸೇರಿಸಿ ಧನ್ಯತೆ ಪಡೆಯುವ ಅಪರೂಪದ ಕಲಾವಿದ ನೀಲ್ಕೋಡ ಶಂಕರ ಹೆಗಡೆ ಕಾರ್ಯಕ್ರಮಕ್ಕೆ ಕಲಾಪ್ರೇಮಿಗಳಿಂದ ಸರ್ವರೀತಿಯ ಸಹಕಾರ ಕೋರಿದ್ದಾರೆ.

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.