ಸೂಫಿ -ಶರಣರ ಸಂಗಮ ಕೇಂದ್ರ ಬೀದರ್‌

ಸೂಫಿ ಸಾಹಿತ್ಯ ಪರಿಷತ್‌ ಉದ್ಘಾಟನೆ"ಬೀದರ್‌ ಜಿಲ್ಲೆ ಸೂಫಿಗಳು' ಕೃತಿ ಬಿಡುಗಡೆ

Team Udayavani, Nov 24, 2019, 4:51 PM IST

24-November-22

ಹುಮನಾಬಾದ: ಬೀದರ್‌ ಜಿಲ್ಲೆ ಸೂಫಿ -ಶರಣದ ಸಂಗಮದ ಕೇಂದ್ರ. ಜನಸಾಮಾನ್ಯರ ಭಾವನೆಗೆ ನೇರವಾಗಿ ಸ್ಪಂದಿಸಿ, ಹಿಂದೂ-ಮುಸ್ಲಿಮರ ಮಧ್ಯೆ ಪರಸ್ಪರ ಭಾವೈಕ್ಯ ಬೆಸೆಯುವುದೇ ಸೂಫಿ ಸಾಹಿತ್ಯದ ಮೂಲ ಉದ್ದೇಶವಾಗಿತ್ತು ಎಂದು ಹಿರಿಯ ಸಾಹಿತಿ ರಂಜಾನ್‌ ದರ್ಗಾ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಮಾಣಿಕಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನ ಶನಿವಾರ ಏರ್ಪಡಿಸಿದ್ದ ಸೂಫಿ ಸಾಹಿತ್ಯ ಪರಿಷತ್‌ ಉದ್ಘಾಟನೆ ಹಾಗೂ ಸಾಹಿತಿ ಐ.ಎಸ್‌.ಶಕೀಲ್‌ ಅವರ “ಬೀದರ್‌ ಜಿಲ್ಲೆ ಸೂಫಿಗಳು’ ಕೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೂಫಿಗಳು ಯಾವತ್ತೂ ಪವಾಡಗಳನ್ನು ಮಾಡುತ್ತಿರಲಿಲ್ಲ ಆದರೆ ಮಾಡಿದ್ದೆಲ್ಲವೂ ಪವಾಡವಾಗುತ್ತಿತು ಎನ್ನುವುದೇ ಅವರ ವಿಶೇಷ. ಅನಾರೋಗ್ಯದಿಂದ ಹಾಸಿಗೆ ಹಿಡಿದ ಮಗುವಿನ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸಿದರೆ ಗುಣಮುಖ ಆಗತ್ತದೋ ಇಲ್ಲವೋ ಎರಡನೇ ವಿಷಯ. ಆದರೇ ಆ ಬಗ್ಗೆ ಹೊಂದಿರುವ ಆತ್ಮವಿಶ್ವಾಸ, ಧನಾತ್ಮಕ ಚಿಂತನೆ ಮೂಲಕ ನಂಬುವಂತೆ ಮಾಡುವ ಮನಸ್ಸಿನಲ್ಲೇ ಅದನ್ನು ಗುಣಮುಖವಾಗಿಸುವ ಶಕ್ತಿ ಇರುತ್ತದೆ ಎಂಬುದೇ ಇರದಲ್ಲಿನ ವಿಶೇಷ ಎಂದರು.

ನಂಬಿಕೆಯಲ್ಲಿ ಎಷ್ಟು ಶಕ್ತಿ ಇದೆ ಎಂಬುದಕ್ಕೆ ಬಸವಣ್ಣನವರ “ನೀನೊಲಿದರೆ ಕೊರಡು ಕೊನರುವುದಯ್ಯ, ನೀನೊಲಿದಲೆ ಬರಡು ಹಯನುವುದಯ್ಯ, ನೀನೊಲಿದರೆ ವಿಷವೂ ಅಂಮೃತವಹುದಯ್ಯ’ ಎಂಬ ವಚನ ಉತ್ತಮ ನಿದರ್ಶನ. ಸೂಫಿಗಳು, ಶರಣರು, ಸಂತರು, ದಾಸರು ಮಾಡಿದ್ದು ಇದನ್ನೇ. ಸಂತರೆಲ್ಲರೂ ಸರ್ವಧರ್ಮ ಸಮನ್ವಯತೆ ಸಾರುತ್ತಾರೆ ಎನ್ನುವುದಕ್ಕೆ ಈ ಭಾಗದ ಮಾಣಿಕಪ್ರಭುಗಳು ಉತ್ತಮ ನಿದರ್ಶನ ಎಂದರು. ಮುಸ್ಲಿಂ ಧರ್ಮ, ಲಿಂಗಾಯತ ಧರ್ಮಗಳೆರಡೂ ಏಕದೇವೋಪಾಸನೆಯನ್ನು ಬಲವಾಗಿ  ಬಿದವು.
ಆದರೆ ಅದನ್ನೀಗ ಲಿಂಗಾಯತರಾರೂ ಪಾಲಿಸುತ್ತಿಲ್ಲ. ವಿಚಿತ್ರ ಎಂದರೇ 400ವರ್ಷಗಳ ಹಿಂದೆ ಗುರುನಾನಕರು “ಏಕ ಓಂಕಾರ’ ಎಂಬ ಮಂತ್ರ ಪಠಣ ಮೂಲಕ ಏಕದೇವೋಪಾಸನೆ ಅಕ್ಷರಶಃ ಪಾಲಿಸಿಕೊಂಡು ಬರುವಂತೆ ಸಾರಿದರು. ಅದನ್ನೀಗ ಸಿಖ್ಖರೆಲ್ಲರೂ ಪಾಲಿಸಿಕೊಂಡು ಬರುತ್ತಿದ್ದಾರೆ.

ಚಾತುವರ್ಣ ಪದ್ಧತಿ ಅಳಿಸಿ, ಎಲ್ಲರನ್ನೂ ಸಮಾನರನ್ನಾಗಿ ಕಾಣುವುದೇ ಸೂಫಿ, ಸಂತರು ಮತ್ತು ಶರಣರ ಮೂಲ ಉದ್ದೇಶ ಎಂದರು. ಬಿಡುವಿಲ್ಲದ ಪೊಲೀಸ್‌ ಇಲಾಖೆಯಲ್ಲಿ ಸೇವೆ ಮಾಡಿಕೊಂಡು ಸತತ ಪರಿಶ್ರಮದಿಂದ ಸಾಹಿತ್ಯ ಕೃಷಿ ಮಾಡಬಹುದು ಎಂಬುದಕ್ಕೆ ಐ.ಎಸ್‌.ಶಕೀಲ್‌ ನಿದರ್ಶನ. ಪ್ರತಿಭೆ ಎನ್ನುವುದು ಯಾವುದೇ ಭಾಷಾ ವಿಷಯ ಪಂಡಿತರಿಗೆ ಸೀಮಿತವಲ್ಲ. ಪೊಲೀಸ್‌.

ಕೆಎಸ್‌ಆರ್‌ಟಿಸಿ, ವೈದ್ಯಕೀಯ ಇಲಾಖೆ, ವ್ಯಾಪಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಇದ್ದ ಅದೆಷ್ಟೋ ಜನ ಸಾಹಿತ್ಯ ಕೃಷಿ ಮಾಡಿರುವ ನಿದರ್ಶನಗಳಿವೆ. ಆಯಾ ಇಲಾಖೆಯ ಹಿರಿಯ ಅಧಿಕಾರಿಗಳು ಅಂಥವರನ್ನು ಗುರುತಿಸಿ, ಪ್ರೋತ್ಸಾಹಿಸಲು ವೇದಿಕೆ ಕಲ್ಪಿಸಿಕೊಟ್ಟಾಗ ಇನ್ನೂ ಹೆಚ್ಚಿನ ಸಾಧನೆ ಮಾಡುಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಾಹಿತಿಗಳಾದ ಡಾ|ಸೋಮನಾಥ ಯಾಳವಾರ, ಡಿವೈಎಸ್ಪಿ ಎಸ್‌.ಬಿ.ಮಹೇಶ್ವರಪ್ಪ, ತಹಶೀಲ್ದಾರ್‌ ನಾಗಯ್ಯಸ್ವಾಮಿ ಹಿರೇಮಠ, ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಚ³ ವಾಲಿ, ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಕಾರ್ಯದರ್ಶಿ ಗುಂಡಪ್ಪ ದೊಡ್ಮನಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಧರಿನಾಡು ಕನ್ನಡ ಸಂಘದ ಜಿಲ್ಲಾ ಗೌರವಾಧ್ಯಕ್ಷ ದೇಶಾಂಶ ಹುಡಗಿ ಐ.ಎಸ್‌.ಶಕೀಲ್‌ ಅವರ ಸಾಹಿತ್ಯ ಕೃಷಿ ಶ್ಲಾಘಿಸಿದರು. ರ್ಥಪ್ಪ ಭೀಮಶಟ್ಟಿ ವಚನಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿಗಳಾದ ಬಿ.ಎಸ್‌.ಖೂಬಾ, ಎಚ್‌. ಕಾಶಿನಾಥರೆಡ್ಡಿ, ಡಾ|ಗವಿಸಿದ್ದಪ್ಪ ಪಾಟೀಲ, ಪ್ರಭಾಕರ್‌ ಕುಲಕರ್ಣಿ, ಶಿವಸ್ವಾಮಿ ಚೀನಕೇರಾ, ರುಕ್ಮೋದ್ದಿನ್‌
ಇಸ್ಲಾಂಪೂರ, ವೀರಶಟ್ಟಿ ಇಮ್ರಾಪೂರ, ವೀರಣ್ಣ ಕುಂಬಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರರೆಡ್ಡಿ ಮಾಲಿ ಪಾಟೀಲ, ರಮೇಶ ಸಲಗರ್‌, ಶಿವರಾಜ ಮೇತ್ರೆ, ಸುನೀಲ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಚ್ಚಿದಾನಂದ ಮಠಪತಿ, ಮಾಜಿ ಅಧ್ಯಕ್ಷ ರವಿಕುಮಾರ ಭಂಡಾರಿ, ಕರವೇ ಅಧ್ಯಕ್ಷ ಮನೋಜಕುಮಾರ ಸಿತಾಳೆ, ಭೀಮಸೇನ ಗಾಯಕವಾಡ, ಶಾಂತವೀರ ಯಲಾಲ್‌, ವೀರಂತರೆಡ್ಡಿ ಜಂಪಾ, ಈಶ್ವರ ತಡೋಳಾ ಗಣ್ಯರು ಇದ್ದರು. ತಿಮ್ಮಣ್ಣ ಪ್ರಾರ್ಥಿಸಿದರು. ಸಾಹಿತಿ ಕೆ.ವೀರಾರೆಡ್ಡಿ ಸ್ವಾಗತಿಸಿದರು. ಭುವನೇಶ್ವರಿ ಗಂಗಶೆಟ್ಟಿ ನಿರೂಪಿಸಿದರು. ಉಮೇಶ ಮಠದ ವಂದಿಸಿದರು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.