ಜನಪದ ಹಾಡಿನ ಮೋಡಿಗೆ ಬಿಸಿಲೂರಿಗರು ಫಿದಾ


Team Udayavani, May 27, 2019, 12:53 PM IST

27-May-18

ಕಲಬುರಗಿ: ಕನ್ನಡ ಭವನದ ಆವರಣದಲ್ಲಿ ಡಾ| ಕೆ. ರಾಮೇಶ್ವರಪ್ಪ ನೇತೃತ್ವದಲ್ಲಿ 'ಹೊನ್ನ ಬಿತ್ತೇವೂ ಹೊಲಕೆಲ್ಲಾ' ಜನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.

ಕಲಬುರಗಿ: ನಗರದ ಕನ್ನಡ ಭವನದ ಆವರಣದಲ್ಲಿ ರವಿವಾರದ ಇಳಿಸಂಜೆ ತಂಗಾಳಿಯೊಂದಿಗೆ ತೆರೆದುಕೊಂಡ ಜನಪದ ಸಂಗೀತ ಲೋಕ ಬಿಸಿಲೂರಿನ ಜನತೆಯ ಮನಸೂರೆಗೊಳಿಸಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಮೈಸೂರಿನ ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಹೊನ್ನ ಬಿತ್ತೇವೂ ಹೊಲಕೆಲ್ಲಾ’ ಜನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮ ನಗರವಾಸಿಗಳ ತನುಮನ ಮುಟ್ಟುವಲ್ಲಿ ಯಶಸ್ವಿಯಾಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯ ಮೈಸೂರಿನ ಇನಿದನಿ ಮಣ್ಣ ಮಕ್ಕಳ ಹೊನ್ನಪದಗಳ ಬಳಗದ ಕಲಾವಿದರು ಪ್ರಸ್ತುತ ಪಡಿಸಿದ ಸುಮಧುರ ಗೀತೆಗಳು ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಂಡವು. ಕಲಾವಿದರ ಕಂಚಿನ ಕಂಠದಿಂದ ಹೊರಹೊಮ್ಮಿದ ಜನಪದ ಹಾಡುಗಳಿಗೆ ಎಲ್ಲ ವರ್ಗದ ವಯಸ್ಸಿನವರು ಮಾರು ಹೋದರು. ಹಿರಿಯ ಮನಸುಗಳು, ಯುವ ಹೃದಯಗಳು, ಮಹಿಳೆಯರು ಕಲಾವಿದರ ಗಾಯನಕ್ಕೆ ತಲೆದೂಗಿ ನಲಿದು ಸಂಭ್ರಮಿಸಿದರು.

ಜಾನಪದ ಗಾರುಡಿ, ತಂಡದ ನಾಯಕ ಡಾ.ಕೆ.ರಾಮೇಶ್ವರಪ್ಪ ಅವರು ಕಂಡಾಯ ಹೊತ್ತು ಹೆಜ್ಜೆ ಹಾಕುತ್ತಲೇ ಭವನದ ಆವರಣದಲ್ಲಿ ಪ್ರವೇಶಿಸಿದರು. ಅವರು ಸುತ್ತ ಮುತ್ತ ಹಿಂದೆ ಸಹ ಕಲಾವಿದರೆಲ್ಲ ದೇಶಿ ಪದಗಳ ತಾಳಕ್ಕೆ ಹೆಜ್ಜೆ ಹಾಕಿದರು.

ವೇದಿಕೆ ಮೇಲೆ ಹುಮ್ಮಸ್ಸಿನಿಂದ ಕಡಕೋಳ ಮಹಾದೇವಪ್ಪನವರ ‘ಬಸವಣ್ಣನೇ ಗುರು, ಪ್ರಭುದೇವನೇ ಲಿಂಗ’, ‘ಬೆಳ್ಳನೆ ಎರಡೆತ್ತು, ಬೆಳ್ಳಿಯ ಬಾರಕೋಲು’, ‘ತಿಂಗಳು ಮುಳಗಿದವೋ, ರಂಗೋಲಿ ಬೆಳಗಿದವೋ’ ಹೀಗೆ ಒಂದರ ಹಿಂದೊಂದೆ ಹಾಡುಗಳು ಹೊರಹೊಮ್ಮಿದವು.

ನಾಯಕ ರಾಮೇಶ್ವರಪ್ಪನವರು ಏರು ದನಿಯಲ್ಲಿ ಹಾಡುತ್ತಾ, ಕುಣಿಯುತ್ತಿದ್ದರೆ, ಸಹ ಕಲಾವಿದರಾದ ಜನಪದ ಧೀರಧ್ವನಿ, ನರಸಿಂಗಮೂರ್ತಿ, ಜನಪದ ಜೀವಧಾರೆ ಬಿ.ಬಸವರಾಜ, ಜನಪದ ಸಿದ್ಧರೂಪ ನಟರಾಜ ಹರದನಹಳ್ಳಿ, ಜನಪದ ಜಾಣ ರವಿರಾಜ ಹಾಸು, ಜನಪದ ಜೀರುಂಡೆ ಅರುಣ ಕುಮಾರ ವೇದಿಕೆ ತುಂಬಾ ಓಡಾಡುತ್ತಾ ಪ್ರೇಕ್ಷಕರನ್ನು ಸೆಳೆದರು. ಗಾಯಕಿ ಸುಧಾರಾಣಿ ಸುಮಧುರವಾಗಿ ಹಾಡಿದರು. ಇವರ ನಡುವೆ ಜಾನಪದ ಮೋಡಿಕಾರ ಜಗ್ಗು ಜಾದುಗಾರ ತಮ್ಮ ಚಮತ್ಕಾರ ಪ್ರದರ್ಶಿಸಿದರು.

ಗುವಿವಿ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಮ್‌, ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ದೌಲತರಾಯ ಮಾಲಿ ಪಾಟೀಲ ಇದ್ದರು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewewqe

Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

SIddu-Phone

Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್‌ಪಿಗೆ ಕರೆ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.