ನ್ಯಾಯವಾದಿ ದಂಪತಿ ಮನೆಗೆ ಕನ್ನ
Team Udayavani, Jul 8, 2018, 11:17 AM IST
ಕಲಬುರಗಿ: ನ್ಯಾಯವಾದಿ ದಂಪತಿ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿರುವ ಅಲ್ಮಾರಿ ಮುರಿದು 8 ತೊಲಿ ಬಂಗಾರ ಹಾಗೂ 30 ಸಾವಿರ ರೂ. ನಗದು ದೋಚಿದ ಘಟನೆ ನಗರದ ಖೂಬಾ ಪ್ಲಾಟ್ದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಹಿರಿಯ ನ್ಯಾಯವಾದಿಗಳಾದ ಅನುರಾಧಾ ದೇಸಾಯಿ ಹಾಗೂ ಮಹಾಂತೇಶ ದೇಸಾಯಿ ಅವರಿರುವ ಶಂಕರ ಪಾಟೀಲ ಅವರಿಗೆ ಸೇರಿದ ಮನೆಯೇ ಕಳ್ಳತನಕ್ಕೀಡಾಗಿದ್ದು. ಮೊದಲನೇ ದಿನ ಬಾಗಿಲು ಮುರಿದು ಅಲ್ಮಾರಿ ಮುರಿಯಲು ಯತ್ನಿಸಿದಾರೂ ತೆರೆಯದಿದ್ದಕ್ಕೆ ಮರುದಿನ ಮಾರಕಾಸ್ತ್ರಗಳ ಸಮೇತ ಆಗಮಿಸಿ ಕಳ್ಳರು ತಮ್ಮ ಕೃತ್ಯ ಎಸಗಿದ್ದಾರೆ. ಕಳ್ಳರು ಮನೆಯಲ್ಲಿರುವಾಗ ಕಂಟ್ರೋಲ್ ರೂಂ ಹಾಗೂ ಸ್ಟೇಷನ್ ಬಜಾರ ಪೊಲೀಸ್ ಠಾಣೆಗೆ ತಿಳಿಸಿದ್ದರೂ ಪೊಲೀಸ್ರು ತಂಡದೊಂದಿಗೆ ಸಕಾಲಕ್ಕೆ ಬಾರದಿರುವುದು. ಮೊದಲು ಇಬ್ಬರು ಪೊಲೀಸ್ರು ಸುಮ್ಮನೇ ಬಂದು ತದನಂತರ ಮತ್ತಿಬ್ಬರೊಂದಿಗೆ ಸೀಟಿ ಊದುತ್ತಾ ಕಳ್ಳರ ಬಳಿ ಹೋಗಲು ಹಿಂದೇಟು ಹಾಕಿರುವುದರಿಂದ ಪೊಲೀಸ್ರ ಕಣ್ಣೆದುರಿಗೆ ಹಿಂಬಾಗಿಲಿಂದ ಕಳ್ಳರು ಪರಾರಿಯಾದರು ಎಂದು ನ್ಯಾಯವಾದಿ ಅನುರಾಧಾ ದೇಸಾಯಿ ತಿಳಿಸಿದ್ದಾರೆ.
ಕಂಟ್ರೋಲ್ ರೂಂಗೆ ಫೋನ್ ಮಾಡಿದ ನಂತರ ಸಕಾಲಕ್ಕೆ ಪೊಲೀಸ್ರು ಬಂದು ಕಾರ್ಯಾಚರಣೆ ಕೈಗೊಂಡಿದ್ದರೆ ಕಳ್ಳರು ಸಿಗುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.