
ಬಸವಾದಿ ಪ್ರಮಥರು ಸರ್ವ ಜನಾಂಗದ ಚೇತನ
Team Udayavani, Dec 18, 2017, 10:47 AM IST

ಆಳಂದ: ಬಸವಾದಿ ಪ್ರಮಥರು ಸರ್ವ ಜನಾಂಗದ ಚೇತನ. ಅವರ ತತ್ವ ವಚನ ಸಾಹಿತ್ಯ ನಡೆ, ನುಡಿ ಆದರ್ಶ ಪ್ರತಿಯೊಬ್ಬರಿಗೂ ಸನ್ಮಾರ್ಗದ ರಹದಾರಿಯಾಗಿದೆ. ಅರಿತು ಆಚರಣೆಗೆ ತರಬೇಕು ಎಂದು ಖಜೂರಿ ಮಠದ ಶ್ರೀ ಮುರುಘೇಂದ್ರ ಸ್ವಾಮಿಗಳು ಹೇಳಿದರು.
ತಾಲೂಕಿನ ಖಜೂರಿ ಗ್ರಾಮದ ಕೋರಣೇಶ್ವರ ಮಠದ ಪೀಠಾಧಿಕಾರ ವಹಿಸಿಕೊಂಡ 22ನೇ ವರ್ಷಾಚರಣೆ ಪ್ರಯುಕ್ತ
ಮಠದಲ್ಲಿ ಭಕ್ತರು ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸ್ವಾಮೀಜಿ ಮಾತನಾಡಿದರು.
ಶರಣ ಪರಂಪರೆ ಮುಂದುವರಿಸಿದ ಖಜೂರಿ ಕೋರಣೇಶ್ವರರು ಮಾನವ ಜನಾಂಗದ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಬೇಡಿದ ಭಕ್ತರಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ಹೀಗಾಗಿ ಖಜೂರಿ ಮಠ ಅಪರೂಪದ ಕ್ಷೇತ್ರವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರ ಆದರ್ಶ ಜೀವನಕ್ಕೆ ಗುರಿ ಮತ್ತು ಗುರು ಅತ್ಯಗತ್ಯವಾಗಿದೆ. ಮಠದ ಅಧಿಕಾರ ವಹಿಸಿಕೊಂಡ ಆರಂಭದ ವರ್ಷಗಳಿಂದ ಹಲವು ತೊಂದರೆಗಳ ನಡುವೆ 22 ವರ್ಷಗಳ ಕಾಲ ಭಕ್ತರ ಭಕ್ತಿ ಶ್ರಮದಿಂದ ಶ್ರೀಮಠ ಅಭಿವೃದ್ಧಿಯತ್ತ ಸಾಗಿದೆ ಎಂದು ಹೇಳಿದರು.
ಶಿವಾನಂದ ಸ್ವಾಮಿಗಳು, ಶರಣಿ ನೀಲಲೋಚನ ತಾಯಿ, ನಮ್ಮ ಕರುನಾಡು ವೇದಿಕೆ ಜಿಲ್ಲಾ ಅಧ್ಯಕ್ಷ ಗಂಗಾಧರ ಕುಂಬಾರ ಮಾತನಾಡಿ, ಶ್ರೀಗಳ ಧಾರ್ಮಿಕ ಮತ್ತು ಸಮಾಜ ಕಾರ್ಯ ಶ್ಲಾಘಿಸಿದರು. ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ, ಕಾರ್ಯಕ್ರಮ ಉದ್ಘಾಟಿಸಿದ ಸಿದ್ದಯ್ಯ ಗುತ್ತೇದಾರ ಶ್ರೀಗಳನ್ನು ಸನ್ಮಾನಿಸಿದರು.
ಜಯ ಕರ್ನಾಟಕ ಸಂಘಟನೆ ಉಪಾಧ್ಯಕ್ಷ ಗುರು ಎಸ್. ಬಂಗರಗಿ, ಮುಖಂಡ ಶರಣು ಪಾಟೀಲ ಕೊಡಲಹಂಗರಗಾ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ ಕಂದಗುಳೆ, ನಿಜಾಚರಣೆ ವಸತಿ ಶಾಲೆ ಮುಖ್ಯ ಶಿಕ್ಷಕ ಸುಭಾಷ ಹರಳಯ್ಯ, ಶಿವುಕುಮಾರ ಹಳ್ಳೆ, ಶಂಕರ ಬಂಡೆ, ಪ್ರಭು ಅಲ್ದಿ ಇದ್ದರು. ಕೊರಣೇಶ್ವರ ಭಜನಾ ಸಂಘದ ದಾನಯ್ಯಸ್ವಾಮಿ, ಕರಬಸಪ್ಪ ಬಂಗರಗಿ, ಶಿವಶರಣಪ್ಪ ಸುಲ್ತಾನಪುರ, ನರಸಿಂಗ ನಗರೆ, ಸಂಜು ಫುಲಾರ, ಭೀಮಾಶಂಕರ ಹಳ್ಳೆ, ಲಿಂಗಣ್ಣ ವಾರಿಕ, ಶ್ರೀಕಾಂತ ಬಂಗರಗೆ, ಹಣಮಂತಪ್ಪ ಔರಾದೆ ಸೇರಿದಂತೆ ಶರಣಿಯರಿಂದ ಶರಣರ ಜೀವನ ಕುರಿತು ಭಕ್ತಿಗೀತೆ ಭಜನೆ ಕಾರ್ಯಕ್ರಮ ನಡೆಯಿತು. ಕುಮಾರ ಬಂಡೆ ಕಾರ್ಯಕ್ರಮ ನಿರೂಪಿಸಿದರು. ವಿಜಯಕುಮಾರ ಪ್ರಜಾರಿ ಸ್ವಾಗತಿಸಿದರು. ಮಹಾ ಮಂಗಲ, ಭಕ್ತಾದಿಗಳಿಗೆ ದಾಸೋಹ ನೆರವೇರಿತು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ

Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.