ವ್ಯವಹಾರ ಶುದ್ಧಿಯಿಂದ ಶಾಂತಿ ಪ್ರಾಪ್ತಿ
Team Udayavani, Jul 18, 2017, 12:25 PM IST
ಕಲಬುರಗಿ: ಜೀವನದಲ್ಲಿ ಆಹಾರ-ವ್ಯವಹಾರ ಶುದ್ಧತೆ ಕಠಿಣವಾಗಿ ಮೈಗೂಢಿಸಿಕೊಂಡರೆ ಸುಖ-ಶಾಂತಿ ಪ್ರಾಪ್ತಿಯಾಗುತ್ತವೆ ಎಂದು ಬ್ರಹ್ಮಕುಮಾರಿ ಪೂನಂ ಹೇಳಿದರು.
ನಗರದ ಹೊರ ವಲಯ ಸೇಡಂ ರಸ್ತೆಯ ಗೀತಾ ನಗರದಲ್ಲಿರುವ ಬ್ರಹ್ಮಕುಮಾರಿಯ ಅಮೃತ ಸರೋವರದಲ್ಲಿ ನಡೆಯುತ್ತಿರುವ ಆಲ್ವಿದಾ ತನಾವ್ ಶಿಬಿರ ಉದ್ದೇಶಿಸಿ ಅವರು ಉಪನ್ಯಾಸ ನೀಡಿದರು. ಬ್ರಹ್ಮಕುಮಾರ-ಕುಮಾರಿ ಜೀವನದಲ್ಲಿ ಪವಿತ್ರತೆ,
ಆಹಾರ ಶುದ್ಧಿ ಹಾಗೂ ವ್ಯವಹಾರ ಶುದ್ಧಿಯನ್ನು ಕಠಿಣವಾಗಿ ಅಳವಡಿಸಿಕೊಂಡಿರುವುದನ್ನು ನೋಡಬಹುದು ಎಂದರು.
ಯೋಗ ಇದೊಂದು ಬಹು ಚರ್ಚಿತ, ಬಹು ಜನ ಪ್ರಿಯ ಹಾಗೂ ಬಹು ವ್ಯಾಪಾರಿಕರಣವಾದ ವಿಷಯ. ಪ್ರಪಂಚದಲ್ಲಿ ವಿಶೇಷವಾಗಿ ಭಾರತದಲ್ಲಿ ಬಹಳಷ್ಟು ನಾಮ ಹಾಗೂ ವಿಧಗಳಿಂದ ಹೇಳಿಕೊಡವುದನ್ನು ನಾವು ನೋಡುತ್ತೇವೆ. ಅದರಲ್ಲಿ ಆಸನ, ಪ್ರಾಣಾಯಾಮ ಪ್ರಸಿದ್ಧವಾಗಿವೆ ಎಂದರು. ಇವುಗಳಿಂದ ಖಂಡಿತವಾಗಿ ಶಾರೀರಿಕ ರೋಗಗಳು ಕಡಿಮೆಯಾಗುವವು. ಆದರೆ ಚಾರಿತ್ರಿಕ ಉನ್ನತಿ,
ಜೀವನದಲ್ಲಿ ಪ್ರವಿತ್ರತೆ, ಸುಖ, ಶಾಂತಿಗಳ ಪ್ರಾಪ್ತಿ ಇಲ್ಲದಾಗಿದೆ. ಇದಕ್ಕೆ ಜೀವನದಲ್ಲಿ ಪವಿತ್ರತೆ, ಆಹಾರ ಶುದ್ಧಿ , ವ್ಯವಹಾರ ಶುದ್ಧಿಯೇ ಪರಿಹಾರವಾಗಿದೆ ಎಂದು ಹೇಳಿದರು.
ಯೋಗ, ಸಕಾರಾತ್ಮಕ ಚಿಂತನದಿಂದ ಮಿದುಳಿನಲ್ಲಿ ಸ್ವಾಸ್ಥಪ್ರದ ಹಾರ್ಮೋನ್ಗಳು ಉತ್ಪತ್ತಿಯಾಗುತ್ತವೆ. ವೈದ್ಯಕಿಯ ತಂಡ ಈ ಕುರಿತು ಗಾಢವಾದ ಅಧ್ಯಯ ನಡೆಸಿ ಹೇಗೆ ಈ ರಾಜಯೋಗ ಹೃದಯ, ಅಧಿಕ ರಕ್ತಚಾಪ ಹಾಗೂ ಮಧುಮೇಹ ರೋಗ
ನಿಯಂತ್ರಣದಲ್ಲಿ ಉಪಯುಕ್ತವಾಗಿದೆ ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಲು ಪ್ರಯತ್ನಿಸುತ್ತಿದ್ದಾರೆ. ರೋಗ ರುಜಿನಗಳಿಗೆ ಔಷಧೋಪಚಾರ ಬೇಕು ಜೊತೆಗೆ ರಾಜಯೋಗ ದವಾ, ದುವಾ ಎರಡು ಬೇಕು ಎಂದರು.
ಬ್ರಹ್ಮಾಕುಮಾರಿ ಸಂಸ್ಥೆಯ ರಾಷ್ಟ್ರೀಯ ಸಂಯೋಜಕರಾದ ರಾಜಯೋಗ ಪ್ರೇಮಣ್ಣ ಮಾತನಾಡಿ, ಜನ್ಮ ಜನ್ಮಾಂತರದ ಅಭ್ಯಾಸದಿಂದಾಗಿ ಬಹು ಸುಲಭವಾಗಿ ನಕರಾತ್ಮಕ ವಿಚಾರಕ್ಕೆ ಒಳಗಾಗುತ್ತೇವೆ. ಆದರೆ ರಾಜಯೋಗ ಸಕಾರಾತ್ಮಕ ವಿಚಾರಗಳನ್ನು ಹುಟ್ಟುಹಾಕುವುದನ್ನು ಕಲಿಸಿಕೊಡುತ್ತದೆ. ಇದರಿಂದ ಪ್ರಕೃತಿ ಮೇಲೆ ವಿಜಯ ಸಾಧಿಸಬಹುದು ಎಂದು ಹೇಳಿದರು.
ಶರಣಬಸವೇಶ್ವರ ಸಂಸ್ಥಾನದ ಲಿಂಜರಾಜ ಅಪ್ಪ, ಲೋಕ್ ಅದಾಲತ್ ಅಧ್ಯಕ್ಷ ಎಸ್. ಎಂ. ಪಾಟೀಲ, ಸಿವಿಲ್ ನ್ಯಾಯಾಧೀಧಿಶ ನವೀನ, ವ್ಯಾಪಾರಿಗಳಾದ ಹರಿಪ್ರಸಾದ ತೋಷಿ¡ವಾಲ, ಸತ್ಯನಾರಾಯಣ ಬಜಾಜ, ಯುವಜನ ಸೇವಾ ಇಲಾಖೆ ಅಧಿಕಾರಿ ನಾಗರಾಜ ಮಾಳಗೆ, ಪತ್ರಕರ್ತರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಆವಂಟಿ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ
ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!
Kalaburagi: ಅಧಿಕಾರಿಗಳಿಗೆ ಕೊಬ್ಬು ಹೆಚ್ಚಾಗಿದೆ; ಚಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್
Govt.,: ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!
Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ
Puttur: ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ
Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್ ಧ್ವನಿ; ಹೀರೋ ಮೇಲೆ ಆರೋಪ
JDS: ಎಡಿಜಿಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.