ಬುದ್ಧ-ಬಸವ ಚಿಂತನೆ ವಿರುದ್ಧ ಸಾಗಬೇಡಿ
Team Udayavani, May 21, 2017, 4:45 PM IST
ವಾಡಿ: ಬುದ್ಧ, ಬಸವ ಹಾಗೂ ಅಂಬೇಡ್ಕರರು ಯಾವುದನ್ನು ಬೇಡ ಎಂದು ಹೇಳಿದರೋ ಅದನ್ನೆ ಮುಂದುವರಿಸುವ ಮೂಲಕ ನಾವು ಅವರ ವಿರುದ್ಧ ಸಾಗುತ್ತಿದ್ದೇವೆ. ಇದು ಆ ಮಹಾನ್ ವ್ಯಕ್ತಿತ್ವಗಳಿಗೆ ನಾವು ಮಾಡುತ್ತಿರುವ ಅಪಮಾನ ಎಂದು ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಂಗಳಗಿ ಗ್ರಾಮದ ಭೀಮನಗರದಲ್ಲಿ ಸ್ಥಾಪಿಸಲಾದ ಕರುಣಾ ಬುದ್ಧವಿಹಾರ ಲೋಕಾರ್ಪಣೆ ಮಾಡಿದ ನಂತರ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ ಹೋರಾಟಗಾರರನ್ನು ಮರೆತ ನಾವು, ಸಮಾನತೆ ಬೋಧಿಧಿಸಿದ ಬುದ್ಧ, ಬಸವ, ಅಂಬೇಡ್ಕರ್, ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ ಸೇರಿದಂತೆ ಅನೇಕ ಶರಣರು ಮತ್ತು ಸಂತರನ್ನು ಒಂದೊಂದು ಜಾತಿಯಲ್ಲಿ ಕಟ್ಟಿ ಹಾಕಿದ್ದೇವೆ.
ಇದು ಅವರ ಚಿಂತನೆಗೆ ವಿರುದ್ಧವಲ್ಲವೇ ಎಂದು ಪ್ರಶ್ನಿಸಿದರು. ಎಲ್ಲ ಜಾತಿಯ ಶರಣರನ್ನು ಸಂಘಟಿಸಿ ಅನುಭವ ಮಂಟಪ ಸ್ಥಾಪಿಸಿದ ಅಣ್ಣ ಬಸವಣ್ಣನ ಜಯಂತಿಯನ್ನು ಆಚರಿಸುವ ಲಿಂಗಾಯತರು, ದಲಿತರ ಕೇರಿಗಳನ್ನು ಇಂದಿಗೂ ಊರ ಹೊರಗಿರುವಂತೆ ನೋಡಿಕೊಂಡಿದ್ದಾರೆ. ಇದು ಬಸವಣ್ಣನ ಚಿಂತನೆಗೆ ವಿರುದ್ಧವಾಗಿದೆ.
ಸ್ವಯಂ ಪ್ರಕಾಶಿತರಾಗಿ ಎಂದು ಹೇಳಿರುವ ಬದ್ಧನ ಮಾತಿನಲ್ಲಿ ಅರ್ಥವಿದೆ. ಶೋಷಿತ ವರ್ಗ ಜಾಗೃತವಾಗದ ಹೊರತು ಪ್ರಗತಿ ಅಸಾಧ್ಯ. ಜನಪ್ರತಿನಿಧಿಧಿಗಳನ್ನು ದೇವರಂತೆ ಕಾಣಬೇಡಿ. ಕಾರಣ ಅವರು ಸರ್ವಾಧಿಕಾರಿಗಳಾಗುತ್ತಾರೆ. ನನ್ನನ್ನು ಗೆಲ್ಲಿಸಿದ ನೀವು ಬಿರುಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಡುವುದು, ಜನಪ್ರತಿನಿಧಿಯಾದ ನಾನು ಕಾರಿನಲ್ಲಿ ಮೆರವಣಿಗೆ ಬರುವುದು ಇದೆಂತಹ ಅಭಿಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೌದ್ಧಭಿಕ್ಷು ಜ್ಞಾನಸಾಗರ ಭಂತೇಜಿ ತ್ರಿಶರಣ ಪಠಿಸಿದರು. ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಎಸಿಸಿ ಕ್ಲಸ್ಟರ್ ಹೆಡ್ ಡಾ| ಎಸ್.ಬಿ. ಸಿಂಗ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿದರು. ದಲಿತ ಮುಖಂಡ ಸುಭಾಶಚಂದ್ರ ಯಾಮೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪ್ಯಾರಿಬೇಗಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ, ಎಸಿಸಿ ನಿರ್ದೇಶಕ ಉದಯ ಪವಾರ, ಎಚ್ಆರ್ ಮುಖ್ಯಸ್ಥ ಜಯಪ್ರಕಾಶ ಪವಾರ, ಮುಖಂಡರಾದ ಭೀಮಣ್ಣ ಸಾಲಿ, ಜಾಫರ್ ಪಟೇಲ, ಅಣ್ಣಾರಾವ ಪಾಟೀಲ, ಚಂದ್ರಸೇನ ಮೇನಗಾರ, ಶರಣು ನಾಟೀಕಾರ, ಶಂಕ್ರಯ್ಯಸ್ವಾಮಿ ಮದ್ರಿ, ಸೂರ್ಯಕಾಂತ ರದ್ದೇವಾಡಿ,
-ಶಿವುರುದ್ರ ಭೀಣಿ, ರುದ್ರುಗೌಡ ಪಾಟೀಲ, ಸುರೇಶ ಮೇಂಗನ್, ಸಾಯಬಣ್ಣ ಬನ್ನೇಟಿ, ಇಂದ್ರಜೀತ ಸಿಂಗೆ, ವಿಶಾಲ ನಂದೂರಕರ, ಮರಿಬಸಯ್ಯಸ್ವಾಮಿ, ರವಿ ಚವ್ಹಾಣ, ನಿತೇಶ್ವರಕುಮಾರ, ಶರಣಬಸಪ್ಪ ಧನ್ನಾ ಪಾಲ್ಗೊಂಡಿದ್ದರು. ಕಾಶೀನಾಥ ಹಿಂದಿನಕೇರಿ ನಿರೂಪಿಸಿ, ವಂದಿಸಿದರು. ನೀಲಿ ವರ್ಣದ ಸೀರೆಯುಟ್ಟು ಪಂಚಶೀಲ ಧ್ವಜಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ದಲಿತ ಮಹಿಳೆಯರು ಗಮನ ಸೆಳೆದರು.
ಕುಸಿದುಬಿದ್ದ ಡಿವೈಎಸ್ಪಿ: ರಣಬಿಸಿಲಿನಲ್ಲಿ ಸಾಗಿಬಂದ ದಲಿತರ ಮೆರವಣಿಗೆ ಸರಕಾರಿ ಪ್ರೌಢಶಾಲೆ ಮೈದಾನದ ವೇದಿಕೆ ತಲುಪುತ್ತಿದ್ದಂತೆ ಕರ್ತವ್ಯದಲ್ಲಿದ್ದ ಡಿವೈಎಸ್ಪಿ ಮಹೇಶ ಮೇಘಣ್ಣವರ ಏಕಾಏಕಿ ಕುಸಿದುಬಿದ್ದ ಪ್ರಸಂಗ ನಡೆಯಿತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಚೇತರಿಸಿಕೊಂಡರು. ಬಿಸಿಲಿನಲ್ಲಿ ಬಿಸಿ ನೀರು ಕುಡಿದ ಕಾರಣ ತಲೆಸುತ್ತಿದಂತಾಗಿದೆ. ಈಗ ಅವರು ಚೆನ್ನಾಗಿದ್ದಾರೆ ಎಂದು ಸಿಪಿಐ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್ ಚೌಟ
Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್ ಸೂಪರ್ ಶತಕ; ಡಿಕ್ಲೇರ್ ಘೋಷಿಸಿದ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.