ಕಳಚದಿರಲಿ ಕೂಡಿ ಬಾಳುವ ಕೊಂಡಿ: ರತ್ನಾ
Team Udayavani, Aug 15, 2017, 11:43 AM IST
ವಾಡಿ: ಸತಿ ಪತಿ ಸಂಬಂಧ ಕತ್ತರಿಸಿಕೊಂಡು ಹೆತ್ತ ಕುಡಿಗಳನ್ನು ವಸತಿ ನಿಲಯಗಳಿಗೆ ಸೇರಿಸುವ ಸಂಸ್ಕೃತಿ ವಿದೇಶಿಗರದ್ದಾದರೆ, ಸ್ನೇಹ, ಪ್ರೀತಿ ಹಾಗೂ ಸಹೋದರತೆಯಿಂದ ಕೂಡಿ ಬಾಳುವ ಸಂಸ್ಕೃತಿ ನಮ್ಮ ಭಾರತದ್ದು. ಇಂತಹ ಪವಿತ್ರವಾದ ಸಂಬಂಧದ ಕೊಂಡಿಗಳು ಯಾವತ್ತಿಗೂ ಕಳಚಬಾರದು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಲಬುರಗಿ ವಲಯ ನಿರ್ದೇಶಕಿ ಬಿ.ಕೆ.ರತ್ನಾ ಅಕ್ಕನವರು ಹೇಳಿದರು. ಪ್ರಜಾಪಿತ ಬ್ರಹ್ಮಕುಮಾರಿ ಸ್ಥಳೀಯ ಘಟಕ ವತಿಯಿಂದ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ ರಕ್ಷಾಬಂಧನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಎರಡು ಎಳೆ ದಾರದಿಂದ ಕೂಡಿದ ರಾಖೀ ಕಟ್ಟುವುದರಲ್ಲಿ ಮಹತ್ವದ ಭಾವ ಅಡಗಿದೆ. ಸಹೋದರತ್ವಕ್ಕೆ ಜಾತಿ ಮತ್ತು ಧರ್ಮ
ಅಡತಡೆಯಾಗಬಾರದು. ರಕ್ಷಾಬಂಧನ ಎಂಬುದು ಕೋಮು ಸೌಹಾರ್ಧತೆ ಕಾಪಾಡುವ ಪವಿತ್ರ ಆಚರಣೆಯಾಗಿದೆ ಎಂದು ಹೇಳಿದರು.
ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ನಾವು ಮನಸ್ಸಿನ ಅರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಮನಸ್ಸು ಬರೀ
ಕೆಟ್ಟ ವಿಚಾರಗಳಿಂದ ತುಂಬಿದೆ. ಪ್ರೀತಿ ಸ್ನೇಹಗಳ ಕೊರತೆಯಿಂದ ಮಾನಸಿಕ ದುಃಖ ಅನುಭವಿಸುತ್ತಿದ್ದೇವೆ. ಸಂಬಂಧಗಳ ಬೆಲೆ
ಅರಿತುಕೊಳ್ಳಲಾಗದೆ ಮನೋವಿಕಾರಕ್ಕೆ ಬಲಿಯಾಗುತ್ತಿದ್ದೇವೆ. ಮನಸ್ಸುಗಳನ್ನು ಒಡೆಯುವ ಶಕ್ತಿಗಳು ಈಗ ಬಲಾಡ್ಯಗೊಳ್ಳುತ್ತಿವೆ. ಶರಣ ವಿಚಾರಗಳನ್ನು ನಾವು ಪುಸ್ತಕದಲ್ಲಿಯೇ ಬಿಟ್ಟು ಬದುಕುತ್ತಿರುವುದರಿಂದ ಚಿಂತನೆ ಆಚರಣೆಗೆ ಬರುತ್ತಿಲ್ಲ. ಸದ್ಭಾವನ ಶಾಂತಿಗಾಗಿ ಮನ ಹುಡುಕಾಟದಲ್ಲಿ ತೊಡಗಬೇಕು ಎಂದು ಹೇಳಿದರು. ಸೇಡಂ ಸಂಚಾಲಕಿ ಬ್ರಹ್ಮಕುಮಾರಿ ಕಲಾ ಅಕ್ಕನವರು ಮಾತನಾಡಿ, ಮರೆತುಹೋದ ಮೌಲ್ಯಗಳನ್ನು ಮರುಕಳಿಸುವ ಶಕ್ತಿ ಹಬ್ಬಗಳಿಗಿದೆ. ಆತ್ಮ ಜಾಗೃತಿ ಸ್ವಯಂ ಅರಿವಿನಿಂದ ಪರಮಾತ್ಮನನ್ನು
ಒಲಿಸಿಕೊಳ್ಳಲು ಸಾಧ್ಯ. ವಾಡಿ ನಗರದಲ್ಲೂ ಕೂಡ ಶಾಖೆ ತೆರೆಯಲಾಗಿದ್ದು, ಆಸಕ್ತ ಪ್ರತಿಯೊಬ್ಬರೂ ರಾಜಯೋಗದಲ್ಲಿ ಪಾಲ್ಗೊಂಡು ಜ್ಞಾನ ಪ್ರಾಪ್ತಿಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ವಾಲ್ಮೀಕಿ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಎಸಿಸಿ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜಯಪ್ರಕಾಶ ಪವಾರ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕುಮಾರಿ ಲಕ್ಷ್ಮೀ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಅನಿತಾ ಪವಾರ, ಪುರಸಭೆ ಸದಸ್ಯರಾದ ಶರಣು ನಾಟೀಕಾರ, ಭೀಮಶಾ ಜಿರೋಳ್ಳಿ, ಮುಖಂಡರಾದ ಕಲ್ಯಾಣರಾವ ಶೆಳ್ಳಗಿ, ಸಿದ್ದಣ್ಣ ಕಲಶೆಟ್ಟಿ, ವಿಠ್ಠಲ ಮಾಶಾಳ, ವೀರಣ್ಣ ಯಾರಿ, ಆನಂದ ಇಂಗಳಗಿ, ನಿಂಗಣ್ಣ ದೊಡ್ಡಮನಿ, ಬಸವರಾಜ ಯರಗಲ, ಚಂದ್ರಶೇಖರ ಹಾವೇರಿ ಸೇರಿದಂತೆ ನೂರಾರು ಜನಮಹಿಳೆಯರು ಪಾಲ್ಗೊಂಡಿದ್ದರು. ಬಿ.ಕೆ.ಗಿರಿಜಾ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರೆಲ್ಲರಿಗೂ ಬ್ರಹ್ಮಕುಮಾರಿಯರು ರಾಖೀ ಕಟ್ಟಿ ಸಹೋದರತೆ ಭಾವ ಸಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್ಪಿಗೆ ಕರೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.