ಸಂಕಷ್ಟ ದಲ್ಲಿ ತೊಗರಿ ರಾಶಿ : ಹೆಗಲೇರಿದ ನಷ್ಟ


Team Udayavani, Jan 10, 2022, 9:04 PM IST

ಗ್ದಸಅಸದ್ಯ

ವಾಡಿ: ತೊಗರಿ ಕಣಜವೆಂದೇ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಈ ವರ್ಷ ಎದುರಾದ ಅತಿವೃಷ್ಟಿಗೆ ಅನ್ನದಾತರು ನಲುಗಿದ್ದಾರೆ. ಭಾರಿ ಇಳುವರಿ ನಿರೀಕ್ಷೆ ಹೊಂದಿದ್ದ ರೈತರ ಹೆಗಲ ಮೇಲೆ ನಷ್ಟದ ಹೊರೆ ಬಿದ್ದಿದೆ. ಸಂಕಷ್ಟದ ನಡುವೆಯೂ ಹೊಟ್ಟೆಗೆ ವರ್ಷದ ಕಾಳು ದಕ್ಕಿಸಿಕೊಳ್ಳಲು ಕೃಷಿಕರು ತೊಗರಿ ರಾಶಿಗೆ ಮುಂದಾಗಿದ್ದಾರೆ.

ತೊಗರಿ ಬೇಸಾಯವನ್ನೇ ಪ್ರಮುಖವಾಗಿ ನೆಚ್ಚಿಕೊಂಡಿರುವ ಚಿತ್ತಾಪುರ, ನಾಲವಾರ, ವಾಡಿ, ಸನ್ನತಿ, ಕೊಲ್ಲೂರ, ಬಳವಡಗಿ, ಇಂಗಳಗಿ, ಕುಂದನೂರು ಪ್ರದೇಶದ ರೈತರು, ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯ ಹೊಡೆತ ಅನುಭವಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲೂ ಅತಿವೃಷ್ಟಿ ಎತೇತ್ಛವಾಗಿ ಕಾಡಿದ್ದು, ಮಹಾ ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗಿದೆ. ಬಹುತೇಕ ಕಡೆಗಳಲ್ಲಿ ತೊಗರಿ ಮರು ಬಿತ್ತನೆಯೂ ನಡೆದಿದೆ. ಬೆನ್ನುಬಿಡದೆ ಕಾಡಿದ ಅತಿವೃಷ್ಟಿಯಿಂದ ತೊಗರಿ ಸಂಪೂರ್ಣ ನೆಲಕಚ್ಚಿದೆ. ನೀರಿಗೆ ಕೊಚ್ಚಿ ಹೋದ ಬೆಳೆ ರಕ್ಷಿಸಲು ರೈತರು ಹರಸಾಹಸಪಟ್ಟಿದ್ದು ಅಷ್ಟಿಷ್ಟಲ್ಲ. ನೀರಿನಲ್ಲಿ ನಿಂತ ಬೆಳೆ ಕಂಡು ಮರುಗುತ್ತಿದ್ದಾರೆ. ಸಾಲದ ಹೊರೆ ಜತೆಗೆ ಕಾಳಿಲ್ಲದ ತೊಗರಿ ಹೊರೆ ಹೊತ್ತು ಕಂಗಾಲಾಗಿದ್ದಾರೆ.

ತೊಗರಿ ಬೆಳೆಗೆ ಮಳೆ ಒಂದೆಡೆ ಕಾಡಿದರೆ, ಇನ್ನೊಂದೆಡೆ ಕೀಟಗಳ ಕಾಟ ಹೆಚ್ಚಿತ್ತು. ನೆಲದ ತೇವಾಂಶ ಹೆಚ್ಚಾಗಿ ಫಸಲು ಚಿಗಿಯಲಿಲ್ಲ. ಕೀಟಗಳ ಕಾಟದಿಂದ ಕಾಳುಗಳು ಉಳಿಯಲ್ಲಿಲ್ಲ. ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಬೆಳೆ ಸಾಲು ಹಾಳಾಗಿದ್ದನ್ನು ನೆನೆದು ರೈತರು ನಷ್ಟದ ಬದುಕಿಗೆ ಶಪಿಸುತ್ತಿದ್ದಾರೆ. ನಿರೀಕ್ಷಿತ ಕಾಳಿಲ್ಲದ ತೊಗರಿ ಹೊರೆಗಳನ್ನು ತಂದು ರಾಶಿ ಮಾಡುತ್ತಿದ್ದಾರೆ. ಗಣಿ ನಾಡಲ್ಲಿ ತೊಗರಿ ರಾಶಿಗೆ ಚಾಲನೆ ದೊರೆತಿದ್ದು, 15 ಚೀಲ ತೊಗರಿಯಾಗುತ್ತಿದ್ದ ಹೊಲದಲ್ಲಿ ಐದಾರು ಚೀಲಕ್ಕೆ ಸೀಮಿತವಾಗಿದೆ.

ಕೆಲ ರೈತರು ಎರಡು ಮೂರು ಚೀಲ ತೊಗರಿ ರಾಶಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ವರ್ಷದ ಬೆಳೆಯ ಫಲ ಕೀಟ ನಾಶಕ ಔಷಧ ಖರೀದಿಗೆ ಮಾಡಿದ ಸಾಲ ತೀರಿಸೋದು ಹೇಗೆ? ಬದುಕೋದು ಹೇಗೆ ಎಂದು ಚಿಂತಿತರಾಗಿರುವ ಅನ್ನದಾತರು, ಸರ್ಕಾರದ ಬೆಳೆ ನಷ್ಟ ಪರಿಹಾರದತ್ತ ದೃಷ್ಟಿ ಹಾಯಿಸಿದ್ದಾರೆ. ಕೃಷಿ ಕಾರ್ಮಿಕರ ಸಂಕಷ್ಟ: ಈ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಕೆಲಸವೂ ಇಲ್ಲದೇ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಕೃಷಿ ಕೆಲಸದ ಕೂಲಿಯೂ ಲಭ್ಯವಾಗದೆ ಕೃಷಿ ಕಾರ್ಮಿಕರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ತೊಗರಿ ರಾಶಿ ಎಲ್ಲೆಡೆ ನಡೆಯುತ್ತಿದೆಯಾದರೂ ಕೃಷಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಬೆಳೆ ನಷ್ಟದಲ್ಲಿರುವ ರೈತರ ಕುಟುಂಬವೇ ತೊಗರಿ ರಾಶಿಗೆ ನಿಂತಿದ್ದರಿಂದ ಕೂಲಿಕಾರರಿಗೆ ಹೊಡೆತ ಬಿದ್ದಿದೆ.

ಗ್ರಾಪಂ ಅ ಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ ನೀಡದೇ ಗೋಳಾಡಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಹಾಸುಗಲ್ಲುಗಳಿಗೆ ಬೇಡಿಕೆ ಕುಸಿದಿದ್ದರಿಂದ ಸ್ಥಳೀಯ ಅನೇಕ ಕಲ್ಲು ಗಣಿಗಳು ಸ್ಥಗಿತವಾಗಿವೆ. ಇದರಿಂದ ಗಣಿ ಕಾರ್ಮಿಕರಿಗೂ ಕೆಲಸ ಇಲ್ಲದಂತಾಗಿದೆ. ಒಟ್ಟಾರೆ ಈ ವರ್ಷ ಎದುರಾದ ಅತಿವೃಷ್ಟಿಗೆ ರೈತರು ಮತ್ತು ಕೃಷಿ ಕಾರ್ಮಿಕರ ಬದುಕು ಆರ್ಥಿಕ ಬಿಕ್ಕಟ್ಟಿನ ಹೊಡೆತಕ್ಕೆ ಸಿಲುಕಿದೆ.

 

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kharge

Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ

13-

Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

Yathanaa

BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.