Cabinet Meeting: ಎರಡು ತಾಸಿನ ಸಂಪುಟ ನಾಟಕಕ್ಕಾಗಿ ಸರ್ಕಾರ ಕಲಬುರಗಿಗೆ: ಛಲವಾದಿ ಆರೋಪ


Team Udayavani, Sep 16, 2024, 5:08 PM IST

Govt to Kalaburagi for two-hour cabinet drama:  Chalavadi Narayanaswamy

ಕಲಬುರಗಿ: ಕಾಂಗ್ರೆಸ್ ಎನ್ನುವುದು ಒಂದು ನಾಟಕದ ಕಂಪನಿ. ‌ಸಂಪುಟ ಸಭೆಯ ಎರಡು ತಾಸಿನ ನಾಟಕ ಮಾಡುವುದಕ್ಕೆ‌ ಕಾಂಗ್ರೆಸ್ ಇಲ್ಲಿಗೆ ಬರುತ್ತಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ಸಭೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಿಕ್ಕಾಗುತ್ತಿಲ್ಲ,‌ ಇನ್ನು ಅಭಿವೃದ್ಧಿ ಏನು ಮಾಡುತ್ತಾರೆ. ಏರ್ಪೋರ್ಟ್ ರೋಡ್ ಸೇರಿ ಕೆಲವೊಂದು ರಸ್ತೆ ಮಾತ್ರ ಗುಂಡಿ ಮಚ್ಚಿ ಕಸ ಹೊಡೆಯಲು ಮುಂದಾಗಿದ್ದಾರೆ.‌ ಒಟ್ಟಾರೆ ಮಂತ್ರಿಗಳು ಕಲಬುರಗಿಗೆ ಟೂರಿಸ್ಟ್ ಬಂದ ಹಾಗೆ ಬರಬಾರದು. ಇಲ್ಲಿ ಕೂತುಕೊಂಡು ಇಲ್ಲಿನ ಅಭಿವೃದ್ಧಿ ಕೆಲಸ ಮಾಡಬೇಕು. ಕಲ್ಯಾಣ ಕರ್ನಾಟಕವನ್ನು ಕಲ್ಯಾಣ ಮಾಡಬೇಕು ಹೊರತು ಖಬರಸ್ತಾನ ಮಾಡುವುದಲ್ಲ ಎಂದು ವಾಗ್ದಾಳಿ ನಡೆಸಿದರು.

ದಲಿತರ ಹಣ ಎಲ್ಲಿ ಹೋಯ್ತು, ದಲಿತರಿಗಿಟ್ಟಿದ್ದ ಹಣ ಲೂಟಿ ಹೊಡೆದರು. ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿ ಕಪ್ಪಾಗಿದ್ದೀರಿ. ಕಪ್ಪು ಕಾಗೆಯ ಇರುವ ಸಿದ್ದರಾಮಯ್ಯ ಬಳಿ ಎಲ್ಲಿಂದ ಕಪ್ಪು ಚುಕ್ಕೆ ಹುಡುಕುವುದು ಎಂದು ಟೀಕೆ ಮಾಡಿದರು.

ಶಾಸಕ ಮುನಿರತ್ನ ಮೇಲೆ ಕೇಸ್ ದಾಖಲಾದ ಕೆಲವೇ ಗಂಟೆಗಳಲ್ಲಿ ಅರೆಸ್ಟ್ ಮಾಡಿದರು. ಆದರೆ ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಮೇಲೆ ಎಫ್ಐಆರ್ ಆಗಿದೆ. ಅಟ್ರಾಸಿಟಿ ಕೇಸ್ ಆಗಿದೆ. ಆದರೆ ಇದುವರೆಗೂ ಕೂಡ ಅವರನ್ನು ಮುಟ್ಟಿಲ್ಲ. ಮೃತ ಪಿಎಸ್ಐ ಪರಶುರಾಮ್ ಕುಟುಂಬಕ್ಕೆ 50 ಲಕ್ಷ ಕೊಡುತ್ತೇನೆಂದು ಹೇಳಿದರೂ ಕೊಟ್ಟಿಲ್ಲ. ಅವರ ಕುಟುಂಬಕ್ಕೆ ಕೆಲಸ ಕೊಡುತ್ತೇವೆ ಎಂದು ಹೇಳಿ ಕೆಲಸ‌ ಕೊಡಲಿಲ್ಲ ಎಂದರು.

ಟಾರ್ಗೆಟ್‌ ರಾಜಕಾರಣ ನಿಲ್ಲಿಸಿ

ನಾಗಮಂಗಲದಲ್ಲಿ‌ ಗಣೇಶನ‌ ಮೆರವಣಿಗೆ ಮೇಲೆ ಕಲ್ಲು ‌ತೂರಾಟ ನಡೆಸಲಾಗಿದೆ. ಗಣೇಶನ ಹಬ್ಬ ಆಚರಣೆ ಮಾಡುವುದು ಹಿಂದುಗಳ ಹಕ್ಕು.‌ ಆದರೆ ಹಿಂದುಗಳನ್ನು ಟಾರ್ಗೆಟ್ ಮಾಡಿ ಗಲಾಟೆ ಮಾಡಿದರು. ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆಗಳಿಂದ ರಕ್ಷಣೆ ಯಾರು ಕೊಡಬೇಕು. ಈ ಸರ್ಕಾರ ಟಾರ್ಗೆಟ್ ರಾಜಕಾರಣವನ್ನು ನಿಲ್ಲಿಸಬೇಕು ಎಂದರು.

ಕಲಬುರಗಿಯಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಅರೆಸ್ಟ್ ಆದವರು ಪ್ರಿಯಾಂಕ್ ಖರ್ಗೆ ಹೆಸರಿಗೆ ಕಳಂಕ ಬರಬಾರದೆಂದು ಶರಣಾಗತಿ ಆಗಿದ್ದೇವೆಂದು ಹೇಳಿದ್ದಾರೆ. ಆದರೆ ಶರಣಾಗತಿ ಆದವರು ಪ್ರಿಯಾಂಕ್ ಖರ್ಗೆ ಹೆಸರು ಯಾಕೆ ಹೇಳಿದರು‌. ಹೀಗೆಯೇ ಸಿಬಿಐ ತನಿಖೆ ಯಾಕೆ ಆಗಬಾರದು ಎಂದು ಛಲವಾದಿ ಪ್ರಶ್ನಿಸಿದರಲ್ಲದೇ ಕ್ಲಿನ್‌ ಚೀಟ್ ಕೊಡೊದಕ್ಕೆ‌ ಎಸ್ಐಟಿಗಳನ್ನು ರಚನೆ ಮಾಡ್ತಿದ್ದಾರೆ ಎಂದು ಹೇಳಿದರು.

ರಾಹುಲ್‌ ಗಾಂಧಿಯನ್ನು ಹೊರಹಾಕಬೇಕು

ರಾಹುಲ್ ಗಾಂಧಿ ವಿಪಕ್ಷ ನಾಯಕರು ಹೊರ ದೇಶಕ್ಕೆ ಹೊದ ತಕ್ಷಣ ತಲೆ ಸುತ್ತುತ್ತೊ ಏನೋ ಗೊತ್ತಿಲ್ಲ. ಹೊರ ದೇಶದಲ್ಲಿ ಕೂತು ಮೀಸಲಾತಿ ಬದಲಾಯಿಸುತ್ತೇವೆ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ನ ಸಂಪ್ರದಾಯದ ಬಗ್ಗೆ ತೋರಿಸಿಕೊಡುತ್ತದೆ. ಆರ್ಥಿಕ ವ್ಯವಸ್ಥೆಯಲ್ಲಿ ಐದನೇ ಸ್ಥಾನದಲ್ಲಿ ಇದ್ದೇವೆ. .‌ನೆಹರು ಹೇಳಿದ ಮಾತುಗಳನ್ನು ಸುಳ್ಳು ಮಾಡಿ ತೋರಿಸಿದ್ದೇವೆ. ಮೋದಿ ನಾನು ಇರುವವರೆಗೂ ಮೀಸಲಾತಿ ತೆಗೆಯುವುದಿಲ್ಲ ಎಂದು ಹೇಳಿದ್ದಾರೆ. ನೆಹರು ಹಾಕಿ ಕೊಟ್ಟ ದಾರಿಯಲ್ಲೆ ರಾಜೀವ್ ಗಾಂಧಿ, ಇಂದಿರಾ ಗಾಂಧಿ, ರಾಹುಲ್ ಗಾಂಧಿ ನಡೆಯೋದಕ್ಕೆ ಮುಂದಾಗಿದ್ದಾರೆ. ರಾಹುಲ್ ಗಾಂಧಿ ಇಲ್ಲಿ ಮಾತಾಡೋದನ್ನು ಬಿಟ್ಟು ಹೊರ ದೇಶದಲ್ಲಿ ಮಾತಾಡಿದ್ದಾರೆ. ರಾಹುಲ್ ಗಾಂಧಿಗೆ ಇಲ್ಲಿ ಮಾತಾಡೋದಕ್ಕೆ ಏನು ರೋಗ ಬಂದಿದೆ. ಹಾಗಾಗಿ ರಾಹುಲ್ ಗಾಂಧಿಯನ್ನು ಇಲ್ಲಿಂದ ಹೊರ ಹಾಕಬೇಕು. ಪ್ರಭುದ್ದಮಾನಕ್ಕೆ ಬಂದಿರುವ ರಾಹುಲ್ ಗಾಂಧಿ ಹೊರದೇಶದಲ್ಲಿ ಈ ರೀತಿ ಹೇಳಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.